ರಾಕೇಶ್ ಪೂಜಾರಿ ನಿಧನಕ್ಕೆ ಅವರು ಮಾಡಿದ್ದು ಸಂತಾಪವಲ್ಲ, ಶೂಟಿಂಗ್! ಆಪ್ತ ಗೆಳೆಯನ ಬೇಸರ; ರಿಷಬ್ ಶೆಟ್ಟಿ ಏನಂದ್ರು
ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ಗೆಲುವು ಪಡೆದ ರಾಕೇಶ್ ಪೂಜಾರಿ ಅನಿರೀಕ್ಷಿತ ಸಾವಿನ ದುಃಖದಲ್ಲಿ ಅವರ ಆಪ್ತರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಗೆಳೆಯನನ್ನು ನೆನಪಿಸಿಕೊಳ್ಳುತ್ತಿದ್ದಾರೆ.
(1 / 11)
ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ಗೆಲುವು ಪಡೆದ ರಾಕೇಶ್ ಪೂಜಾರಿ ಅನಿರೀಕ್ಷಿತ ಸಾವಿನ ದುಃಖದಲ್ಲಿ ಅವರ ಆಪ್ತರಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ಗೆಳೆಯನನ್ನು ನೆನಪಿಸಿಕೊಳ್ಳುತ್ತಿದ್ದಾರೆ. ರಾಕೇಶ್ ಪೂಜಾರಿ ಆಪ್ತ ಗೆಳೆಯನೊಬ್ಬ ಇನ್ಸ್ಟಾಗ್ರಾಂನಲ್ಲಿ ಪರೋಕ್ಷವಾಗಿ ಕಾಂತಾರ ಚಿತ್ರತಂಡವನ್ನು ಸೂಚಿಸಿ ತನ್ನ ಬೇಸರ ವ್ಯಕ್ತಪಡಿಸಿದ್ದಾನೆ.
(2 / 11)
"ನಮ್ಮ ಸಿನಿಮಾ ನಮ್ಮ ಸಿನಿಮಾ ಅಂದವರು.. ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಕಲಾವಿದ ಇನ್ನಿಲ್ಲ ಎಂದಾಗ.. ಅವರು ಮಾಡಿದ್ದು ಸಂತಾಪವಲ್ಲ... ಬದಲಿಗೆ ಶೂಟಿಂಗ್. ಎಂತಾ ಅವಸ್ಥೆ. ಕಮರ್ಷಿಯಲ್ ಮೈಂಡ್ನಲ್ಲಿ ಕಲಾವಿದನಿಗೆ ಬೆಲೆ ಇಲ್ಲಾ" ಎಂದು ಪ್ಯಾಂಕ್ ಪ್ಯಾಂಕ್ ಖ್ಯಾತಿಯ ರಿತೇಶ್ ಸೋಷಿಯಲ್ ಮೀಡಿಯಾದಲ್ಲಿ ಬೇಸರದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ.
(3 / 11)
ಈ ಮೂಲಕ ಕಾಂತಾರ ಸಿನಿಮಾ ತಂಡವನ್ನು ರಿತೇಶ್ ನೆನಪಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಿದ ಕಲಾವಿದರೊಬ್ಬರು ಮೃತಪಟ್ಟ ಸಮಯದಲ್ಲಿ ಚಿತ್ರತಂಡವು ಶೂಟಿಂಗ್ ಮುಂದುವರೆಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
(4 / 11)
ನಿಗದಿಯಾದ ಶೂಟಿಂಗ್ ನಿಲ್ಲಿಸುವುದು ಚಿತ್ರತಂಡಕ್ಕೆ ಹೊರೆಯಾಗುತ್ತದೆ. ನಿಗದಿಪಡಿಸಿದ ದಿನಾಂಕದೊಳಗೆ ಸಿನಿಮಾ ಮುಗಿಸಿ ಬಿಡುಗಡೆ ಮಾಡುವ ಒತ್ತಡ ಇರುತ್ತದೆ.
(5 / 11)
ಆದರೆ, ಗೆಳೆಯ ರಾಕೇಶ್ ಪೂಜಾರಿ ನಿಧನಕ್ಕೆ ಚಿತ್ರತಂಡ ತೋರಿದ ಪ್ರತಿಕ್ರಿಯೆ ಆಪ್ತಗೆಳೆಯ ರಿತೇಶ್ಗೆ ಬೇಸರ ತಂದಿದೆ. ರಿತೇಶ್ ಮಾತ್ರವಲ್ಲದೆ ದಿವಂಗತ ರಾಕೇಶ್ ಪೂಜಾರಿಯ ಅನೇಕ ಗೆಳೆಯರು ನೋವಿನಲ್ಲಿದ್ದಾರೆ.
(6 / 11)
"ಎಷ್ಟೋ ಮನಸ್ಸುಗಳನ್ನು ನಗಿಸಿದ ಆತ್ಮಕ್ಕೆ ಹೇಗೆ ಶಾಂತಿ ಕೋರಲಿ" ಎಂದು ಶಿವರಾಜ್ ಕೆ. ಆರ್. ಪೇಟೆ ಆತ್ಮೀಯ ಗೆಳೆಯನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
(7 / 11)
" ರಾಕೇಶ್ ಪೂಜಾರಿ ಎಲ್ಲರ ಜತೆ ಚೆನ್ನಾಗಿದ್ದರು. ಒಳ್ಳೆಯವರನ್ನು ದೇವರು ಬೇಗ ಕರೆದುಕೊಳ್ಳುತ್ತಾನೆ. ರಾಕೇಶ್ ಇದ್ದ್ಲಿ ನಗು ಇತ್ತು. ತುಂಬಾ ದುಃಖವಾಗುತ್ತಿದೆ" ಎಂದು ಹಿತೇಶ್ ಮಾಧ್ಯಮಗಳ ಮುಂದೆ ಕಣ್ಣೀರಾಗಿದ್ದಾರೆ.
(9 / 11)
ಕಾಂತಾರ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಕೂಡ ರಾಕೇಶ್ ಅಕಾಲಿಕ ನಿಧನಕ್ಕೆ ದುಃಖಗೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಹೀಗೆ ಬರೆದಿದ್ದಾರೆ.
(10 / 11)
"ನೀನು ನನ್ನ ಮನಸ್ಸಿನಲ್ಲಿ ಎಂದೆಂದಿಗೂ ಒಬ್ಬ ಅದ್ಭುತ ಕಲಾವಿದ. ಕಾಂತಾರ ಸಿನಿಮಾದಲ್ಲಿ ನಿನ್ನ ಪಾತ್ರ ಹಾಗು ಅದನ್ನು ನಿರ್ವಹಿಸುವಾಗ ನಿನ್ನ ಮುಖದ ನಗು ನನ್ನ ಕಣ್ಣಲ್ಲಿ ಎಂದೆಂದಿಗೂ ಶಾಶ್ವತ. ಕಲಾವಿದ ವರ್ಗಕ್ಕೆ ಇದೊಂದು ತುಂಬಲಾರದ ನಷ್ಟ .. ಮತ್ತೆ ಹುಟ್ಟಿ ಬಾ ಗೆಳೆಯ .. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ. ದೇವರು ಈ ಆಘಾತವನ್ನು ಸಹಿಸುವ ಶಕ್ತಿ ನಿನ್ನ ಕುಟುಂಬಕ್ಕೆ ಕೊಡಲಿ" ಎಂದು ರಿಷಬ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
ಇತರ ಗ್ಯಾಲರಿಗಳು