ಅಮೃತಧಾರೆ ಧಾರಾವಾಹಿ: ಮಾಸ್ ಅವತಾರ ತಾಳಿ ಶತ್ರು ಸಂಹಾರ ಮಾಡಿದ ಗೌತಮ್; ತಾನೇ ತೋಡಿದ ಹಳ್ಳಕ್ಕೆ ಬಿದ್ದ ಶಕುಂತಲಾದೇವಿ ಗ್ಯಾಂಗ್
- ಅಮೃತಧಾರೆ ಧಾರಾವಾಹಿಯಲ್ಲಿ ಅಪರೂಪಕ್ಕೆ ಮತ್ತೆ ಗೌತಮ್ ದಿವಾನ್ ಮಾಸ್ ಅವತಾರ ತಾಳಿದ್ದಾರೆ. ಕಿಡ್ನ್ಯಾಪರ್ಗಳ ಅಡ್ಡಕ್ಕೆ ನುಗ್ಗಿ ಫೈಟಿಂಗ್ ಮಾಡಿದ್ದಾರೆ. ಅಲ್ಲೇ ಇದ್ದ ಶಕುಂತಲಾದೇವಿ, ಜೈದೇವ್, ಲಕ್ಕಿ ಲಕ್ಷ್ಮಿಕಾಂತ್ ಥರಥರ ನಡುಗುತ್ತಿದ್ದಾರೆ. ಶಕುಂತಲಾ ಗ್ಯಾಂಗ್ ಸಿಕ್ಕಿ ಬಿತ್ತಾ? ಇಲ್ಲಿದೆ ವಿವರ.
- ಅಮೃತಧಾರೆ ಧಾರಾವಾಹಿಯಲ್ಲಿ ಅಪರೂಪಕ್ಕೆ ಮತ್ತೆ ಗೌತಮ್ ದಿವಾನ್ ಮಾಸ್ ಅವತಾರ ತಾಳಿದ್ದಾರೆ. ಕಿಡ್ನ್ಯಾಪರ್ಗಳ ಅಡ್ಡಕ್ಕೆ ನುಗ್ಗಿ ಫೈಟಿಂಗ್ ಮಾಡಿದ್ದಾರೆ. ಅಲ್ಲೇ ಇದ್ದ ಶಕುಂತಲಾದೇವಿ, ಜೈದೇವ್, ಲಕ್ಕಿ ಲಕ್ಷ್ಮಿಕಾಂತ್ ಥರಥರ ನಡುಗುತ್ತಿದ್ದಾರೆ. ಶಕುಂತಲಾ ಗ್ಯಾಂಗ್ ಸಿಕ್ಕಿ ಬಿತ್ತಾ? ಇಲ್ಲಿದೆ ವಿವರ.
(1 / 12)
ಅಮೃತಧಾರೆ ಧಾರಾವಾಹಿ ಆಕ್ಷನ್ ಮೋಡ್ನಲ್ಲಿದೆ. ಗೌತಮ್ ದಿವಾನ್ ಹೀರೋ ರೀತಿ ಫೈಟಿಂಗ್ ಮಾಡಿದ್ದಾರೆ. ಈ ಸೀರಿಯಲ್ನ ಪ್ರಮುಖ ಹೀರೋ ಇವರೇ ಅಲ್ವೇ? ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸಾಕಷ್ಟು ವಿಚಾರಗಳು ತಿಳಿದುಬಂದಿದೆ.
(2 / 12)
ಸೃಜನ್ ಕರೆ ಮಾಡುತ್ತಾನೆ. "ರೌಡಿಗಳು ಕರೆ ಮಾಡಿದ ಆ ಲೊಕೆಷನ್ ಕನ್ಫರ್ಮ್ ಆಯ್ತು ಸರ್" ಎಂದು ಸೃಜನ್ ತಿಳಿಸುತ್ತಾನೆ. "ಹೌದಾ" ಎಂದು ಗೌತಮ್ ಹೇಳುತ್ತಾರೆ. ಈಗಲೇ ಬರುತ್ತೇವೆ ಎಂದು ಆನಂದ್ ಜತೆ ಹೋಗುತ್ತಾರೆ.
(3 / 12)
"ಎಲ್ಲಿದ್ದಾರೆ ಅವರು" ಎಂದು ಗೌತಮ್ ಕೇಳುತ್ತಾರೆ. "ಕುಂಬಳಗೋಡು ಇಂಡಸ್ಟ್ರಿಯಲ್ ಏರಿಯಾ" ಎಂದು ಸೃಜನ್ ಮಾಹಿತಿ ನೀಡುತ್ತಾನೆ.
(4 / 12)
"ಜೈ ಮೊದಲು ಇಲ್ಲಿಂದ ಹೊರಡೋಣ. ಅಪಾಯ ಇದೆ ಇಲ್ಲಿ" ಎಂದು ಶಕುಂತಲಾದೇವಿ ಹೇಳುವ ದೃಶ್ಯ ಕಾಣಿಸುತ್ತದೆ. ಅವರೆಲ್ಲರು ಗೋಡಾನ್ನಲ್ಲಿದ್ದಾರೆ. ರೌಡಿಗಳು, ಜೈದೇವ್ ಎಲ್ಲರೂ ಅಲ್ಲಿದ್ದಾರೆ.
(5 / 12)
ಇವರು ಅಲ್ಲಿಂದ ಹೊರಡುವ ಯೋಜನೆ ಮಾಡಿದಾಗಲೇ ಹೊರಗೆ ಕಾರು ಬಂದು ನಿಂತಿದೆ. ಗೌತಮ್ ದಿವಾನ್ ಮತ್ತು ಆನಂದ್ ಎಂಟ್ರಿ ನೀಡಿದ್ದಾರೆ. ಶಕುಂತಲಾ ಗ್ಯಾಂಗ್ ಬೆಚ್ಚಿ ಬಿದ್ದಿದೆ.
(6 / 12)
ಅಮ್ಮ, ಮಾವ ನೀವು ಅಡಗಿಕೊಳ್ಳಿ ಎಂದು ಜೈದೇವ್ ಹೇಳುತ್ತಾನೆ. ಈಗ ನಮ್ಮ ಅಣ್ಣಾ ಬರ್ತಾನೆ. ನೀವು ಅಟ್ಯಾಕ್ ಮಾಡಿ ಎಂದು ಗೂಂಡಾಗಳಿಗೆ ಸೂಚಿಸ್ತಾನೆ.
(7 / 12)
ಎದುರಿಗೆ ಬರುವ ಗೂಂಡಾಗಳಿಗೆ ಗೌತಮ್ ಒದೆಯುತ್ತಾರೆ. ಗೆಳೆಯ ಆನಂದ್ ಬ್ಯಾಟ್ನಲ್ಲಿ ಹೊಡೆಯುತ್ತಾನೆ. ಇಬ್ಬರೂ ಆಕ್ಷನ್ ಮೋಡ್ನಲ್ಲಿದ್ದಾರೆ.
(8 / 12)
ಗೂಂಡಾಗಳನ್ನು ಗೌತಮ್ ಮತ್ತು ಆನಂದ್ ಚಚ್ಚುತ್ತಿರುವ ರೀತಿ ನೋಡಿ ಮರೆಯಲ್ಲಿರುವ ಶಕುಂತಲಾ, ಲಕ್ಕಿ ಲಕ್ಷ್ಮಿಕಾಂತ್, ಜೈದೇವ್ ಥರಥರ ನಡುಗುತ್ತಿದ್ದಾರೆ.
(9 / 12)
ಈ ಸಮಯದಲ್ಲಿ ಪೊಲೀಸರೂ ಎಂಟ್ರಿ ನೀಡಿದ್ದಾರೆ. ಯಾರೋ ನೀವೆಲ್ಲ. ಯಾರು ನಿಮ್ಮನ್ನು ಕಳುಹಿಸಿದ್ದು ಎಂದು ರೌಡಿಗಳಲ್ಲಿ ಗೌತಮ್ ಕೇಳುತ್ತಾನೆ.
(10 / 12)
ಈ ಸಮಯದಲ್ಲಿ ರೌಡಿ ಏನೋ ಹೇಳುತ್ತಾನೆ. ಇದನ್ನು ಕೇಳಿ ಗೌತಮ್, ಆನಂದ್ ಬೆಚ್ಚಿ ಬೀಳುತ್ತಾರೆ. ಅಂದಹಾಗೆ, ರೌಡಿ ಹೆಸರು ಹೇಳಿದ್ದು ಜೈದೇವ್ನದ್ದ? ಕಾದು ನೋಡಬೇಕಿದೆ.
(11 / 12)
ಪೊಲೀಸರು ಮತ್ತು ಗೌತಮ್ ಪ್ರಶ್ನೆಗೆ ರೌಡಿಗಳು ಸತ್ಯ ಬಾಯಿಬಿಡುತ್ತಾರ ಎಂದು ಕಾದು ನೋಡಬೇಕಿದೆ. ಎಂದಿನಂತೆ ಅಡಗಿರುವ ಶಕುಂತಲಾಗ್ಯಾಂಗ್ ಪಾರಾಗುವ ಸಾಧ್ಯತೆಯೂ ಇದೆ. ಯಾಕೆಂದರೆ ಅವರು ಸಿಕ್ಕಿಬಿದ್ದರೆ ಸೀರಿಯಲ್ಗೆ ಬೇಗ ಶುಭಂ ಹಾಡಬೇಕಾಗುತ್ತದೆ.
ಇತರ ಗ್ಯಾಲರಿಗಳು