ಮಹಾಭಾರತದ ಶಿಶುಪಾಲನಂತೆ ಜೈದೇವ 100 ತಪ್ಪು ಮಾಡಬೇಕೆ? ಜಾಣಮರೆವಿನಲ್ಲಿ ಜಾರಿಹೋಗುತ್ತಿದೆ ಅಮೃತಧಾರೆ ಧಾರಾವಾಹಿ
ಅಮೃತಧಾರೆ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಧಾರಾವಾಹಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಅನಿರೀಕ್ಷಿತ ತಿರುವುಗಳು, ಗೌತಮ್- ಭೂಮಿಕಾ ಪ್ರೇಮಕಥೆ ಇತ್ಯಾದಿಗಳ ನಡುವೆ ಮಧುರವಾಗಿ ಸಾಗುತ್ತದೆ. ಆದರೆ, ಈ ಸೀರಿಯಲ್ನಲ್ಲಿ ನಿರ್ದೇಶಕರ ಜಾಣ ಮರೆವಿಗೆ ಪ್ರೇಕ್ಷಕರು ಹೊಂದಿಕೊಂಡಂತೆ ಇದೆ.
(1 / 10)
ಕನ್ನಡ ಸೀರಿಯಲ್ಗಳಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಮುಂದೆ ದಿನಕಳೆದಂತ ಆ ಘಟನೆಗಳನ್ನು ಮರೆತಂತೆ ಸೀರಿಯಲ್ ಕಥೆಗಳು ಸಾಗುತ್ತವೆ. ಪ್ರೇಕ್ಷಕರಿಗೆ ಪ್ರತಿ ಎಪಿಸೋಡನ್ನು ರಂಜನೀಯವಾಗಿ ನೀಡಬೇಕೆಂದು ಹಲವು ಘಟನೆಗಳನ್ನು ಸೃಷ್ಟಿಸಿ ಮುಂದಿನ ದಿನಗಳಲ್ಲಿ ಆ ಘಟನೆಗಳನ್ನ ಮರೆತು ಮುಂದೆ ಸಾಗಲಾಗುತ್ತದೆ. ಅಮೃತಧಾರೆ ಧಾರಾವಾಹಿಯನ್ನು ಉದಾಹರಣೆಯಾಗಿಟ್ಟುಕೊಂಡು ಸೀರಿಯಲ್ಗಳ ಇಂತಹ ಜಾಣ ಮರೆವಿನ ಕುರಿತು ವಿಶ್ಲೇಷಣೆ ಮಾಡೋಣ.
(Photo: google)(2 / 10)
ಈ ಸೀರಿಯಲ್ನಲ್ಲಿ ಕೆಲವೊಂದು ಘಟನೆಗಳು ನಡೆಯುತ್ತವೆ. ಆ ಘಟನೆ ಮುಗಿದ ಬಳಿಕ ಹಿಂದಿನ ಘಟನೆಗಳ ನೆನಪೇ ಇಲ್ಲದಂತೆ ಮುಂದಿನ ಕಥೆ ಇರುತ್ತದೆ. ಕೆಲವೊಮ್ಮೆ ಇದನ್ನು ಹಲವು ಸಣ್ಣಕಥೆಗಳ ಆಥಾಲಜಿ ಪ್ರಕಾರವೆಂದು ಭಾವಿಸಬೇಕಾಗುತ್ತದೆ. ಉದಾಹರಣೆಗೆ ಜೈದೇವ್ನ ವಿಷಯವನ್ನೇ ತೆಗೆದುಕೊಳ್ಳಿ.
(3 / 10)
ಅಮೃತಧಾರೆ ಸೀರಿಯಲ್ ಆರಂಭದಿಂದ ಇಲ್ಲಿಯವರೆಗೆ ಆತ ಎಷ್ಟು ತಪ್ಪು ಮಾಡಿರಬಹುದು. ಆತನ ತಪ್ಪಿನ ಘೋರತೆ ನೋಡಿದ್ರೆ ಜೀವಾವಧಿ ಶಿಕ್ಷೆ ಖಾತ್ರಿ. ಆದರೆ, ಹಳೆಯ ಘಟನೆಗಳನ್ನು, ಆತನ ಹಳೆಯ ತಪ್ಪುಗಳನ್ನು ಮರೆತು ಸೀರಿಯಲ್ ಸಾಗುತ್ತದೆ. ಪ್ರೇಕ್ಷಕರಿಗೆ ಆಗಾಗ ಮಹಾ ತಿರುವಿನ ಹೆಸರಿನಲ್ಲಿ ಥ್ರಿಲ್ ನೀಡುತ್ತಾ "ದೋಣಿ ಸಾಗಲಿ, ಮುಂದೆ ಹೋಗಲಿ" ಎಂಬಂತೆ ಸೀರಿಯಲ್ ಸಾಗುತ್ತದೆ.
(4 / 10)
ಶಿಶುಪಾಲ ನೂರು ತಪ್ಪು ಮಾಡುವ ತನಕ ಶ್ರೀಕೃಷ್ಣ ಕಾದನಂತೆ. ಮಲ್ಲಿಯನ್ನು ಸಾಯಿಸಲು ಪ್ರಯತ್ನಿಸಿರುವುದು, ಪಾರ್ಥನನ್ನು ಸಾಯಿಸಲು ಯತ್ನಿಸಿದ್ದು, ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿದ್ದು... ಹೀಗೆ ಲೆಕ್ಕ ಹಾಕಿದರೆ ಜೈದೇವ ಮಾಡಿರುವ ತಪ್ಪುಗಳು ನೂರು ದಾಟಿರಬಹುದು. ಮೊನ್ನೆಯಷ್ಟೇ ದಿಯಾಳನ್ನು ಮದುವೆಯಾಗಲು ಯತ್ನಿಸಿದ. ಮಲ್ಲಿ ರೋಷದ ಕ್ರಮ ಕೈಗೊಂಡಿದ್ದಳು. ಈಗ ಮಲ್ಲಿಯೂ ಆ ವಿಷಯ ಮರೆತಿದ್ದಾಳೆ. ಸೀರಿಯಲ್ ಮುಗಿಸುವ ವೇಳೆ ಶಕುಂತಲಾ ಗ್ಯಾಂಗ್ಗೆ ಶಿಕ್ಷೆ ನೀಡಿ ಶುಭಂ ಎಂದು ಹೇಳಲು ಸೀರಿಯಲ್ ನಿರ್ದೇಶಕರು ನಿರ್ಧರಿಸಿರಬಹುದು.
(5 / 10)
ಜೀವನ್ ಎಂಬ ಪಾತ್ರಧಾರಿಯ ಸ್ವಭಾವವನ್ನೇ ಬದಲಾಯಿಸಲಾಯಿತು. ಆದರೆ, ಈಗಲೂ ಅಮೃತಧಾರೆ ಜೀವನ್ ಎಂದರೆ ಹಳೆಯ ಜೀವನ್ ನೆನಪಾಗಬಹುದು. ಸ್ವಭಾವ ಬದಲಾಯಿಸುವ ಮೂಲಕ ಪ್ರೇಕ್ಷಕರ ಮನಸ್ಸಿಗೂ ಇರಿಸು ಮುರಿಸು ತಟ್ಟಬಹುದು.
(6 / 10)
ಅಪೇಕ್ಷಾ ಎಂಬ ಲವ್ ಬರ್ಡ್ ಕ್ಯಾರೆಕ್ಟರ್ ಅನ್ನು ಪ್ರೇಕ್ಷಕರು "ಛೀ ಥೂ" ಎನ್ನುವಂತೆ ಮಾಡಲಾಯಿತು. ಈಗ ಮತ್ತೆ ಮೊದಲಿನಂತೆ ಅಪೇಕ್ಷಾಳನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ. ಇದು ಕೂಡ ಜಾಣ ಮರೆವು. ವೀಕ್ಷಕರು ಒಪ್ಪಿಕೊಳ್ಳುತ್ತಾರೆ ಬಿಡಿ ಎಂಬ ಧೋರಣೆಯೂ ಹೌದು.
(7 / 10)
ಕೆಲವೊಂದು ವಿಷಯಗಳನ್ನು ತನಿಖೆ ಮಾಡಲು ಸೀರಿಯಲ್ ಪಾತ್ರಗಳು ಪೆದ್ದು ಪೆದ್ದು ಹಾದಿ ಹಿಡಿಯುತ್ತವೆ. ಸೀರಿಯಲೊಂದು ನೂರು ಇನ್ನೂರು ಐನ್ನೂರು ಸಾವಿರ ಎಪಿಸೋಡ್ ಬರಬೇಕೆಂದು ಎಳೆಯಬೇಕೆಂದುಕೊಂಡಾಗ ಇಂತಹ ಕಾಲಾಕ್ಷೇಪಗಳು ನಡೆಯುತ್ತಿರುತ್ತವೆ.
(8 / 10)
ಇದನ್ನೆಲ್ಲ ಕನ್ನಡ ಕಿರುತೆರೆ ವೀಕ್ಷಕರು ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಅವರು ಹಾಕುವ ಕಾಮೆಂಟ್ಗಳೇ ಸಾಕ್ಷಿ. ಇಂತಹ ಕಾಮೆಂಟ್ಗಳಲ್ಲಿ ಕೆಲವರು ಊಹಿಸಿದಂತೆ ಮುಂದೆ ಏನಾದರೂ ಜರುಗುತ್ತದೆ.
(9 / 10)
ಮೈಕ್ನಲ್ಲಿ ಇಟ್ಟ ಸರವನ್ನು ಭೂಮಿಕಾ ಮರೆತಿದ್ದಾರೆ. ಸೃಜನ್ ಜತೆ ಬೇರೊಂದು ದಿನ ಇದರ ರಹಸ್ಯ ತಿಳಿಯಲು ಹೋಗಬಹುದಿತ್ತು. ಆದರೆ, ಈ ತನಿಖೆ ಮರೆತು ಈಗ ಚಪ್ಪಲಿ ಪತ್ತೆದಾರಿಕೆಗೆ ಇಳಿದಿದ್ದಾರೆ. ಕೊನೆಗೆ ಕಿಡ್ನ್ಯಾಪರ್ ಮಹಿಳೆಯ ಬಳಿಯೂ ಇಂತಹದ್ದೇ ಚಪ್ಪಲ್ ಇದ್ದಿರಬಹುದು ಎಂದು ಹೇಳಿಬಿಟ್ರೆ ಈ ಚಪ್ಪಲಿ ಪತ್ತೆದಾರಿಕೆ ಕೊನೆಗೊಳ್ಳುತ್ತದೆ ಎಂದು ಪ್ರೇಕ್ಷಕರು ಊಹಿಸಿದ್ದಾರೆ.
ಇತರ ಗ್ಯಾಲರಿಗಳು