Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ, ಹೀಗಿದ್ದವು ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bangalore Cauvery Aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ, ಹೀಗಿದ್ದವು ಕ್ಷಣಗಳು

Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಕಾವೇರಿ ಆರತಿ, ಹೀಗಿದ್ದವು ಕ್ಷಣಗಳು

  • Bangalore Cauvery aarti: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಕಾವೇರಿ ಆರತಿಯ ಸಂಭ್ರಮದ ಕ್ಷಣಗಳು ಹೀಗಿದ್ದವು.

ಕರ್ನಾಟಕದಲ್ಲೇ ಮೊದಲ ಬಾರಿಗೆ ನಮ್ಮ ಬೆಂಗಳೂರು 'ಕಾವೇರಿ ಆರತಿ'ಯ ವೈಭವಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಶುಕ್ರವಾರ ರಾತ್ರಿ ಬೆಳಕಿನಿಂದ ಕೂಡಿತ್ತು
icon

(1 / 6)

ಕರ್ನಾಟಕದಲ್ಲೇ ಮೊದಲ ಬಾರಿಗೆ ನಮ್ಮ ಬೆಂಗಳೂರು 'ಕಾವೇರಿ ಆರತಿ'ಯ ವೈಭವಕ್ಕೆ ಸಾಕ್ಷಿಯಾಗಿದೆ. ಬೆಂಗಳೂರಿನ ಸ್ಯಾಂಕಿ ಕೆರೆ ಶುಕ್ರವಾರ ರಾತ್ರಿ ಬೆಳಕಿನಿಂದ ಕೂಡಿತ್ತು

ಕಾವೇರಿ ಆರತಿ ಅಂಗವಾಗಿ ಬೆಂಗಳೂರು ಜಲಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.
icon

(2 / 6)

ಕಾವೇರಿ ಆರತಿ ಅಂಗವಾಗಿ ಬೆಂಗಳೂರು ಜಲಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.

ನೀರಿಲ್ಲದೇ ನಾವಿಲ್ಲ. ನೀರೇ ನಾಗರಿಕತೆ- ನೀರಿಂದಲೇ ಧರ್ಮ. ಬರಗಾಲ ಬಂದಾಗ, ಬಾವಿ ಒಣಗಿದಾಗ ನೀರಿನ ಮಹತ್ವ ನಮಗೆ ತಿಳಿಯುತ್ತದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಾರದೆಂದು ಪ್ರಾರ್ಥನೆ ಮಾಡಲು, ದೇಶದ ಇತಿಹಾಸ- ಸಂಸ್ಕೃತಿ ಉಳಿಸಲು ಈ "ಕಾವೇರಿ ಆರತಿ" ಮಾಡಿದ್ದೇವೆ ಎನ್ನುವುದು ಡಿಸಿಎಂ ಡಿಕೆ ಶಿವಕುಮಾರ್‌ ಅವರ ವಿವರಣೆ.
icon

(3 / 6)

ನೀರಿಲ್ಲದೇ ನಾವಿಲ್ಲ. ನೀರೇ ನಾಗರಿಕತೆ- ನೀರಿಂದಲೇ ಧರ್ಮ. ಬರಗಾಲ ಬಂದಾಗ, ಬಾವಿ ಒಣಗಿದಾಗ ನೀರಿನ ಮಹತ್ವ ನಮಗೆ ತಿಳಿಯುತ್ತದೆ. ಬೆಂಗಳೂರಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರಬಾರದೆಂದು ಪ್ರಾರ್ಥನೆ ಮಾಡಲು, ದೇಶದ ಇತಿಹಾಸ- ಸಂಸ್ಕೃತಿ ಉಳಿಸಲು ಈ "ಕಾವೇರಿ ಆರತಿ" ಮಾಡಿದ್ದೇವೆ ಎನ್ನುವುದು ಡಿಸಿಎಂ ಡಿಕೆ ಶಿವಕುಮಾರ್‌ ಅವರ ವಿವರಣೆ.

ಬೆಂಗಳೂರಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಆಸಕ್ತರು ಕಾವೇರಿ ಆರತಿ ಉತ್ಸವದಲ್ಲಿ ಭಾಗಿಯಾದರು.
icon

(4 / 6)

ಬೆಂಗಳೂರಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಆಸಕ್ತರು ಕಾವೇರಿ ಆರತಿ ಉತ್ಸವದಲ್ಲಿ ಭಾಗಿಯಾದರು.

ಕಾವೇರಿ ಆರತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಐತಿಹ್ಯವಿರುವ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಮಾತೆಗೆ ಆರತಿ ಬೆಳಗಿ, ಅಲ್ಲಿ ನೆರೆದಿದ್ದವರೊಂದಿಗೆ ಜಲಸಂರಕ್ಷಣೆಯ ಸಂಕಲ್ಪ ಕೈಗೊಂಡೆ.‌ ಸಾರ್ವಜನಿಕರೆಲ್ಲರೂ ಈ ಪ್ರತಿಜ್ಞೆ ಸ್ವೀಕರಿಸಿ, ನೀರಿನ ಸಂರಕ್ಷಣೆಯ ಪಣ ತೊಡಿ ಎಂದು ಕೋರಿದರು.
icon

(5 / 6)

ಕಾವೇರಿ ಆರತಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್‌, ಐತಿಹ್ಯವಿರುವ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಮಾತೆಗೆ ಆರತಿ ಬೆಳಗಿ, ಅಲ್ಲಿ ನೆರೆದಿದ್ದವರೊಂದಿಗೆ ಜಲಸಂರಕ್ಷಣೆಯ ಸಂಕಲ್ಪ ಕೈಗೊಂಡೆ.‌ ಸಾರ್ವಜನಿಕರೆಲ್ಲರೂ ಈ ಪ್ರತಿಜ್ಞೆ ಸ್ವೀಕರಿಸಿ, ನೀರಿನ ಸಂರಕ್ಷಣೆಯ ಪಣ ತೊಡಿ ಎಂದು ಕೋರಿದರು.

ಕೆಆರ್‌ಎಸ್‌ನಲ್ಲಿ ದಸರಾ ವೇಳೆಗೆ "ಕಾವೇರಿ ಆರತಿ" ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೊಂದು ಸಮಿತಿ ರಚಿಸಿದ್ದೇವೆ. ಜಲಮಾತೆಗೆ ನಮನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾಕೆಂದರೆ, ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದರು ಡಿಕೆಶಿ
icon

(6 / 6)

ಕೆಆರ್‌ಎಸ್‌ನಲ್ಲಿ ದಸರಾ ವೇಳೆಗೆ "ಕಾವೇರಿ ಆರತಿ" ಮಾಡಲು ತೀರ್ಮಾನಿಸಿದ್ದೇವೆ. ಇದಕ್ಕೊಂದು ಸಮಿತಿ ರಚಿಸಿದ್ದೇವೆ. ಜಲಮಾತೆಗೆ ನಮನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಯಾಕೆಂದರೆ, ಪ್ರಯತ್ನ ವಿಫಲವಾಗಬಹುದು, ಪ್ರಾರ್ಥನೆ ವಿಫಲವಾಗುವುದಿಲ್ಲ ಎಂದರು ಡಿಕೆಶಿ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು