ಬೊಂಬೆ, ಬೊಂಬೆ ಎನ್ನುತ್ತ ಸಾಧು ಕೋಕಿಲರನ್ನು ವೇದಿಕೆಯಲ್ಲೇ ಎತ್ತಿದ ಜಿಲೇಬಿ ರಾಣಿ; ಮಜಾ ಟಾಕೀಸ್ ಮಹಾ ಸಂಚಿಕೆಯಲ್ಲಿ ಭರಪೂರ ಕಾಮಿಡಿ
ಕಲರ್ಸ್ ಕನ್ನಡದಲ್ಲಿ ಈ ವೀಕೆಂಡ್ಗೆ ಮಹಾ ಸಂಚಿಕೆಗಳ ಹಬ್ಬ ಪ್ರೇಕ್ಷಕರಿಗೆ ದೊರಕಲಿದೆ. ಇಂದು ಮಹಾ ಟಾಕೀಸ್ ಮಹಾ ಸಂಚಿಕೆ ಪ್ರಸಾರವಾಗಲಿದೆ. ಸೃಜನ್ ಲೋಕೇಶ್ ನಡೆಸಿಕೊಡುವ ಈ ಕಾಮಿಡಿ ಶೋಗೆ ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಆಗಮಿಸಿದ್ದಾರೆ.
(1 / 9)
ಮಜಾ ಟಾಕೀಸ್ ಈ ವಾರ ಮಹಾ ಸಂಚಿಕೆಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಲು ಸೃಜನ್ ಲೋಕೇಶ್ ತಂಡ ಸಜ್ಜಾಗಿದೆ. ಈ ಬಾರಿ ಕಾಮಿಡಿ ವೇದಿಕೆಗೆ ಹಾಸ್ಯ ನಟ ಸಾಧು ಕೋಕಿಲ ಆಗಮಿಸಿದ್ದಾರೆ. ಇವರನ್ನು ಜಿಲೇಬಿ ರಾಣಿ ಎಂಬಾಕೆ ವೇದಿಕೆಯ ಮೇಲೆಯೇ ಎರಡು ಕೈಗಳಿಂದ ಪ್ರೀತಿಯಿಂದ ಎತ್ತಿ ತಿರುಗಿಸಿದ್ದಾಳೆ.
(2 / 9)
ಬೊಂಬೆ ಬೊಂಬೆ ಬೊಂಬೆ.. ಬೊಂಬೆ ಬೊಂಬೆ ಬೊಂಬೆ.. ನಿನ್ನ ಮುದ್ದಾಡಬೇಕು ನರ ಗೊಂಬೆ.. ಬೊಂಬೆ ಬೊಂಬೆ ಬೊಂಬೆ.. ಬೊಂಬೆ ಬೊಂಬೆ ಬೊಂಬೆ.. ನಿನ್ನ ಮುದ್ದಾಡಬೇಕು ನರ ಗೊಂಬೆ.. ನಿನ್ನಾ ಚೆಂಡಾಡಬೇಕು ನರ ಗೊಂಬೆ.. ನಿನ್ನಾ ಕೊಂಡಾಡಬೇಕು ನರ ಗೊಂಬೆ.. ಜೊತೆ ಉಂಡಾಡಬೇಕು ನರ ಗೊಂಬೆ.. ಎಂಬ ಹಾಡಿಗೆ ಸಾಧು ಕೋಕಿಲರ ಜತೆ ಜಿಲೇಬಿ ರಾಣಿ ಡ್ಯಾನ್ಸ್ ಮಾಡಿದ್ದಾಳೆ.
(3 / 9)
ರವಿಚಂದ್ರನ್ ನಟನೆಯ ಅಣ್ಣಯ್ಯ ಸಿನಿಮಾದ ಈ ಹಾಡಿಗೆ ಜಿಲೇಬಿ ರಾಣಿ ತನ್ನದೇ ಶೈಲಿಯಲ್ಲಿ ಡ್ಯಾನ್ಸ್ ಮಾಡಿದ್ದಾಳೆ. "ಇದು ಗೊಂಬೆನಾ?" ಎಂದು ಈ ಸಮಯದಲ್ಲಿ ಸಾಧು ಕೋಕಿಲ ಕಾಮಿಡಿ ಮಾಡಿದ್ದಾರೆ.
(4 / 9)
ಈ ಹಾಡಿನ ನಡುವೆ ಜಿಲೇಬಿ ರಾಣಿ ನಟ ಸಾಧುಕೋಕಿಲ ಅವರನ್ನು ಸೊಂಟ ಮತ್ತು ಕಾಲು ಬಳಸಿ ಎರಡು ಕೈಗಳಿಂದ ಮೇಲಕ್ಕೆ ಎತ್ತಿದ್ದಾಳೆ.
(5 / 9)
ಅನಿರೀಕ್ಷಿತ ಈ ದೃಶ್ಯಕ್ಕೆ ಸಾಧು ಕೋಕಿಲ ಅವಕ್ಕಾಗಿದ್ದಾರೆ. ಎತ್ತಿ ಕೆಳಕ್ಕೆ ಹಾಕಬೇಡ ಎಂದು ತಮಾಷೆಗೆ ಹೇಳಿದ್ದಾರೆ.
(6 / 9)
ಎರಡು ಕೈಯಲ್ಲಿ ಸಾಧು ಕೋಕಿಲರನ್ನು ಎತ್ತಿ ಒಂದೆರಡು ರೌಂಡ್ ತಿರುಗಿಸಿದ್ದಾಳೆ. ಈ ಸಮಯದಲ್ಲಿ ಸೃಜನ್ ಲೋಕೇಶ್ ನೀನು ಯಾರು, ಯಾಕೆ ಬಂದೆ ಎಂದು ಕೇಳುತ್ತಾರೆ.
(7 / 9)
"ನಾನು ಯಾರ ಅಂಕಲ್, ನಾನು ಜಿಲೇಬಿ ರಾಣಿ" ಎಂದು ತನ್ನ ಪರಿಚಯ ಮಾಡಿಕೊಳ್ಳುತ್ತಾಳೆ. ಚಂದ್ರಪ್ರಭ ಜಿಲೇಬಿ ರಾಣಿ ವೇಷದಲ್ಲಿ ಬಳಿಕ ಒಂದು ಕವಿತೆ ವಾಚಿಸುತ್ತಾನೆ.
(8 / 9)
"ಡಬಲ್ ಮೀನಿಂಗ್ ಮಾಡ್ತಾಳೆ ಮಾಡ್ತಾಳೆ ಅಂತ ಎಲ್ರೂ ನನ್ನ ಬೈದ್ರು" "ನಾನು ಯಾರಿಗೂ ಹೇಳೇ ಇಲ್ಲ ನೀವೇ ನನ್ನ ಗುರು" "ನಿಮ್ಮ ಮನಸ್ಸಲ್ಲಿ ಇರಬೇಕು ಯಾರಾದ್ರೂ ಒಬ್ರು", "ನನ್ನ ಮನಸ್ಸಲ್ಲಿಯೂ ಇರಬೇಕು ಯಾರಾದ್ರೂ ಒಬ್ರು" , "ನೀವೇ ನನ್ನ ಮನೆ ದೇವ್ರು" ಎಂದು ಚಂದ್ರಪ್ರಭ ಜಿಲೇಬಿ ರಾಣಿಯಾಗಿ ಕವಿತೆ ವಾಚಿಸಿದ್ದಾನೆ.
ಇತರ ಗ್ಯಾಲರಿಗಳು