ಅಮೃತಧಾರೆ ಧಾರಾವಾಹಿ: ಇಲ್ಲಿ ಬಾಸ್‌ ನಾನಾ ನೀನಾ? ಜೈದೇವ್‌ಗೆ ಚಳಿ ಬಿಡಿಸಿದ ಗೌತಮ್‌ ದಿವಾನ್; ಕೆಲಸ ಕಳೆದುಕೊಂಡವರಿಗೆ ಸಿಕ್ತು ಬೋನಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿ: ಇಲ್ಲಿ ಬಾಸ್‌ ನಾನಾ ನೀನಾ? ಜೈದೇವ್‌ಗೆ ಚಳಿ ಬಿಡಿಸಿದ ಗೌತಮ್‌ ದಿವಾನ್; ಕೆಲಸ ಕಳೆದುಕೊಂಡವರಿಗೆ ಸಿಕ್ತು ಬೋನಸ್‌

ಅಮೃತಧಾರೆ ಧಾರಾವಾಹಿ: ಇಲ್ಲಿ ಬಾಸ್‌ ನಾನಾ ನೀನಾ? ಜೈದೇವ್‌ಗೆ ಚಳಿ ಬಿಡಿಸಿದ ಗೌತಮ್‌ ದಿವಾನ್; ಕೆಲಸ ಕಳೆದುಕೊಂಡವರಿಗೆ ಸಿಕ್ತು ಬೋನಸ್‌

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಜೈದೇವ್‌ಗೆ ಬಿಸಿ ಮುಟ್ಟಿಸಿದ್ದಾನೆ ಗೌತಮ್‌ ದಿವಾನ್.‌ ಅನುಮತಿ ಪಡೆಯದೆ ಕೆಲವರನ್ನು ಕೆಲಸದಿಂದ ತೆಗೆದಿದ್ದಕ್ಕೆ ಜೈದೇವ್‌ಗೆ ಗೌತಮ್ ಕ್ಲಾಸ್‌ ತೆಗೆದುಕೊಂಡಿದ್ದಾನೆ. ಇಲ್ಲಿದೆ ಇಂದಿನ (ಮೇ 6ರ) ಸಂಚಿಕೆಯ ಹೈಲೈಟ್ಸ್‌.

ಮೇ 6ರ ಅಮೃತಧಾರೆ ಸೀರಿಯಲ್‌ನ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಈ ಮೂಲಕ ಒಂದಷ್ಟು ಅಚ್ಚರಿಯ ವಿಚಾರಗಳು ಇಂದಿನ ಸಂಚಿಕೆಯಲ್ಲಿ ಇರಲಿದೆ ಎಂಬುದನ್ನು ಈ ಪ್ರೋಮೋ ಹೇಳುತ್ತದೆ.
icon

(1 / 10)

ಮೇ 6ರ ಅಮೃತಧಾರೆ ಸೀರಿಯಲ್‌ನ ಪ್ರೋಮೋವನ್ನು ಜೀ ಕನ್ನಡ ಬಿಡುಗಡೆ ಮಾಡಿದೆ. ಈ ಮೂಲಕ ಒಂದಷ್ಟು ಅಚ್ಚರಿಯ ವಿಚಾರಗಳು ಇಂದಿನ ಸಂಚಿಕೆಯಲ್ಲಿ ಇರಲಿದೆ ಎಂಬುದನ್ನು ಈ ಪ್ರೋಮೋ ಹೇಳುತ್ತದೆ.
(Zee Kannada facebook)

ಕಾಸ್ಟ್‌ ಕಟಿಂಗ್‌ ನೆಪದಲ್ಲಿ ಕಂಪನಿಯ ದೊಡ್ಡ ಸಂಬಳದ ನೌಕರರನ್ನು ಜೈದೇವ್‌, ಯಾರ ಅನುಮತಿಯನ್ನೂ ಪಡೆಯದೆ ವಜಾ ಮಾಡಿರುತ್ತಾನೆ. ಅದರಲ್ಲಿ ಗೌತಮ್‌ ಆಪ್ತ, ಆನಂದ್‌ಗೂ ನೋಟೀಸ್‌ ಹೋಗಿರುತ್ತದೆ.
icon

(2 / 10)

ಕಾಸ್ಟ್‌ ಕಟಿಂಗ್‌ ನೆಪದಲ್ಲಿ ಕಂಪನಿಯ ದೊಡ್ಡ ಸಂಬಳದ ನೌಕರರನ್ನು ಜೈದೇವ್‌, ಯಾರ ಅನುಮತಿಯನ್ನೂ ಪಡೆಯದೆ ವಜಾ ಮಾಡಿರುತ್ತಾನೆ. ಅದರಲ್ಲಿ ಗೌತಮ್‌ ಆಪ್ತ, ಆನಂದ್‌ಗೂ ನೋಟೀಸ್‌ ಹೋಗಿರುತ್ತದೆ.

ಅದರಂತೆ, ಗೌತಮ್‌ ಬಳಿ ಬಂದ ಆನಂದ್‌, ಕೌಟುಂಬಿಕ ಕಾರಣ ನೀಡಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಆದರೆ, ಈ ರಾಜೀನಾಮೆ ಹಿಂದೆ ಜೈದೇವ್‌ ಇದ್ದಾನೆ ಎಂಬುದನ್ನು ಹೇಳಿಕೊಂಡಿರಲಿಲ್ಲ.
icon

(3 / 10)

ಅದರಂತೆ, ಗೌತಮ್‌ ಬಳಿ ಬಂದ ಆನಂದ್‌, ಕೌಟುಂಬಿಕ ಕಾರಣ ನೀಡಿ ಕೆಲಸಕ್ಕೆ ರಾಜೀನಾಮೆ ನೀಡುತ್ತಾನೆ. ಆದರೆ, ಈ ರಾಜೀನಾಮೆ ಹಿಂದೆ ಜೈದೇವ್‌ ಇದ್ದಾನೆ ಎಂಬುದನ್ನು ಹೇಳಿಕೊಂಡಿರಲಿಲ್ಲ.

ಇದೀಗ ಅಚ್ಚರಿಯ ರೀತಿಯಲ್ಲಿ, ಈ ರಾಜೀನಾಮೆ ನಿರ್ಧಾರದ ಹಿಂದೆ ಜೈದೇವ್‌ ಕೈವಾಡ ಇರುವುದು ಗೌತಮ್‌ ದಿವಾನ್‌ಗೂ ಗೊತ್ತಾಗಿದೆ. ಕೋಪದಲ್ಲಿಯೇ ಜೈದೇವ್‌ಗೆ ಕಾಲ್‌ ಮಾಡಿ, ಆತನನ್ನು ಕರೆಸಿಕೊಂಡಿದ್ದಾನೆ.
icon

(4 / 10)

ಇದೀಗ ಅಚ್ಚರಿಯ ರೀತಿಯಲ್ಲಿ, ಈ ರಾಜೀನಾಮೆ ನಿರ್ಧಾರದ ಹಿಂದೆ ಜೈದೇವ್‌ ಕೈವಾಡ ಇರುವುದು ಗೌತಮ್‌ ದಿವಾನ್‌ಗೂ ಗೊತ್ತಾಗಿದೆ. ಕೋಪದಲ್ಲಿಯೇ ಜೈದೇವ್‌ಗೆ ಕಾಲ್‌ ಮಾಡಿ, ಆತನನ್ನು ಕರೆಸಿಕೊಂಡಿದ್ದಾನೆ.

ಕೆಲಸ ಕಳೆದು ಕೊಂಡ ಎಲ್ಲರನ್ನೂ ಒಂದೆಡೆ ಸೇರಿಸಿ, ಅದೇ ಸ್ಥಳಕ್ಕೆ ಜೈದೇವ್‌ನನ್ನು ಕರೆಸಿ, ಎಲ್ಲರ ರಾಜೀನಾಮೆ ಹಿಂದಿನ ಕಾರಣ ತಿಳಿದುಕೊಂಡಿದ್ದಾನೆ.
icon

(5 / 10)

ಕೆಲಸ ಕಳೆದು ಕೊಂಡ ಎಲ್ಲರನ್ನೂ ಒಂದೆಡೆ ಸೇರಿಸಿ, ಅದೇ ಸ್ಥಳಕ್ಕೆ ಜೈದೇವ್‌ನನ್ನು ಕರೆಸಿ, ಎಲ್ಲರ ರಾಜೀನಾಮೆ ಹಿಂದಿನ ಕಾರಣ ತಿಳಿದುಕೊಂಡಿದ್ದಾನೆ.

ಕಂಪನಿಯಲ್ಲಿ ಏನಾಗ್ತಿದೆ ಎಂದು ಜೈದೇವ್‌ಗೆ ಪ್ರಶ್ನೆ ಮಾಡಿದ್ದಾನೆ ಗೌತಮ್. ‌ಅದಕ್ಕೆ ಪ್ರತಿಯಾಗಿ, ಇದು ಕಾಸ್ಟ್‌ ಕಟಿಂಗ್‌ ಎಂದು ಉತ್ತರಿಸಿದ್ದಾನೆ ಜೈದೇವ್‌.
icon

(6 / 10)

ಕಂಪನಿಯಲ್ಲಿ ಏನಾಗ್ತಿದೆ ಎಂದು ಜೈದೇವ್‌ಗೆ ಪ್ರಶ್ನೆ ಮಾಡಿದ್ದಾನೆ ಗೌತಮ್. ‌ಅದಕ್ಕೆ ಪ್ರತಿಯಾಗಿ, ಇದು ಕಾಸ್ಟ್‌ ಕಟಿಂಗ್‌ ಎಂದು ಉತ್ತರಿಸಿದ್ದಾನೆ ಜೈದೇವ್‌.

ಇವರ್ಯಾರು ಕೆಲಸ ಬಿಡ್ತಿಲ್ಲ. ಇವರೆಲ್ಲರೂ ಇಲ್ಲಿಯೇ ಮುಂದುವರಿಯುತ್ತಾರೆ. ನಾವು ಮಾಡಿರೋ ತಪ್ಪಿನ ಪ್ರಾಯಶ್ಚಿತವಾಗಿ ಇವರೆಲ್ಲರಿಗೂ ಬೋನಸ್‌ ಹೋಗಬೇಕು ಎಂದಿದ್ದಾನೆ ಗೌತಮ್.‌
icon

(7 / 10)

ಇವರ್ಯಾರು ಕೆಲಸ ಬಿಡ್ತಿಲ್ಲ. ಇವರೆಲ್ಲರೂ ಇಲ್ಲಿಯೇ ಮುಂದುವರಿಯುತ್ತಾರೆ. ನಾವು ಮಾಡಿರೋ ತಪ್ಪಿನ ಪ್ರಾಯಶ್ಚಿತವಾಗಿ ಇವರೆಲ್ಲರಿಗೂ ಬೋನಸ್‌ ಹೋಗಬೇಕು ಎಂದಿದ್ದಾನೆ ಗೌತಮ್.‌

ಗೌತಮ್‌ ಮಾತಿಗೆ ಪ್ರತಿಯಾಗಿ, "ಏನ್‌ ಹೇಳ್ತಿದಿಯಾ ಬ್ರೋ ನೀನು?" ಎಂದು ಅಣ್ಣನನ್ನು ಕೇಳಿದ್ದಾನೆ. "ಇಲ್ಲಿ ಬಾಸ್‌ ನಾನಾ ನೀನಾ?" ಎಂದು ಕೇಳಿದ್ದಾನೆ. ನಾ ಹೇಳಿದಷ್ಟು ಮಾಡು ಎಂದಿದ್ದಾನೆ. ಅಲ್ಲಿಗೆ ಪ್ರೋಮೋ ಮುಕ್ತಾಯವಾಗಿದೆ.
icon

(8 / 10)

ಗೌತಮ್‌ ಮಾತಿಗೆ ಪ್ರತಿಯಾಗಿ, "ಏನ್‌ ಹೇಳ್ತಿದಿಯಾ ಬ್ರೋ ನೀನು?" ಎಂದು ಅಣ್ಣನನ್ನು ಕೇಳಿದ್ದಾನೆ. "ಇಲ್ಲಿ ಬಾಸ್‌ ನಾನಾ ನೀನಾ?" ಎಂದು ಕೇಳಿದ್ದಾನೆ. ನಾ ಹೇಳಿದಷ್ಟು ಮಾಡು ಎಂದಿದ್ದಾನೆ. ಅಲ್ಲಿಗೆ ಪ್ರೋಮೋ ಮುಕ್ತಾಯವಾಗಿದೆ.

ಈ ಮೂಲಕ ತನ್ನ ಅಧಿಕಾರ ಚಲಾಯಿಸಬೇಕು ಎಂದುಕೊಂಡಿದ್ದ ಜೈ ದೇವ್‌ಗೆ ಗೌತಮ್‌ ದಿವಾನ್‌ ಗುನ್ನ ಕೊಟ್ಟಿದ್ದಾನೆ.
icon

(9 / 10)

ಈ ಮೂಲಕ ತನ್ನ ಅಧಿಕಾರ ಚಲಾಯಿಸಬೇಕು ಎಂದುಕೊಂಡಿದ್ದ ಜೈ ದೇವ್‌ಗೆ ಗೌತಮ್‌ ದಿವಾನ್‌ ಗುನ್ನ ಕೊಟ್ಟಿದ್ದಾನೆ.

ಗೌತಮ್‌ ದಿವಾನ್‌ ನಿರ್ಧಾರಕ್ಕೆ ಕಂಪನಿಯ ಉಳಿದ ಸದಸ್ಯರು ಖುಷಿಯಾಗಿದ್ದಾರೆ. ಗೆಳೆಯನ ನಡೆಯನ್ನು ಕಂಡು ಆನಂದ್‌ ಮೂಕವಿಸ್ಮಿತನಾಗಿದ್ದಾನೆ.
icon

(10 / 10)

ಗೌತಮ್‌ ದಿವಾನ್‌ ನಿರ್ಧಾರಕ್ಕೆ ಕಂಪನಿಯ ಉಳಿದ ಸದಸ್ಯರು ಖುಷಿಯಾಗಿದ್ದಾರೆ. ಗೆಳೆಯನ ನಡೆಯನ್ನು ಕಂಡು ಆನಂದ್‌ ಮೂಕವಿಸ್ಮಿತನಾಗಿದ್ದಾನೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು