ಕೆಕೆಆರ್​ ವಿರುದ್ಧದ ಕದನಕ್ಕೆ ಆರ್​ಸಿಬಿ ಪರ ಆಡಲಿಲ್ಲವೇಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೆಕೆಆರ್​ ವಿರುದ್ಧದ ಕದನಕ್ಕೆ ಆರ್​ಸಿಬಿ ಪರ ಆಡಲಿಲ್ಲವೇಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್?

ಕೆಕೆಆರ್​ ವಿರುದ್ಧದ ಕದನಕ್ಕೆ ಆರ್​ಸಿಬಿ ಪರ ಆಡಲಿಲ್ಲವೇಕೆ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್?

  • ಇಂಡಿಯನ್ ಪ್ರೀಮಿಯರ್ ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ವೇಗಿ ಭುವನೇಶ್ವರ್ ಕುಮಾರ್ ಅವಕಾಶ ಪಡೆಯಲಿಲ್ಲವೇಕೆ? ಇಲ್ಲಿದೆ ವಿವರ.

ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ವಿಂಗ್ ಕಿಂಗ್ ಭುವನೇಶ್ವರ್​ ಕುಮಾರ್ ಕಣಕ್ಕಿಳಿಯದಿರುವುದು ಅಚ್ಚರಿ ಮೂಡಿಸಿದೆ.
icon

(1 / 9)

ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಸ್ವಿಂಗ್ ಕಿಂಗ್ ಭುವನೇಶ್ವರ್​ ಕುಮಾರ್ ಕಣಕ್ಕಿಳಿಯದಿರುವುದು ಅಚ್ಚರಿ ಮೂಡಿಸಿದೆ.

ಭುವನೇಶ್ವರ್ ಕುಮಾರ್ ಆಡುವ XI ಅಥವಾ ಇಂಪ್ಯಾಕ್ಟ್ ಪ್ಲೇಯರ್​​ ಲಿಸ್ಟ್‌ನ ಭಾಗವೂ ಆಗಿಲ್ಲ. ಫ್ರಾಂಚೈಸ್ ಅಥವಾ ನಾಯಕ ರಜತ್ ಪಾಟೀದಾರ್ ಅವರು ಅನುಭವಿ ಭಾರತೀಯ ವೇಗಿಯ ಅವಕಾಶ ಪಡೆಯದ ಕುರಿತು ಟಾಸ್ ವೇಳೆ ಮಾಹಿತಿ ನೀಡಿರಲಿಲ್ಲ.
icon

(2 / 9)

ಭುವನೇಶ್ವರ್ ಕುಮಾರ್ ಆಡುವ XI ಅಥವಾ ಇಂಪ್ಯಾಕ್ಟ್ ಪ್ಲೇಯರ್​​ ಲಿಸ್ಟ್‌ನ ಭಾಗವೂ ಆಗಿಲ್ಲ. ಫ್ರಾಂಚೈಸ್ ಅಥವಾ ನಾಯಕ ರಜತ್ ಪಾಟೀದಾರ್ ಅವರು ಅನುಭವಿ ಭಾರತೀಯ ವೇಗಿಯ ಅವಕಾಶ ಪಡೆಯದ ಕುರಿತು ಟಾಸ್ ವೇಳೆ ಮಾಹಿತಿ ನೀಡಿರಲಿಲ್ಲ.

ಹೀಗಾಗಿ ಭುವಿ ಆಡುವ 11ರ ಬಳಗದ ಭಾಗವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ಲೇಯಿಂಗ್ 11 ಪ್ರಕಟಿಸಿದಾಗ ಭುವಿ ಹೆಸರು ಇಲ್ಲದೇ ಇರುವುದು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.
icon

(3 / 9)

ಹೀಗಾಗಿ ಭುವಿ ಆಡುವ 11ರ ಬಳಗದ ಭಾಗವಾಗಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪ್ಲೇಯಿಂಗ್ 11 ಪ್ರಕಟಿಸಿದಾಗ ಭುವಿ ಹೆಸರು ಇಲ್ಲದೇ ಇರುವುದು ಕಂಡು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.

ಇದೀಗ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಆಡದೇ ಇರಲು ಕಾರಣ ಏನೆಂದು ಬಹಿರಂಗಗೊಂಡಿದೆ. ಫ್ರಾಂಚೈಸಿಯು ಈ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ ಎಂದು ಭರವಸೆ ನೀಡಿದೆ.
icon

(4 / 9)

ಇದೀಗ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಆಡದೇ ಇರಲು ಕಾರಣ ಏನೆಂದು ಬಹಿರಂಗಗೊಂಡಿದೆ. ಫ್ರಾಂಚೈಸಿಯು ಈ ಬಗ್ಗೆ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ ಎಂದು ಭರವಸೆ ನೀಡಿದೆ.

ದುರದೃಷ್ಟವಶಾತ್, ಭುವಿ ಸಣ್ಣ ಗಾಯದಿಂದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ರಜತ್ ಪಾಟೀದಾರ್ ನೇತೃತ್ವದ ಫ್ರಾಂಚೈಸ್ ಟಾಸ್ ನಂತರ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದೆ.
icon

(5 / 9)

ದುರದೃಷ್ಟವಶಾತ್, ಭುವಿ ಸಣ್ಣ ಗಾಯದಿಂದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಅವರು ಶೀಘ್ರದಲ್ಲೇ ಹಿಂತಿರುಗಲಿದ್ದಾರೆ ಎಂದು ರಜತ್ ಪಾಟೀದಾರ್ ನೇತೃತ್ವದ ಫ್ರಾಂಚೈಸ್ ಟಾಸ್ ನಂತರ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದೆ.

ಭುವಿ ಅಲಭ್ಯತೆಯಲ್ಲಿ ರಸಿಕ್ ದಾರ್ ಸಲಾಂ ಅವರು ಕಣಕ್ಕಿಳಿದರು. ಇವರ ಜೊತೆಗೆ ಜೋಶ್ ಹೇಜಲ್​ವುಡ್ ಮತ್ತು ಯಶ್ ದಯಾಳ್ ಅವರು ವೇಗಿಗಳಾಗಿ ತಂಡವನ್ನು ಮುನ್ನಡೆಸಿದರು.
icon

(6 / 9)

ಭುವಿ ಅಲಭ್ಯತೆಯಲ್ಲಿ ರಸಿಕ್ ದಾರ್ ಸಲಾಂ ಅವರು ಕಣಕ್ಕಿಳಿದರು. ಇವರ ಜೊತೆಗೆ ಜೋಶ್ ಹೇಜಲ್​ವುಡ್ ಮತ್ತು ಯಶ್ ದಯಾಳ್ ಅವರು ವೇಗಿಗಳಾಗಿ ತಂಡವನ್ನು ಮುನ್ನಡೆಸಿದರು.

ಕಳೆದ ವರ್ಷ ಸನ್​ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಆರ್​ಸಿಬಿ ಸೇರಿದ್ದರು. ಅವರ ಖರೀದಿಗೆ ಲಕ್ನೋ ಮತ್ತು ಮುಂಬೈ ತಂಡಗಳು ಪೈಪೋಟಿ ನಡೆಸಿದ್ದವು.
icon

(7 / 9)

ಕಳೆದ ವರ್ಷ ಸನ್​ರೈಸರ್ಸ್ ಹೈದರಾಬಾದ್ ತಂಡದ ಭಾಗವಾಗಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರು ಐಪಿಎಲ್ ಮೆಗಾ ಹರಾಜಿನಲ್ಲಿ 10.75 ಕೋಟಿ ರೂಪಾಯಿಗೆ ಆರ್​ಸಿಬಿ ಸೇರಿದ್ದರು. ಅವರ ಖರೀದಿಗೆ ಲಕ್ನೋ ಮತ್ತು ಮುಂಬೈ ತಂಡಗಳು ಪೈಪೋಟಿ ನಡೆಸಿದ್ದವು.

2009, 2010ರಲ್ಲಿ ಆರ್​​ಸಿಬಿ ಪರ ಆಡಿದ್ದ ಭುವನೇಶ್ವರ್​, ಬಳಿಕ 2011 ರಿಂದ 2013ರಲ್ಲಿ ಪುಣೆ ವಾರಿಯರ್ಸ್​ ಇಂಡಿಯಾ ಪರ ಕಣಕ್ಕಿಳಿದಿದ್ದರು. ನಂತರ 2014ರಿಂದ 11 ಸೀಸನ್​ಗಳ ಕಾಲ ಸನ್​ರೈಸರ್ಸ್ ಹೈದರಾಬಾದ್ ಪರವೇ ಆಡಿದ್ದರು. ಇದೀಗ ಮತ್ತೆ ಆರ್​ಸಿಬಿ ಸೇರಿದ್ದಾರೆ.
icon

(8 / 9)

2009, 2010ರಲ್ಲಿ ಆರ್​​ಸಿಬಿ ಪರ ಆಡಿದ್ದ ಭುವನೇಶ್ವರ್​, ಬಳಿಕ 2011 ರಿಂದ 2013ರಲ್ಲಿ ಪುಣೆ ವಾರಿಯರ್ಸ್​ ಇಂಡಿಯಾ ಪರ ಕಣಕ್ಕಿಳಿದಿದ್ದರು. ನಂತರ 2014ರಿಂದ 11 ಸೀಸನ್​ಗಳ ಕಾಲ ಸನ್​ರೈಸರ್ಸ್ ಹೈದರಾಬಾದ್ ಪರವೇ ಆಡಿದ್ದರು. ಇದೀಗ ಮತ್ತೆ ಆರ್​ಸಿಬಿ ಸೇರಿದ್ದಾರೆ.

35 ವರ್ಷ ವಯಸ್ಸಿನ ಭುವನೇಶ್ವರ್ ಲೀಗ್ ಇತಿಹಾಸದಲ್ಲಿ 4ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಭಾರತೀಯ ವೇಗಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭುವನೇಶ್ವರ್ ತಮ್ಮ ವೃತ್ತಿಜೀವನದಲ್ಲಿ ಆಡಿರುವ 176 ಐಪಿಎಲ್ ಪಂದ್ಯಗಳಲ್ಲಿ 181 ವಿಕೆಟ್ ಕಿತ್ತಿದ್ದಾರೆ.
icon

(9 / 9)

35 ವರ್ಷ ವಯಸ್ಸಿನ ಭುವನೇಶ್ವರ್ ಲೀಗ್ ಇತಿಹಾಸದಲ್ಲಿ 4ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಭಾರತೀಯ ವೇಗಿಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭುವನೇಶ್ವರ್ ತಮ್ಮ ವೃತ್ತಿಜೀವನದಲ್ಲಿ ಆಡಿರುವ 176 ಐಪಿಎಲ್ ಪಂದ್ಯಗಳಲ್ಲಿ 181 ವಿಕೆಟ್ ಕಿತ್ತಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು