ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ; ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ
ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
(1 / 9)
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾತನಾಡುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಈ ತಂಡದ ಅಭಿಮಾನಿಗಳ ವಿರುದ್ಧ ಸದಾ ವಿಷಕಾರುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಭಾರತೀಯ ಸೇನೆ ವಿಚಾರವಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.
(2 / 9)
ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿರುವ ಕುರಿತು ರಾಯುಡು ಆಡಿರುವ ಮಾತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈತನನ್ನು ಪಾಕಿಸ್ತಾನಕ್ಕೆ ಓಡಿಸಿ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇಂಥವರು ದೇಶಕ್ಕೆ ಬೇಕಿಲ್ಲ ಎಂದೆಲ್ಲ ಆಕ್ರೋಶ ಹೊರಹಾಕುತ್ತಿದ್ದಾರೆ.
(3 / 9)
ಪೆಹಲ್ಗಾಮ್ನಲ್ಲಿ 26 ಅಮಾಯಕ ಜನರನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂದೂರಿ ಮೂಲಕ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನೆ, ಪಾಕ್ಗೆ ತಕ್ಕ ಉತ್ತರ ನೀಡಿತ್ತು. ಈ ಬಳಿಕ ಪಾಕಿಸ್ತಾನ ಮತ್ತೆ ದಾಳಿ ನಡೆಸಿ 15 ನಾಗರಿಕರನ್ನು ಕೊಂದಿತ್ತು.
(4 / 9)
ಇದರ ನಂತರ ಪಾಕ್ನ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿತ್ತು. ಇಷ್ಟಾದರೂ ಸುಮ್ಮನಾಗದ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಆದರೆ ಭಾರತದ ಸೇನೆ ಇದೆಲ್ಲವನ್ನೂ ಹೊಡೆದು ಉರುಳಿಸಿದೆ.
(5 / 9)
ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿರುವ ಈ ಹಂತದಲ್ಲಿ ರಾಯುಡು ಭಾರತೀಯ ಸೇನೆಗೆ ಉಪದೇಶ ಕೊಟ್ಟಿದ್ದಾರೆ. ಇಂಡಿಯನ್ ಆರ್ಮಿಗೆ ಕಣ್ಣಿಗೆ ಕಣ್ಣು ಜಗತ್ತನ್ನು ಕುರುಡಾಗಿಸುತ್ತದೆ ಎಂದು ಪೋಸ್ಟ್ ಮಾಡಿದ್ದು, ಹಿಂಬಾಲಕರು ಸಹ ರಾಯುಡು ವಿರುದ್ಧ ತಿರುಗಿಬಿದ್ದಿದ್ದಾರೆ.
(6 / 9)
ಭಾರತ ಮತ್ತು ಪಾಕಿಸ್ತಾನ ನಡುವಿನ ದಾಳಿ-ಪ್ರತಿದಾಳಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ರಾಯುಡು, ಕಣ್ಣಿಗೆ ಕಣ್ಣೇ ಪರಿಹಾರ ಎನ್ನುವುದಾದರೆ ಈ ಜಗತ್ತಿನಲ್ಲಿ ಯಾರಿಗೂ ಕಣ್ಣುಗಳೇ ಇರುವುದಿಲ್ಲ. ಎಲ್ಲರೂ ಕುರುಡರಾಗುತ್ತಾರೆ ಎಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
(7 / 9)
ಅಂದರೆ ಈ ಟ್ವೀಟ್ನ ಅರ್ಥ ಭಾರತೀಯ ಸೇನೆ ಹಾಗೂ ಭಾರತವು ಪಾಕ್ ಜೊತೆಗೆ ಶಾಂತಿ ಮಾತುಕತೆ ನಡೆಸಬೇಕು. ಸೇಡಿಗೆ ಸೇಡು ಅಲ್ಲ, ಬದಲಿಗೆ ಮಾತುಕತೆ ಮೂಲಕವೂ ಪರಿಹಾರ ಬಗೆಹರಿಸಿಕೊಳ್ಳಬಹುದು ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.
(8 / 9)
ಅಂಬಾಟಿ ರಾಯುಡು ಹೇಳಿಕೆಯು ಕನಿಷ್ಠ ಕಟ್ಟರ್ ಸಿಎಸ್ಕೆ ಫ್ಯಾನ್ಸ್ಗೂ ಕೋಪ ಬರುವಂತೆ ಮಾಡಿದೆ. ಈ ಸೂಕ್ಷ್ಮ ಸಮಯದಲ್ಲಿ ಪರಿಸ್ಥಿತಿ ಗಂಭೀರತೆ ಅರಿಯದೆ ನಾಲಿಗೆ ಹರಿಯಬಿಟ್ಟಿದ್ದಾರೆ. ರಾಷ್ಟ್ರೀಯ ಏಕತೆ ಮನೋಭಾವ ಪ್ರದರ್ಶಿಸುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ.
ಇತರ ಗ್ಯಾಲರಿಗಳು