ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಮೇಷದಿಂದ ಕಟಕ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಮೇಷದಿಂದ ಕಟಕ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು

ವಿಷ್ಣುಸಹಸ್ರನಾಮ ಪಠಣೆಯಿಂದ ದೊರೆಯುವ ಫಲಗಳು: ಮೇಷದಿಂದ ಕಟಕ ರಾಶಿಯವರೆಗಿನ ಜನರಿಗೆ ಸಿಗುವ ಪ್ರಯೋಜನಗಳು

ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ.

ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.
icon

(1 / 7)

ಯಾವುದೇ ದೇವರಿಗೆ ಸಂಬಂಧಿಸಿದ ಶ್ಲೋಕಗಳು ಅಥವ ಮಂತ್ರಗಳನ್ನು ಪಠಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ವಿಷ್ಣುಸಹಸ್ರನಾಮದಿಂದಲೂ ಅನೇಕ ಪ್ರಯೋಜನಗಳು ದೊರೆಯುತ್ತವೆ. ಯಾವುದೇ ಮಂತ್ರವನ್ನು ಪಠಿಸುವಾಗ ಅವಶ್ಯಕವಾಗಿ ಅದರಲ್ಲಿರುವ ಭೀಜಾಕ್ಷರಗಳನ್ನು ಉಚ್ಚರಿಸಬೇಕು. ಆರಂಭದಲ್ಲಿಯೇ ಸಂಕಲ್ಪವನ್ನು ಮಾಡಬೇಕು. ಇದರ ಫಲಗಳು ದೊರೆಯಬೇಕೆಂದಲ್ಲಿ ಫಲಶೃತಿಯ ಭಾಗವನ್ನು ಪಠಿಸಲೇಬೇಕಾಗುತ್ತದೆ. ಪಠಿಸಲು ಸಾಧ್ಯವಾಗದ ವೇಳೆ ಯಾವುದೇ ಮಾಧ್ಯಮದ ಮೂಲಕ ಕೇಳುವುದು ಸಹ ಫಲದಾಯಕವಾಗಿದೆ. ಪ್ರತಿದಿನವೂ ವಿಷ್ಣು ಸಹಸ್ರನಾಮವನ್ನು ಪಠಿಸಿದಲ್ಲಿ ಘೋರ ತಪಸ್ಸಿನಿಂದ ದೊರೆವ ಫಲಕ್ಕೆ ಸರಿಸಮಾನವಾದ ಶುಭಫಲಗಳು ದೊರೆಯುತ್ತವೆ. ಹೆಸರೆ ಸೂಚಿಸುವಂತೆ ಇದರಲ್ಲಿ ಭಗವಾನ್ ವಿಷ್ಣುವಿನ ಒಂದು ಸಾವಿರ ನಾಮಗಳು ಅಡಗಿವೆ. ಸಕಲ ರೋಗಗಳು ನಿವಾರಣೆ ಆಗುತ್ತವೆ. ಚರಕಸೃತಿಯಲ್ಲಿ ಇದರ ಬಗ್ಗೆ ವರ್ಣನೆ ಇದೆ. ಪತಿಯೊಂದು ಗ್ರಹಗಳಿಗೂ ಪ್ರತ್ಯೇಕವಾದ ದೇವತೆಗಳಿದ್ದಾರೆ. ಈ ಕಾರಣದಿಂದಾಗಿ ಪ್ರತಿಯೊಂದು ಗ್ರಹಗಳು ತನ್ನದೇ ಆದ ಫಲಗಳನ್ನು ನೀಡುತ್ತವೆ. ಇದೇ ರೀತಿ ಪ್ರತಿಯೊಂದು ದೇವತೆಗಳೂ ತನ್ನನ್ನು ಪೂಜಿಸಿದವರಿಗೆ ವಿಭಿನ್ನರೀತಿಯ ಫಲಗಳನ್ನು ನೀಡುತ್ತಾರೆ. ಇದಕ್ಕೆ ಕಾರಣ ಜನ್ಮಕುಂಡಲಿಯೂ ಕಾರಣವಾಗುತ್ತದೆ. ಆದರೆ ಯಾವುದೇ ಮಂತ್ರದ ಪಠಣೆಯ ನಂತರ ಸಂಬಂಧಿತ ದೇವತೆಗಳ ಪೂಜೆಯನ್ನು ಮಾಡಬೇಕಾಗುತ್ತದೆ.

ಶ್ರೀ ವಿಷ್ಣುಸಹಸ್ರನಾಮ ಪಠಣೆಯಿಂದ ಜನ್ಮ ಲಗ್ನ ಅಥವ ಜನ್ಮ ರಾಶಿಗಳಿಗ ಪ್ರತ್ಯೇಕವಾದ ಫಲಿತಾಂಶಗಳು ದೊರೆಯುತ್ತವೆ. ಅದರ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಸಂಪತ್ತಾರೆ, ಕ್ಷೇಮತಾರೆ, ಮಿತ್ರತಾರೆ ಅಥವ ಪರಮಮಿತ್ರತಾರೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣೆಯನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ಶೀ ವಿಷ್ಣುವಿನ ಜೊತೆಯಲ್ಲಿ ಶ್ರೀಮಹಾಲಕ್ಷ್ಮಿಯ ಕೃಪೆಯೂ ದೊರೆತು ಹಣಕಾಸಿನ ಸ್ಥಿತಿಯಲ್ಲಿ ಪಗತಿ ಕಂಡುಬರುತ್ತದೆ.
icon

(2 / 7)

ಶ್ರೀ ವಿಷ್ಣುಸಹಸ್ರನಾಮ ಪಠಣೆಯಿಂದ ಜನ್ಮ ಲಗ್ನ ಅಥವ ಜನ್ಮ ರಾಶಿಗಳಿಗ ಪ್ರತ್ಯೇಕವಾದ ಫಲಿತಾಂಶಗಳು ದೊರೆಯುತ್ತವೆ. ಅದರ ಸಂಕ್ಷಿಪ್ತ ವಿವರವನ್ನು ಇಲ್ಲಿ ನೀಡಲು ಪ್ರಯತ್ನಿಸಿದ್ದೇನೆ. ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ಸಂಪತ್ತಾರೆ, ಕ್ಷೇಮತಾರೆ, ಮಿತ್ರತಾರೆ ಅಥವ ಪರಮಮಿತ್ರತಾರೆಗಳಲ್ಲಿ ಶ್ರೀ ವಿಷ್ಣು ಸಹಸ್ರನಾಮ ಪಠಣೆಯನ್ನು ಆರಂಭಿಸುವುದು ಒಳ್ಳೆಯದು. ಇದರಿಂದ ಶೀ ವಿಷ್ಣುವಿನ ಜೊತೆಯಲ್ಲಿ ಶ್ರೀಮಹಾಲಕ್ಷ್ಮಿಯ ಕೃಪೆಯೂ ದೊರೆತು ಹಣಕಾಸಿನ ಸ್ಥಿತಿಯಲ್ಲಿ ಪಗತಿ ಕಂಡುಬರುತ್ತದೆ.
(Photo Credit: hindubhagwan.com/)

ಮೇಷ: ಸೋದರ ಮತ್ತು ಸೋದರಿಯರ ಜೊತೆಯಲ್ಲಿ ಉತ್ತಮ ಅನುಬಂಧ ಉಂಟಾಗುತ್ತದೆ. ಉತ್ತಮ ಸಂತಾನ ಲಭಿಸುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಉಂಟಾಗುತ್ತವೆ. ಧೈರ್ಯದ ಮನೋಭಾವನೆ ಇರುತ್ತದೆ. ಸತತ ಪ್ರಯತ್ನದಿಂದ ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ವಿದ್ಯಾರ್ಥಿಗಳು ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವಿವಾದಗಳಿಂದ ದೂರ ಉಳಿಯಬಹುದು. ಚರ್ಮದ ದೋಷವಿದ್ದಲ್ಲಿ ಗುಣವಾಗುತ್ತದೆ. ಸಂಬಂಧಿಕರ ಜೊತೆಯಲ್ಲಿ ಅನ್ಯೋನ್ಯತೆ ಬೆಳೆಯುವ ಸಾಧ್ಯತೆಗಳಿರುತ್ತವೆ. ಆತುರದ ಬುದ್ಧಿಯು ಕಡಿಮೆಯಾಗುತ್ತದೆ. ಅತಿಯಾದ ಕೋಪದಿಂದ ಹೊರಬಂದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಬೆರೆಯಬಹುದು. ಕಷ್ಟ ನಷ್ಟದ ಸನ್ನಿವೇಶದಲ್ಲಿ ವಿರೋಧಿಗಳು ಸಹ ಸ್ನೇಹಿತರಂತೆ ಸಹಾಯಕ್ಕೆ ಬಉತ್ತಾರೆ. ಹೊಂದಾಣಿಕೆಯ ಗುಣದಿಂದ ಬಾಳಲು ಸಾಧ್ಯವಾಗುತ್ತದೆ.
icon

(3 / 7)

ಮೇಷ: ಸೋದರ ಮತ್ತು ಸೋದರಿಯರ ಜೊತೆಯಲ್ಲಿ ಉತ್ತಮ ಅನುಬಂಧ ಉಂಟಾಗುತ್ತದೆ. ಉತ್ತಮ ಸಂತಾನ ಲಭಿಸುತ್ತದೆ. ಹಣಕಾಸಿನ ಕೊರತೆ ಇರುವುದಿಲ್ಲ. ಮನಸ್ಸಿನಲ್ಲಿ ಒಳ್ಳೆಯ ಭಾವನೆಗಳು ಉಂಟಾಗುತ್ತವೆ. ಧೈರ್ಯದ ಮನೋಭಾವನೆ ಇರುತ್ತದೆ. ಸತತ ಪ್ರಯತ್ನದಿಂದ ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ಹಿರಿಯ ಅಧಿಕಾರಿಗಳ ಪ್ರಶಂಸೆ ಲಭಿಸುತ್ತದೆ. ವಿದ್ಯಾರ್ಥಿಗಳು ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಕಲಿಕೆಯಲ್ಲಿ ಮುಂದುವರೆಯುತ್ತಾರೆ. ವಿವಾದಗಳಿಂದ ದೂರ ಉಳಿಯಬಹುದು. ಚರ್ಮದ ದೋಷವಿದ್ದಲ್ಲಿ ಗುಣವಾಗುತ್ತದೆ. ಸಂಬಂಧಿಕರ ಜೊತೆಯಲ್ಲಿ ಅನ್ಯೋನ್ಯತೆ ಬೆಳೆಯುವ ಸಾಧ್ಯತೆಗಳಿರುತ್ತವೆ. ಆತುರದ ಬುದ್ಧಿಯು ಕಡಿಮೆಯಾಗುತ್ತದೆ. ಅತಿಯಾದ ಕೋಪದಿಂದ ಹೊರಬಂದು ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಬೆರೆಯಬಹುದು. ಕಷ್ಟ ನಷ್ಟದ ಸನ್ನಿವೇಶದಲ್ಲಿ ವಿರೋಧಿಗಳು ಸಹ ಸ್ನೇಹಿತರಂತೆ ಸಹಾಯಕ್ಕೆ ಬಉತ್ತಾರೆ. ಹೊಂದಾಣಿಕೆಯ ಗುಣದಿಂದ ಬಾಳಲು ಸಾಧ್ಯವಾಗುತ್ತದೆ.

ವೃಷಭ: ಮಕ್ಕಳು ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ. ಎಲ್ಲರ ಮನಸಿಗೂ ಸಂತೋಷವೆನಿಸುವಂತೆ ಮಾತನಾಡುವ ಕಲೆ ಪಡೆಯುತ್ತಾರೆ. ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಆಸಕ್ತಿ ಇರುತ್ತದೆ. ಮನಸ್ಸಿನ ಆಶೋತ್ತರದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆತ್ಮೀಯರಿಗೆ ಸಹಾಯ ಮಾಡುವ ಗುಣವಿರುತ್ತದೆ. ಅನೇಕ ವಿಚಾರಗಳಲ್ಲಿ ಉತ್ತಮ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸು ದೊರೆಯುತ್ತದೆ. ಮಾತನಾಡಲು ತೊಂದರೆಯಿದ್ದಲ್ಲಿ ಪರಿಹಾರವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ಸವ ಜ್ಞಾನ ದೊರೆಯುತ್ತದೆ. ಸೋದರ ಮಾವನಿಗೆ ಇದ್ದ ತೊಂದರೆಯು ದೂರವಾಗುತ್ತದೆ. ತಂದೆ ತಾಯಿಗಳ ಜೊತೆಯಲ್ಲಿ ಇದ್ದ ಭಿನ್ನಾಭಿಪ್ರಾಯವು ಮರೆಯಾಗಿ ಪ್ರೀತಿ ವಿಶ್ವಾಸವು ಮೂಡುತ್ತದೆ. ಎಲ್ಲರ ಮನಸ್ಸನ್ನು ಸೆಳೆಯುವಂತೆ ಉತ್ತಮ ಮಾತುಗಾರಿಕೆ ಗಳಿಸಲು ಸಾಧ್ಯವಾಗುತ್ತದೆ.
icon

(4 / 7)

ವೃಷಭ: ಮಕ್ಕಳು ಸುಖ ಸಂತೋಷದಿಂದ ಜೀವನ ನಡೆಸುತ್ತಾರೆ. ಎಲ್ಲರ ಮನಸಿಗೂ ಸಂತೋಷವೆನಿಸುವಂತೆ ಮಾತನಾಡುವ ಕಲೆ ಪಡೆಯುತ್ತಾರೆ. ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಆಸಕ್ತಿ ಇರುತ್ತದೆ. ಮನಸ್ಸಿನ ಆಶೋತ್ತರದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಆತ್ಮೀಯರಿಗೆ ಸಹಾಯ ಮಾಡುವ ಗುಣವಿರುತ್ತದೆ. ಅನೇಕ ವಿಚಾರಗಳಲ್ಲಿ ಉತ್ತಮ ಜ್ಞಾನ ಸಂಪಾದಿಸಲು ಸಾಧ್ಯವಾಗುತ್ತದೆ. ಆರಂಭಿಸಿದ ಕೆಲಸ ಕಾರ್ಯಗಳು ಯಶಸ್ಸು ದೊರೆಯುತ್ತದೆ. ಮಾತನಾಡಲು ತೊಂದರೆಯಿದ್ದಲ್ಲಿ ಪರಿಹಾರವಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಉತ್ಸವ ಜ್ಞಾನ ದೊರೆಯುತ್ತದೆ. ಸೋದರ ಮಾವನಿಗೆ ಇದ್ದ ತೊಂದರೆಯು ದೂರವಾಗುತ್ತದೆ. ತಂದೆ ತಾಯಿಗಳ ಜೊತೆಯಲ್ಲಿ ಇದ್ದ ಭಿನ್ನಾಭಿಪ್ರಾಯವು ಮರೆಯಾಗಿ ಪ್ರೀತಿ ವಿಶ್ವಾಸವು ಮೂಡುತ್ತದೆ. ಎಲ್ಲರ ಮನಸ್ಸನ್ನು ಸೆಳೆಯುವಂತೆ ಉತ್ತಮ ಮಾತುಗಾರಿಕೆ ಗಳಿಸಲು ಸಾಧ್ಯವಾಗುತ್ತದೆ.

ಮಿಥುನ:ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ವಿವಾಹದ ವೇಳೆ ಉಂಟಾಗಬಹುದಾದ ವಿವಾದಗಳು ದೂರವಾಗುತ್ತದೆ. ದೇಶ ವಿದೇಶಗಳಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ. ಮಂತ್ರ ತಂತ್ರಗಳಲ್ಲಿ ಆಸಕ್ತಿ ಮೂಡುತ್ತದೆ. ಬೇರೆಯವರ ಮನಸ್ಸಿಗೆ ಬೇಸರವಾಗದಂತೆ ಮಾತನಾಡುತ್ತಾರೆ. ಬೇರೆಯವರು ಮಾಡುವ ತಪ್ಪನ್ನು ಮನ್ನಿಸುವ ಬುದ್ಧಿ ಇರುತ್ತದೆ. ದೀರ್ಘ ಕಾಲದ ಪ್ರವಾಸಗಳಿಗೆ ತೆರಳಲು ಸಾಧ್ಯವಾಗುತ್ತದೆ. ವಿವಿಧ ರೀತಿಯ ವಿದ್ಯೆಯು ಲಭಿಸುತ್ತದೆ. ಕಣ್ಣಿಗೆ ಸಂಬಂಧಪಟ್ಟಂತಹ ದೋಷಗಳಿದ್ದರೆ ದೂರವಾಗುತ್ತದೆ. ಸೋದರ ನಡುವಿನ ಮನಸ್ತಾಪಕ್ಕೆ ಪರಿಹಾರ ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ಸ್ವಂತ ವಾಹನ ರುತ್ತದೆ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ವಾದದಲ್ಲಿ ಎಲ್ಲರ ಜೊತೆ ಗೆಲುವು ದೊರೆಯುತ್ತದೆ.
icon

(5 / 7)

ಮಿಥುನ:ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ. ವಿವಾಹದ ವೇಳೆ ಉಂಟಾಗಬಹುದಾದ ವಿವಾದಗಳು ದೂರವಾಗುತ್ತದೆ. ದೇಶ ವಿದೇಶಗಳಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗುತ್ತದೆ. ಮಂತ್ರ ತಂತ್ರಗಳಲ್ಲಿ ಆಸಕ್ತಿ ಮೂಡುತ್ತದೆ. ಬೇರೆಯವರ ಮನಸ್ಸಿಗೆ ಬೇಸರವಾಗದಂತೆ ಮಾತನಾಡುತ್ತಾರೆ. ಬೇರೆಯವರು ಮಾಡುವ ತಪ್ಪನ್ನು ಮನ್ನಿಸುವ ಬುದ್ಧಿ ಇರುತ್ತದೆ. ದೀರ್ಘ ಕಾಲದ ಪ್ರವಾಸಗಳಿಗೆ ತೆರಳಲು ಸಾಧ್ಯವಾಗುತ್ತದೆ. ವಿವಿಧ ರೀತಿಯ ವಿದ್ಯೆಯು ಲಭಿಸುತ್ತದೆ. ಕಣ್ಣಿಗೆ ಸಂಬಂಧಪಟ್ಟಂತಹ ದೋಷಗಳಿದ್ದರೆ ದೂರವಾಗುತ್ತದೆ. ಸೋದರ ನಡುವಿನ ಮನಸ್ತಾಪಕ್ಕೆ ಪರಿಹಾರ ದೊರೆಯುತ್ತದೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ಲಭಿಸುತ್ತದೆ. ಸ್ವಂತ ವಾಹನ ರುತ್ತದೆ. ಹಣಕಾಸಿನ ತೊಂದರೆ ಕಂಡು ಬರುವುದಿಲ್ಲ. ವಾದದಲ್ಲಿ ಎಲ್ಲರ ಜೊತೆ ಗೆಲುವು ದೊರೆಯುತ್ತದೆ.

ಕಟಕ: ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವುದು  ಕಡಿಮೆಯಾಗುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಧೈರ್ಯ ಸಾಹಸದ ಗುಣವೂ ಬೆಳೆಯುತ್ತದೆ. ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಬೇರೆಯವರ ಮನಸ್ಸನ್ನು ಅರಿತು ಮಾತನಾಡುವ ಸಾಮರ್ಥ್ಯ ದೊರೆಯುತ್ತದೆ. ಸೋದರ ಅಥವಾ ಸೋದರಿಯರ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಕಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಉತ್ತಮ ಒಡನಾಟ ಮೂಡುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಲಾಗುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಲು ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಹಠದ ಸ್ವಭಾವವನ್ನು ರೂಡಿಸಿಕೊಂಡು ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಯು ಹೆಚ್ಚಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ಮೂಡುತ್ತದೆ.
icon

(6 / 7)

ಕಟಕ: ಆತುರದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ. ಆತ್ಮವಿಶ್ವಾಸವು ಹೆಚ್ಚುತ್ತದೆ. ಧೈರ್ಯ ಸಾಹಸದ ಗುಣವೂ ಬೆಳೆಯುತ್ತದೆ. ಮನಸ್ಸಿನ ಮೇಲೆ ಹತೋಟಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಬೇರೆಯವರ ಮನಸ್ಸನ್ನು ಅರಿತು ಮಾತನಾಡುವ ಸಾಮರ್ಥ್ಯ ದೊರೆಯುತ್ತದೆ. ಸೋದರ ಅಥವಾ ಸೋದರಿಯರ ಆರೋಗ್ಯದಲ್ಲಿ ಚೇತರಿಕೆ ಇರುತ್ತದೆ. ಕಿರಿಯ ಸೋದರ ಅಥವಾ ಸೋದರಿಯ ಜೊತೆಯಲ್ಲಿ ಉತ್ತಮ ಒಡನಾಟ ಮೂಡುತ್ತದೆ. ಕಷ್ಟಪಟ್ಟು ದುಡಿದ ಹಣವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಲಾಗುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳಿಗೆ ಬದ್ಧರಾಗಲು ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ಹಠದ ಸ್ವಭಾವವನ್ನು ರೂಡಿಸಿಕೊಂಡು ವಿದ್ಯಾಭ್ಯಾಸದಲ್ಲಿ ಮುಂದುವರೆಯುತ್ತಾರೆ. ಸಮಾಜದಲ್ಲಿ ಗೌರವ ಪ್ರತಿಷ್ಠೆಯು ಹೆಚ್ಚಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಎಚ್ಚರಿಕೆ ಮೂಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in

ಇತರ ಗ್ಯಾಲರಿಗಳು