ಬಾಗಲಕೋಟೆ ಜಿಲ್ಲೆಯ ರೈತರ ಜಮೀನು ಬೆಳೆ ರಕ್ಷಿಸಲು ನಟಿಯರಾದ ರಚಿತಾ ರಾಮ್, ಭವ್ಯಾಗೌಡ, ಸಾಯಿ ಪಲ್ಲವಿ ಕಾವಲು !
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಗಲಕೋಟೆ ಜಿಲ್ಲೆಯ ರೈತರ ಜಮೀನು ಬೆಳೆ ರಕ್ಷಿಸಲು ನಟಿಯರಾದ ರಚಿತಾ ರಾಮ್, ಭವ್ಯಾಗೌಡ, ಸಾಯಿ ಪಲ್ಲವಿ ಕಾವಲು !

ಬಾಗಲಕೋಟೆ ಜಿಲ್ಲೆಯ ರೈತರ ಜಮೀನು ಬೆಳೆ ರಕ್ಷಿಸಲು ನಟಿಯರಾದ ರಚಿತಾ ರಾಮ್, ಭವ್ಯಾಗೌಡ, ಸಾಯಿ ಪಲ್ಲವಿ ಕಾವಲು !

ಉತ್ತರ ಕರ್ನಾಟಕದ ಬಾಗಲಕೋಟೆ ಹಾಗೂ ಬೆಳಗಾವಿ ಗಡಿ ಭಾಗದ ಹಳ್ಳಿಯೊಂದರಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆ ರಕ್ಷಣೆಗೆ ನಟಿಯರಿಗೆ ಮೊರೆ ಹೋಗಿದ್ದಾರೆ. ಹೇಗಿದೆ ತಂತ್ರ ಇಲ್ಲಿದೆ ನೋಡಿ.

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದ ರೈತರೊಬ್ಬರು ತಮ್ಮ ಗದ್ದೆ ಕಾಯಲು ಸೆಲೆಬ್ರಿಟಿಗಳನ್ನು ನಿಲ್ಲಿಸಿದ್ದು ಗಮನ ಸೆಳೆಯುವಂತಿದೆ. ಅದರಲ್ಲೂ ನಟಿ ರಚಿತಾ ರಾಮ್‌ ಸಹಿತ ಹಲವರ ಚಿತ್ರಗಳನ್ನು ಇದಕ್ಕೆ ಬಳಸಿದ್ದಾರೆ.
icon

(1 / 7)

ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದ ರೈತರೊಬ್ಬರು ತಮ್ಮ ಗದ್ದೆ ಕಾಯಲು ಸೆಲೆಬ್ರಿಟಿಗಳನ್ನು ನಿಲ್ಲಿಸಿದ್ದು ಗಮನ ಸೆಳೆಯುವಂತಿದೆ. ಅದರಲ್ಲೂ ನಟಿ ರಚಿತಾ ರಾಮ್‌ ಸಹಿತ ಹಲವರ ಚಿತ್ರಗಳನ್ನು ಇದಕ್ಕೆ ಬಳಸಿದ್ದಾರೆ.

ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಕೊಪ್ಪ ಗ್ರಾಮದ ನಾಗಪ್ಪ ಸದಾಶಿವ ಶಿರೋಳ  ಎಂಬುವವರು ತರಕಾರಿ ಬೆಳೆಯುತ್ತಿದ್ದು.ಬೆಳೆಗೆ ದೃಷ್ಟಿ ಬಾಧಿಸದಿರಲಿ ಎಂದು ನಟಿ ಸಾಯಿ ಪಲ್ಲವಿ ಅವರ ಪೋಟೋವನ್ನು ಹಾಕಿದ್ದಾರೆ.
icon

(2 / 7)

ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಕೊಪ್ಪ ಗ್ರಾಮದ ನಾಗಪ್ಪ ಸದಾಶಿವ ಶಿರೋಳ ಎಂಬುವವರು ತರಕಾರಿ ಬೆಳೆಯುತ್ತಿದ್ದು.ಬೆಳೆಗೆ ದೃಷ್ಟಿ ಬಾಧಿಸದಿರಲಿ ಎಂದು ನಟಿ ಸಾಯಿ ಪಲ್ಲವಿ ಅವರ ಪೋಟೋವನ್ನು ಹಾಕಿದ್ದಾರೆ.

ಕೆಸರಗೊಪ್ಪ ರಸ್ತೆ ಪಕ್ಕದಲ್ಲೇ ಇರುವ ಮೆಣಸಿನಕಾಯಿ ತೋಟದಲ್ಲಿ  ಬಗೆಬಗೆಯ ತರಕಾರಿಗಳ ಹಸಿರು ಒಂದೆಡೆ, ಮತ್ತೊಂದೆಡೆ ಕಂಗೊಳಿಸುವ ಭವ್ಯಾಗೌಡ ಸಹಿತ ಹಲವು ನಟಿಯರ ಭಾವಚಿತ್ರಗಳನ್ನು ಸವಾರರು ನೋಡುತ್ತ, ನಸುನಗುತ್ತ ಸಾಗುವುದು ಗಮನ ಸೆಳೆದಿದೆ.
icon

(3 / 7)

ಕೆಸರಗೊಪ್ಪ ರಸ್ತೆ ಪಕ್ಕದಲ್ಲೇ ಇರುವ ಮೆಣಸಿನಕಾಯಿ ತೋಟದಲ್ಲಿ ಬಗೆಬಗೆಯ ತರಕಾರಿಗಳ ಹಸಿರು ಒಂದೆಡೆ, ಮತ್ತೊಂದೆಡೆ ಕಂಗೊಳಿಸುವ ಭವ್ಯಾಗೌಡ ಸಹಿತ ಹಲವು ನಟಿಯರ ಭಾವಚಿತ್ರಗಳನ್ನು ಸವಾರರು ನೋಡುತ್ತ, ನಸುನಗುತ್ತ ಸಾಗುವುದು ಗಮನ ಸೆಳೆದಿದೆ.

ಒಂಬತ್ತು ವರ್ಷದಿಂದ ತರಕಾರಿಯನ್ನೇ ಬೆಳೆಯುತ್ತ ಬಂದಿರುವ ನಾಗಪ್ಪ ಅವರ  ಎರಡು ಎಕರೆ ಕಿರು ಜಮೀನಿನಲ್ಲಿ ಸೌತೆಕಾಯಿ, ಮೆಣಸಿನಗಿಡ,  ಟೊಮೇಟೋ ಬೆಳೆಗಳನ್ನು ಹುಲುಸಾಗಿ ಬೆಳೆದಿವೆ,. ಅವರ ಜಮೀನಿನಲ್ಲಿ ಕುಂಭಮೇಳ ಬೆಡಗಿ ಮೊನಾಲಿಸಾ ಕೂಡ ಬಂದಿದ್ದಾರೆ.
icon

(4 / 7)

ಒಂಬತ್ತು ವರ್ಷದಿಂದ ತರಕಾರಿಯನ್ನೇ ಬೆಳೆಯುತ್ತ ಬಂದಿರುವ ನಾಗಪ್ಪ ಅವರ ಎರಡು ಎಕರೆ ಕಿರು ಜಮೀನಿನಲ್ಲಿ ಸೌತೆಕಾಯಿ, ಮೆಣಸಿನಗಿಡ, ಟೊಮೇಟೋ ಬೆಳೆಗಳನ್ನು ಹುಲುಸಾಗಿ ಬೆಳೆದಿವೆ,. ಅವರ ಜಮೀನಿನಲ್ಲಿ ಕುಂಭಮೇಳ ಬೆಡಗಿ ಮೊನಾಲಿಸಾ ಕೂಡ ಬಂದಿದ್ದಾರೆ.

ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸುವ ಸಂಪ್ರದಾಯ ಭಾರತದ ನಾನಾ ಭಾಗಗಳಲ್ಲಿದೆ.
icon

(5 / 7)

ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸುವ ಸಂಪ್ರದಾಯ ಭಾರತದ ನಾನಾ ಭಾಗಗಳಲ್ಲಿದೆ.

ಇದರ ಉದ್ದೇಶ ಪಕ್ಷಿಗಳು ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವುದನ್ನು ಮತ್ತು ಅವುಗಳನ್ನು ತಿನ್ನುವುದಕ್ಕೆ ಅಡ್ಡಿಪಡಿಸುವುದಕ್ಕೆ ಬೆದರಿಕೆ ಉಂಟು ಮಾಡುವುದು ಇದರ ಹಿಂದಿರುವ ಆಶಯ.
icon

(6 / 7)

ಇದರ ಉದ್ದೇಶ ಪಕ್ಷಿಗಳು ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವುದನ್ನು ಮತ್ತು ಅವುಗಳನ್ನು ತಿನ್ನುವುದಕ್ಕೆ ಅಡ್ಡಿಪಡಿಸುವುದಕ್ಕೆ ಬೆದರಿಕೆ ಉಂಟು ಮಾಡುವುದು ಇದರ ಹಿಂದಿರುವ ಆಶಯ.

ಮನೆಮಂದಿಯೆಲ್ಲಾ ತರಕಾರಿ ಹೊಲದಲ್ಲಿ ನಿತ್ಯ ಪರಿಶ್ರಮ ವಹಿಸಿ ಹಚ್ಚ ಹಸುರಿನಿಂದ ಕಂಗೊಳಿಸುವ ಬೆಳೆ ಬೆಳೆಸಿದ್ದೇವೆ. ರಸ್ತೆ ಬದಿಯಲ್ಲೇ ತೋಟ ಇರುವುದರಿಂದ ಬೆಳೆಗೆ ಎಲ್ಲರ ದೃಷ್ಟಿ ತಾಕದಿರಲೆಂದು ನೋಡುಗರ ದೃಷ್ಟಿ ಹರಣ ಮಾಡಲು ಸುಂದರ ಸೆಲೆಬ್ರಿಟಿಗಳ ಭಾವಚಿತ್ರ ಅಳವಡಿಸಿದ್ದೇವೆ. ಇದು ಗಮನ ಸೆಳದಿದೆ ಎಂದು ನಾಗಪ್ಪ ಹೇಳುತ್ತಾರೆ.
icon

(7 / 7)

ಮನೆಮಂದಿಯೆಲ್ಲಾ ತರಕಾರಿ ಹೊಲದಲ್ಲಿ ನಿತ್ಯ ಪರಿಶ್ರಮ ವಹಿಸಿ ಹಚ್ಚ ಹಸುರಿನಿಂದ ಕಂಗೊಳಿಸುವ ಬೆಳೆ ಬೆಳೆಸಿದ್ದೇವೆ. ರಸ್ತೆ ಬದಿಯಲ್ಲೇ ತೋಟ ಇರುವುದರಿಂದ ಬೆಳೆಗೆ ಎಲ್ಲರ ದೃಷ್ಟಿ ತಾಕದಿರಲೆಂದು ನೋಡುಗರ ದೃಷ್ಟಿ ಹರಣ ಮಾಡಲು ಸುಂದರ ಸೆಲೆಬ್ರಿಟಿಗಳ ಭಾವಚಿತ್ರ ಅಳವಡಿಸಿದ್ದೇವೆ. ಇದು ಗಮನ ಸೆಳದಿದೆ ಎಂದು ನಾಗಪ್ಪ ಹೇಳುತ್ತಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು