ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ; ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ; ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ

ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ; ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ

ಪಾಕಿಸ್ತಾನಕ್ಕೆ ಭಾರತೀಯ ಸೇನೆಯ ಪ್ರತಿದಾಳಿ ಕುರಿತು ಅಂಬಾಟಿ ರಾಯುಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶಾದ್ಯಂತ ಮಾಜಿ ಕ್ರಿಕೆಟಿಗನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾತನಾಡುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಈ ತಂಡದ ಅಭಿಮಾನಿಗಳ ವಿರುದ್ಧ ಸದಾ ವಿಷಕಾರುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಭಾರತೀಯ ಸೇನೆ ವಿಚಾರವಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.
icon

(1 / 9)

ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಮಾತನಾಡುತ್ತಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಈ ತಂಡದ ಅಭಿಮಾನಿಗಳ ವಿರುದ್ಧ ಸದಾ ವಿಷಕಾರುತ್ತಿದ್ದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ಭಾರತೀಯ ಸೇನೆ ವಿಚಾರವಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.

ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿರುವ ಕುರಿತು ರಾಯುಡು ಆಡಿರುವ ಮಾತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈತನನ್ನು ಪಾಕಿಸ್ತಾನಕ್ಕೆ ಓಡಿಸಿ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇಂಥವರು ದೇಶಕ್ಕೆ ಬೇಕಿಲ್ಲ ಎಂದೆಲ್ಲ ಆಕ್ರೋಶ ಹೊರಹಾಕುತ್ತಿದ್ದಾರೆ.
icon

(2 / 9)

ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿರುವ ಕುರಿತು ರಾಯುಡು ಆಡಿರುವ ಮಾತು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈತನನ್ನು ಪಾಕಿಸ್ತಾನಕ್ಕೆ ಓಡಿಸಿ ಎಂದು ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಇಂಥವರು ದೇಶಕ್ಕೆ ಬೇಕಿಲ್ಲ ಎಂದೆಲ್ಲ ಆಕ್ರೋಶ ಹೊರಹಾಕುತ್ತಿದ್ದಾರೆ.

ಪೆಹಲ್ಗಾಮ್​ನಲ್ಲಿ 26 ಅಮಾಯಕ ಜನರನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂದೂರಿ ಮೂಲಕ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನೆ, ಪಾಕ್​ಗೆ ತಕ್ಕ ಉತ್ತರ ನೀಡಿತ್ತು. ಈ ಬಳಿಕ ಪಾಕಿಸ್ತಾನ ಮತ್ತೆ ದಾಳಿ ನಡೆಸಿ 15 ನಾಗರಿಕರನ್ನು ಕೊಂದಿತ್ತು.
icon

(3 / 9)

ಪೆಹಲ್ಗಾಮ್​ನಲ್ಲಿ 26 ಅಮಾಯಕ ಜನರನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಆಪರೇಷನ್ ಸಿಂದೂರಿ ಮೂಲಕ 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ್ದ ಭಾರತೀಯ ಸೇನೆ, ಪಾಕ್​ಗೆ ತಕ್ಕ ಉತ್ತರ ನೀಡಿತ್ತು. ಈ ಬಳಿಕ ಪಾಕಿಸ್ತಾನ ಮತ್ತೆ ದಾಳಿ ನಡೆಸಿ 15 ನಾಗರಿಕರನ್ನು ಕೊಂದಿತ್ತು.

ಇದರ ನಂತರ ಪಾಕ್​​ನ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿತ್ತು. ಇಷ್ಟಾದರೂ ಸುಮ್ಮನಾಗದ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಆದರೆ ಭಾರತದ ಸೇನೆ ಇದೆಲ್ಲವನ್ನೂ ಹೊಡೆದು ಉರುಳಿಸಿದೆ.
icon

(4 / 9)

ಇದರ ನಂತರ ಪಾಕ್​​ನ ಪ್ರಮುಖ ನಗರಗಳ ಮೇಲೆ ಭಾರತ ಡ್ರೋನ್ ದಾಳಿ ನಡೆಸಿತ್ತು. ಇಷ್ಟಾದರೂ ಸುಮ್ಮನಾಗದ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಆದರೆ ಭಾರತದ ಸೇನೆ ಇದೆಲ್ಲವನ್ನೂ ಹೊಡೆದು ಉರುಳಿಸಿದೆ.

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿರುವ ಈ ಹಂತದಲ್ಲಿ ರಾಯುಡು ಭಾರತೀಯ ಸೇನೆಗೆ ಉಪದೇಶ ಕೊಟ್ಟಿದ್ದಾರೆ. ಇಂಡಿಯನ್ ಆರ್ಮಿಗೆ ಕಣ್ಣಿಗೆ ಕಣ್ಣು ಜಗತ್ತನ್ನು ಕುರುಡಾಗಿಸುತ್ತದೆ ಎಂದು ಪೋಸ್ಟ್ ಮಾಡಿದ್ದು, ಹಿಂಬಾಲಕರು ಸಹ ರಾಯುಡು ವಿರುದ್ಧ ತಿರುಗಿಬಿದ್ದಿದ್ದಾರೆ.
icon

(5 / 9)

ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುತ್ತಿರುವ ಈ ಹಂತದಲ್ಲಿ ರಾಯುಡು ಭಾರತೀಯ ಸೇನೆಗೆ ಉಪದೇಶ ಕೊಟ್ಟಿದ್ದಾರೆ. ಇಂಡಿಯನ್ ಆರ್ಮಿಗೆ ಕಣ್ಣಿಗೆ ಕಣ್ಣು ಜಗತ್ತನ್ನು ಕುರುಡಾಗಿಸುತ್ತದೆ ಎಂದು ಪೋಸ್ಟ್ ಮಾಡಿದ್ದು, ಹಿಂಬಾಲಕರು ಸಹ ರಾಯುಡು ವಿರುದ್ಧ ತಿರುಗಿಬಿದ್ದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ದಾಳಿ-ಪ್ರತಿದಾಳಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ರಾಯುಡು, ಕಣ್ಣಿಗೆ ಕಣ್ಣೇ ಪರಿಹಾರ ಎನ್ನುವುದಾದರೆ ಈ ಜಗತ್ತಿನಲ್ಲಿ ಯಾರಿಗೂ ಕಣ್ಣುಗಳೇ ಇರುವುದಿಲ್ಲ. ಎಲ್ಲರೂ ಕುರುಡರಾಗುತ್ತಾರೆ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ.
icon

(6 / 9)

ಭಾರತ ಮತ್ತು ಪಾಕಿಸ್ತಾನ ನಡುವಿನ ದಾಳಿ-ಪ್ರತಿದಾಳಿಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ರಾಯುಡು, ಕಣ್ಣಿಗೆ ಕಣ್ಣೇ ಪರಿಹಾರ ಎನ್ನುವುದಾದರೆ ಈ ಜಗತ್ತಿನಲ್ಲಿ ಯಾರಿಗೂ ಕಣ್ಣುಗಳೇ ಇರುವುದಿಲ್ಲ. ಎಲ್ಲರೂ ಕುರುಡರಾಗುತ್ತಾರೆ ಎಂದು ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಅಂದರೆ ಈ ಟ್ವೀಟ್​ನ ಅರ್ಥ ಭಾರತೀಯ ಸೇನೆ ಹಾಗೂ ಭಾರತವು ಪಾಕ್​ ಜೊತೆಗೆ ಶಾಂತಿ ಮಾತುಕತೆ ನಡೆಸಬೇಕು. ಸೇಡಿಗೆ ಸೇಡು ಅಲ್ಲ, ಬದಲಿಗೆ ಮಾತುಕತೆ ಮೂಲಕವೂ ಪರಿಹಾರ ಬಗೆಹರಿಸಿಕೊಳ್ಳಬಹುದು ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.
icon

(7 / 9)

ಅಂದರೆ ಈ ಟ್ವೀಟ್​ನ ಅರ್ಥ ಭಾರತೀಯ ಸೇನೆ ಹಾಗೂ ಭಾರತವು ಪಾಕ್​ ಜೊತೆಗೆ ಶಾಂತಿ ಮಾತುಕತೆ ನಡೆಸಬೇಕು. ಸೇಡಿಗೆ ಸೇಡು ಅಲ್ಲ, ಬದಲಿಗೆ ಮಾತುಕತೆ ಮೂಲಕವೂ ಪರಿಹಾರ ಬಗೆಹರಿಸಿಕೊಳ್ಳಬಹುದು ಎಂದು ಪರೋಕ್ಷ ಸಂದೇಶ ರವಾನಿಸಿದ್ದಾರೆ.

ಅಂಬಾಟಿ ರಾಯುಡು ಹೇಳಿಕೆಯು ಕನಿಷ್ಠ ಕಟ್ಟರ್​ ಸಿಎಸ್​ಕೆ ಫ್ಯಾನ್ಸ್​ಗೂ ಕೋಪ ಬರುವಂತೆ ಮಾಡಿದೆ. ಈ ಸೂಕ್ಷ್ಮ ಸಮಯದಲ್ಲಿ ಪರಿಸ್ಥಿತಿ ಗಂಭೀರತೆ ಅರಿಯದೆ ನಾಲಿಗೆ ಹರಿಯಬಿಟ್ಟಿದ್ದಾರೆ. ರಾಷ್ಟ್ರೀಯ ಏಕತೆ ಮನೋಭಾವ ಪ್ರದರ್ಶಿಸುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ.
icon

(8 / 9)

ಅಂಬಾಟಿ ರಾಯುಡು ಹೇಳಿಕೆಯು ಕನಿಷ್ಠ ಕಟ್ಟರ್​ ಸಿಎಸ್​ಕೆ ಫ್ಯಾನ್ಸ್​ಗೂ ಕೋಪ ಬರುವಂತೆ ಮಾಡಿದೆ. ಈ ಸೂಕ್ಷ್ಮ ಸಮಯದಲ್ಲಿ ಪರಿಸ್ಥಿತಿ ಗಂಭೀರತೆ ಅರಿಯದೆ ನಾಲಿಗೆ ಹರಿಯಬಿಟ್ಟಿದ್ದಾರೆ. ರಾಷ್ಟ್ರೀಯ ಏಕತೆ ಮನೋಭಾವ ಪ್ರದರ್ಶಿಸುತ್ತಿಲ್ಲ ಎಂದು ಅನೇಕರು ಆರೋಪಿಸಿದ್ದಾರೆ.

ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ರದ್ದಾದ ಬಳಿಕ ಈ ಟ್ವೀಟ್ ಮಾಡಿದ್ದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹವರನ್ನು ಪಾಕಿಸ್ತಾನಕ್ಕೆ ಓಡಿಸಿ ಎಂದು ಕೆಲವರು ಪೋಸ್ಟ್​ ಹಂಚಿಕೊಂಡಿದ್ದಾರೆ.
icon

(9 / 9)

ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ರದ್ದಾದ ಬಳಿಕ ಈ ಟ್ವೀಟ್ ಮಾಡಿದ್ದು ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹವರನ್ನು ಪಾಕಿಸ್ತಾನಕ್ಕೆ ಓಡಿಸಿ ಎಂದು ಕೆಲವರು ಪೋಸ್ಟ್​ ಹಂಚಿಕೊಂಡಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು