ಮೂವರು ಯುವಕರಿದ್ದಾರೆ, ಪ್ರೀತಿಸಬಾರದು ಎಂದರೆ ಹೇಗೆ? ಕಲರ್ಸ್‌ ಕನ್ನಡದಲ್ಲಿ ಹೊಸ ನಂದಗೋಕುಲ ಧಾರಾವಾಹಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂವರು ಯುವಕರಿದ್ದಾರೆ, ಪ್ರೀತಿಸಬಾರದು ಎಂದರೆ ಹೇಗೆ? ಕಲರ್ಸ್‌ ಕನ್ನಡದಲ್ಲಿ ಹೊಸ ನಂದಗೋಕುಲ ಧಾರಾವಾಹಿ

ಮೂವರು ಯುವಕರಿದ್ದಾರೆ, ಪ್ರೀತಿಸಬಾರದು ಎಂದರೆ ಹೇಗೆ? ಕಲರ್ಸ್‌ ಕನ್ನಡದಲ್ಲಿ ಹೊಸ ನಂದಗೋಕುಲ ಧಾರಾವಾಹಿ

ಕಲರ್ಸ್‌ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಸದ್ಯದಲ್ಲಿಯೇ ಆರಂಭವಾಗಲಿದೆ. ಆ ಧಾರಾವಾಹಿ ಹೆಸರು "ನಂದಾ ಗೋಕುಲ". ಈ ಸೀರಿಯಲ್‌ನಲ್ಲಿ ಎಲ್ಲರನ್ನೂ ಪ್ರೀತಿಸುವ, ಸಲಹುವ ಅಪ್ಪನಿದ್ದಾನೆ. ಆ ಅಪ್ಪನಿಗೆ ಮೂವರು ಗಂಡು ಮಕ್ಕಳು ಇದ್ದಾರೆ. ಯಾರೂ ಕೂಡ ಪ್ರೀತಿಸಿ ಮದುವೆಯಾಗಕೂಡದು ಎಂದು ಅಪ್ಪ ಭಾಷೆ ತೆಗೆದುಕೊಂಡಿರುತ್ತಾನೆ.

ಕಲರ್ಸ್ ಕನ್ನಡದ ಬಹು ನಿರೀಕ್ಷಿತ ಧಾರಾವಾಹಿ 'ನಂದ ಗೋಕುಲ'ದ ಪ್ರೋಮೋ ಸದ್ದು ಮಾಡುತ್ತಿದೆ. ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾದ ಪುಟಗಳಲ್ಲಿ ಈ ಧಾರಾವಾಹಿಯ ಎರಡು ಪ್ರೋಮೋಗಳು ಬಂದಿದ್ದವು. ಆದರೆ ಅವೆರಡರಿಗಿಂತ ಈ ಪ್ರೊಮೊ ಬಹಳ ಸದ್ದು ಮಾಡಿದೆ. ಅದೇ ಕಾರಣಕ್ಕೆ ವೈರಲ್ ಕೂಡಾ ಆಗಿದೆ.
icon

(1 / 9)

ಕಲರ್ಸ್ ಕನ್ನಡದ ಬಹು ನಿರೀಕ್ಷಿತ ಧಾರಾವಾಹಿ 'ನಂದ ಗೋಕುಲ'ದ ಪ್ರೋಮೋ ಸದ್ದು ಮಾಡುತ್ತಿದೆ. ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾದ ಪುಟಗಳಲ್ಲಿ ಈ ಧಾರಾವಾಹಿಯ ಎರಡು ಪ್ರೋಮೋಗಳು ಬಂದಿದ್ದವು. ಆದರೆ ಅವೆರಡರಿಗಿಂತ ಈ ಪ್ರೊಮೊ ಬಹಳ ಸದ್ದು ಮಾಡಿದೆ. ಅದೇ ಕಾರಣಕ್ಕೆ ವೈರಲ್ ಕೂಡಾ ಆಗಿದೆ.

