ಬಾಗಲಕೋಟೆ ಜಿಲ್ಲೆಯ ರೈತರ ಜಮೀನು ಬೆಳೆ ರಕ್ಷಿಸಲು ನಟಿಯರಾದ ರಚಿತಾ ರಾಮ್, ಭವ್ಯಾಗೌಡ, ಸಾಯಿ ಪಲ್ಲವಿ ಕಾವಲು !
ಉತ್ತರ ಕರ್ನಾಟಕದ ಬಾಗಲಕೋಟೆ ಹಾಗೂ ಬೆಳಗಾವಿ ಗಡಿ ಭಾಗದ ಹಳ್ಳಿಯೊಂದರಲ್ಲಿ ರೈತರೊಬ್ಬರು ತಮ್ಮ ಜಮೀನಿನಲ್ಲಿ ಬೆಳೆ ರಕ್ಷಣೆಗೆ ನಟಿಯರಿಗೆ ಮೊರೆ ಹೋಗಿದ್ದಾರೆ. ಹೇಗಿದೆ ತಂತ್ರ ಇಲ್ಲಿದೆ ನೋಡಿ.
(1 / 7)
ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರ ಸಮೀಪದ ಕೆಸರಗೊಪ್ಪ ಗ್ರಾಮದ ರೈತರೊಬ್ಬರು ತಮ್ಮ ಗದ್ದೆ ಕಾಯಲು ಸೆಲೆಬ್ರಿಟಿಗಳನ್ನು ನಿಲ್ಲಿಸಿದ್ದು ಗಮನ ಸೆಳೆಯುವಂತಿದೆ. ಅದರಲ್ಲೂ ನಟಿ ರಚಿತಾ ರಾಮ್ ಸಹಿತ ಹಲವರ ಚಿತ್ರಗಳನ್ನು ಇದಕ್ಕೆ ಬಳಸಿದ್ದಾರೆ.
(2 / 7)
ರಬಕವಿ ಬನಹಟ್ಟಿ ತಾಲ್ಲೂಕಿನ ಕೆಸರಕೊಪ್ಪ ಗ್ರಾಮದ ನಾಗಪ್ಪ ಸದಾಶಿವ ಶಿರೋಳ ಎಂಬುವವರು ತರಕಾರಿ ಬೆಳೆಯುತ್ತಿದ್ದು.ಬೆಳೆಗೆ ದೃಷ್ಟಿ ಬಾಧಿಸದಿರಲಿ ಎಂದು ನಟಿ ಸಾಯಿ ಪಲ್ಲವಿ ಅವರ ಪೋಟೋವನ್ನು ಹಾಕಿದ್ದಾರೆ.
(3 / 7)
ಕೆಸರಗೊಪ್ಪ ರಸ್ತೆ ಪಕ್ಕದಲ್ಲೇ ಇರುವ ಮೆಣಸಿನಕಾಯಿ ತೋಟದಲ್ಲಿ ಬಗೆಬಗೆಯ ತರಕಾರಿಗಳ ಹಸಿರು ಒಂದೆಡೆ, ಮತ್ತೊಂದೆಡೆ ಕಂಗೊಳಿಸುವ ಭವ್ಯಾಗೌಡ ಸಹಿತ ಹಲವು ನಟಿಯರ ಭಾವಚಿತ್ರಗಳನ್ನು ಸವಾರರು ನೋಡುತ್ತ, ನಸುನಗುತ್ತ ಸಾಗುವುದು ಗಮನ ಸೆಳೆದಿದೆ.
(4 / 7)
ಒಂಬತ್ತು ವರ್ಷದಿಂದ ತರಕಾರಿಯನ್ನೇ ಬೆಳೆಯುತ್ತ ಬಂದಿರುವ ನಾಗಪ್ಪ ಅವರ ಎರಡು ಎಕರೆ ಕಿರು ಜಮೀನಿನಲ್ಲಿ ಸೌತೆಕಾಯಿ, ಮೆಣಸಿನಗಿಡ, ಟೊಮೇಟೋ ಬೆಳೆಗಳನ್ನು ಹುಲುಸಾಗಿ ಬೆಳೆದಿವೆ,. ಅವರ ಜಮೀನಿನಲ್ಲಿ ಕುಂಭಮೇಳ ಬೆಡಗಿ ಮೊನಾಲಿಸಾ ಕೂಡ ಬಂದಿದ್ದಾರೆ.
(5 / 7)
ಮನುಷ್ಯರಂತೆ ಕಾಣುವ ಬೆದರುಗೊಂಬೆಗಳಿಗೆ ಸಾಮಾನ್ಯವಾಗಿ ಹಳೆ ಬಟ್ಟೆಗಳನ್ನು ತೊಡಿಸಿ ತೆರೆದ ಜಮೀನುಗಳಲ್ಲಿ ಇರಿಸುವ ಸಂಪ್ರದಾಯ ಭಾರತದ ನಾನಾ ಭಾಗಗಳಲ್ಲಿದೆ.
(6 / 7)
ಇದರ ಉದ್ದೇಶ ಪಕ್ಷಿಗಳು ಬೆಳೆಯುತ್ತಿರುವ ಫಸಲಿಗೆ ತೊಂದರೆ ಕೊಡುವುದನ್ನು ಮತ್ತು ಅವುಗಳನ್ನು ತಿನ್ನುವುದಕ್ಕೆ ಅಡ್ಡಿಪಡಿಸುವುದಕ್ಕೆ ಬೆದರಿಕೆ ಉಂಟು ಮಾಡುವುದು ಇದರ ಹಿಂದಿರುವ ಆಶಯ.
ಇತರ ಗ್ಯಾಲರಿಗಳು