ಅಮೃತಧಾರೆ ಧಾರಾವಾಹಿ: ನಾನು ಮಾತನಾಡಿದ ದಿನ ಎಲ್ಲರ ಬಾಯಿ ಬಂದ್‌ ಎಂದ ಭಾಗ್ಯಮ್ಮ; ಆನಂದ್‌ ರಾಜೀನಾಮೆ ಸ್ವೀಕರಿಸಿದ ಗೌತಮ್‌ ಭಾವುಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿ: ನಾನು ಮಾತನಾಡಿದ ದಿನ ಎಲ್ಲರ ಬಾಯಿ ಬಂದ್‌ ಎಂದ ಭಾಗ್ಯಮ್ಮ; ಆನಂದ್‌ ರಾಜೀನಾಮೆ ಸ್ವೀಕರಿಸಿದ ಗೌತಮ್‌ ಭಾವುಕ

ಅಮೃತಧಾರೆ ಧಾರಾವಾಹಿ: ನಾನು ಮಾತನಾಡಿದ ದಿನ ಎಲ್ಲರ ಬಾಯಿ ಬಂದ್‌ ಎಂದ ಭಾಗ್ಯಮ್ಮ; ಆನಂದ್‌ ರಾಜೀನಾಮೆ ಸ್ವೀಕರಿಸಿದ ಗೌತಮ್‌ ಭಾವುಕ

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ವಿಷಯಗಳು ಜಾಹೀರಾಗಿವೆ. ಮುಖ್ಯವಾಗಿ ಕೌಟುಂಬಿಕ ಕಾರಣ ನೀಡಿ ಆನಂದ್‌ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ವಿಷಯಗಳು ಜಾಹೀರಾಗಿವೆ. ಮುಖ್ಯವಾಗಿ ಕೌಟುಂಬಿಕ ಕಾರಣ ನೀಡಿ ಆನಂದ್‌ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಹೌದು, ಆನಂದ್‌ ರಾಜೀನಾಮೆ ಪತ್ರವನ್ನು ಗೌತಮ್‌ಗೆ ನೀಡುತ್ತಾನೆ. ಸಾಂಸಾರಿಕ ಕಾರಣ ನೀಡಿ ಈ ರಾಜೀನಾಮೆ ನೀಡುತ್ತಾನೆ. ಹೀಗಾಗಿ ಗೌತಮ್‌ಗೆ ಏನೂ ಹೇಳಲಾಗುವುದಿಲ್ಲ. ಗೆಳೆಯನನ್ನು ಅಪ್ಪಿಕೊಂಡು ಭಾವುಕನಾಗುತ್ತಾನೆ.
icon

(1 / 11)

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಹಲವು ವಿಷಯಗಳು ಜಾಹೀರಾಗಿವೆ. ಮುಖ್ಯವಾಗಿ ಕೌಟುಂಬಿಕ ಕಾರಣ ನೀಡಿ ಆನಂದ್‌ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಹೌದು, ಆನಂದ್‌ ರಾಜೀನಾಮೆ ಪತ್ರವನ್ನು ಗೌತಮ್‌ಗೆ ನೀಡುತ್ತಾನೆ. ಸಾಂಸಾರಿಕ ಕಾರಣ ನೀಡಿ ಈ ರಾಜೀನಾಮೆ ನೀಡುತ್ತಾನೆ. ಹೀಗಾಗಿ ಗೌತಮ್‌ಗೆ ಏನೂ ಹೇಳಲಾಗುವುದಿಲ್ಲ. ಗೆಳೆಯನನ್ನು ಅಪ್ಪಿಕೊಂಡು ಭಾವುಕನಾಗುತ್ತಾನೆ.

ಆದರೆ, ರಾಜೀನಾಮೆಗೆ ಕಾರಣ ಜೈದೇವ್‌ ಎಂಬ ವಿಚಾರವನ್ನು ಹೇಳುವುದಿಲ್ಲ. ಈ ರಾಜೀನಾಮೆ ನಾಟಕದ ಹಿಂದೆ ಬೇರೆ ಏನಾದರೂ ಕಾರಣ ಇರಬಹುದೇ? ಆನಂದ್‌‌ ಮತ್ತು ಅಪರ್ಣಾ ಪಾತ್ರವನ್ನು ಕೊನೆಗೊಳಿಸುವ ಉದ್ದೇಶ ಇರಬಹುದೇ ಎಂಬ ಕುತೂಹಲವೂ ಸೀರಿಯಲ್‌  ವೀಕ್ಷಕರ ಮನದಲ್ಲಿ ಮೂಡಿದೆ. ಏಕೆಂದರೆ, ಆನಂದ್‌ ಈಗ ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
icon

(2 / 11)

ಆದರೆ, ರಾಜೀನಾಮೆಗೆ ಕಾರಣ ಜೈದೇವ್‌ ಎಂಬ ವಿಚಾರವನ್ನು ಹೇಳುವುದಿಲ್ಲ. ಈ ರಾಜೀನಾಮೆ ನಾಟಕದ ಹಿಂದೆ ಬೇರೆ ಏನಾದರೂ ಕಾರಣ ಇರಬಹುದೇ? ಆನಂದ್‌‌ ಮತ್ತು ಅಪರ್ಣಾ ಪಾತ್ರವನ್ನು ಕೊನೆಗೊಳಿಸುವ ಉದ್ದೇಶ ಇರಬಹುದೇ ಎಂಬ ಕುತೂಹಲವೂ ಸೀರಿಯಲ್‌ ವೀಕ್ಷಕರ ಮನದಲ್ಲಿ ಮೂಡಿದೆ. ಏಕೆಂದರೆ, ಆನಂದ್‌ ಈಗ ತಮಿಳು ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.

ಅಥವಾ ಜೈದೇವ್‌ ಮಾಡಿರುವ ಈ ಜಾಬ್‌ ಕಟ್‌ ಸದ್ಯದಲ್ಲಿಯೇ ಗೌತಮ್‌ಗೆ ತಿಳಿಯಲಿದ್ದು, ಮತ್ತೆ ಕೆಲಸ ಕಳೆದುಕೊಂಡವರೆಲ್ಲ ವಾಪಸ್‌ ಬರಬಹುದು ಎಂಬ ನಿರೀಕ್ಷೆಯೂ ವೀಕ್ಷಕರಲ್ಲಿದೆ.
icon

(3 / 11)

ಅಥವಾ ಜೈದೇವ್‌ ಮಾಡಿರುವ ಈ ಜಾಬ್‌ ಕಟ್‌ ಸದ್ಯದಲ್ಲಿಯೇ ಗೌತಮ್‌ಗೆ ತಿಳಿಯಲಿದ್ದು, ಮತ್ತೆ ಕೆಲಸ ಕಳೆದುಕೊಂಡವರೆಲ್ಲ ವಾಪಸ್‌ ಬರಬಹುದು ಎಂಬ ನಿರೀಕ್ಷೆಯೂ ವೀಕ್ಷಕರಲ್ಲಿದೆ.

ಆದರೆ,  ಗೆಳೆಯರಿಬ್ಬರು ದೂರವಾಗುವುದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
icon

(4 / 11)

ಆದರೆ, ಗೆಳೆಯರಿಬ್ಬರು ದೂರವಾಗುವುದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸುಧಾ ತನ್ನ ತಾಯಿಯ ಬಳಿ ಸೃಜನ್‌ ಬಗ್ಗೆ ದೂರು ಹೇಳುತ್ತಿದ್ದಾಳೆ. ನಿನ್ನೆ ಮೊನ್ನೆ ಬಂದವ ನನ್ನ ವೈಯಕ್ತಿಕ ವಿಚಾರ ಕೇಳುತ್ತಿದ್ದಾನೆ ಎಂದು ದೂರು ಹೇಳಿದ್ದಾಳೆ.
icon

(5 / 11)

ಇಂದು ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ಸುಧಾ ತನ್ನ ತಾಯಿಯ ಬಳಿ ಸೃಜನ್‌ ಬಗ್ಗೆ ದೂರು ಹೇಳುತ್ತಿದ್ದಾಳೆ. ನಿನ್ನೆ ಮೊನ್ನೆ ಬಂದವ ನನ್ನ ವೈಯಕ್ತಿಕ ವಿಚಾರ ಕೇಳುತ್ತಿದ್ದಾನೆ ಎಂದು ದೂರು ಹೇಳಿದ್ದಾಳೆ.

ಈ ಸಮಯದಲ್ಲಿ ಭಾಗ್ಯಮ್ಮ ತನ್ನ ಮಗಳ ಮೈದಡವಿ ಸಂತೈಸಿದ್ದಾಳೆ. "ಮುಂದೆ ಒಂದು ದಿನ ನಾನು ಮಾತನಾಡಿದಾಗ ಎಲ್ಲರ ಬಾಯಿ ಬಂದ್‌ ಆಗುತ್ತದೆ" ಎಂದು ಭಾಗ್ಯಮ್ಮಳ ಸ್ವಗತ ಇರುತ್ತದೆ.
icon

(6 / 11)

ಈ ಸಮಯದಲ್ಲಿ ಭಾಗ್ಯಮ್ಮ ತನ್ನ ಮಗಳ ಮೈದಡವಿ ಸಂತೈಸಿದ್ದಾಳೆ. "ಮುಂದೆ ಒಂದು ದಿನ ನಾನು ಮಾತನಾಡಿದಾಗ ಎಲ್ಲರ ಬಾಯಿ ಬಂದ್‌ ಆಗುತ್ತದೆ" ಎಂದು ಭಾಗ್ಯಮ್ಮಳ ಸ್ವಗತ ಇರುತ್ತದೆ.

ಬಳಿಕ ಶಕುಂತಲಾದೇವಿಯ ಮುಖವನ್ನೂ ತೋರಿಸಲಾಗಿದೆ. ಈ ಮೂಲಕ ಸೂಕ್ತ ಸಮಯದಲ್ಲಿ ಭಾಗ್ಯಮ್ಮ ಎಲ್ಲವನ್ನೂ ಬಾಯಿ ಬಿಡುವ ಸೂಚನೆಯನ್ನು ತೋರಿಸಲಾಗಿದೆ.
icon

(7 / 11)

ಬಳಿಕ ಶಕುಂತಲಾದೇವಿಯ ಮುಖವನ್ನೂ ತೋರಿಸಲಾಗಿದೆ. ಈ ಮೂಲಕ ಸೂಕ್ತ ಸಮಯದಲ್ಲಿ ಭಾಗ್ಯಮ್ಮ ಎಲ್ಲವನ್ನೂ ಬಾಯಿ ಬಿಡುವ ಸೂಚನೆಯನ್ನು ತೋರಿಸಲಾಗಿದೆ.

ಸದ್ಯ ಅಮೃತಧಾರೆ ಧಾರಾವಾಹಿಯು ಸೂತ್ರವಿಲ್ಲದ ಗಾಳಿಪಟದಂತೆ ಎಲ್ಲೆಲ್ಲೂ ಸಾಗುತ್ತಿದೆ. ಕಥೆ ಮುಗಿಯುವ ಹಂತದಲ್ಲಿರುವಾಗ ಕಥೆಯನ್ನು ಮುಗಿಸದೆ ಒಂದಿಷ್ಟು ಘಟನೆಗಳನ್ನು ತುರುಕಲಾಗುತ್ತಿದೆ.
icon

(8 / 11)

ಸದ್ಯ ಅಮೃತಧಾರೆ ಧಾರಾವಾಹಿಯು ಸೂತ್ರವಿಲ್ಲದ ಗಾಳಿಪಟದಂತೆ ಎಲ್ಲೆಲ್ಲೂ ಸಾಗುತ್ತಿದೆ. ಕಥೆ ಮುಗಿಯುವ ಹಂತದಲ್ಲಿರುವಾಗ ಕಥೆಯನ್ನು ಮುಗಿಸದೆ ಒಂದಿಷ್ಟು ಘಟನೆಗಳನ್ನು ತುರುಕಲಾಗುತ್ತಿದೆ.

ಜೀವ ಕುಡಿದು ಮಾಡಿದ ಅವಾಂತರ, ಜೈದೇವ್‌  ಮಾಡುತ್ತಿರುವ ಉದ್ಯೋಗ ಕಡಿತ ಇತ್ಯಾದಿಗಳೆಲ್ಲವೂ ಸೀರಿಯಲ್‌ನಲ್ಲಿ ಹೊಸ ಘಟನೆಗಳನ್ನು ತುರುಕುವ ಪ್ರಯತ್ನದಂತೆ ಕಾಣಿಸುತ್ತಿದೆ.
icon

(9 / 11)

ಜೀವ ಕುಡಿದು ಮಾಡಿದ ಅವಾಂತರ, ಜೈದೇವ್‌ ಮಾಡುತ್ತಿರುವ ಉದ್ಯೋಗ ಕಡಿತ ಇತ್ಯಾದಿಗಳೆಲ್ಲವೂ ಸೀರಿಯಲ್‌ನಲ್ಲಿ ಹೊಸ ಘಟನೆಗಳನ್ನು ತುರುಕುವ ಪ್ರಯತ್ನದಂತೆ ಕಾಣಿಸುತ್ತಿದೆ.

"ಭೂಮಿಕಾಳ ಪವರ್‌ ಕಡಿಮೆಯಾಗಿದೆ. ಮಲ್ಲಿಗೆ ಏನೂ ಮಾಡಲಾಗುತ್ತಿಲ್ಲ. ಆನಂದ್‌ ಇಲ್ಲದೆ ಇದ್ದರೆ ನಾವು ಸೀರಿಯಲ್‌ ನೋಡೋದಿಲ್ಲ" ಎಂದೆಲ್ಲ ಈ ಪ್ರೊಮೊಗೆ ಸೀರಿಯಲ್‌ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಮುಂದಿನ ವಾರ ಸೀರಿಯಲ್‌ ಯಾವ ದಿಕ್ಕಿಗೆ ಸಾಗುವುದೋ ಕಾದು ನೋಡಬೇಕಿದೆ.
icon

(10 / 11)

"ಭೂಮಿಕಾಳ ಪವರ್‌ ಕಡಿಮೆಯಾಗಿದೆ. ಮಲ್ಲಿಗೆ ಏನೂ ಮಾಡಲಾಗುತ್ತಿಲ್ಲ. ಆನಂದ್‌ ಇಲ್ಲದೆ ಇದ್ದರೆ ನಾವು ಸೀರಿಯಲ್‌ ನೋಡೋದಿಲ್ಲ" ಎಂದೆಲ್ಲ ಈ ಪ್ರೊಮೊಗೆ ಸೀರಿಯಲ್‌ ವೀಕ್ಷಕರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಮುಂದಿನ ವಾರ ಸೀರಿಯಲ್‌ ಯಾವ ದಿಕ್ಕಿಗೆ ಸಾಗುವುದೋ ಕಾದು ನೋಡಬೇಕಿದೆ.

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(11 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು