ಬೆಂಗಳೂರು ಇಸ್ಕಾನ್ನಲ್ಲಿ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ: ಭಕ್ತಿ ಲೋಕದಲ್ಲಿ ಮಿಂದೆದ್ದ ಭಕ್ತ ಗಣ
ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಸ್ಕಾನ್ನ ಹರೇ ಕೃಷ್ಣ ಬೆಟ್ಟದಲ್ಲಿ ಬುಧವಾರ ವಾರ್ಷಿಕ ಬ್ರಹ್ಮೋತ್ಸವ, ತೆಪ್ಪೋತ್ಸವದ ಸಡಗರ ಜೋರಾಗಿತ್ತು. ಭಕ್ತರು, ಗಣ್ಯರು ಭಾಗಿಯಾದರು.
(1 / 7)
ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವ ಬುಧವಾರ ವೈಭವದಿಂದ ನಡೆಯಿತು.
(2 / 7)
ಪ್ರತಿ ವರ್ಷವೂ ನಡೆಯುವ ವಾರ್ಷಿಕ ಈ ಬಾರಿಯೂ ವೈಭವದಿಂದಲೇ ಆಯೋಜನೆಗೊಂಡಿತ್ತು. ಬೆಂಗಳೂರಿನ ಇಸ್ಕಾನ್ ಘಟಕದ ಶ್ರೀ ಬ್ರಹ್ಮೋತ್ಸವ 2025ದ ನಂತರ ತೆಪ್ಪೋತ್ಸವವೂ ಆಕರ್ಷಕವಾಗಿತ್ತು.
(3 / 7)
ಶ್ರೀ ಕೃಷ್ಣ ಹಾಗೂ ರಾಧಾ ಉತ್ಸವ ಮೂರ್ತಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ನಂತರ ತೆಪ್ಪದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು.
(4 / 7)
ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರಿಂದು ಬೆಂಗಳೂರು ರಾಜಾಜಿನಗರದ ಇಸ್ಕಾನ್ ದೇವಸ್ಥಾನದಲ್ಲಿ 28ನೆ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ತೆಪ್ಪೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು.
(5 / 7)
ಬೆಂಗಳೂರಿನ ಇಸ್ಕಾನ್ ಘಟಕದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷವೂ ನಾನಾ ಚಟುವಟಿಕೆಗಳು 12 ದಿನಗಳ ಸಂಭ್ರಮಾಚರಣೆಯೊಂದಿಗೆ ಕೃಷ್ಣ ಭಕ್ತರನ್ನು ಸೆಳೆಯುತ್ತದೆ. ಕೃಷ್ಣ ಬಲರಾಮರ ಅಲಂಕಾರವೂ ವಿಶೇಷ ಎನ್ನಿಸಲಿದೆ.
(6 / 7)
ವಾರ್ಷಿಕೋತ್ಸವದ ಎಲ್ಲಾ ದಿನವೂ ವಿಶೇಷ ಅಲಂಕಾರ ಭಕ್ತರನ್ನು ಇಸ್ಕಾನ್ನಲ್ಲಿ ಆಕರ್ಷಿಸಲಿದೆ. ಬ್ರಹ್ಮೋತ್ಸವ ದಿನವಂತೂ ಅಲಂಕಾರ ವಿಶೇಷವಾಗಿಯೇ ಇರಲಿದೆ.
ಇತರ ಗ್ಯಾಲರಿಗಳು