Basava Jayanti 2025: ಕರ್ನಾಟಕದ ಸಂವೇದನಾ ಶೀಲ ಸಚಿವ ಕೃಷ್ಣಬೈರೇಗೌಡರಿಗೆ ಗದಗದಲ್ಲಿ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ
ಕರ್ನಾಟಕದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ರಾಜಕೀಯ ವಲಯದಲ್ಲಿರುವ ಕೃಷ್ಣಬೈರೇಗೌಡ ಅವರು ಸಚಿವ, ಶಾಸಕರಾಗಿ ಗಮನ ಸೆಳೆದವರು. ಇವರ ಬೆನ್ನಿಗೆ ನಿಂತವರು ಪತ್ನಿ ಮೀನಾಕ್ಷಿ. ಈ ದಂಪತಿಗೆ ಗದಗದಲ್ಲಿ ಬಸವ ಜಯಂತಿ ಅಂಗವಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
(1 / 7)
ಜಗಜ್ಯೋತಿ ಬಸವ ಜಯಂತಿ ಪ್ರಯುಕ್ತ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಈ ಬಾರಿಯ “ಮಾನವತಾವಾದಿ ಬಸವೇಶ್ವರ ಪ್ರಶಸ್ತಿ”ಯನ್ನು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಅವರ ಧರ್ಮ ಪತ್ನಿಯಾದ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರಿಗೆ ಗದಗದಲ್ಲಿ ಮಂಗಳವಾರ (ಏಪ್ರಿಲ್ 29) ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
(2 / 7)
ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮಸ್ವಾಮೀಜಿ, ಸಚಿವರಾದ ಎಚ್ಕೆ ಪಾಟೀಲ್, ಮಾಜಿ ಸಚಿವ ಎಸ್ಎಸ್ ಪಾಟೀಲ್, ಡಿ.ಆರ್.ಪಾಟೀಲ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
(3 / 7)
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಸವಜಯಂತಿ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನವು ವಿಶ್ವ ಮಾನವತಾವಾದಿ ಬಸವಣ್ಣ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಕೃಷ್ಣಬೈರೇಗೌಡ ಹಾಗೂ ಮೀನಾಕ್ಷಿ ದಂಪತಿಯನ್ನು ಆಯ್ಕೆ ಮಾಡಲಾಗಿದೆ.
(4 / 7)
ಕೃಷ್ಣಬೈರೇಗೌಡ ಅವರು ಅವರ ತಂದೆ ಬೈರೇಗೌಡ ಅವರು ತೀರಿಕೊಂಡ ನಂತರ ಕೋಲಾರದ ವೇಮಗಲ್ನಿಂದ ಶಾಸಕರಾಗಿ ನಂತರ ಬೆಂಗಳೂರಿನ ಬ್ಯಾಟರಾಯನಪುರ ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ.
(5 / 7)
ಕೃಷಿ, ಗ್ರಾಮೀಣಾಭಿವೃದ್ದಿ ನಂತರ ಈಗ ಕಂದಾಯ ಸಚಿವರಾಗಿ ವಿಭಿನ್ನ ಹಾಗೂ ಜನಮುಖಿಯಾಗಿ ಕೆಲಸ ಮಾಡುತ್ತಾ ರಾಜಕಾರಣದರಲ್ಲಿ ತಮ್ಮ ಸರಳತೆ, ನಡೆ ನುಡಿಯಿಂದ ಗಮನ ಸೆಳೆದವರು.
(6 / 7)
ಆಡಳಿತ, ಅಧಿಕಾರ ಎಂದರೆ ಅದು ಅನುಭವಿಸುದಲ್ಲ. ಜನರ ಬದುಕಿನ ಸುಧಾರಣೆಗೆ ಬಳಕೆಯಾಗಬೇಕು ಎಂದು ನಂಬಿಕೆ ಹೊಂದಿ ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕೃಷ್ಣಬೈರೇಗೌಡ.
ಇತರ ಗ್ಯಾಲರಿಗಳು