ಕನಸಲ್ಲಿ ಕಂಡ ಮನೆಯನ್ನೇ ಸ್ಕೆಚ್‌ ಮಾಡಿಟ್ಟು, ಹಲವು ವರ್ಷಗಳ ಬಳಿಕ ಅಂಥದ್ದೇ ಮನೆ ಕಟ್ಟಿಸಿ ನನಸಾಗಿಸಿದ ಗಿಚ್ಚಿ ಗಿಲಿಗಿಲಿ ರಾಘವೇಂದ್ರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನಸಲ್ಲಿ ಕಂಡ ಮನೆಯನ್ನೇ ಸ್ಕೆಚ್‌ ಮಾಡಿಟ್ಟು, ಹಲವು ವರ್ಷಗಳ ಬಳಿಕ ಅಂಥದ್ದೇ ಮನೆ ಕಟ್ಟಿಸಿ ನನಸಾಗಿಸಿದ ಗಿಚ್ಚಿ ಗಿಲಿಗಿಲಿ ರಾಘವೇಂದ್ರ

ಕನಸಲ್ಲಿ ಕಂಡ ಮನೆಯನ್ನೇ ಸ್ಕೆಚ್‌ ಮಾಡಿಟ್ಟು, ಹಲವು ವರ್ಷಗಳ ಬಳಿಕ ಅಂಥದ್ದೇ ಮನೆ ಕಟ್ಟಿಸಿ ನನಸಾಗಿಸಿದ ಗಿಚ್ಚಿ ಗಿಲಿಗಿಲಿ ರಾಘವೇಂದ್ರ

ಗಿಚ್ಚಿ ಗಿಲಿ ಗಿಲಿ ಶೋ ಮೂಲಕ ರಾಗಿಣಿ ಎಂದೇ ಖ್ಯಾತಿ ಪಡೆದವರು ಹಾಸ್ಯನಟ ರಾಘವೇಂದ್ರ. ಮಿಡಲ್‌ ಕ್ಲಾಸ್‌ ಕುಟುಂಬದ ಈ ಕಲಾವಿದ, ದೂರದ ಬೆಂಗಳೂರಿಗೆ ಅವಕಾಶಗಳನ್ನು ಹುಡುಕಿ ಬಂದು, ಇದೀಗ ಕರುನಾಡಿನ ಮನೆ ಮನ ತಲುಪಿದ್ದಾರೆ. ಇಂತಿಪ್ಪ ರಾಘವೇಂದ್ರ ತಮ್ಮ ಬಾಲ್ಯದ ಕನಸಸೊಂದನ್ನು ನನಸು ಮಾಡಿಕೊಂಡಿದ್ದಾರೆ. ಹುಟ್ಟೂರಿನಲ್ಲಿ ಅತ್ಯಧ್ಬುತವಾದ ಮನೆ ಕಟ್ಟಿದ್ದಾರೆ.

ಗಿಚ್ಚಿ ಗಿಲಿ ಗಿಲಿ ರಾಘವೇಂದ್ರ ಅವರದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಇವರು, ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು. ಸದ್ಯ ಮಜಾ ಟಾಕೀಸ್‌ನಲ್ಲಿಯೂ ಹೆಣ್ಣು ವೇಷದಿಂದಲೇ ಮೋಡಿ ಮಾಡುತ್ತಿದ್ದಾರೆ. ಹೀಗಿರುವಾಗಲೇ 2023ರಲ್ಲಿಯೇ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ ರಾಘವೇಂದ್ರ. ಅಂದಿನ ಮನೆಯ ಗೃಹಪ್ರವೇಶ ಹೇಗಿತ್ತು ಎಂಬುದರ ವಿಡಿಯೋವನ್ನು ಇದೀಗ ಶೇರ್‌ ಮಾಡಿದ್ದಾರವರು.
icon

(1 / 14)

ಗಿಚ್ಚಿ ಗಿಲಿ ಗಿಲಿ ರಾಘವೇಂದ್ರ ಅವರದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿರುವ ಇವರು, ಎಲ್ಲರಿಗೂ ಹೆಣ್ಣುಮಗಳ ಅವತಾರದಲ್ಲಿಯೇ ಕಂಡಿದ್ದೇ ಹೆಚ್ಚು. ಸದ್ಯ ಮಜಾ ಟಾಕೀಸ್‌ನಲ್ಲಿಯೂ ಹೆಣ್ಣು ವೇಷದಿಂದಲೇ ಮೋಡಿ ಮಾಡುತ್ತಿದ್ದಾರೆ. ಹೀಗಿರುವಾಗಲೇ 2023ರಲ್ಲಿಯೇ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ ರಾಘವೇಂದ್ರ. ಅಂದಿನ ಮನೆಯ ಗೃಹಪ್ರವೇಶ ಹೇಗಿತ್ತು ಎಂಬುದರ ವಿಡಿಯೋವನ್ನು ಇದೀಗ ಶೇರ್‌ ಮಾಡಿದ್ದಾರವರು.

ಆ ಪಾತ್ರಗಳೇ ಅವರಿಗೆ ಇನ್ನೊಂದು ಹೊಸ ಇಮೇಜ್‌ ತಂದುಕೊಟ್ಟಿದ್ದು. ಕಲರ್ಸ್‌ ಕನ್ನಡದ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮುನ್ನೆಲೆಗೆ ಬಂದ ರಾಗಿಣಿ ಅಲಿಯಾಸ್ ರಾಘವೇಂದ್ರ‌, ತಮ್ಮ ಕಾಮಿಡಿ ಟೈಮಿಂಗ್ಸ್‌ನಿಂದಲೇ ಎಲ್ಲರ ಜನಮನ ಗೆದ್ದರು.
icon

(2 / 14)

ಆ ಪಾತ್ರಗಳೇ ಅವರಿಗೆ ಇನ್ನೊಂದು ಹೊಸ ಇಮೇಜ್‌ ತಂದುಕೊಟ್ಟಿದ್ದು. ಕಲರ್ಸ್‌ ಕನ್ನಡದ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಮುನ್ನೆಲೆಗೆ ಬಂದ ರಾಗಿಣಿ ಅಲಿಯಾಸ್ ರಾಘವೇಂದ್ರ‌, ತಮ್ಮ ಕಾಮಿಡಿ ಟೈಮಿಂಗ್ಸ್‌ನಿಂದಲೇ ಎಲ್ಲರ ಜನಮನ ಗೆದ್ದರು.

ಹೀಗಿರುವಾಗಲೇ ಬೆಂಗಳೂರಿನ ಚಿಕ್ಕ ಕೋಣೆಯಲ್ಲಿ ಬಾಡಿಗೆಗೆ ಇದ್ದುಕೊಂಡೇ, ದೊಡ್ಡ ಕನಸೊಂದನ್ನು ಕಂಡಿದ್ದರು. ಆ ಕನಸೀಗ ನನಸಾಗಿದೆ.
icon

(3 / 14)

ಹೀಗಿರುವಾಗಲೇ ಬೆಂಗಳೂರಿನ ಚಿಕ್ಕ ಕೋಣೆಯಲ್ಲಿ ಬಾಡಿಗೆಗೆ ಇದ್ದುಕೊಂಡೇ, ದೊಡ್ಡ ಕನಸೊಂದನ್ನು ಕಂಡಿದ್ದರು. ಆ ಕನಸೀಗ ನನಸಾಗಿದೆ.

ಅಂದರೆ, ಮಧ್ಯಮ ವರ್ಗದ ಕುಟುಂಬದ ದೊಡ್ಡ ಆಸೆ ಎಂದರೆ ತಮ್ಮದೇ ಆದ ಸ್ವಂತ ಸೂರು ಹೊಂದುವುದು. ಆ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ ರಾಘವೇಂದ್ರ.
icon

(4 / 14)

ಅಂದರೆ, ಮಧ್ಯಮ ವರ್ಗದ ಕುಟುಂಬದ ದೊಡ್ಡ ಆಸೆ ಎಂದರೆ ತಮ್ಮದೇ ಆದ ಸ್ವಂತ ಸೂರು ಹೊಂದುವುದು. ಆ ಕನಸನ್ನು ನನಸು ಮಾಡಿಕೊಂಡ ಖುಷಿಯಲ್ಲಿದ್ದಾರೆ ರಾಘವೇಂದ್ರ.

ಹುಟ್ಟೂರು ಶಿರವಾಳದಲ್ಲಿ ಭವ್ಯವಾದ ಮನೆ ನಿರ್ಮಿಸಿ, ಅದಕ್ಕೆ ರಾಯರ ನೆರಳು ಎಂಬ ಹೆಸರಿಟ್ಟಿದ್ದಾರೆ. ಮನೆ ಹೀಗೆಯೇ ಇರಬೇಕು ಎಂಬುದಕ್ಕೂ ಇಂಟ್ರೆಸ್ಟಿಂಗ್‌ ವಿಚಾರವೊಂದಿದೆ.
icon

(5 / 14)

ಹುಟ್ಟೂರು ಶಿರವಾಳದಲ್ಲಿ ಭವ್ಯವಾದ ಮನೆ ನಿರ್ಮಿಸಿ, ಅದಕ್ಕೆ ರಾಯರ ನೆರಳು ಎಂಬ ಹೆಸರಿಟ್ಟಿದ್ದಾರೆ. ಮನೆ ಹೀಗೆಯೇ ಇರಬೇಕು ಎಂಬುದಕ್ಕೂ ಇಂಟ್ರೆಸ್ಟಿಂಗ್‌ ವಿಚಾರವೊಂದಿದೆ.

ಕೆಲ ವರ್ಷಗಳ ಹಿಂದೆ ತಮ್ಮ ಹಳೇ ಮನೆಯಲ್ಲಿ ಮಲಗಿದ್ದಾಗ, ಭವ್ಯ ಮನೆಯ ಕನಸೊಂದು ರಾಘವೇಂದ್ರ ಅವರಿಗೆ ಬಿದ್ದಿತ್ತು. ಮರುದಿನವೇ ಕನಸಿನಲ್ಲಿ ಕಂಡ ಮನೆಯನ್ನು ಥರ್ಮಾಕೋಲ್‌ ಬಳಸಿ ಸ್ಕೆಚ್‌ ಮಾಡಿಟ್ಟಿದ್ದರು.
icon

(6 / 14)

ಕೆಲ ವರ್ಷಗಳ ಹಿಂದೆ ತಮ್ಮ ಹಳೇ ಮನೆಯಲ್ಲಿ ಮಲಗಿದ್ದಾಗ, ಭವ್ಯ ಮನೆಯ ಕನಸೊಂದು ರಾಘವೇಂದ್ರ ಅವರಿಗೆ ಬಿದ್ದಿತ್ತು. ಮರುದಿನವೇ ಕನಸಿನಲ್ಲಿ ಕಂಡ ಮನೆಯನ್ನು ಥರ್ಮಾಕೋಲ್‌ ಬಳಸಿ ಸ್ಕೆಚ್‌ ಮಾಡಿಟ್ಟಿದ್ದರು.

ಈಗ ಆ ಕನಸಿನಲ್ಲಿ ಕಂಡ ಮನೆಯನ್ನೇ ಹೋಲುವ ಭವ್ಯ ಬಂಗಲೆಯನ್ನೇ ನಿರ್ಮಿಸಿದ್ದಾರೆ ರಾಘವೇಂದ್ರ. ರಾಘವೇಂದ್ರ ಅವರ ಈ ಸಾಧನೆಗೆ ಅವರ ಆಪ್ತ ಕಲಾವಿದ ಬಳಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
icon

(7 / 14)

ಈಗ ಆ ಕನಸಿನಲ್ಲಿ ಕಂಡ ಮನೆಯನ್ನೇ ಹೋಲುವ ಭವ್ಯ ಬಂಗಲೆಯನ್ನೇ ನಿರ್ಮಿಸಿದ್ದಾರೆ ರಾಘವೇಂದ್ರ. ರಾಘವೇಂದ್ರ ಅವರ ಈ ಸಾಧನೆಗೆ ಅವರ ಆಪ್ತ ಕಲಾವಿದ ಬಳಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.

ರಾಘವೇಂದ್ರ ಅವರ ಅಪ್ಪ ರಾಮಕೃಷ್ಣ ಮತ್ತು ಅಮ್ಮ ಕವಿತಾ
icon

(8 / 14)

ರಾಘವೇಂದ್ರ ಅವರ ಅಪ್ಪ ರಾಮಕೃಷ್ಣ ಮತ್ತು ಅಮ್ಮ ಕವಿತಾ

ಮನೆಯ ಕಾಪೌಂಡ್‌ ಭಾಗದಲ್ಲಿ ಪುಣ್ಯಕೋಟಿ ಕಾನ್ಸೆಪ್ಟ್‌
icon

(9 / 14)

ಮನೆಯ ಕಾಪೌಂಡ್‌ ಭಾಗದಲ್ಲಿ ಪುಣ್ಯಕೋಟಿ ಕಾನ್ಸೆಪ್ಟ್‌

ರಾಯರ ಭಕ್ತರಾಗಿರುವ ರಾಘವೇಂದ್ರ, ತಮ್ಮ ಮನೆಗೆ ರಾಯರ ನೆರಳು ಎಂದು ಹೆಸರಿಟ್ಟಿದ್ದಾರೆ.
icon

(10 / 14)

ರಾಯರ ಭಕ್ತರಾಗಿರುವ ರಾಘವೇಂದ್ರ, ತಮ್ಮ ಮನೆಗೆ ರಾಯರ ನೆರಳು ಎಂದು ಹೆಸರಿಟ್ಟಿದ್ದಾರೆ.

ಗೃಹಪ್ರವೇಶದ ದಿನ ಮನೆಯಲ್ಲಿ ಶಿವನ ಪೂಜೆ
icon

(11 / 14)

ಗೃಹಪ್ರವೇಶದ ದಿನ ಮನೆಯಲ್ಲಿ ಶಿವನ ಪೂಜೆ

ಮನೆಯ ಮುಖ್ಯದ್ವಾರ
icon

(12 / 14)

ಮನೆಯ ಮುಖ್ಯದ್ವಾರ

ಒಂದೇ ಫ್ರೇಮ್‌ನಲ್ಲಿ ರಾಘವೇಂದ್ರ ಕುಟುಂಬ
icon

(13 / 14)

ಒಂದೇ ಫ್ರೇಮ್‌ನಲ್ಲಿ ರಾಘವೇಂದ್ರ ಕುಟುಂಬ

ಮನೆಯ ಮುಂಬಾಗಿಲಿನಲ್ಲಿ ಕಂಗೊಳಿಸಿದ ಹಸಿರು ತೋರಣ
icon

(14 / 14)

ಮನೆಯ ಮುಂಬಾಗಿಲಿನಲ್ಲಿ ಕಂಗೊಳಿಸಿದ ಹಸಿರು ತೋರಣ

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು