ರೈಲು ಪ್ರಯಾಣ ಸಮಯದಲ್ಲಿ ಲಗೇಜ್ ಕಳೆದುಹೋದರೆ ಏನು ಮಾಡಬೇಕು; ಹಣ ಮರುಪಾವತಿ ಆಗುತ್ತಾ? ನಿಯಮಗಳು ಹೀಗಿವೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರೈಲು ಪ್ರಯಾಣ ಸಮಯದಲ್ಲಿ ಲಗೇಜ್ ಕಳೆದುಹೋದರೆ ಏನು ಮಾಡಬೇಕು; ಹಣ ಮರುಪಾವತಿ ಆಗುತ್ತಾ? ನಿಯಮಗಳು ಹೀಗಿವೆ

ರೈಲು ಪ್ರಯಾಣ ಸಮಯದಲ್ಲಿ ಲಗೇಜ್ ಕಳೆದುಹೋದರೆ ಏನು ಮಾಡಬೇಕು; ಹಣ ಮರುಪಾವತಿ ಆಗುತ್ತಾ? ನಿಯಮಗಳು ಹೀಗಿವೆ

ರೈಲಿನಲ್ಲಿ ಕಳೆದುಹೋದ ಸಾಮಾನುಗಳು ಕಳೆದುಹೋದಾಗ ವ್ಯವಸ್ಥಿತವಾಗಿ ದೂರು ನೀಡಿದರೆ, ಮತ್ತೆ ಸಿಗುವ ಸಾಧ್ಯತೆಗಳಿವೆ. ಒಂದು ವೇಳೆ ಸಿಗದಿದ್ದರೆ ಅದಕ್ಕೆ ಹಣ ಮರುಪಾವತಿ ವ್ಯವಸ್ಥೆಯೂ ಇದೆ. ಹಾಗಂತಾ ಎಲ್ಲಾ ಲಗೇಜ್‌ಗಳಿಗೆ ಮರುಪಾವತಿ ಆಗುವುದಿಲ್ಲ. ಈ ಕುರಿತ ವಿವರ ಇಲ್ಲಿದೆ.

ರೈಲು ಪ್ರಯಾಣ ಸಮಯದಲ್ಲಿ ಲಗೇಜ್ ಕಳೆದುಹೋದರೆ ಏನು ಮಾಡಬೇಕು; ಹಣ ಮರುಪಾವತಿ ಆಗುತ್ತಾ?
ರೈಲು ಪ್ರಯಾಣ ಸಮಯದಲ್ಲಿ ಲಗೇಜ್ ಕಳೆದುಹೋದರೆ ಏನು ಮಾಡಬೇಕು; ಹಣ ಮರುಪಾವತಿ ಆಗುತ್ತಾ?

ಪ್ರಯಾಣದ ವೇಳೆ ಹೆಚ್ಚು ಲಗೇಜ್‌ಗಳು ರೈಲು ಪ್ರಯಾಣ ಸೂಕ್ತ. ಹೀಗಾಗಿ ಜನರು ಭಾರತೀಯ ರೈಲ್ವೆ ಪ್ರಯಾಣವನ್ನು ಆಯ್ಕೆ ಮಾಡುತ್ತಾರೆ. ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರ ಲಗೇಜ್‌ಗಳು ಅಥವಾ ಸಾಮಾನುಗಳು ಕಳೆದುಹೋಗುವ ಪ್ರಕರಣಗಳು ಆಗಾಗ ವರದಿಯಾಗುತ್ತವೆ. ಲಗೇಜ್‌ ಕಳೆದುಹೋದರೆ, ಹಾನಿಯಾದರೆ ಅಥವಾ ಕಳ್ಳತನವಾದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.‌ ಮೇಲಿಂದ ಮೇಲೆ ಕಳ್ಳತನದಂತಹ ಪ್ರಕರಣಗಳು ವರದಿಯಾದ ನಂತರ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಗಣಿಸಿ, ರೈಲ್ವೆಯು ಕೆಲವೊಂದು ಸೌಲಭ್ಯಗಳನ್ನು ನೀಡುತ್ತಿದೆ. ಇದರಲ್ಲಿ ಕಳೆದುಹೋದ ಲಗೇಜ್‌ಗಳನ್ನು ಮರುಪಡೆಯುವುದು ಕೂಡಾ ಸೇರುತ್ತದೆ.

ರೈಲಿನಲ್ಲಿ ಕಳೆದುಹೋದ ಸಾಮಾನುಗಳನ್ನು ಮತ್ತೆ ಪಡೆಯಲು ವ್ಯವಸ್ಥೆಗಳಿವೆ. ಅಲ್ಲದೆ ಒಂದು ವೇಳೆ ಸಿಗದಿದ್ದರೇ ಹಣ ಮರುಪಾವತಿ ವ್ಯವಸ್ಥೆಯೂ ಇದೆ. ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿರುವುದಿಲ್ಲ. ಇದಕ್ಕಾಗಿ ಅಗತ್ಯ ಮಾಹಿತಿ ಇಲ್ಲಿದೆ. ಇತ್ತೀಚೆಗೆ ಅಮೃತಸರ-ಬಿಲಾಸ್‌ಪುರ ಛತ್ತೀಸ್‌ಗಢ ಎಕ್ಸ್‌ಪ್ರೆಸ್‌ನಲ್ಲಿ (ಬಿ -2 ಕೋಚ್‌ನಲ್ಲಿ) ಭೋಪಾಲ್‌ನಿಂದ ದುರ್ಗ್‌ಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಎರಡೂವರೆ ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಕಳೆದುಹೋಗಿತ್ತು. ಈ ಮಾಹಿತಿಯನ್ನು ದೀಪಕ್ ಶ್ರೀವಾಸ್ತವ ಎಂಬವರು ರೈಲ್ ಮದದ್ ಅಪ್ಲಿಕೇಶನ್‌ನಲ್ಲಿ ಹಂಚಿಕೊಂಡಿದ್ದರು.

ಈ ಬಗ್ಗೆ ರೈಲ್ವೆ ಆಡಳಿತ ಕೂಡಾ ಆನ್‌ಬೋರ್ಡ್ ಸಿಟಿಐಗೆ ತಿಳಿಸಿತು. ಅದು ಸಿಬ್ಬಂದಿ ಮೂಲಕ ಹುಡುಕಾಟವನ್ನು ನಡೆಸಿತು. ಹೆಚ್ಚುವರಿ ತನಿಖೆಗೆ ರಾಯ್‌ಪುರ ನಿಲ್ದಾಣದ ಆರ್‌ಪಿಎಫ್ ಅನ್ನು ಸಂಪರ್ಕಿಸುವ ಭರವಸೆ ನೀಡಲಾಯ್ತು. ಸ್ವಲ್ಪ ಸಮಯದ ನಂತರ, ಒಬ್ಬ ಮಹಿಳೆಯು ತಮ್ಮ ಮಂಗಳಸೂತ್ರ ಬಿದ್ದಿದ್ದು, ಅದು ಮತ್ತೆ ಸಿಕ್ಕಿತು ಎಂದು ಸಿಟಿಐಗೆ ತಿಳಿಸಿದರು. ಇದು ಒಂದು ಉದಾಹರಣೆ ಅಷ್ಟೇ. ದೂರಿನವರೆಗೂ ಹೋಗದ ಎಷ್ಟೋ ನಿದರ್ಶನಗಳು ರೈಲ್ವೆ ಪ್ರಯಾಣದ ಸಮಯದಲ್ಲಿ ಆಗುತ್ತಿರುತ್ತವೆ.

ರೈಲಿನಲ್ಲಿ ವಸ್ತು ಅಥವಾ ಲಗೇಜ್‌ ಕಳೆದುಹೋದರೆ ಏನು ಮಾಡಬೇಕು?

ರೈಲು ಪ್ರಯಾಣ ಸಮಯದಲ್ಲಿ ಪ್ರಯಾಣಿಕರ ವಸ್ತು ಅಥವಾ ಬ್ಯಾಗ್ ಕಳೆದುಹೋದರೆ ಮೊದಲಿಗೆ ರೈಲು ಕಂಡಕ್ಟರ್, ಕೋಚ್ ಅಟೆಂಡೆಂಟ್, ಗಾರ್ಡ್ ಅಥವಾ ಜಿಆರ್‌ಪಿ ಬೆಂಗಾವಲು ಅಧಿಕಾರಿಗೆ ಮಾಹಿತಿ ನೀಡಬೇಕು. ಅವರು ನಿಮಗೆ ಎಫ್‌ಐಆರ್ ಫಾರ್ಮ್ ನೀಡುತ್ತಾರೆ. ಈ ಫಾರ್ಮ್ ಪೂರ್ಣಗೊಂಡ ನಂತರ, ಅದನ್ನು ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ. ನಿಮ್ಮ ಪ್ರಯಾಣ ಮುಗಿಸುವ ರೈಲ್ವೆ ನಿಲ್ದಾಣದಲ್ಲಿರುವ ಆರ್‌ಪಿಎಫ್ ಸಹಾಯ ಪೋಸ್ಟ್‌ಗಳಲ್ಲಿ ಈ ದೂರು ಪತ್ರವನ್ನು ಸಲ್ಲಿಸಬಹುದು. ಆರ್‌ಪಿಎಫ್ ಎಲ್ಲಾ ನಿಲ್ದಾಣಗಳಲ್ಲಿ ಇರುತ್ತದೆ.

ಹಣ ಮರುಪಾವತಿ ಸಿಗುತ್ತಾ?

ರೈಲು ಪ್ರಯಾಣದ ಸಮಯದಲ್ಲಿ ಸಾಮಾನು ಕಳೆದುಹೋದರೆ, ನಿಯಮಗಳ ಪ್ರಕಾರ ರೈಲ್ವೆ ಪರಿಹಾರವನ್ನು ನೀಡುತ್ತದೆ. ಆದರೆ, ಅದಕ್ಕೆ ನಿಬಂಧನೆಗಳಿವೆ. ಹಣ ಮರುಪಾವತಿಯ ಪ್ರಯೋಜನವು ರೈಲ್ವೆ ವ್ಯವಸ್ಥೆಯಲ್ಲಿ ಸಾಮಾನು ಕಾಯ್ದಿರಿಸಲು ಶುಲ್ಕವನ್ನು ಪಾವತಿಸುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತದೆ. ಕಾಯ್ದಿರಿಸಿದ ಲಗೇಜ್ ಹಾನಿಗೊಳಗಾದರೆ ಮಾತ್ರ, ರೈಲ್ವೆ ಪ್ರಯಾಣಿಕರಿಗೆ ಪರಿಹಾರ ನೀಡಲಾಗುತ್ತದೆ.

ಒಂದು ವೇಳೆ ಬುಕ್ ಮಾಡಿದ ಲಗೇಜ್‌ನ ಬೆಲೆಯನ್ನು ಮೊದಲೇ ಹೇಳದಿದ್ದರೆ, ರೈಲ್ವೆಯು ಪ್ರತಿ ಕೆಜಿಗೆ 100 ರೂ.ಗಳವರೆಗೆ ಪರಿಹಾರವನ್ನು ನೀಡುತ್ತದೆ. ಇದು ಗರಿಷ್ಠ ಮೊತ್ತ. ಆದಾಗ್ಯೂ, ಬುಕಿಂಗ್ ಮಾಡುವಾಗ ಕ್ಲೈಮ್ ಮಾಡಿದ ಮೊತ್ತವು ಲಗೇಜ್‌ನ ನಿಗದಿತ ಮೌಲ್ಯವನ್ನು ಮೀರಬಾರದು ಎಂಬುದು ಗಮನದಲ್ಲಿರಬೇಕು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.