Amruthadhaare: ಮಾತಿನ ಮಲ್ಲ ಕ್ಯಾಬ್‌ ಚಾಲಕನಿಗೂ ಸುಧಾಳಿಗೂ ಏನೋ ಕನೆಕ್ಷನ್‌; ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಪಾತ್ರದಾರಿಯ ರಹಸ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಮಾತಿನ ಮಲ್ಲ ಕ್ಯಾಬ್‌ ಚಾಲಕನಿಗೂ ಸುಧಾಳಿಗೂ ಏನೋ ಕನೆಕ್ಷನ್‌; ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಪಾತ್ರದಾರಿಯ ರಹಸ್ಯ

Amruthadhaare: ಮಾತಿನ ಮಲ್ಲ ಕ್ಯಾಬ್‌ ಚಾಲಕನಿಗೂ ಸುಧಾಳಿಗೂ ಏನೋ ಕನೆಕ್ಷನ್‌; ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಪಾತ್ರದಾರಿಯ ರಹಸ್ಯ

  • Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಎಂಟೆಕ್‌ ಓದಿರುವ ಕ್ಯಾಬ್‌ ಚಾಲಕನಿಗೂ ಸುಧಾಳಿಗೂ ಏನೋ ನಂಟಿರುವ ಸೂಚನೆ ದೊರಕಿದೆ. ಪಟಪಟನೆ ಮಾತನಾಡುತ್ತಿರುವ ಈ ಚಾಲಕನಿಗೆ ಏನೋ ನೆನಪಾಗಿದೆ. ಈಕೆಯ ಹೆಸರು ಗೊತ್ತಾದರೆ ಆತನಿಗೆ ಹಳೆಯ ವಿಷಯಗಳು ನೆನಪಾಗಬಹುದು.

Amruthadhaare serial Yesterday Episode: ಕ್ಯಾಬ್‌ ಚಾಲಕ ಗೌತಮ್‌ ದಿವಾನ್‌ ಮನೆಯಿಂದ ಹೊರಗೆ ಬಂದಿದ್ದಾನೆ. ಆಗ ಲಚ್ಚಿಯನ್ನು ಹುಡುಕುತ್ತ ಸುಧಾ ಹೊರಗೆ ಬಂದಿದ್ದಾರೆ. "ಹಲೋ ಮೇಡಂ" ಎಂದು ಕರೆಯುತ್ತಾನೆ. "ಇವನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಮುಗೀತು" ಎಂದು ಸುಧಾ ಎಸ್ಕೆಪ್‌ ಆಗಲು ನೋಡುತ್ತಾರೆ.
icon

(1 / 9)

Amruthadhaare serial Yesterday Episode: ಕ್ಯಾಬ್‌ ಚಾಲಕ ಗೌತಮ್‌ ದಿವಾನ್‌ ಮನೆಯಿಂದ ಹೊರಗೆ ಬಂದಿದ್ದಾನೆ. ಆಗ ಲಚ್ಚಿಯನ್ನು ಹುಡುಕುತ್ತ ಸುಧಾ ಹೊರಗೆ ಬಂದಿದ್ದಾರೆ. "ಹಲೋ ಮೇಡಂ" ಎಂದು ಕರೆಯುತ್ತಾನೆ. "ಇವನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಮುಗೀತು" ಎಂದು ಸುಧಾ ಎಸ್ಕೆಪ್‌ ಆಗಲು ನೋಡುತ್ತಾರೆ.

"ನಿಮ್ಮನ್ನು ನೋಡಿದಾಗ ಈ ಫೇಸ್‌ಕಟ್‌ ಅನ್ನು ಎಲ್ಲೋ ನೋಡಿದ್ದೇನೆ ಎಂದು ಅನಿಸುತ್ತದೆ. ಆದರೆ, ಸರಿಯಾಗಿ ಸಿಗ್ನಲ್‌‌ ಕನೆಕ್ಟ್‌ ಆಗ್ತಾ ಇಲ್ಲ" ಎನ್ನುತ್ತಾನೆ. "ನಿಮ್ಮ ಕೆಲಸ ಏನಿದೆ ನೋಡಿ" ಎಂದು ಸುಧಾ ಕೋಪದಿಂದ ಹೇಳುತ್ತಾರೆ. "ಹೆಸರು ಕೇಳಿದ್ರೆ ಒಳ್ಳೆ ಕಿಡ್ನಿ ಕೇಳಿದವರ ರೀತಿ ಆಡ್ತಿದ್ದೀರಿ ಅಲ್ವಾ ಮೇಡಂ" ಎನ್ನುತ್ತಾನೆ.
icon

(2 / 9)

"ನಿಮ್ಮನ್ನು ನೋಡಿದಾಗ ಈ ಫೇಸ್‌ಕಟ್‌ ಅನ್ನು ಎಲ್ಲೋ ನೋಡಿದ್ದೇನೆ ಎಂದು ಅನಿಸುತ್ತದೆ. ಆದರೆ, ಸರಿಯಾಗಿ ಸಿಗ್ನಲ್‌‌ ಕನೆಕ್ಟ್‌ ಆಗ್ತಾ ಇಲ್ಲ" ಎನ್ನುತ್ತಾನೆ. "ನಿಮ್ಮ ಕೆಲಸ ಏನಿದೆ ನೋಡಿ" ಎಂದು ಸುಧಾ ಕೋಪದಿಂದ ಹೇಳುತ್ತಾರೆ. "ಹೆಸರು ಕೇಳಿದ್ರೆ ಒಳ್ಳೆ ಕಿಡ್ನಿ ಕೇಳಿದವರ ರೀತಿ ಆಡ್ತಿದ್ದೀರಿ ಅಲ್ವಾ ಮೇಡಂ" ಎನ್ನುತ್ತಾನೆ.

ಆದರೂ ಸುಧಾಳ ಕೋಪ ಕಡಿಮೆಯಾಗುವುದಿಲ್ಲ. ಒಮ್ಮೆ ಬಿಪಿ ಚೆಕ್‌ ಮಾಡಿಕೊಳ್ಳಿ ಎನ್ನುತ್ತಾನೆ. ಆಗ ಲಚ್ಚಿ ಬರುತ್ತಾಳೆ. ಖುಷಿಯಿಂದ ಕ್ಯಾಬ್‌ ಚಾಲಕನ ಬಳಿ ಮಾತನಾಡುತ್ತಾಳೆ. ಮಗುವಿಗೆ ಚಾಕೋಲೇಟ್‌ ನೀಡುತ್ತಾನೆ.
icon

(3 / 9)

ಆದರೂ ಸುಧಾಳ ಕೋಪ ಕಡಿಮೆಯಾಗುವುದಿಲ್ಲ. ಒಮ್ಮೆ ಬಿಪಿ ಚೆಕ್‌ ಮಾಡಿಕೊಳ್ಳಿ ಎನ್ನುತ್ತಾನೆ. ಆಗ ಲಚ್ಚಿ ಬರುತ್ತಾಳೆ. ಖುಷಿಯಿಂದ ಕ್ಯಾಬ್‌ ಚಾಲಕನ ಬಳಿ ಮಾತನಾಡುತ್ತಾಳೆ. ಮಗುವಿಗೆ ಚಾಕೋಲೇಟ್‌ ನೀಡುತ್ತಾನೆ.

ಮತ್ತೆ ಆಕೆಯ ಹೆಸರು ಕೇಳುತ್ತಾನೆ. ಆಕೆಯ ಕೋಪದ ಮುಖ ನೋಡಿ ಸುಮ್ಮನಾಗುತ್ತಾನೆ. ಆದರೆ, ಈಕೆಯನ್ನು ಎಲ್ಲೋ ನೋಡಿದ್ದೇನೆ ಎಂದು ಆತನಿಗೆ ಅನಿಸುತ್ತದೆ. ಈಕೆ ಹೆಸರು ಹೇಳದೆ ಇರುವುದರಿಂದ ಸದ್ಯಕ್ಕೆ ಇವಳು ಯಾರು ಎಂದು ಆತನಿಗೆ ತಿಳಿಯುವುದಿಲ್ಲ.
icon

(4 / 9)

ಮತ್ತೆ ಆಕೆಯ ಹೆಸರು ಕೇಳುತ್ತಾನೆ. ಆಕೆಯ ಕೋಪದ ಮುಖ ನೋಡಿ ಸುಮ್ಮನಾಗುತ್ತಾನೆ. ಆದರೆ, ಈಕೆಯನ್ನು ಎಲ್ಲೋ ನೋಡಿದ್ದೇನೆ ಎಂದು ಆತನಿಗೆ ಅನಿಸುತ್ತದೆ. ಈಕೆ ಹೆಸರು ಹೇಳದೆ ಇರುವುದರಿಂದ ಸದ್ಯಕ್ಕೆ ಇವಳು ಯಾರು ಎಂದು ಆತನಿಗೆ ತಿಳಿಯುವುದಿಲ್ಲ.

ಬಹುಶಃ ಈತನ ಬಾಲ್ಯದ ಗೆಳತಿ ಈಕೆ ಆಗಿರಬಹುದು. ಈಗ ಗುರುತು ಸಿಗದೆ ಇರಬಹುದು. ಈತನ ಊರು ಪಾಂಡವಪುರ ಸಮೀಪ ಯಾವುದೋ ಹಳ್ಳಿ. ಸುಧಾಳಿಗೂ ಪಾಂಡವಪುರಕ್ಕೂ ನಂಟಿದೆ. ಹೀಗಾಗಿ ಬಾಲ್ಯದ ಸಂಬಂಧ, ಅನುಬಂಧದ ಕಥೆ ಇರಬಹುದು. ಮುಂದೆ ಈತನೇ ಈಕೆಯ ಗಂಡ ಆಗಬಹುದು.
icon

(5 / 9)

ಬಹುಶಃ ಈತನ ಬಾಲ್ಯದ ಗೆಳತಿ ಈಕೆ ಆಗಿರಬಹುದು. ಈಗ ಗುರುತು ಸಿಗದೆ ಇರಬಹುದು. ಈತನ ಊರು ಪಾಂಡವಪುರ ಸಮೀಪ ಯಾವುದೋ ಹಳ್ಳಿ. ಸುಧಾಳಿಗೂ ಪಾಂಡವಪುರಕ್ಕೂ ನಂಟಿದೆ. ಹೀಗಾಗಿ ಬಾಲ್ಯದ ಸಂಬಂಧ, ಅನುಬಂಧದ ಕಥೆ ಇರಬಹುದು. ಮುಂದೆ ಈತನೇ ಈಕೆಯ ಗಂಡ ಆಗಬಹುದು.

ಹೊಸ ಪಾತ್ರವೊಂದನ್ನು ಸೀರಿಯಲ್‌ಗೆ ಎಂಟ್ರಿ ನೀಡಿಸಿರುವುದರ ಹಿಂದೆ ಬೇರೆ ಏನೋ ಕಥೆಯೂ ಇರಬಹುದು. ವಿಶೇಷವಾಗಿ ಭಾಗ್ಯಮ್ಮ ಮತ್ತು ಸುಧಾಳ ಹಿಂದಿನ ಕಥೆಯನ್ನು ಈತನ ಮೂಲಕ ತಿಳಿಸುವ ಯೋಜನೆಯೂ ಸೀರಿಯಲ್‌ ಕಥೆಯಲ್ಲಿ ಇರಬಹುದು.
icon

(6 / 9)

ಹೊಸ ಪಾತ್ರವೊಂದನ್ನು ಸೀರಿಯಲ್‌ಗೆ ಎಂಟ್ರಿ ನೀಡಿಸಿರುವುದರ ಹಿಂದೆ ಬೇರೆ ಏನೋ ಕಥೆಯೂ ಇರಬಹುದು. ವಿಶೇಷವಾಗಿ ಭಾಗ್ಯಮ್ಮ ಮತ್ತು ಸುಧಾಳ ಹಿಂದಿನ ಕಥೆಯನ್ನು ಈತನ ಮೂಲಕ ತಿಳಿಸುವ ಯೋಜನೆಯೂ ಸೀರಿಯಲ್‌ ಕಥೆಯಲ್ಲಿ ಇರಬಹುದು.

ಈತ ಇವರಿಗೆ ಪರಿಚಯವಾಗಿರುವುದೇ ಆಕಸ್ಮಿಕ. ಜೈದೇವ್‌ ಕಳುಹಿಸಿದ ಗೂಂಡಾಗಳು ಭೂಮಿ̧ಕಾ, ಸುಧಾ ಮತ್ತು ಲಚ್ಚಿಗೆ ಕಾರು ಡಿಕ್ಕಿ ಹೊಡೆಸಬೇಕೆಂದಿದ್ದರು. ಆ ಕ್ಷಣದಲ್ಲಿ ಈತ ಬಂದು ಕಾಪಾಡಿದ್ದ. ಗೂಂಡಾಗಳು ಮಾತನಾಡುವುದನ್ನು ಈತ ಕೇಳಿಸಿಕೊಂಡಿದ್ದ. ಹೀಗಾಗಿ, ಸರಿಯಾದ ಸಮಯಕ್ಕೆ ಬಂದು ಕಾಪಾಡಿದ್ದ.
icon

(7 / 9)

ಈತ ಇವರಿಗೆ ಪರಿಚಯವಾಗಿರುವುದೇ ಆಕಸ್ಮಿಕ. ಜೈದೇವ್‌ ಕಳುಹಿಸಿದ ಗೂಂಡಾಗಳು ಭೂಮಿ̧ಕಾ, ಸುಧಾ ಮತ್ತು ಲಚ್ಚಿಗೆ ಕಾರು ಡಿಕ್ಕಿ ಹೊಡೆಸಬೇಕೆಂದಿದ್ದರು. ಆ ಕ್ಷಣದಲ್ಲಿ ಈತ ಬಂದು ಕಾಪಾಡಿದ್ದ. ಗೂಂಡಾಗಳು ಮಾತನಾಡುವುದನ್ನು ಈತ ಕೇಳಿಸಿಕೊಂಡಿದ್ದ. ಹೀಗಾಗಿ, ಸರಿಯಾದ ಸಮಯಕ್ಕೆ ಬಂದು ಕಾಪಾಡಿದ್ದ.

ಈತ ಭೂಮಿಕಾಳ ಬಳಿ ಕೆಲಸವನ್ನೂ ಕೇಳಿದ್ದಾನೆ. ಕೆಲಸ ಕಳೆದುಕೊಂಡು ಕ್ಯಾಬ್‌ ಓಡಿಸುತ್ತಿದ್ದೇನೆ ಎಂದಿದ್ದಾನೆ. ಎಂಟೆಕ್‌ ಓದಿರುವ ಈತನಿಗೆ ಕೆಲಸ ಕೊಡುವಂತೆ ಗೌತಮ್‌ ಬಳಿ ಶಿಫಾರಸು ಕೂಡ ಮಾಡಿದ್ದಾರೆ. ಈತನ ಬಗ್ಗೆ ಹೆಚ್ಚಿನ ವಿವರ ಸದ್ಯದಲ್ಲಿಯೇ ತಿಳಿಯುವ ಸೂಚನೆ ಇದೆ.
icon

(8 / 9)

ಈತ ಭೂಮಿಕಾಳ ಬಳಿ ಕೆಲಸವನ್ನೂ ಕೇಳಿದ್ದಾನೆ. ಕೆಲಸ ಕಳೆದುಕೊಂಡು ಕ್ಯಾಬ್‌ ಓಡಿಸುತ್ತಿದ್ದೇನೆ ಎಂದಿದ್ದಾನೆ. ಎಂಟೆಕ್‌ ಓದಿರುವ ಈತನಿಗೆ ಕೆಲಸ ಕೊಡುವಂತೆ ಗೌತಮ್‌ ಬಳಿ ಶಿಫಾರಸು ಕೂಡ ಮಾಡಿದ್ದಾರೆ. ಈತನ ಬಗ್ಗೆ ಹೆಚ್ಚಿನ ವಿವರ ಸದ್ಯದಲ್ಲಿಯೇ ತಿಳಿಯುವ ಸೂಚನೆ ಇದೆ.

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು
icon

(9 / 9)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು