Amruthadhaare: ದಿವಾನ್ ಗ್ರೂಪ್ಗೆ ನಾನೇ ಚೇರ್ಮನ್ ಎಂದ ಭೂಪತಿ, ಈತನ ಮೋಸಕ್ಕೆ ಹೌಹಾರಿದ ಜೈದೇವ್; ಅಮೃತಧಾರೆ ಕಥೆ
- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ಗೆ ದಿವಾನ್ ಗ್ರೂಪ್ ಚೇರ್ಮನ್ ಕೈಬಿಟ್ಟು ಹೋಗುವ ಆತಂಕ ಕಾಣಿಸಿದೆ. ಮುಂದಿನ ಚೇರ್ಮನ್ ನಾನೇ ಆಗ್ತಿನಿ ಎಂದು ಭೂಪತಿ ಹೇಳಿದ್ದಾನೆ. ಇದು ಜೈದೇವ್ಗೆ ಆತಂಕ ತಂದಿದೆ.
- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್ಗೆ ದಿವಾನ್ ಗ್ರೂಪ್ ಚೇರ್ಮನ್ ಕೈಬಿಟ್ಟು ಹೋಗುವ ಆತಂಕ ಕಾಣಿಸಿದೆ. ಮುಂದಿನ ಚೇರ್ಮನ್ ನಾನೇ ಆಗ್ತಿನಿ ಎಂದು ಭೂಪತಿ ಹೇಳಿದ್ದಾನೆ. ಇದು ಜೈದೇವ್ಗೆ ಆತಂಕ ತಂದಿದೆ.
(1 / 9)
ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯು ಗೌತಮ್ ಕಂಪನಿಯ ಮೆಜಾರಿಟಿ ಷೇರುಗಳನ್ನು ಖರೀದಿಸಿದ್ದ. ಇದೇ ಸಮಯದಲ್ಲಿ ಮೋಸದಿಂದ ಜೈದೇವ್ ಮೂಲಕ ಕಂಪನಿಯ ವಿಲ್ ಪತ್ರವನ್ನು ಅಡಗಿಸಿಟ್ಟಿದ್ದ. ಆ ವಿಲ್ ಪತ್ರ ಇಲ್ಲದೆ ಇದ್ದರೆ ಗೌತಮ್ಗೆ ಈ ಕಂಪನಿಯ ಚೇರ್ಮನ್ಷಿಪ್ ಉಳಿಯುವುದಿಲ್ಲ.
(2 / 9)
ಇಂದಿನ ಸಂಚಿಕೆಯಲ್ಲಿ ವಿಲ್ ಪತ್ರದ ಕುರಿತು ಭೂಪತಿ ವಿಚಾರಿಸುತ್ತಾನೆ. ಈ ಸಮಯದಲ್ಲಿ ಗೌತಮ್ ಪ್ರಾಮಾಣಿಕವಾಗಿ ಆ ವಿಲ್ ಪತ್ರವನ್ನು ಕಳೆದುಕೊಂಡಿದ್ದೇನೆ ಎಂದು ಹೇಳುತ್ತಾನೆ.
(3 / 9)
ವಿಲ್ ಪತ್ರ ಇಲ್ಲದೆ ಇದ್ದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಭೂಪತಿ ಹೇಳುತ್ತಾನೆ. ಇದೇ ಸಮಯದಲ್ಲಿ ಮುಂದಿನ ಚೇರ್ಮನ್ ಯಾರು ಎಂದು ಬೋರ್ಡ್ ಸದಸ್ಯರು ಹೇಳುತ್ತಾರೆ.
(4 / 9)
ಮುಂದಿನ ಚೇರ್ಮನ್ ನೀವೇ ಆಗಿ ಎಂದು ಬೋರ್ಡ್ ಸದಸ್ಯರು ಭೂಪತಿಗೆ ಹೇಳುತ್ತಾರೆ. ಈ ಸಮಯದಲ್ಲಿ ಚೇರ್ಮನ್ ನಾನಾಗಬಹುದು ಎಂದು ಜೈದೇವ್ ಯೋಚಿಸುತ್ತಾನೆ.
(5 / 9)
ಆದರೆ, ಭೂಪತಿ ಚೇರ್ಮನ್ ಹುದ್ದೆ ಜೈದೇವ್ಗೆ ಕೊಡದೆ "ನಾನೇ ಚೇರ್ಮನ್ ಆಗ್ತಿನಿ" ಎಂದು ಹೇಳುತ್ತಾನೆ. ಇದನ್ನು ಕೇಳಿ ಜೈದೇವ್ ಹೌಹಾರುತ್ತಾನೆ.
(6 / 9)
ಜೀ ಕನ್ನಡ ವಾಹಿನಿಯ ಪ್ರೊಮೊದಲ್ಲಿ ಇಷ್ಟು ಮಾಹಿತಿ ಇದೆ. ಮುಂದೆ ಜೈದೇವ್ ಏನು ಮಾಡುತ್ತಾನೆ? ಗೌತಮ್ ಚೇರ್ಮನ್ ಹುದ್ದೆ ಉಳಿಯುತ್ತ ಎಂಬ ಪ್ರಶ್ನೆ ಸೀರಿಯಲ್ ವೀಕ್ಷಕರಲ್ಲಿ ಇದೆ.
(7 / 9)
ಕಂಪನಿಯ ವಿಲ್ ಪತ್ರಗಳನ್ನು ಜೈದೇವ್ ತಾನೇ ಇಟ್ಟುಕೊಂಡಿದ್ದಾನೆ. ಈ ಪ್ರೊಮೊಗೆ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ನಾನಾ ಬಗೆಯ ಕಾಮೆಂಟ್ಗಳನ್ನು ಮಾಡಿದ್ದಾರೆ.
(8 / 9)
"ಜೈದೇವ ನಿನಗೆ ಹಂಗೆ ಆಗ್ಬೇಕು. ನೀನೂ ಅಳಬೇಕು ನಾನು ನಗ ಬೇಕು" "ಜೈದೇವ್ ನೀನು ವಿಲ್ ಅನ್ನು ಭೂಪತಿ ಕೈಗೆ ಕೊಡದೆ ಒಂದು ಒಳ್ಳೆ ಕೆಲಸ ಮಾಡಿದ್ದೀಯಾ ನೋಡು..." "ಜೈ ದೇವ್ ಸ್ವಂತ ಅಣ್ಣನಿಗೆ ಮೋಸ ಮಾಡ್ತಿದ್ದೀಯಲ್ಲ ನಿನ್ನನ್ನು ಚೇರ್ಮನ್ ಭೂಪತಿ ಮಾಡ್ತಾನೆ ಅಂತ ನೀನು ಹೀಗೆ ಅನ್ಕೊಂಡೆ. ಗೌತಮ್ ಒಳ್ಳೆತನ ದ ಮುಂದೆ ಅತೀ ಬುದ್ದಿವಂತಿಗೆ ಮಾಡ್ಕೊದ್ರೆ ಈಗೆ ಆಗೋದು" ಎಂದೆಲ್ಲ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ
ಇತರ ಗ್ಯಾಲರಿಗಳು