ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಧನು ರಾಶಿಯಿಂದ ಮೀನ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಧನು ರಾಶಿಯಿಂದ ಮೀನ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು

ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಧನು ರಾಶಿಯಿಂದ ಮೀನ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು

ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.

ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.
icon

(1 / 7)

ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.

ಶ್ರೀ ವಿಷ್ಣುಸಹಸ್ರನಾಮ ಪಠಣೆಯಿಂದ ಜನ್ಮ ಲಗ್ನ ಅಥವ ಜನ್ಮ ರಾಶಿಗಳಿಗ ಪ್ರತ್ಯೇಕವಾದ ಫಲಿತಾಂಶಗಳು ದೊರೆಯುತ್ತವೆ. ಅದರ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಸಂಪತ್ತಾರೆ, ಕ್ಷೇಮತಾರೆ, ಮಿತ್ರತಾರೆ ಅಥವ ಪರಮಮಿತ್ರತಾರೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣೆಯನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ಶೀ ವಿಷ್ಣುವಿನ ಜೊತೆಯಲ್ಲಿ ಶ್ರೀಮಹಾಲಕ್ಷ್ಮಿಯ ಕೃಪೆಯೂ ದೊರೆತು ಹಣಕಾಸಿನ ಸ್ಥಿತಿಯಲ್ಲಿ ಪಗತಿ ಕಂಡುಬರುತ್ತದೆ.
icon

(2 / 7)

ಶ್ರೀ ವಿಷ್ಣುಸಹಸ್ರನಾಮ ಪಠಣೆಯಿಂದ ಜನ್ಮ ಲಗ್ನ ಅಥವ ಜನ್ಮ ರಾಶಿಗಳಿಗ ಪ್ರತ್ಯೇಕವಾದ ಫಲಿತಾಂಶಗಳು ದೊರೆಯುತ್ತವೆ. ಅದರ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಸಂಪತ್ತಾರೆ, ಕ್ಷೇಮತಾರೆ, ಮಿತ್ರತಾರೆ ಅಥವ ಪರಮಮಿತ್ರತಾರೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣೆಯನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ಶೀ ವಿಷ್ಣುವಿನ ಜೊತೆಯಲ್ಲಿ ಶ್ರೀಮಹಾಲಕ್ಷ್ಮಿಯ ಕೃಪೆಯೂ ದೊರೆತು ಹಣಕಾಸಿನ ಸ್ಥಿತಿಯಲ್ಲಿ ಪಗತಿ ಕಂಡುಬರುತ್ತದೆ.
(Pixabay)

ಧನಸ್ಸು: ಕುಟುಂಬದಲ್ಲಿನ ಸ್ತ್ರೀಯರಲ್ಲಿ ಒಮ್ಮತ ಮೂಡುತ್ತದೆ. ಬಂಧು ಬಳಗದವರಿಗೆ ಸಹಾಯ ಮಾಡುವ ಮನಸ್ಥಿತಿ ಉಂಟಾಗುತ್ತದೆ. ಸ್ವಂತ ವಾಹನ ಕೊಳ್ಳಲು ಸಾಧ್ಯವಾಗುತ್ತದೆ. ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಉನ್ನತಮಟ್ಟದ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಮೆಚ್ಚುಗೆ ದೊರೆಯುತ್ತದೆ. ದಂಪತಿಗಳ ನಡುವೆ ಇದ್ದ ಬೇಸರ ದೂರವಾಗುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಚರ್ಮದ ದೋಷವಿದ್ದಲ್ಲಿ ಗುಣ ಹೊಂದುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಇದ್ದ ಲೋಪ ದೋಷಗಳು ಮರೆಯಾಗುತ್ತದೆ. ಸ್ತ್ರೀಯರಿಗೆ ತವರು ಮನೆಯವರೊಂದಿಗೆ ಇದ್ದ ಭಿನ್ನಾಭಿಪ್ರಾಯವು ಕೊನೆಯಾಗುತ್ತದೆ. ಮನಸ್ಸಿಗೆ ಒಪ್ಪುವಂತಹ ಕೆಲಸ ಕಾರ್ಯಗಳು ಅಥವಾ ಉದ್ಯೋಗವು ದೊರೆಯುತ್ತದೆ. ಧೃಡವಾದ ಮನಸ್ಥಿತಿ ಲಭ್ಯವಾಗುತ್ತದೆ.
icon

(3 / 7)

ಧನಸ್ಸು: ಕುಟುಂಬದಲ್ಲಿನ ಸ್ತ್ರೀಯರಲ್ಲಿ ಒಮ್ಮತ ಮೂಡುತ್ತದೆ. ಬಂಧು ಬಳಗದವರಿಗೆ ಸಹಾಯ ಮಾಡುವ ಮನಸ್ಥಿತಿ ಉಂಟಾಗುತ್ತದೆ. ಸ್ವಂತ ವಾಹನ ಕೊಳ್ಳಲು ಸಾಧ್ಯವಾಗುತ್ತದೆ. ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿಯೂ ಉನ್ನತಮಟ್ಟದ ಕೀರ್ತಿ ಪ್ರತಿಷ್ಠೆ ದೊರೆಯುತ್ತದೆ. ಉದ್ಯೋಗದಲ್ಲಿ ಹಿರಿಯ ಅಧಿಕಾರಿಗಳ ಸಹಕಾರ ಮೆಚ್ಚುಗೆ ದೊರೆಯುತ್ತದೆ. ದಂಪತಿಗಳ ನಡುವೆ ಇದ್ದ ಬೇಸರ ದೂರವಾಗುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಚರ್ಮದ ದೋಷವಿದ್ದಲ್ಲಿ ಗುಣ ಹೊಂದುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಇದ್ದ ಲೋಪ ದೋಷಗಳು ಮರೆಯಾಗುತ್ತದೆ. ಸ್ತ್ರೀಯರಿಗೆ ತವರು ಮನೆಯವರೊಂದಿಗೆ ಇದ್ದ ಭಿನ್ನಾಭಿಪ್ರಾಯವು ಕೊನೆಯಾಗುತ್ತದೆ. ಮನಸ್ಸಿಗೆ ಒಪ್ಪುವಂತಹ ಕೆಲಸ ಕಾರ್ಯಗಳು ಅಥವಾ ಉದ್ಯೋಗವು ದೊರೆಯುತ್ತದೆ. ಧೃಡವಾದ ಮನಸ್ಥಿತಿ ಲಭ್ಯವಾಗುತ್ತದೆ.

ಮಕರ: ನಿತ್ಯ ಜೀವನದಲ್ಲಿ ಅನಿರೀಕ್ಷಿತವಾದ ಶುಭಫಲಗಳು ದೊರೆಯುತ್ತವೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುತ್ತದೆ. ಮಾತಿನ ಮೇಲೆ ಹತೋಟಿ ಸಾಧಿಸಿ ಎಲ್ಲರ ಮನಸ್ಸನ್ನು ಗೆಲ್ಲುವಂತಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ.  ಆತುರ ತೊರೆದು  ಎದುರಾಗುವ ಸಂದರ್ಭಕ್ಕೆ ಹೊಂದಿಕೊಂಡು ನಡೆಯುವ ಸಾಮರ್ಥ್ಯ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ದೊರೆಯುತ್ತದೆ. ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಂಡವರಿಗೆ ಉನ್ನತ ಸ್ಥಾನ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗ ಉಂಟಾಗುತ್ತದೆ. ನರಕ್ಕೆ ಸಂಬಂಧಿಸಿದ ತೊಂದರೆ ಇದ್ದವರಿಗೆ ಉತ್ತಮ ಆರೋಗ್ಯ ಲಭಿತ್ತದೆ.
icon

(4 / 7)

ಮಕರ: ನಿತ್ಯ ಜೀವನದಲ್ಲಿ ಅನಿರೀಕ್ಷಿತವಾದ ಶುಭಫಲಗಳು ದೊರೆಯುತ್ತವೆ. ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುತ್ತದೆ. ಮಾತಿನ ಮೇಲೆ ಹತೋಟಿ ಸಾಧಿಸಿ ಎಲ್ಲರ ಮನಸ್ಸನ್ನು ಗೆಲ್ಲುವಂತಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆತುರ ತೊರೆದು ಎದುರಾಗುವ ಸಂದರ್ಭಕ್ಕೆ ಹೊಂದಿಕೊಂಡು ನಡೆಯುವ ಸಾಮರ್ಥ್ಯ ದೊರೆಯುತ್ತದೆ. ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ದೊರೆಯುತ್ತದೆ. ಬರವಣಿಗೆಯನ್ನು ವೃತ್ತಿಯನ್ನಾಗಿಸಿಕೊಂಡವರಿಗೆ ಉನ್ನತ ಸ್ಥಾನ ದೊರೆಯುತ್ತದೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ನಷ್ಟವಿರುವುದಿಲ್ಲ. ಅವಿವಾಹಿತರಿಗೆ ವಿವಾಹ ಯೋಗ ಉಂಟಾಗುತ್ತದೆ. ನರಕ್ಕೆ ಸಂಬಂಧಿಸಿದ ತೊಂದರೆ ಇದ್ದವರಿಗೆ ಉತ್ತಮ ಆರೋಗ್ಯ ಲಭಿತ್ತದೆ.

ಕುಂಭ: ಮನೆಯಲ್ಲಿರುವ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಗಳು ಕಂಡುಬರುತ್ತವೆ. ಆದಾಯದಲ್ಲಿ ತೊಂದರೆ ಇರುವುದಿಲ್ಲ. ಕಷ್ಟವೆನಿಸಿದರು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಆತಂಕದ ಮನಸ್ಥಿತಿಯಿಂದ ಹೊರ ಬರುತ್ತಾರೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ನಿಯಂತ್ರಣಕ್ಕೆ ಸಿಲುಕುತ್ತವೆ. ಆರೋಗ್ಯದಲ್ಲಿ ಇದ್ದ ತೊಂದರೆಯೂ ದೂರವಾಗುತ್ತದೆ. ದೀರ್ಘಕಾಲದಿಂದ ಕಾಡುತ್ತಿರುವ ಅನಾರೋಗ್ಯವು ತಹಬದಿಗೆ ಬರುತ್ತದೆ. ಅತಿ ಮುಖ್ಯವಾದ ವಿಚಾರಗಳನ್ನು ರಹಸ್ಯವಾಗಿ ಇಡಲು ಸಾಧ್ಯವಾಗುತ್ತದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ಸು ದೊರೆಯುತ್ತದೆ. ಜನಪ್ರಿಯತೆಯ ಹಿಂದೆ ಹೋಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಅತಿಯಾದ ಆಸೆ ಇರುವುದಿಲ್ಲ. ಬೇರೆಯವರಿಗೆ ಮಾದರಿಯಾಗಬಲ್ಲ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.
icon

(5 / 7)

ಕುಂಭ: ಮನೆಯಲ್ಲಿರುವ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಬೆಳವಣಿಗೆಗಳು ಕಂಡುಬರುತ್ತವೆ. ಆದಾಯದಲ್ಲಿ ತೊಂದರೆ ಇರುವುದಿಲ್ಲ. ಕಷ್ಟವೆನಿಸಿದರು ಹಣವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಆತಂಕದ ಮನಸ್ಥಿತಿಯಿಂದ ಹೊರ ಬರುತ್ತಾರೆ. ಅನಾವಶ್ಯಕವಾದ ಖರ್ಚು ವೆಚ್ಚಗಳು ನಿಯಂತ್ರಣಕ್ಕೆ ಸಿಲುಕುತ್ತವೆ. ಆರೋಗ್ಯದಲ್ಲಿ ಇದ್ದ ತೊಂದರೆಯೂ ದೂರವಾಗುತ್ತದೆ. ದೀರ್ಘಕಾಲದಿಂದ ಕಾಡುತ್ತಿರುವ ಅನಾರೋಗ್ಯವು ತಹಬದಿಗೆ ಬರುತ್ತದೆ. ಅತಿ ಮುಖ್ಯವಾದ ವಿಚಾರಗಳನ್ನು ರಹಸ್ಯವಾಗಿ ಇಡಲು ಸಾಧ್ಯವಾಗುತ್ತದೆ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ಸು ದೊರೆಯುತ್ತದೆ. ಜನಪ್ರಿಯತೆಯ ಹಿಂದೆ ಹೋಗುವುದಿಲ್ಲ. ಹಣಕಾಸಿನ ವಿಚಾರದಲ್ಲಿ ಅತಿಯಾದ ಆಸೆ ಇರುವುದಿಲ್ಲ. ಬೇರೆಯವರಿಗೆ ಮಾದರಿಯಾಗಬಲ್ಲ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ.

ಮೀನ: ಮನೆತನದ ಹಿರಿಯರ ಜೊತೆಯಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಮನೆತನದ ಆಸ್ತಿಯ ವಿಚಾರದಲ್ಲಿನ ವಿವಾದವು ದೂರವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಇರುತ್ತದೆ. ರಾಜಕೀಯ ರಂಗದಲ್ಲಿ ವಿಶೇಷ ಗೌರವ ಲಭಿಸುತ್ತದೆ. ಐಷಾರಾಮಿ ವಾಹನ ಕೊಳ್ಳಲು ಸಾಧ್ಯವಾಗುತ್ತದೆ. ದಂಪತಿಗಳ ನಡುವೆ ಪ್ರೀತಿ ವಿಶ್ವಾಸ ಹೆಚ್ಚಲಿದೆ. ಕುಟುಂಬದಲ್ಲಿನ ಆಂತರಿಕ ಜಗಳಗಳು ಕೊನೆಗೊಳ್ಳುತ್ತವೆ. ವಿವಾಹದಲ್ಲಿನ ತೊಂದರೆಗಳು ದೂರವಾಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಲು ಸಾಧ್ಯವಾಗುತ್ತದೆ. ಕನಸಾಗಿಯೇ ಉಳಿದಿದ್ದ ದೀರ್ಘ ಪ್ರವಾಸದ ಆಸೆಯು ನನಸಾಗುತ್ತದೆ.
icon

(6 / 7)

ಮೀನ: ಮನೆತನದ ಹಿರಿಯರ ಜೊತೆಯಲ್ಲಿ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಕುಟುಂಬದ ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಮನೆತನದ ಆಸ್ತಿಯ ವಿಚಾರದಲ್ಲಿನ ವಿವಾದವು ದೂರವಾಗುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನ ದೊರೆಯುವ ಸಾಧ್ಯತೆ ಇರುತ್ತದೆ. ರಾಜಕೀಯ ರಂಗದಲ್ಲಿ ವಿಶೇಷ ಗೌರವ ಲಭಿಸುತ್ತದೆ. ಐಷಾರಾಮಿ ವಾಹನ ಕೊಳ್ಳಲು ಸಾಧ್ಯವಾಗುತ್ತದೆ. ದಂಪತಿಗಳ ನಡುವೆ ಪ್ರೀತಿ ವಿಶ್ವಾಸ ಹೆಚ್ಚಲಿದೆ. ಕುಟುಂಬದಲ್ಲಿನ ಆಂತರಿಕ ಜಗಳಗಳು ಕೊನೆಗೊಳ್ಳುತ್ತವೆ. ವಿವಾಹದಲ್ಲಿನ ತೊಂದರೆಗಳು ದೂರವಾಗುತ್ತದೆ. ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಇದ್ದ ಸಮಸ್ಯೆಗಳು ದೂರವಾಗುತ್ತವೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಲು ಸಾಧ್ಯವಾಗುತ್ತದೆ. ಕನಸಾಗಿಯೇ ಉಳಿದಿದ್ದ ದೀರ್ಘ ಪ್ರವಾಸದ ಆಸೆಯು ನನಸಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು