Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ

Bagalkot News: ರೇಷ್ಮೆ, ಕೃಷಿ ತಜ್ಞ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಕಟ್ಟಿದ ವಿಜ್ಞಾನಿ ಡಾ.ದಂಡಿನ್‌ಗೆ ಅಭಿನಂದನೆ ಮಹಾಪೂರ

  • Felicitation to Scientist ಬಾಗಲಕೋಟ ತೋಟಗಾರಿಕೆ ವಿಜ್ಞಾನ ವಿವಿಯನ್ನು ಸಮರ್ಥವಾಗಿ ಕಟ್ಟಿದ ಕೃಷಿ, ತೋಟಗಾರಿಕೆ, ರೇಷ್ಮೆ, ವನಕೃಷಿಯಲ್ಲಿ ಅಂತರಾಷ್ಟ್ರೀಯ ತಜ್ಞರಾಗಿರುವ ಡಾ.ಎಸ್.ಬಿ.ದಂಡಿನ್‌ ಅವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. 

ಇದು ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ. ಆರು ವರ್ಷ ಕಾಲ ವಿವಿ ವಿಶೇಷಾಧಿಕಾರಿ ಹಾಗೂ ಕುಲಪತಿಯಾಗಿ ಪ್ರೊ.ಎಸ್‌.ಬಿ.ದಂಡಿನ್‌ ಅವರು ಸಮರ್ಥವಾಗಿ ಕಟ್ಟಿ ಮುನ್ನಡೆಸಿದರು. ಈಗ ಹೆಮ್ಮರವಾಗಿಯೇ ವಿವಿ ಬೆಳೆದಿದೆ.
icon

(1 / 10)

ಇದು ಬಾಗಲಕೋಟೆಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ. ಆರು ವರ್ಷ ಕಾಲ ವಿವಿ ವಿಶೇಷಾಧಿಕಾರಿ ಹಾಗೂ ಕುಲಪತಿಯಾಗಿ ಪ್ರೊ.ಎಸ್‌.ಬಿ.ದಂಡಿನ್‌ ಅವರು ಸಮರ್ಥವಾಗಿ ಕಟ್ಟಿ ಮುನ್ನಡೆಸಿದರು. ಈಗ ಹೆಮ್ಮರವಾಗಿಯೇ ವಿವಿ ಬೆಳೆದಿದೆ.

ತಮಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೂ ಮುನ್ನ ವಿವಿ ಆವರಣದಲ್ಲಿ ಪ್ರೊ.ಎಸ್.ಬಿ.ದಂಡಿನ್‌ ಶನಿವಾರ ಬೆಳಿಗ್ಗೆ ಸುತ್ತು ಹಾಕಿ ಬಂದರು.
icon

(2 / 10)

ತಮಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮಕ್ಕೂ ಮುನ್ನ ವಿವಿ ಆವರಣದಲ್ಲಿ ಪ್ರೊ.ಎಸ್.ಬಿ.ದಂಡಿನ್‌ ಶನಿವಾರ ಬೆಳಿಗ್ಗೆ ಸುತ್ತು ಹಾಕಿ ಬಂದರು.

ಡಾ.ಎಸ್.ಬಿ.ದಂಡಿನ್‌ ಅವರ 75 ನೇ ವರ್ಷದ ಜನುಮ ದಿನದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಶಿಷ್ಯರು, ವಿದ್ಯಾರ್ಥಿಗಳು ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಬಿಡಿಸಿದ್ದ ಅಭಿಮಾನದ ರಂಗೋಲಿ.
icon

(3 / 10)

ಡಾ.ಎಸ್.ಬಿ.ದಂಡಿನ್‌ ಅವರ 75 ನೇ ವರ್ಷದ ಜನುಮ ದಿನದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರ ಶಿಷ್ಯರು, ವಿದ್ಯಾರ್ಥಿಗಳು ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಬಿಡಿಸಿದ್ದ ಅಭಿಮಾನದ ರಂಗೋಲಿ.

ದಂಡಿನ್‌ ಅವರ 75 ನೇ ವರ್ಷದ ನೆನಪಿನಲ್ಲಿ ಆರಂಭಿಸಿರುವ ಡಾ.ಎಸ್‌.ಬಿ.ದಂಡಿನ ಶಿಕ್ಷಣ ಹಾಗೂ ಸಂಶೋಧನಾ ಪ್ರತಿಷ್ಠಾನ ಸಂಸ್ಥೆಗೆ ಶನಿವಾರ ಬಾಗಲಕೋಟೆಯಲ್ಲಿ ಚಾಲನೆ ನೀಡಲಾಯಿತು.
icon

(4 / 10)

ದಂಡಿನ್‌ ಅವರ 75 ನೇ ವರ್ಷದ ನೆನಪಿನಲ್ಲಿ ಆರಂಭಿಸಿರುವ ಡಾ.ಎಸ್‌.ಬಿ.ದಂಡಿನ ಶಿಕ್ಷಣ ಹಾಗೂ ಸಂಶೋಧನಾ ಪ್ರತಿಷ್ಠಾನ ಸಂಸ್ಥೆಗೆ ಶನಿವಾರ ಬಾಗಲಕೋಟೆಯಲ್ಲಿ ಚಾಲನೆ ನೀಡಲಾಯಿತು.

ಡಾ.ಎಸ್‌.ಬಿ.ದಂಡಿನ್‌ ಅವರಿಗೆ 75  ವರ್ಷ ತುಂಭಿದ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರ ಶಿಷ್ಯರು, ವಿಜ್ಞಾನಿಗಳು, ನಾನಾ ಕ್ಷೇತ್ರದ ಸಾಧಕರು ಆತ್ಮೀಯವಾಗಿ ಅಭಿನಂದಿಸಿದರು.
icon

(5 / 10)

ಡಾ.ಎಸ್‌.ಬಿ.ದಂಡಿನ್‌ ಅವರಿಗೆ 75  ವರ್ಷ ತುಂಭಿದ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಅವರ ಶಿಷ್ಯರು, ವಿಜ್ಞಾನಿಗಳು, ನಾನಾ ಕ್ಷೇತ್ರದ ಸಾಧಕರು ಆತ್ಮೀಯವಾಗಿ ಅಭಿನಂದಿಸಿದರು.

ಆತ್ಮೀಯ ಅಭಿನಂದನೆಯನ್ನು ಬಾಗಲಕೋಟೆಯಲ್ಲಿ ಶನಿವಾರ ಸ್ವೀಕರಿಸಿದ ದಂಡಿನ ದಂಪತಿಗಳು,
icon

(6 / 10)

ಆತ್ಮೀಯ ಅಭಿನಂದನೆಯನ್ನು ಬಾಗಲಕೋಟೆಯಲ್ಲಿ ಶನಿವಾರ ಸ್ವೀಕರಿಸಿದ ದಂಡಿನ ದಂಪತಿಗಳು,

ದಂಡಿನ ಅವರ 75  ವರ್ಷದ ಜನುಮ ದಿನದ ಅಭಿನಂದನಾ ಕಾರ್ಯಕ್ರಮದಲ್ಲಿ ಇಳಕಲ್‌ ಚಿತ್ತರಗಿ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಮಾತನಾಡಿದರು.
icon

(7 / 10)

ದಂಡಿನ ಅವರ 75  ವರ್ಷದ ಜನುಮ ದಿನದ ಅಭಿನಂದನಾ ಕಾರ್ಯಕ್ರಮದಲ್ಲಿ ಇಳಕಲ್‌ ಚಿತ್ತರಗಿ ಮಠದ ಶ್ರೀಗುರು ಮಹಾಂತ ಸ್ವಾಮೀಜಿ ಮಾತನಾಡಿದರು.

ಬಾಗಲಕೋಟ ತೋಟಗಾರಿಕೆ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ್ಣುಗಳ ಮೂಲಕ ಡಾ.ದಂಡಿನ್‌ ಅವರಿಗೆ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು.
icon

(8 / 10)

ಬಾಗಲಕೋಟ ತೋಟಗಾರಿಕೆ ವಿವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಣ್ಣುಗಳ ಮೂಲಕ ಡಾ.ದಂಡಿನ್‌ ಅವರಿಗೆ ತುಲಾಭಾರ ಮಾಡಿದ್ದು ವಿಶೇಷವಾಗಿತ್ತು.

75  ವರ್ಷದ ಜನುಮ ದಿನದ ಸಂದರ್ಭದಲ್ಲಿ ಡಾ.ದಂಡಿನ್‌ ಅವರಿಗೆ ಅವರ ಅಭಿಮಾನಿಗಳು ನೀಡಿದ ನೆನಪಿನ ಫಲಕ ಹೀಗಿತ್ತು.
icon

(9 / 10)

75  ವರ್ಷದ ಜನುಮ ದಿನದ ಸಂದರ್ಭದಲ್ಲಿ ಡಾ.ದಂಡಿನ್‌ ಅವರಿಗೆ ಅವರ ಅಭಿಮಾನಿಗಳು ನೀಡಿದ ನೆನಪಿನ ಫಲಕ ಹೀಗಿತ್ತು.

ತಮಗೆ 75  ವರ್ಷ ತುಂಬಿದ ಸಂದರ್ಭದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ದಂಡಿನ್‌ ಅವರು ಮಾತನಾಡಿದರು.
icon

(10 / 10)

ತಮಗೆ 75  ವರ್ಷ ತುಂಬಿದ ಸಂದರ್ಭದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾನಿಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಡಾ.ದಂಡಿನ್‌ ಅವರು ಮಾತನಾಡಿದರು.


ಇತರ ಗ್ಯಾಲರಿಗಳು