ಮತ್ತೆ ಪುಟಿದೆದ್ದ ಅಣ್ಣಯ್ಯ, ಕುಸಿದ ನಾ ನಿನ್ನ ಬಿಡಲಾರೆ ಸೀರಿಯಲ್; ಹೀಗಿದೆ ಜೀ ಕನ್ನಡದ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮತ್ತೆ ಪುಟಿದೆದ್ದ ಅಣ್ಣಯ್ಯ, ಕುಸಿದ ನಾ ನಿನ್ನ ಬಿಡಲಾರೆ ಸೀರಿಯಲ್; ಹೀಗಿದೆ ಜೀ ಕನ್ನಡದ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌‌

ಮತ್ತೆ ಪುಟಿದೆದ್ದ ಅಣ್ಣಯ್ಯ, ಕುಸಿದ ನಾ ನಿನ್ನ ಬಿಡಲಾರೆ ಸೀರಿಯಲ್; ಹೀಗಿದೆ ಜೀ ಕನ್ನಡದ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್‌‌

  • Zee Kannada Serial TRP: ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್‌ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್‌ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ. ಹಾಗಾದರೆ, ಇನ್ನುಳಿದ ಸೀರಿಯಲ್‌ಗಳ ಕಥೆ ಏನು? ಪಡೆದ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ

ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್‌ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್‌ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ.
icon

(1 / 10)

ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್‌ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್‌ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ.
(Zee5)

ಅಣ್ಣಯ್ಯ ಧಾರಾವಾಹಿಯ ಕನ್ಸಿಸ್ಟನ್ಸಿ ಓಟಕ್ಕೆ ಮತ್ತೆ ಗೆಲುವು ದಕ್ಕಿದೆ. ಅಂದರೆ, 11ನೇ ವಾರ  8.4 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿದ್ದಾನೆ ಅಣ್ಣಯ್ಯ.
icon

(2 / 10)

ಅಣ್ಣಯ್ಯ ಧಾರಾವಾಹಿಯ ಕನ್ಸಿಸ್ಟನ್ಸಿ ಓಟಕ್ಕೆ ಮತ್ತೆ ಗೆಲುವು ದಕ್ಕಿದೆ. ಅಂದರೆ, 11ನೇ ವಾರ 8.4 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿದ್ದಾನೆ ಅಣ್ಣಯ್ಯ.

ಇನ್ನು ಸದಾ ಮೊದಲ ಮೂರು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಇದೀಗ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.7 ಟಿವಿಆರ್‌ ಪಡೆದು, ಹೆಚ್ಚು ವೀಕ್ಷಕ ಬಳಗವನ್ನು ಪಡೆದಿದೆ ಈ ಸೀರಿಯಲ್.
icon

(3 / 10)

ಇನ್ನು ಸದಾ ಮೊದಲ ಮೂರು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಇದೀಗ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.7 ಟಿವಿಆರ್‌ ಪಡೆದು, ಹೆಚ್ಚು ವೀಕ್ಷಕ ಬಳಗವನ್ನು ಪಡೆದಿದೆ ಈ ಸೀರಿಯಲ್.

ಕಳೆದ ಎರಡ್ಮೂರು ವಾರಗಳಿಂದ ನಂಬರ್‌ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್‌ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್‌ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ.
icon

(4 / 10)

ಕಳೆದ ಎರಡ್ಮೂರು ವಾರಗಳಿಂದ ನಂಬರ್‌ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್‌ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್‌ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ.

ಲಕ್ಷ್ಮೀ ನಿವಾಸ ಸೀರಿಯಲ್‌ 7.2 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಈ ಮೊದಲ ಹೆಚ್ಚು ಕಾಲ ನಂಬರ್‌ 1 ಸ್ಥಾನದಲ್ಲಿಯೇ ಈ ಸೀರಿಯಲ್‌ ಮುಂದುವರಿದಿತ್ತು. ಸದ್ಯ ಶ್ರೀಲಂಕಾ ಪ್ರವಾಸದ ಏಪಿಸೋಡ್‌ಗಳು ನೋಡುಗರನ್ನು ಸೆಳೆದಿವೆ.
icon

(5 / 10)

ಲಕ್ಷ್ಮೀ ನಿವಾಸ ಸೀರಿಯಲ್‌ 7.2 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಈ ಮೊದಲ ಹೆಚ್ಚು ಕಾಲ ನಂಬರ್‌ 1 ಸ್ಥಾನದಲ್ಲಿಯೇ ಈ ಸೀರಿಯಲ್‌ ಮುಂದುವರಿದಿತ್ತು. ಸದ್ಯ ಶ್ರೀಲಂಕಾ ಪ್ರವಾಸದ ಏಪಿಸೋಡ್‌ಗಳು ನೋಡುಗರನ್ನು ಸೆಳೆದಿವೆ.

ಅಮೃತಧಾರೆ ಸೀರಿಯಲ್‌ 6.9 ಟಿವಿಆರ್‌ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಒಂದಷ್ಟು ಅಚ್ಚರಿಗಳ ಗುಚ್ಛವೇ ಈ ಸೀರಿಯಲ್‌ನಲ್ಲಿ ತೆರೆದರೂ, ಟಾಪ್‌ ಮೂರಕ್ಕೆ ಲಗ್ಗೆ ಇಡಲು ಈ ಸೀರಿಯಲ್‌ ಒದ್ದಾಡುತ್ತಿದೆ.
icon

(6 / 10)

ಅಮೃತಧಾರೆ ಸೀರಿಯಲ್‌ 6.9 ಟಿವಿಆರ್‌ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಒಂದಷ್ಟು ಅಚ್ಚರಿಗಳ ಗುಚ್ಛವೇ ಈ ಸೀರಿಯಲ್‌ನಲ್ಲಿ ತೆರೆದರೂ, ಟಾಪ್‌ ಮೂರಕ್ಕೆ ಲಗ್ಗೆ ಇಡಲು ಈ ಸೀರಿಯಲ್‌ ಒದ್ದಾಡುತ್ತಿದೆ.

ಆರಂಭದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದ್ದ ಬ್ರಹ್ಮಗಂಟು ಸೀರಿಯಲ್‌ ಇದೀಗ ಚೇತರಿಕೆ ಹಾದಿಯಲ್ಲಿದೆ. ವಾರದಿಂದ ವಾರಕ್ಕೆ ಪ್ರಗತಿ ಕಾಣುತ್ತಿದ್ದು, 11ನೇ ವಾರದ ಟಿಆರ್‌ಪಿಯಲ್ಲಿ ಬ್ರಹ್ಮಗಂಟು ಧಾರಾವಾಹಿ 6.6 ಟಿವಿಆರ್‌ ಪಡೆದು ಆರನೇ ಸ್ಥಾನದಲ್ಲಿದೆ.
icon

(7 / 10)

ಆರಂಭದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದ್ದ ಬ್ರಹ್ಮಗಂಟು ಸೀರಿಯಲ್‌ ಇದೀಗ ಚೇತರಿಕೆ ಹಾದಿಯಲ್ಲಿದೆ. ವಾರದಿಂದ ವಾರಕ್ಕೆ ಪ್ರಗತಿ ಕಾಣುತ್ತಿದ್ದು, 11ನೇ ವಾರದ ಟಿಆರ್‌ಪಿಯಲ್ಲಿ ಬ್ರಹ್ಮಗಂಟು ಧಾರಾವಾಹಿ 6.6 ಟಿವಿಆರ್‌ ಪಡೆದು ಆರನೇ ಸ್ಥಾನದಲ್ಲಿದೆ.

ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ, 11ನೇ ವಾರದ ಟಿಆರ್‌ಪಿಯಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
icon

(8 / 10)

ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ, 11ನೇ ವಾರದ ಟಿಆರ್‌ಪಿಯಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.

ಶ್ರೀರಸ್ತು ಶುಭಮಸ್ತು ಸೀರಿಯಲ್‌ 3.2 ಟಿಆರ್‌ಪಿ ಪಡೆದು ಮುಂದಡಿ ಇರಿಸಿದ್ದು, ಮೊದಲಿಗಿಂತ ಚೇತರಿಕೆ ಹಾದಿಯಲ್ಲಿದೆ.
icon

(9 / 10)

ಶ್ರೀರಸ್ತು ಶುಭಮಸ್ತು ಸೀರಿಯಲ್‌ 3.2 ಟಿಆರ್‌ಪಿ ಪಡೆದು ಮುಂದಡಿ ಇರಿಸಿದ್ದು, ಮೊದಲಿಗಿಂತ ಚೇತರಿಕೆ ಹಾದಿಯಲ್ಲಿದೆ.

ಪ್ರಸಾರ ಸಮಯ ಬದಲಾದ ಮೇಲಿಂದ ಸೀತಾ ರಾಮ ಸೀರಿಯಲ್‌ನ ಟಿಆರ್‌ಪಿ ಪಾತಾಳಕ್ಕೆ ಕುಸಿದಿದೆ. ಇದೀಗ 11ನೇ ವಾರದ ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕೇವಲ 2.2 ರೇಟಿಂಗ್ಸ್‌ ಪಡೆದಿದೆ.
icon

(10 / 10)

ಪ್ರಸಾರ ಸಮಯ ಬದಲಾದ ಮೇಲಿಂದ ಸೀತಾ ರಾಮ ಸೀರಿಯಲ್‌ನ ಟಿಆರ್‌ಪಿ ಪಾತಾಳಕ್ಕೆ ಕುಸಿದಿದೆ. ಇದೀಗ 11ನೇ ವಾರದ ಟಿಆರ್‌ಪಿಯಲ್ಲಿ ಈ ಧಾರಾವಾಹಿ ಕೇವಲ 2.2 ರೇಟಿಂಗ್ಸ್‌ ಪಡೆದಿದೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು