ಇವಳೇನಾ ಅಮೃತಧಾರೆ ಮಲ್ಲಿ? ಲಾಯರ್‌ ಭಾರ್ಗವಿಯಾಗಿ ರಾಧಾ ಭಗವತಿ ಬೊಂಬಾಟ್‌ ನಟನೆಗೆ ಸೀರಿಯಲ್‌ ವೀಕ್ಷಕರು ಬಹುಪರಾಕ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇವಳೇನಾ ಅಮೃತಧಾರೆ ಮಲ್ಲಿ? ಲಾಯರ್‌ ಭಾರ್ಗವಿಯಾಗಿ ರಾಧಾ ಭಗವತಿ ಬೊಂಬಾಟ್‌ ನಟನೆಗೆ ಸೀರಿಯಲ್‌ ವೀಕ್ಷಕರು ಬಹುಪರಾಕ್‌

ಇವಳೇನಾ ಅಮೃತಧಾರೆ ಮಲ್ಲಿ? ಲಾಯರ್‌ ಭಾರ್ಗವಿಯಾಗಿ ರಾಧಾ ಭಗವತಿ ಬೊಂಬಾಟ್‌ ನಟನೆಗೆ ಸೀರಿಯಲ್‌ ವೀಕ್ಷಕರು ಬಹುಪರಾಕ್‌

ಅಮೃತಧಾರೆ ಧಾರಾವಾಹಿಯಲ್ಲಿ ಅಕ್ಕೋರೆ ಅಕ್ಕೋರೆ ಎನ್ನುತ್ತಾ ಭೂಮಿಕಾ ಹಿಂದೆಯೇ ಸಾಗುತ್ತಿದ್ದ ಮಲ್ಲಿಯ ಹೊಸ ಅವತಾರಕ್ಕೆ ಕಿರುತೆರೆ‌ ಪ್ರೇಕ್ಷಕರು ಖುಷಿಗೊಂಡಿದ್ದಾರೆ. ಕಲರ್ಸ್‌ ಕನ್ನಡದ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿ ಮೂಲಕ ನಟಿ ರಾಧಾ ಭಗವತಿ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದ್ದಾರೆ.

ಕನ್ನಡ ನಟಿ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಕಿರುತೆರೆ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಲಾಯರ್‌ ಪಾತ್ರದಲ್ಲಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಎದುರಾಳಿಗಳ ವಿರುದ್ಧ ಖಡಕ್‌ ಡೈಲಾಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.
icon

(1 / 10)

ಕನ್ನಡ ನಟಿ ರಾಧಾ ಭಗವತಿ ನಟನೆಯ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ ಕಿರುತೆರೆ ವೀಕ್ಷಕರ ಮೆಚ್ಚುಗೆ ಪಡೆಯುತ್ತಿದೆ. ಲಾಯರ್‌ ಪಾತ್ರದಲ್ಲಿ ರಾಧಾ ಭಗವತಿ ಮಿಂಚುತ್ತಿದ್ದಾರೆ. ಎದುರಾಳಿಗಳ ವಿರುದ್ಧ ಖಡಕ್‌ ಡೈಲಾಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಭಾರ್ಗವಿ ಅವತಾರದಲ್ಲಿ "ಇವಳೇನಾ ಅಮೃತಧಾರೆ ಮಲ್ಲಿ" ಎಂದು ಅಚ್ಚರಿ ತರುವಂತೆ ರಾಧಾ ಭಗವತಿ ನಟಿಸುತ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಇವರ ಆವೇಶದ ನಟನೆಗೆ ಸೀರಿಯಲ್‌ ವೀಕ್ಷಕರು ಫುಲ್‌ ಮಾರ್ಕ್‌ ನೀಡಿದ್ದಾರೆ.
icon

(2 / 10)

ಭಾರ್ಗವಿ ಅವತಾರದಲ್ಲಿ "ಇವಳೇನಾ ಅಮೃತಧಾರೆ ಮಲ್ಲಿ" ಎಂದು ಅಚ್ಚರಿ ತರುವಂತೆ ರಾಧಾ ಭಗವತಿ ನಟಿಸುತ್ತಿದ್ದಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಇವರ ಆವೇಶದ ನಟನೆಗೆ ಸೀರಿಯಲ್‌ ವೀಕ್ಷಕರು ಫುಲ್‌ ಮಾರ್ಕ್‌ ನೀಡಿದ್ದಾರೆ.

ಈಕೆಯ ನಟನೆಗೆ "ಸೂಪರ್‌ ಭಾರ್ಗವಿ" ಎಂದೆಲ್ಲ ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಅಮೃತಧಾರೆಯಲ್ಲಿ ಈಕೆಯ ಅಳುವಿಗೆ, ನೋವಿಗೆ ಜನರು "ಮಲ್ಲಿ ಮಲ್ಲಿ ಮಿಂಚುಳ್ಳಿ" ಎಂದು ಕಾಮೆಂಟ್‌ ಮಾಡುತ್ತಿದ್ದರು. ಇದೀಗ ಸೀರಿಯಲ್‌ ನಾಯಕಿ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.
icon

(3 / 10)

ಈಕೆಯ ನಟನೆಗೆ "ಸೂಪರ್‌ ಭಾರ್ಗವಿ" ಎಂದೆಲ್ಲ ಜನರು ಕಾಮೆಂಟ್‌ ಮಾಡುತ್ತಿದ್ದಾರೆ. ಅಮೃತಧಾರೆಯಲ್ಲಿ ಈಕೆಯ ಅಳುವಿಗೆ, ನೋವಿಗೆ ಜನರು "ಮಲ್ಲಿ ಮಲ್ಲಿ ಮಿಂಚುಳ್ಳಿ" ಎಂದು ಕಾಮೆಂಟ್‌ ಮಾಡುತ್ತಿದ್ದರು. ಇದೀಗ ಸೀರಿಯಲ್‌ ನಾಯಕಿ ಪಾತ್ರಕ್ಕೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಇತ್ತೀಚೆಗೆ ರಾಧಾ ಭಾಗವತಿ ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ರಾಧಾ ಭಗವತಿ ಅವರು ಭಾರ್ಗವಿ ಎಲ್‌ಎಲ್‌ಬಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು.
icon

(4 / 10)

ಇತ್ತೀಚೆಗೆ ರಾಧಾ ಭಾಗವತಿ ಅಪಾಯವಿದೆ ಎಚ್ಚರಿಕೆ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಇದೇ ಸಮಯದಲ್ಲಿ ರಾಧಾ ಭಗವತಿ ಅವರು ಭಾರ್ಗವಿ ಎಲ್‌ಎಲ್‌ಬಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುವ ಅವಕಾಶ ಪಡೆದರು.

ರಾಧಾ ಭಗವತಿ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು ಸಂಭವಿಸಿ ಜೈದೇವ್‌ನ ಪತ್ನಿಯಾಗಿ ದಿವಾನ್‌ ಕುಟುಂಬದ ಸೊಸೆಯಾಗಿದ್ದಳು. ಈಗ ಮಲ್ಲಿ ಪಾತ್ರವನ್ನು ಬೇರೆ ನಟಿ ನಿರ್ವಹಿಸುತ್ತಿದ್ದಾರೆ.
icon

(5 / 10)

ರಾಧಾ ಭಗವತಿ ರಾಮಾಚಾರಿ ಸೀರಿಯಲ್‌ನಲ್ಲಿ ನಾಯಕನ ತಂಗಿಯಾಗಿ ನಟಿಸಿದ್ದರು. ಅಮೃತಧಾರೆಯಲ್ಲಿ ಮನೆ ಕೆಲಸದಾಕೆಯಾಗಿದ್ದಳು. ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು ಸಂಭವಿಸಿ ಜೈದೇವ್‌ನ ಪತ್ನಿಯಾಗಿ ದಿವಾನ್‌ ಕುಟುಂಬದ ಸೊಸೆಯಾಗಿದ್ದಳು. ಈಗ ಮಲ್ಲಿ ಪಾತ್ರವನ್ನು ಬೇರೆ ನಟಿ ನಿರ್ವಹಿಸುತ್ತಿದ್ದಾರೆ.

ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
icon

(6 / 10)

ರಾಧಾ ಭಗವತಿ ಮೂಲತಃ ಬಿಜಾಪುರದವರು. ಇವರು ಸ್ಯಾಂಡಲ್‌ವುಡ್‌ ನಟಿಯೂ ಹೌದು. ಅಪಾಯವಿದೆ ಎಚ್ಚರಿಕೆ, ವಸಂತ ಕಾಲದ ಹೂಗಳು ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

 ಎಸ್‌ ನಾರಾಯಣ್‌ ನಿರ್ದೇಶನದ ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.
icon

(7 / 10)

ಎಸ್‌ ನಾರಾಯಣ್‌ ನಿರ್ದೇಶನದ ಒಂದ್ಸಲ ಮೀಟ್‌ ಮಾಡೋಣ ಸಿನಿಮಾದಲ್ಲಿ ನಾಯಕಿಯ ತಂಗಿಯಾಗಿ ನಟಿಸಿದ್ದಾರೆ.

ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್‌ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ.
icon

(8 / 10)

ಅಮೃತಧಾರೆಯಲ್ಲಿ ಮನೆಕೆಲಸದಾಕೆಯಾಗಿದ್ದ ಮಲ್ಲಿ ನಿಜಜೀವನದಲ್ಲಿ ಸ್ಯಾಂಡಲ್‌ವುಡ್‌ ನಟಿ ಮಾತ್ರವಲ್ಲ, ಇವರು ಕಂಠದಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಎರಡು ಸಿನಿಮಾಗಳಲ್ಲಿ ಇವರು ಹಾಡಿದ್ದಾರೆ. ಮದುಮಗಳು ಸೀರಿಯಲ್‌ನಲ್ಲಿ ನಾಯಕಿಯ ಪಾತ್ರಕ್ಕೆ ಇವರು ಧ್ವನಿಯಾಗಿದ್ದಾರೆ.

ರಾಧಾ ಭಗವತಿ ಕುಟುಂಬಕ್ಕೂ ಕಲೆಗೂ ನಂಟಿದೆ. ಇವರ ತಾತ ರಂಗಭೂಮಿ ಕಲಾವಿದರು. ಹರಿಕಥೆ ದಾಸರೂ ಆಗಿದ್ದರು. ಅಮ್ಮನೂ ಜಾನಪದ ಹಾಡುಗಾರ್ತಿ. ಇದೇ ಕಾರಣಕ್ಕೆ ರಾಧಾ ಭಗವತಿಗೂ ಕಲೆಗೂ ನಂಟಿದೆ.
icon

(9 / 10)

ರಾಧಾ ಭಗವತಿ ಕುಟುಂಬಕ್ಕೂ ಕಲೆಗೂ ನಂಟಿದೆ. ಇವರ ತಾತ ರಂಗಭೂಮಿ ಕಲಾವಿದರು. ಹರಿಕಥೆ ದಾಸರೂ ಆಗಿದ್ದರು. ಅಮ್ಮನೂ ಜಾನಪದ ಹಾಡುಗಾರ್ತಿ. ಇದೇ ಕಾರಣಕ್ಕೆ ರಾಧಾ ಭಗವತಿಗೂ ಕಲೆಗೂ ನಂಟಿದೆ.

ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಮಿಂಚುತ್ತಿದ್ದಾರೆ. "ನನ್ನ ಕಣ್ಮುಂದೆ ಇದ್ರೆ ಬೀಳ್ತನೇ ಇರುತ್ತದೆ. ಆಮೇಲೆ ಮದುಮಗ ವೀಲ್‌ಚೇರ್‌ನಲ್ಲಿ ಇರಬೇಕಾಗುತ್ತದೆ" ಎಂದೆಲ್ಲ ಖಡಕ್‌ ಡೈಲಾಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.
icon

(10 / 10)

ಈಗ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ಮಿಂಚುತ್ತಿದ್ದಾರೆ. "ನನ್ನ ಕಣ್ಮುಂದೆ ಇದ್ರೆ ಬೀಳ್ತನೇ ಇರುತ್ತದೆ. ಆಮೇಲೆ ಮದುಮಗ ವೀಲ್‌ಚೇರ್‌ನಲ್ಲಿ ಇರಬೇಕಾಗುತ್ತದೆ" ಎಂದೆಲ್ಲ ಖಡಕ್‌ ಡೈಲಾಗ್‌ ಮೂಲಕ ಗಮನ ಸೆಳೆಯುತ್ತಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು