Basava Jayanti 2025: ಕರ್ನಾಟಕದ ಸಂವೇದನಾ ಶೀಲ ಸಚಿವ ಕೃಷ್ಣಬೈರೇಗೌಡರಿಗೆ ಗದಗದಲ್ಲಿ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Basava Jayanti 2025: ಕರ್ನಾಟಕದ ಸಂವೇದನಾ ಶೀಲ ಸಚಿವ ಕೃಷ್ಣಬೈರೇಗೌಡರಿಗೆ ಗದಗದಲ್ಲಿ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ

Basava Jayanti 2025: ಕರ್ನಾಟಕದ ಸಂವೇದನಾ ಶೀಲ ಸಚಿವ ಕೃಷ್ಣಬೈರೇಗೌಡರಿಗೆ ಗದಗದಲ್ಲಿ ಮಾನವತಾವಾದಿ ಬಸವೇಶ್ವರ ಪ್ರಶಸ್ತಿ ಪ್ರದಾನ

ಕರ್ನಾಟಕದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲದಿಂದ ರಾಜಕೀಯ ವಲಯದಲ್ಲಿರುವ ಕೃಷ್ಣಬೈರೇಗೌಡ ಅವರು ಸಚಿವ, ಶಾಸಕರಾಗಿ ಗಮನ ಸೆಳೆದವರು. ಇವರ ಬೆನ್ನಿಗೆ ನಿಂತವರು ಪತ್ನಿ ಮೀನಾಕ್ಷಿ. ಈ ದಂಪತಿಗೆ ಗದಗದಲ್ಲಿ ಬಸವ ಜಯಂತಿ ಅಂಗವಾಗಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜಗಜ್ಯೋತಿ ಬಸವ ಜಯಂತಿ ಪ್ರಯುಕ್ತ  ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಈ ಬಾರಿಯ “ಮಾನವತಾವಾದಿ ಬಸವೇಶ್ವರ ಪ್ರಶಸ್ತಿ”ಯನ್ನು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಅವರ ಧರ್ಮ ಪತ್ನಿಯಾದ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರಿಗೆ ಗದಗದಲ್ಲಿ ಮಂಗಳವಾರ (ಏಪ್ರಿಲ್ 29) ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.
icon

(1 / 7)

ಜಗಜ್ಯೋತಿ ಬಸವ ಜಯಂತಿ ಪ್ರಯುಕ್ತ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ವತಿಯಿಂದ ಈ ಬಾರಿಯ “ಮಾನವತಾವಾದಿ ಬಸವೇಶ್ವರ ಪ್ರಶಸ್ತಿ”ಯನ್ನು ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಹಾಗೂ ಅವರ ಧರ್ಮ ಪತ್ನಿಯಾದ ಮೀನಾಕ್ಷಿ ಕೃಷ್ಣ ಬೈರೇಗೌಡ ಅವರಿಗೆ ಗದಗದಲ್ಲಿ ಮಂಗಳವಾರ (ಏಪ್ರಿಲ್ 29) ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.

ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮಸ್ವಾಮೀಜಿ,  ಸಚಿವರಾದ ಎಚ್‌ಕೆ ಪಾಟೀಲ್‌, ಮಾಜಿ ಸಚಿವ ಎಸ್‌ಎಸ್‌ ಪಾಟೀಲ್‌, ಡಿ.ಆರ್.ಪಾಟೀಲ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
icon

(2 / 7)

ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮಸ್ವಾಮೀಜಿ, ಸಚಿವರಾದ ಎಚ್‌ಕೆ ಪಾಟೀಲ್‌, ಮಾಜಿ ಸಚಿವ ಎಸ್‌ಎಸ್‌ ಪಾಟೀಲ್‌, ಡಿ.ಆರ್.ಪಾಟೀಲ ಅವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಸವಜಯಂತಿ ಅಂಗವಾಗಿ  ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನವು ವಿಶ್ವ ಮಾನವತಾವಾದಿ ಬಸವಣ್ಣ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಕೃಷ್ಣಬೈರೇಗೌಡ ಹಾಗೂ ಮೀನಾಕ್ಷಿ ದಂಪತಿಯನ್ನು ಆಯ್ಕೆ ಮಾಡಲಾಗಿದೆ.
icon

(3 / 7)

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಸವಜಯಂತಿ ಅಂಗವಾಗಿ ಲಕ್ಷ್ಮೇಶ್ವರದ ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನವು ವಿಶ್ವ ಮಾನವತಾವಾದಿ ಬಸವಣ್ಣ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಕೃಷ್ಣಬೈರೇಗೌಡ ಹಾಗೂ ಮೀನಾಕ್ಷಿ ದಂಪತಿಯನ್ನು ಆಯ್ಕೆ ಮಾಡಲಾಗಿದೆ.

ಕೃಷ್ಣಬೈರೇಗೌಡ ಅವರು ಅವರ ತಂದೆ ಬೈರೇಗೌಡ ಅವರು ತೀರಿಕೊಂಡ ನಂತರ ಕೋಲಾರದ ವೇಮಗಲ್‌ನಿಂದ ಶಾಸಕರಾಗಿ ನಂತರ ಬೆಂಗಳೂರಿನ ಬ್ಯಾಟರಾಯನಪುರ ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ.
icon

(4 / 7)

ಕೃಷ್ಣಬೈರೇಗೌಡ ಅವರು ಅವರ ತಂದೆ ಬೈರೇಗೌಡ ಅವರು ತೀರಿಕೊಂಡ ನಂತರ ಕೋಲಾರದ ವೇಮಗಲ್‌ನಿಂದ ಶಾಸಕರಾಗಿ ನಂತರ ಬೆಂಗಳೂರಿನ ಬ್ಯಾಟರಾಯನಪುರ ಶಾಸಕರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ.

ಕೃಷಿ, ಗ್ರಾಮೀಣಾಭಿವೃದ್ದಿ ನಂತರ ಈಗ ಕಂದಾಯ ಸಚಿವರಾಗಿ ವಿಭಿನ್ನ ಹಾಗೂ ಜನಮುಖಿಯಾಗಿ ಕೆಲಸ ಮಾಡುತ್ತಾ ರಾಜಕಾರಣದರಲ್ಲಿ ತಮ್ಮ ಸರಳತೆ, ನಡೆ ನುಡಿಯಿಂದ ಗಮನ ಸೆಳೆದವರು.
icon

(5 / 7)

ಕೃಷಿ, ಗ್ರಾಮೀಣಾಭಿವೃದ್ದಿ ನಂತರ ಈಗ ಕಂದಾಯ ಸಚಿವರಾಗಿ ವಿಭಿನ್ನ ಹಾಗೂ ಜನಮುಖಿಯಾಗಿ ಕೆಲಸ ಮಾಡುತ್ತಾ ರಾಜಕಾರಣದರಲ್ಲಿ ತಮ್ಮ ಸರಳತೆ, ನಡೆ ನುಡಿಯಿಂದ ಗಮನ ಸೆಳೆದವರು.

ಆಡಳಿತ, ಅಧಿಕಾರ ಎಂದರೆ ಅದು ಅನುಭವಿಸುದಲ್ಲ. ಜನರ ಬದುಕಿನ ಸುಧಾರಣೆಗೆ ಬಳಕೆಯಾಗಬೇಕು ಎಂದು ನಂಬಿಕೆ ಹೊಂದಿ ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕೃಷ್ಣಬೈರೇಗೌಡ.
icon

(6 / 7)

ಆಡಳಿತ, ಅಧಿಕಾರ ಎಂದರೆ ಅದು ಅನುಭವಿಸುದಲ್ಲ. ಜನರ ಬದುಕಿನ ಸುಧಾರಣೆಗೆ ಬಳಕೆಯಾಗಬೇಕು ಎಂದು ನಂಬಿಕೆ ಹೊಂದಿ ಅದೇ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕೃಷ್ಣಬೈರೇಗೌಡ.

ಕೃಷ್ಣಬೈರೇಗೌಡರನ್ನು ಪ್ರೇಮಿಸಿ ವಿವಾಹವಾದ ಮೀನಾಕ್ಷಿ ಅವರು ಪತಿಯ ಸಾರ್ವಜನಿಕ ಬದುಕಿನ;ಲ್ಲಿ ಜತೆಯಾಗಿ ತಾವು ಸಮಾಜಮುಖಿ ಚಟುವಟಿಕೆಯಿಂದ ಗಮನ ಸೆಳೆದಿದ್ದಾರೆ. ಪತಿಯೊಂದಿಗೆ ಅವರೂ ಪ್ರಶಸ್ತಿಯನ್ನು ಈ ಬಾರಿ ಸ್ವೀಕರಿಸಿದ್ದಾರೆ.
icon

(7 / 7)

ಕೃಷ್ಣಬೈರೇಗೌಡರನ್ನು ಪ್ರೇಮಿಸಿ ವಿವಾಹವಾದ ಮೀನಾಕ್ಷಿ ಅವರು ಪತಿಯ ಸಾರ್ವಜನಿಕ ಬದುಕಿನ;ಲ್ಲಿ ಜತೆಯಾಗಿ ತಾವು ಸಮಾಜಮುಖಿ ಚಟುವಟಿಕೆಯಿಂದ ಗಮನ ಸೆಳೆದಿದ್ದಾರೆ. ಪತಿಯೊಂದಿಗೆ ಅವರೂ ಪ್ರಶಸ್ತಿಯನ್ನು ಈ ಬಾರಿ ಸ್ವೀಕರಿಸಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು