MahaKumbh 2025: ಮೌನಿ ಅಮವಾಸ್ಯೆಯಂದೇ ಕಾಲ್ತುಳಿತಕ್ಕೆ ಸಾವು-ನೋವು, ಭೀಕರ ಪರಿಸ್ಥಿತಿ ತೆರೆದಿಡುತ್ತಿವೆ ಈ ಚಿತ್ರಗಳು
- ಪ್ರಯಾಗ್ ರಾಜ್ನ ಮಹಾ ಕುಂಭಮೇಳದಲ್ಲಿ ಬುಧವಾರ ಮುಂಜಾನೆ 2.30 ರ ಸುಮಾರಿಗೆ ಭಾರಿ ಜನಸಂದಣಿ ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ. 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
- ಪ್ರಯಾಗ್ ರಾಜ್ನ ಮಹಾ ಕುಂಭಮೇಳದಲ್ಲಿ ಬುಧವಾರ ಮುಂಜಾನೆ 2.30 ರ ಸುಮಾರಿಗೆ ಭಾರಿ ಜನಸಂದಣಿ ಜಮಾಯಿಸಿದ್ದರಿಂದ ಕಾಲ್ತುಳಿತ ಸಂಭವಿಸಿದೆ. 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.
(1 / 11)
ಪ್ರಯಾಗ್ ರಾಜ್ನ ಮಹಾ ಕುಂಭ ಮೇಳದಲ್ಲಿ ಮೌನಿ ಅಮವಾಸ್ಯೆ ಕಾರಣ ಪವಿತ್ರ ಸ್ನಾನಕ್ಕಾಗಿ ಸಂಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಕಾರಣ ಕಾಲ್ತುಳಿತ ಸಂಭವಿಸಿ 15 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜನಸಂದಣಿ ನಿರ್ವಹಿಸಲು ಭದ್ರತಾ ಸಿಬ್ಬಂದಿಗೆ ಅಧಿಕಾರಿಯೊಬ್ಬರು ಸೂಚನೆ ನೀಡಿದ ಸಂದರ್ಭ ಇದು.
(HT Photo/Deepak Gupta)(3 / 11)
'ಅಮೃತ ಸ್ನಾನ'ದಲ್ಲಿ ಭಾಗವಹಿಸಲು ತ್ರಿವೇಣಿ ಸಂಗಮದಲ್ಲಿ ಜನರು ಸಿಲುಕಿಕೊಂಡಿದ್ದ ಸಂದರ್ಭ ಇದು.
(HT Photo/Deepak Gupta)(5 / 11)
ಕಾಲ್ತುಳಿತದ ನಂತರ ಜನರ ಲಗೇಜ್ ಮತ್ತು ಚಪ್ಪಲಿಗಳು ಚೆಲ್ಲಾಪಿಲ್ಲಿಯಾದ ಕ್ಷಣ. ಮತ್ತು ಜನರು ಆತಂಕಗೊಂಡಿದ್ದು ಕಂಡು ಬಂದ ಕ್ಷಣ.
(HT Photo/Deepak Gupta)(6 / 11)
ಕಾಲ್ತುಳಿತ ಸಂಭವಿಸಿದ ನಂತರ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಿದ್ದ ಕ್ಷಣ.
(HT Photo/Deepak Gupta)(7 / 11)
ಜನವರಿ 29ರ ಬುಧವಾರ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಕಾಲ್ತುಳಿತದ ನಂತರ ಶ್ರೀ ಪಂಚಾಯತ್ ಅಖಾರಾ ಮಹಾನಿರ್ವಾಣಿಯ ಸಾಧುಗಳು 'ಮೌನಿ ಅಮಾವಾಸ್ಯೆ ಅಮೃತ ಸ್ನಾನ' ಮಾಡದೆ ಮರಳಿದ ಕ್ಷಣ.
(PTI Photo)(8 / 11)
(9 / 11)
ಮಹಾ ಕುಂಭ ಮೇಳದ ಸಮಯದಲ್ಲಿ ‘ಮೌನಿ ಅಮಾವಾಸ್ಯೆ’ಯಂದು ಕಾಲ್ತುಳಿತದ ನಂತರ ಸಾಧುಗಳು ಅಮೃತ ಸ್ನಾನ (ಪವಿತ್ರ ಸ್ನಾನ) ಮಾಡದೆ ಮರಳಿದ ಕ್ಷಣ,
(PTI)ಇತರ ಗ್ಯಾಲರಿಗಳು