'ಪ್ರೀತಿಸಿ ಮದುವೆಯಾಗಕೂಡದು' ಎಂದು ತಂದೆ ತನ್ನ ಮಕ್ಕಳ ಬಳಿ 'ಭಾಷೆ' ತೆಗೆದುಕೊಳ್ಳುವ ಸನ್ನಿವೇಶ ಇರೋ ಈ ಪ್ರೊಮೋದಲ್ಲಿ ಭಾವನಾತ್ಮಕ ಎಳೆ ಇದೆ.  ಗಿರಿಜಾ ತನ್ನ ಗಂಡ ನಂದನ ಜೊತೆ ಮದುವೆಯಾಗಿ 25 ವರ್ಷ ಆಗಿದೆ. ಈ ಸಮಯದಲ್ಲಿ ಅವರ ಮಗ ವಲ್ಲಭ ಅಭಿನಂದಿಸುತ್ತಾನೆ.
icon

(2 / 9)

'ಪ್ರೀತಿಸಿ ಮದುವೆಯಾಗಕೂಡದು' ಎಂದು ತಂದೆ ತನ್ನ ಮಕ್ಕಳ ಬಳಿ 'ಭಾಷೆ' ತೆಗೆದುಕೊಳ್ಳುವ ಸನ್ನಿವೇಶ ಇರೋ ಈ ಪ್ರೊಮೋದಲ್ಲಿ ಭಾವನಾತ್ಮಕ ಎಳೆ ಇದೆ. ಗಿರಿಜಾ ತನ್ನ ಗಂಡ ನಂದನ ಜೊತೆ ಮದುವೆಯಾಗಿ 25 ವರ್ಷ ಆಗಿದೆ. ಈ ಸಮಯದಲ್ಲಿ ಅವರ ಮಗ ವಲ್ಲಭ ಅಭಿನಂದಿಸುತ್ತಾನೆ.

ನಂದ, ಗಿರಿಜಾ ತಮ್ಮ ಮಕ್ಕಳ ಜೊತೆ ಹೊರ ಬಂದಾಗ ಎದುರುಗಡೆ ಮನೆಯಲ್ಲಿರೋ ಗಿರಿಜಾಳ ಸಹೋದರರು ಮುಖಾಮುಖಿಯಾಗುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ  ಜಗಳವಾಗುತ್ತದೆ.
icon

(3 / 9)

ನಂದ, ಗಿರಿಜಾ ತಮ್ಮ ಮಕ್ಕಳ ಜೊತೆ ಹೊರ ಬಂದಾಗ ಎದುರುಗಡೆ ಮನೆಯಲ್ಲಿರೋ ಗಿರಿಜಾಳ ಸಹೋದರರು ಮುಖಾಮುಖಿಯಾಗುತ್ತಾರೆ. ಮಾತಿಗೆ ಮಾತು ಬೆಳೆದು ಅಲ್ಲಿ ಜಗಳವಾಗುತ್ತದೆ.

 ಆಗ ನಂದನಿಗೆ ಅಪಮಾನವಾಗುವಂತೆ ಗಿರಿಜಾಳ ಸಹೋದರ  ಮಾತಾಡುತ್ತಾನೆ. ಮನೆಯ ಕೆಲಸ ಮಾಡಿಕೊಂಡಿದ್ದ ನಂದ ಅವರ ಒಪ್ಪಿಗೆಯಿಲ್ಲದೆ ಗಿರಿಜಾಳನ್ನು ಪ್ರೀತಿಸಿ ಮದುವೆಯಾದ ವಿಷಯ ಪ್ರಸ್ತಾಪವಾಗುತ್ತದೆ.
icon

(4 / 9)

ಆಗ ನಂದನಿಗೆ ಅಪಮಾನವಾಗುವಂತೆ ಗಿರಿಜಾಳ ಸಹೋದರ ಮಾತಾಡುತ್ತಾನೆ. ಮನೆಯ ಕೆಲಸ ಮಾಡಿಕೊಂಡಿದ್ದ ನಂದ ಅವರ ಒಪ್ಪಿಗೆಯಿಲ್ಲದೆ ಗಿರಿಜಾಳನ್ನು ಪ್ರೀತಿಸಿ ಮದುವೆಯಾದ ವಿಷಯ ಪ್ರಸ್ತಾಪವಾಗುತ್ತದೆ.

 ಆಗ ನಂದ ತನ್ನ ಮಕ್ಕಳಿಂದ, 'ಯಾರೂ ಪ್ರೀತಿಸಿ ಮಾಡುವೆ ಆಗಕೂಡದು' ಎಂದು ಪ್ರಮಾಣ ಮಾಡುವಂತೆ ತನ್ನ ಕೈ ಒಡ್ಡುತ್ತಾನೆ.
icon

(5 / 9)

ಆಗ ನಂದ ತನ್ನ ಮಕ್ಕಳಿಂದ, 'ಯಾರೂ ಪ್ರೀತಿಸಿ ಮಾಡುವೆ ಆಗಕೂಡದು' ಎಂದು ಪ್ರಮಾಣ ಮಾಡುವಂತೆ ತನ್ನ ಕೈ ಒಡ್ಡುತ್ತಾನೆ.

ಹೀಗೆ ಈ ಸೀರಿಯಲ್‌ನಲ್ಲಿ ಪ್ರೀತಿಗೆ ಬೀಳುವ ವಯಸ್ಸಿನ ಯುವಕರಿಗೆ ಹೊಸ ಸವಾಲು ಎದುರಾಗಿದೆ. ಅಪ್ಪನ ಮಾತನ್ನು ಧಿಕ್ಕರಿಸಿ ಪ್ರೀತಿಸಲು ಸಾಧ್ಯವೇ?
icon

(6 / 9)

ಹೀಗೆ ಈ ಸೀರಿಯಲ್‌ನಲ್ಲಿ ಪ್ರೀತಿಗೆ ಬೀಳುವ ವಯಸ್ಸಿನ ಯುವಕರಿಗೆ ಹೊಸ ಸವಾಲು ಎದುರಾಗಿದೆ. ಅಪ್ಪನ ಮಾತನ್ನು ಧಿಕ್ಕರಿಸಿ ಪ್ರೀತಿಸಲು ಸಾಧ್ಯವೇ?

'ನಂದ ಗೋಕುಲ' ತಾರಾ ಬಳಗದಲ್ಲಿ ಅರವಿಂದ್ ರಾವ್, ಅಮೃತ ನಾಯ್ಡು, ರವಿ ಚೇತನ್, ಅರ್ಚನಾ ಗಾಯಕ್ವಾಡ್, ವಿಜಯ್ ಚಂದ್ರ, ಯಶವಂತ್, ಅಭಿಷೇಕ್ ದಾಸ್, ಕೃಷ್ಣಪ್ರಿಯಾ ಭಟ್, ರಘು ಮಂಡ್ಯ, ನವ್ಯ ಮುರಳಿ ಗೌಡ, ಮೇಘ, ಉರ್ಜಿತ, ಶೈಲಜಾ ಮುಂತಾದವರಿದ್ದಾರೆ.
icon

(7 / 9)

'ನಂದ ಗೋಕುಲ' ತಾರಾ ಬಳಗದಲ್ಲಿ ಅರವಿಂದ್ ರಾವ್, ಅಮೃತ ನಾಯ್ಡು, ರವಿ ಚೇತನ್, ಅರ್ಚನಾ ಗಾಯಕ್ವಾಡ್, ವಿಜಯ್ ಚಂದ್ರ, ಯಶವಂತ್, ಅಭಿಷೇಕ್ ದಾಸ್, ಕೃಷ್ಣಪ್ರಿಯಾ ಭಟ್, ರಘು ಮಂಡ್ಯ, ನವ್ಯ ಮುರಳಿ ಗೌಡ, ಮೇಘ, ಉರ್ಜಿತ, ಶೈಲಜಾ ಮುಂತಾದವರಿದ್ದಾರೆ.

ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್,  ರವಿ ಚೇತನ್ "ನಂದ ಗೋಕುಲ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
icon

(8 / 9)

ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್, ರವಿ ಚೇತನ್ "ನಂದ ಗೋಕುಲ' ಧಾರಾವಾಹಿಯಲ್ಲಿ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯದಲ್ಲಿಯೇ ಕಲರ್ಸ್‌ ಕನ್ನಡದಲ್ಲಿ ಆರಂಭವಾಗುವ ಈ ಧಾರಾವಾಹಿಯ ಕುರಿತು ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಭಾಗ್ಯಲಕ್ಷ್ಮಿ ಮುಗಿಸಿ ಈ ಸೀರಿಯಲ್‌ಗೆ ದಾರಿ ಬಿಡಿ ಎಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.
icon

(9 / 9)

ಸದ್ಯದಲ್ಲಿಯೇ ಕಲರ್ಸ್‌ ಕನ್ನಡದಲ್ಲಿ ಆರಂಭವಾಗುವ ಈ ಧಾರಾವಾಹಿಯ ಕುರಿತು ವೀಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಭಾಗ್ಯಲಕ್ಷ್ಮಿ ಮುಗಿಸಿ ಈ ಸೀರಿಯಲ್‌ಗೆ ದಾರಿ ಬಿಡಿ ಎಂದು ಕೆಲವರು ಕಾಮೆಂಟ್‌ ಮಾಡುತ್ತಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು