10ನೇ ತರಗತಿ ಪಾಸ್‌; ಗ್ರಾಮದಲ್ಲೇ ಮೊದಲ ಸಾಧನೆ ಈ ಬಾಲಕನದ್ದು, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  10ನೇ ತರಗತಿ ಪಾಸ್‌; ಗ್ರಾಮದಲ್ಲೇ ಮೊದಲ ಸಾಧನೆ ಈ ಬಾಲಕನದ್ದು, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆ

10ನೇ ತರಗತಿ ಪಾಸ್‌; ಗ್ರಾಮದಲ್ಲೇ ಮೊದಲ ಸಾಧನೆ ಈ ಬಾಲಕನದ್ದು, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆ

ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ಈ ಗ್ರಾಮದಲ್ಲಿ ಯಾರೊಬ್ಬರಿಗೂ 10ನೇ ತರಗತಿ ಪಾಸ್ ಆಗುವುದು ಸಾಧ್ಯವಾಗಿರಲಿಲ್ಲ. ಆದರೆ, ದಿನಗೂಲಿ ನೌಕರನೊಬ್ಬನ ಹದಿಹರೆಯದ ಪುತ್ರ ರಾಮ್‌ಕೇವಲ್ 10ನೇ ತರಗತಿ ಪಾಸ್ ಆದ. ಆ ಮೂಲಕ ಗ್ರಾಮದ 7 ದಶಕದ ಶೈಕ್ಷಣಿಕ ತೊಡಕು ನಿವಾರಣೆಯಾಗಿದೆ. ಇಲ್ಲಿದೆ ಚಿತ್ರವಿವರ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿಜಾಮಪುರ ಗ್ರಾಮದಲ್ಲೀಗ ಸಂಭ್ರಮ, ಸಡಗರ. ಕಾರಣ,  ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆಯಾಗಿದೆ. ಹೌದು ಈತ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದು ಅವರ ಸಂಭ್ರಮಕ್ಕೆ ಕಾರಣ. ಬಾಲಕನ ಹೆಸರು ರಾಮ್‌ ಕೇವಲ್‌. ಈ ಸಾಧನೆಗಾಗಿ ಜಿಲ್ಲಾಧಿಕಾರಿ ಆತನನ್ನು ಬರಮಾಡಿಕೊಂಡು ಗೌರವಿಸಿದ್ದೂ ಗಮನಸೆಳೆದಿದೆ.
icon

(1 / 9)

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿಜಾಮಪುರ ಗ್ರಾಮದಲ್ಲೀಗ ಸಂಭ್ರಮ, ಸಡಗರ. ಕಾರಣ, ದಿನಗೂಲಿ ನೌಕರನ ಪುತ್ರನಿಂದ 78 ವರ್ಷಗಳ ಶೈಕ್ಷಣಿಕ ತೊಡಕು ನಿವಾರಣೆಯಾಗಿದೆ. ಹೌದು ಈತ 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದು ಅವರ ಸಂಭ್ರಮಕ್ಕೆ ಕಾರಣ. ಬಾಲಕನ ಹೆಸರು ರಾಮ್‌ ಕೇವಲ್‌. ಈ ಸಾಧನೆಗಾಗಿ ಜಿಲ್ಲಾಧಿಕಾರಿ ಆತನನ್ನು ಬರಮಾಡಿಕೊಂಡು ಗೌರವಿಸಿದ್ದೂ ಗಮನಸೆಳೆದಿದೆ.
(Social Media Video Grab)

ರಾಮ್‌ ಕೇವಲ್‌ಗೆ 10ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಶೇಕಡ 55 ಅಂಕ ಬಂದಿದ್ದು, ಉತ್ತೀರ್ಣರಾಗಿದ್ದಾರೆ. ತಂದೆ ಜಗದೀಶ್. ದಿನಗೂಲಿ ನೌಕರ. ಓದು ಬರಹ ಇಲ್ಲದ ವ್ಯಕ್ತಿ. ತಾಯಿ ಪುಷ್ಪಾ. ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ಬಾಲಕ ಸಾಧನೆಗೆ ಗುರುತಿಸಿ ಕಚೇರಿಗೆ ಬರಮಾಡಿಕೊಂಡು ಸನ್ಮಾನಿಸಿದ ಸಂದರ್ಭ ಇದು.
icon

(2 / 9)

ರಾಮ್‌ ಕೇವಲ್‌ಗೆ 10ನೇ ತರಗತಿ ಬೋರ್ಡ್‌ ಪರೀಕ್ಷೆಯಲ್ಲಿ ಶೇಕಡ 55 ಅಂಕ ಬಂದಿದ್ದು, ಉತ್ತೀರ್ಣರಾಗಿದ್ದಾರೆ. ತಂದೆ ಜಗದೀಶ್. ದಿನಗೂಲಿ ನೌಕರ. ಓದು ಬರಹ ಇಲ್ಲದ ವ್ಯಕ್ತಿ. ತಾಯಿ ಪುಷ್ಪಾ. ಸರ್ಕಾರಿ ಶಾಲೆಯಲ್ಲಿ ಬಿಸಿಯೂಟಕ್ಕೆ ಅಡುಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ಬಾಲಕ ಸಾಧನೆಗೆ ಗುರುತಿಸಿ ಕಚೇರಿಗೆ ಬರಮಾಡಿಕೊಂಡು ಸನ್ಮಾನಿಸಿದ ಸಂದರ್ಭ ಇದು.
(Social Media Video Grab)

ರಾಮ್‌ ಕೇವಲ್‌ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಬಾಲಕ. ನಿಜಾಪುರ ಗ್ರಾಮದಲ್ಲಿರುವ ರಾಮ್‌ ಕೇವಲ್‌ನ ಮನೆಯ ಚಿತ್ರಣ. ಈ ಬಾಲಕನ ವಿಡಿಯೋ ವೈರಲ್ ಆಗಿದ್ದು, ಅದರಿಂದ ಹಿಡಿದ ಚಿತ್ರಗಳನ್ನು ಈ ಚಿತ್ರನೋಟಕ್ಕೆ ಬಳಸಲಾಗಿದೆ. ರಾಮ್‌ ಕೇವಲ್‌ನ ಸಾಧನೆಗೆ ಆತನ ಶಾಲೆಯಲ್ಲೂ ಸನ್ಮಾನ ಸಿಕ್ಕಿದೆ.
icon

(3 / 9)

ರಾಮ್‌ ಕೇವಲ್‌ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬದ ಬಾಲಕ. ನಿಜಾಪುರ ಗ್ರಾಮದಲ್ಲಿರುವ ರಾಮ್‌ ಕೇವಲ್‌ನ ಮನೆಯ ಚಿತ್ರಣ. ಈ ಬಾಲಕನ ವಿಡಿಯೋ ವೈರಲ್ ಆಗಿದ್ದು, ಅದರಿಂದ ಹಿಡಿದ ಚಿತ್ರಗಳನ್ನು ಈ ಚಿತ್ರನೋಟಕ್ಕೆ ಬಳಸಲಾಗಿದೆ. ರಾಮ್‌ ಕೇವಲ್‌ನ ಸಾಧನೆಗೆ ಆತನ ಶಾಲೆಯಲ್ಲೂ ಸನ್ಮಾನ ಸಿಕ್ಕಿದೆ.
(Social Media Video Grab)

ನಿಜಾಮಪುರ ಗ್ರಾಮವರು ಬಾರಾಬಂಕಿ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ಬಹುತೇಕ ಹಿಂದುಳಿದ ವರ್ಗದವರೇ ವಾಸವಿರುವ ಗ್ರಾಮವಿದು. ರಾಮ್‌ ಕೇವಲ್ 10ನೇ ತರಗತಿ ಪಾಸ್ ಆಗುವ ಮೂಲಕ ಉಳಿದವರಿಗೂ ಪ್ರೇರಣೆಯಾಗಿರುವುದು ವಿಶೇಷ.
icon

(4 / 9)

ನಿಜಾಮಪುರ ಗ್ರಾಮವರು ಬಾರಾಬಂಕಿ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿದೆ. ಬಹುತೇಕ ಹಿಂದುಳಿದ ವರ್ಗದವರೇ ವಾಸವಿರುವ ಗ್ರಾಮವಿದು. ರಾಮ್‌ ಕೇವಲ್ 10ನೇ ತರಗತಿ ಪಾಸ್ ಆಗುವ ಮೂಲಕ ಉಳಿದವರಿಗೂ ಪ್ರೇರಣೆಯಾಗಿರುವುದು ವಿಶೇಷ.
(Social Media Video Grab)

10ನೇ ತರಗತಿ ಬೋರ್ಡ್ ಪರೀಕ್ಷೆ ಕಟ್ಟಿದಾಗ ಊರ ಜನ ನಗುತ್ತಿದ್ದರು. ನಮ್ಮ ಊರಲ್ಲಿ ಯಾರೂ 10ನೇ ತರಗತಿ ಪಾಸ್ ಮಾಡಿಲ್ಲ. ನಿನ್ನ ಕೈಯಲ್ಲಿ ಆಗಲ್ಲ ಎಂದು ಕುಹಕವಾಡುತ್ತಿದ್ದರು. ನನ್ನ ಪ್ರಯತ್ನ ನಾನು ಮುಂದುವರಿಸಿದೆ. ದಿನಕ್ಕೆ 2 ಗಂಟೆ ಓದುತ್ತಿದ್ದೆ. ಅದು ಫಲ ನೀಡಿದೆ ಎಂದು ರಾಮ್ ಕೇವಲ್ ಹೇಳಿಕೊಂಡಿದ್ದಾರೆ.
icon

(5 / 9)

10ನೇ ತರಗತಿ ಬೋರ್ಡ್ ಪರೀಕ್ಷೆ ಕಟ್ಟಿದಾಗ ಊರ ಜನ ನಗುತ್ತಿದ್ದರು. ನಮ್ಮ ಊರಲ್ಲಿ ಯಾರೂ 10ನೇ ತರಗತಿ ಪಾಸ್ ಮಾಡಿಲ್ಲ. ನಿನ್ನ ಕೈಯಲ್ಲಿ ಆಗಲ್ಲ ಎಂದು ಕುಹಕವಾಡುತ್ತಿದ್ದರು. ನನ್ನ ಪ್ರಯತ್ನ ನಾನು ಮುಂದುವರಿಸಿದೆ. ದಿನಕ್ಕೆ 2 ಗಂಟೆ ಓದುತ್ತಿದ್ದೆ. ಅದು ಫಲ ನೀಡಿದೆ ಎಂದು ರಾಮ್ ಕೇವಲ್ ಹೇಳಿಕೊಂಡಿದ್ದಾರೆ.
(Social Media Video Grab)

ಊರು, ಪರ ಊರುಗಳಲ್ಲಿ ಮದುವೆ ಸಮಾರಂಭ ನಡೆಯುವಾಗ ದೀಪ ಹೊರುವ ಕೆಲಸ ಮಾಡುತ್ತಿರುವ ರಾಮ್‌ ಕೇವಲ್‌, ಇದಕ್ಕಾಗಿ 250 ರೂಪಾಯಿಯಿಂದ 300 ರೂಪಾಯಿ ಕೂಲಿ ಪಡೆಯುತ್ತಿರುವುದಾಗಿ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ.
icon

(6 / 9)

ಊರು, ಪರ ಊರುಗಳಲ್ಲಿ ಮದುವೆ ಸಮಾರಂಭ ನಡೆಯುವಾಗ ದೀಪ ಹೊರುವ ಕೆಲಸ ಮಾಡುತ್ತಿರುವ ರಾಮ್‌ ಕೇವಲ್‌, ಇದಕ್ಕಾಗಿ 250 ರೂಪಾಯಿಯಿಂದ 300 ರೂಪಾಯಿ ಕೂಲಿ ಪಡೆಯುತ್ತಿರುವುದಾಗಿ ಮಾಧ್ಯಮ ವರದಿಗಾರರಿಗೆ ತಿಳಿಸಿದ್ದಾರೆ.
(Social Media Video Grab)

ನಿಜಾಮಪುರ ಗ್ರಾಮದಲ್ಲಿ 30 ರಿಂದ 40 ಮನೆಗಳಿದ್ದು 250 ರಿಂದ 300 ಜನ ವಾಸವಿದ್ದಾರೆ. ಸ್ವಾತಂತ್ರ್ಯಾನಂತರ ಈ ಗ್ರಾಮ ಸಾಕ್ಷರತೆಯಲ್ಲಿ ಹಿಂದುಳಿದಿತ್ತು. ಈಗ ಈ ಬಾಲಕ 10ನೇ ತರಗತಿ ಉತ್ತೀರ್ಣರಾಗಿರುವ ಕಾರಣ, ಶಾಲಾ ಶಿಕ್ಷಕರಲ್ಲೂ ಉತ್ಸಾಹ ಕಂಡುಬಂದಿದೆ. ಇತರೆ ಬಾಲಕರಿಗೂ ಪ್ರೇರಣೆ ಸಿಕ್ಕಂತಾಗಿದೆ ಎಂದು ಪಿಟಿಐ ವರದಿ ಹೇಳಿದೆ.
icon

(7 / 9)

ನಿಜಾಮಪುರ ಗ್ರಾಮದಲ್ಲಿ 30 ರಿಂದ 40 ಮನೆಗಳಿದ್ದು 250 ರಿಂದ 300 ಜನ ವಾಸವಿದ್ದಾರೆ. ಸ್ವಾತಂತ್ರ್ಯಾನಂತರ ಈ ಗ್ರಾಮ ಸಾಕ್ಷರತೆಯಲ್ಲಿ ಹಿಂದುಳಿದಿತ್ತು. ಈಗ ಈ ಬಾಲಕ 10ನೇ ತರಗತಿ ಉತ್ತೀರ್ಣರಾಗಿರುವ ಕಾರಣ, ಶಾಲಾ ಶಿಕ್ಷಕರಲ್ಲೂ ಉತ್ಸಾಹ ಕಂಡುಬಂದಿದೆ. ಇತರೆ ಬಾಲಕರಿಗೂ ಪ್ರೇರಣೆ ಸಿಕ್ಕಂತಾಗಿದೆ ಎಂದು ಪಿಟಿಐ ವರದಿ ಹೇಳಿದೆ.
(Social Media Video Grab)

ತಂದೆ ಜಗದೀಶ್ ಜತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ರಾಮ್ ಕೇವಲ್‌, ಮನೆಗೆ ಬಂದ ಬಳಿಕ ಎರಡು ಗಂಟೆ ಶಾಲೆ ಕೆಲಸ ಮಾಡುತ್ತಿದ್ದ. ರಾತ್ರಿ ನಿದ್ದೆ ಕಡಿಮೆಯಾದರೂ ಸರಿದೂಗಿಸಿಕೊಂಡು 10ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದು ತಾಯಿ ಪುಷ್ಪಾ ಸುದ್ದಿಗಾರರಿಗೆ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
icon

(8 / 9)

ತಂದೆ ಜಗದೀಶ್ ಜತೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ರಾಮ್ ಕೇವಲ್‌, ಮನೆಗೆ ಬಂದ ಬಳಿಕ ಎರಡು ಗಂಟೆ ಶಾಲೆ ಕೆಲಸ ಮಾಡುತ್ತಿದ್ದ. ರಾತ್ರಿ ನಿದ್ದೆ ಕಡಿಮೆಯಾದರೂ ಸರಿದೂಗಿಸಿಕೊಂಡು 10ನೇ ತರಗತಿಯಲ್ಲಿ ಉತ್ತೀರ್ಣನಾಗಿದ್ದಾನೆ ಎಂದು ತಾಯಿ ಪುಷ್ಪಾ ಸುದ್ದಿಗಾರರಿಗೆ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
(Social Media Video Grab)

ರಾಮ್ ಕೇವಲ್ 10ನೇ ತರಗತಿ ಪಾಸ್ ಆಗುವ ಮೂಲಕ ಗ್ರಾಮದ ಒಂದು ಪೀಳಿಗೆಗೆ ದಾರಿದೀಪವಾಗಿ ಕಂಡುಬಂದಿದ್ದಾರೆ. ಆತನ ಓದಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಶಿಕ್ಷಣಾಧಿಕಾರಿ ಒ.ಪಿ.ತ್ರಿಪಾಠಿ ಹೇಳಿದ್ದಾರೆ. ಇದೇ ವೇಳೆ, ಈ ಬಾರಿ 10ನೇ ತರಗತಿ ಪರೀಕ್ಷೆ ಬರೆದು ಫೇಲ್ ಆಗಿರುವ ಲವಕೇಶ್ ಮತ್ತು ಮುಕೇಶ್ ಎಂಬ ಇಬ್ಬರು ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ಪಾಸ್ ಮಾಡಲು ನಿರ್ಧರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ
icon

(9 / 9)

ರಾಮ್ ಕೇವಲ್ 10ನೇ ತರಗತಿ ಪಾಸ್ ಆಗುವ ಮೂಲಕ ಗ್ರಾಮದ ಒಂದು ಪೀಳಿಗೆಗೆ ದಾರಿದೀಪವಾಗಿ ಕಂಡುಬಂದಿದ್ದಾರೆ. ಆತನ ಓದಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಶಿಕ್ಷಣಾಧಿಕಾರಿ ಒ.ಪಿ.ತ್ರಿಪಾಠಿ ಹೇಳಿದ್ದಾರೆ. ಇದೇ ವೇಳೆ, ಈ ಬಾರಿ 10ನೇ ತರಗತಿ ಪರೀಕ್ಷೆ ಬರೆದು ಫೇಲ್ ಆಗಿರುವ ಲವಕೇಶ್ ಮತ್ತು ಮುಕೇಶ್ ಎಂಬ ಇಬ್ಬರು ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆದು ಪಾಸ್ ಮಾಡಲು ನಿರ್ಧರಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ
(Social Media Video Grab)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು