Savadatti Jatre 2025: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾರತ್‌ ಹುಣ್ಣಿಮೆ ಸಡಗರ, ಎಲ್ಲೆಲ್ಲೂ ಭಂಡಾರ, ಚಕ್ಕಡಿಗಳಲ್ಲಿ ಬಂದ ಕುಟುಂಬಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Savadatti Jatre 2025: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾರತ್‌ ಹುಣ್ಣಿಮೆ ಸಡಗರ, ಎಲ್ಲೆಲ್ಲೂ ಭಂಡಾರ, ಚಕ್ಕಡಿಗಳಲ್ಲಿ ಬಂದ ಕುಟುಂಬಗಳು

Savadatti Jatre 2025: ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಾರತ್‌ ಹುಣ್ಣಿಮೆ ಸಡಗರ, ಎಲ್ಲೆಲ್ಲೂ ಭಂಡಾರ, ಚಕ್ಕಡಿಗಳಲ್ಲಿ ಬಂದ ಕುಟುಂಬಗಳು

Savadatti Jatre 2025: ಸವದತ್ತಿಯಲ್ಲಿ ಹುಣ್ಣಿಮೆ ವೇಳೆ ವಿಶೇಷ ಪೂಜೆಗಳು ಇರುತ್ತವೆ. ಅದರಲ್ಲೂ ಭಾರತ್‌ ಹುಣ್ಣಿಮೆಗೆ ಜಾತ್ರೆಯ ಸಡಗರ. ಬರೋಬ್ಬರಿ ಹತ್ತು ಲಕ್ಷ ಭಕ್ತರು ಈ ಬಾರಿ ಭಾರತ್‌ ಹುಣ್ಣಿಮೆ ಜಾತ್ರೆಗೆ ಬಂದಿದ್ದರು. ಅದರ ವೈಭವದ ನೋಟ ಇಲ್ಲಿದೆ.

ಭಾರತ್‌ ಹುಣ್ಣಿಮೆ  ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
icon

(1 / 8)

ಭಾರತ್‌ ಹುಣ್ಣಿಮೆ  ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಸವದತ್ತಿಯ ರೇಣುಕಾ ಎಲ್ಲಮ್ಮ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಬಂಡಿಗಳ ಜಾತ್ರೆ, ಭಂಡಾರದ ಜಾತ್ರೆ ಎಂದೇ ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿನ ಭಾರತ ಹುಣ್ಣಿಮೆಯ ಜಾತ್ರೆ ಬಳೆಗಳ ಜಾತ್ರೆ ಎಂದೂ ಹೆಸರುವಾಸಿ.
icon

(2 / 8)

ಬಂಡಿಗಳ ಜಾತ್ರೆ, ಭಂಡಾರದ ಜಾತ್ರೆ ಎಂದೇ ಪ್ರಸಿದ್ಧವಾದ ಸವದತ್ತಿ ಯಲ್ಲಮ್ಮದೇವಿ ಸನ್ನಿಧಿಯಲ್ಲಿನ ಭಾರತ ಹುಣ್ಣಿಮೆಯ ಜಾತ್ರೆ ಬಳೆಗಳ ಜಾತ್ರೆ ಎಂದೂ ಹೆಸರುವಾಸಿ.

ಭಕ್ತರು ತಮ್ಮ ಊರುಗಳಿಂದ ಸವದತ್ತಿಗೆ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಕುಟುಂಬದೊಂದಿಗೆ ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.
icon

(3 / 8)

ಭಕ್ತರು ತಮ್ಮ ಊರುಗಳಿಂದ ಸವದತ್ತಿಗೆ ಎತ್ತಿನ ಬಂಡಿಯನ್ನು ಕಟ್ಟಿಕೊಂಡು ಕುಟುಂಬದೊಂದಿಗೆ ಬಂದು ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.

ಯಲ್ಲಮ್ಮನಗುಡ್ಡದಲ್ಲಿ ಬುಧವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ  ಪ್ರವಾಹೋಪಾದಿಯಲ್ಲಿ ಭಕ್ತರ ದಂಡು ಹರಿದುಬಂದು ದೇವಿಯ ದರ್ಶನ ಪಡೆದುಕೊಂಡಿದ್ದು ಕಂಡು ಬಂದಿತು.
icon

(4 / 8)

ಯಲ್ಲಮ್ಮನಗುಡ್ಡದಲ್ಲಿ ಬುಧವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ  ಪ್ರವಾಹೋಪಾದಿಯಲ್ಲಿ ಭಕ್ತರ ದಂಡು ಹರಿದುಬಂದು ದೇವಿಯ ದರ್ಶನ ಪಡೆದುಕೊಂಡಿದ್ದು ಕಂಡು ಬಂದಿತು.

ಮಲಪ್ರಭೆ ಮಡಿಲು, ಬೆಟ್ಟದಲ್ಲಿ ಭಕ್ತಿಯ ಹೊಳೆಯೇ ಹರಿದು,ಭಕ್ತರು ಯಲ್ಲಮ್ಮ ತಾಯಿಗೆ ಭಕ್ತಿಭಾವ ಸಲ್ಲಿಸಿದರು,
icon

(5 / 8)

ಮಲಪ್ರಭೆ ಮಡಿಲು, ಬೆಟ್ಟದಲ್ಲಿ ಭಕ್ತಿಯ ಹೊಳೆಯೇ ಹರಿದು,ಭಕ್ತರು ಯಲ್ಲಮ್ಮ ತಾಯಿಗೆ ಭಕ್ತಿಭಾವ ಸಲ್ಲಿಸಿದರು,

ಭಾರತ್‌ ಹುಣ್ಣಿಮೆ ಹಿನ್ನೆಲೆಯಲ್ಲಿ ಸವದತ್ತಿ ಗುಡ್ಡದಲ್ಲಿ ಅಲಂಕಾರವೂ ಜೋರಾಗಿತ್ತು.
icon

(6 / 8)

ಭಾರತ್‌ ಹುಣ್ಣಿಮೆ ಹಿನ್ನೆಲೆಯಲ್ಲಿ ಸವದತ್ತಿ ಗುಡ್ಡದಲ್ಲಿ ಅಲಂಕಾರವೂ ಜೋರಾಗಿತ್ತು.

ಸವದತ್ತಿಯ ಶ್ರೀ ರೇಣುಕಾ  ಯಲ್ಲಮ್ಮಾ ದೇವಸ್ಥಾನದಲ್ಲಿ ಜರುಗಿದ ಭಾರತ ಹುಣ್ಣಿಮೆ ಜಾತ್ರೆಯ ಪ್ರಯುಕ್ತವಾಗಿ ಭಂಡಾರದ ಸಡಗರವೂ ಜೋರಾಗಿತ್ತು. ಭಕ್ತರು ಪರಸ್ಪರ ಭಂಡಾರ ಎರಚಿದರು.
icon

(7 / 8)

ಸವದತ್ತಿಯ ಶ್ರೀ ರೇಣುಕಾ  ಯಲ್ಲಮ್ಮಾ ದೇವಸ್ಥಾನದಲ್ಲಿ ಜರುಗಿದ ಭಾರತ ಹುಣ್ಣಿಮೆ ಜಾತ್ರೆಯ ಪ್ರಯುಕ್ತವಾಗಿ ಭಂಡಾರದ ಸಡಗರವೂ ಜೋರಾಗಿತ್ತು. ಭಕ್ತರು ಪರಸ್ಪರ ಭಂಡಾರ ಎರಚಿದರು.

ಸವದತ್ತಿ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಆಗಮಿಸುವ ಭಕ್ತರು ವಿಶೇಷವಾಗಿ ಪಡ್ಡಲಗಿ ಅಥವಾ ಹಡ್ಡಗಲಿ ತುಂಬಿಸುವ ಸಂಪ್ರದಾಯ ನೆರವೇರಿಸುತ್ತಾರೆ.
icon

(8 / 8)

ಸವದತ್ತಿ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಆಗಮಿಸುವ ಭಕ್ತರು ವಿಶೇಷವಾಗಿ ಪಡ್ಡಲಗಿ ಅಥವಾ ಹಡ್ಡಗಲಿ ತುಂಬಿಸುವ ಸಂಪ್ರದಾಯ ನೆರವೇರಿಸುತ್ತಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು