ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಈತ ಮಾತ್ರ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಈತ ಮಾತ್ರ!

ಟೆಸ್ಟ್​ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ನಾಯಕತ್ವದ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಈತ ಮಾತ್ರ!

ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ 2022ರಲ್ಲಿ ಟೆಸ್ಟ್​​​ ಕ್ರಿಕೆಟ್​​ಗೆ ನಾಯಕನಾದ ರೋಹಿತ್​ ಶರ್ಮಾ 2024-25ರ ಬಾರ್ಡರ್​​-ಗವಾಸ್ಕರ್​ ಟ್ರೋಫಿ ತನಕ ಭಾರತೀಯ ತಂಡವನ್ನು ಮುನ್ನಡೆಸಿದರು. ಆದರೀಗ ರೋಹಿತ್​ ಸ್ಥಾನವನ್ನು ತುಂಬೋದು ಯಾರು?

ಹಿಟ್​ಮ್ಯಾನ್ ಖ್ಯಾತಿಯ ರೋಹಿತ್​ ಶರ್ಮಾ ಟೆಸ್ಟ್​​ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರ ಉತ್ತರಾಧಿಕಾರಿಗೆ ಬಿಸಿಸಿಐಗೆ ಹುಡುಕಾಟ ನಡೆಸುತ್ತಿದೆ. ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ನೂತನ ಆಯ್ಕೆ ಮಾಡಲಿದೆ.
icon

(1 / 13)

ಹಿಟ್​ಮ್ಯಾನ್ ಖ್ಯಾತಿಯ ರೋಹಿತ್​ ಶರ್ಮಾ ಟೆಸ್ಟ್​​ ಕ್ರಿಕೆಟ್​ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಅವರ ಉತ್ತರಾಧಿಕಾರಿಗೆ ಬಿಸಿಸಿಐಗೆ ಹುಡುಕಾಟ ನಡೆಸುತ್ತಿದೆ. ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ನೂತನ ಆಯ್ಕೆ ಮಾಡಲಿದೆ.

ಈ ಸರಣಿಗೆ ಮಾತ್ರವಲ್ಲದೆ ಪೂರ್ಣಾವಧಿ ಟೆಸ್ಟ್​​ ಕ್ಯಾಪ್ಟನ್ ಆಯ್ಕೆಗೆ ಸಿದ್ಧತೆ ನಡೆಸಿರುವ ಬಿಸಿಸಿಐ ಈ ಮಹತ್ವದ ಜವಾಬ್ದಾರಿ ಯಾರಿಗೆ ವಹಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ವಯಸ್ಸಿನ ಆಧಾರದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲು ತಯಾರಿ ನಡೆಸಿದೆ.
icon

(2 / 13)

ಈ ಸರಣಿಗೆ ಮಾತ್ರವಲ್ಲದೆ ಪೂರ್ಣಾವಧಿ ಟೆಸ್ಟ್​​ ಕ್ಯಾಪ್ಟನ್ ಆಯ್ಕೆಗೆ ಸಿದ್ಧತೆ ನಡೆಸಿರುವ ಬಿಸಿಸಿಐ ಈ ಮಹತ್ವದ ಜವಾಬ್ದಾರಿ ಯಾರಿಗೆ ವಹಿಸಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ವಯಸ್ಸಿನ ಆಧಾರದಲ್ಲಿ ಯುವ ಆಟಗಾರರಿಗೆ ಮಣೆ ಹಾಕಲು ತಯಾರಿ ನಡೆಸಿದೆ.

ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ 2022ರಲ್ಲಿ ಟೆಸ್ಟ್​​​ ಕ್ರಿಕೆಟ್​​ಗೆ ನಾಯಕನಾದ ರೋಹಿತ್​ ಶರ್ಮಾ 2024-25ರ ಬಾರ್ಡರ್​​-ಗವಾಸ್ಕರ್​ ಟ್ರೋಫಿ ತನಕ ಭಾರತೀಯ ತಂಡವನ್ನು ಮುನ್ನಡೆಸಿದರು. ಆದರೀಗ ರೋಹಿತ್​ ಸ್ಥಾನವನ್ನು ತುಂಬೋದು ಯಾರು?
icon

(3 / 13)

ವಿರಾಟ್ ಕೊಹ್ಲಿ ಅವರ ನಿವೃತ್ತಿಯ ನಂತರ 2022ರಲ್ಲಿ ಟೆಸ್ಟ್​​​ ಕ್ರಿಕೆಟ್​​ಗೆ ನಾಯಕನಾದ ರೋಹಿತ್​ ಶರ್ಮಾ 2024-25ರ ಬಾರ್ಡರ್​​-ಗವಾಸ್ಕರ್​ ಟ್ರೋಫಿ ತನಕ ಭಾರತೀಯ ತಂಡವನ್ನು ಮುನ್ನಡೆಸಿದರು. ಆದರೀಗ ರೋಹಿತ್​ ಸ್ಥಾನವನ್ನು ತುಂಬೋದು ಯಾರು?

ಬಹುತೇಕರು ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಟೆಸ್ಟ್ ನಾಯಕತ್ವ ಸಿಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಅವರಿಗೆ ನಾಯಕತ್ವ ಸಿಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಅದಕ್ಕೆ ಕಾರಣ ಬುಮ್ರಾ ಪದೆಪದೇ ಗಾಯದ ಸಮಸ್ಯೆಗೆ ತುತ್ತಾಗುವುದು.
icon

(4 / 13)

ಬಹುತೇಕರು ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಟೆಸ್ಟ್ ನಾಯಕತ್ವ ಸಿಗಬಹುದು ಎಂದು ಅಂದಾಜಿಸಿದ್ದಾರೆ. ಆದರೆ, ಅವರಿಗೆ ನಾಯಕತ್ವ ಸಿಗುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ ಅದಕ್ಕೆ ಕಾರಣ ಬುಮ್ರಾ ಪದೆಪದೇ ಗಾಯದ ಸಮಸ್ಯೆಗೆ ತುತ್ತಾಗುವುದು.

ನಿಜ, ರೋಹಿತ್​ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್​​ ತಂಡವನ್ನು ಮುನ್ನಡೆಸಿದ್ದಾರೆ. ಬಾರ್ಡರ್​​-ಗವಾಸ್ಕರ್ ಟ್ರೋಫಿಯಲ್ಲಿ ಎರಡು ಪಂದ್ಯ, 2022ರಲ್ಲಿ ಇಂಗ್ಲೆಂಡ್ ವಿರುದ್ಧ 1 ಪಂದ್ಯ ಭಾರತ ತಂಡವನ್ನು ಬುಮ್ರಾ ಮುನ್ನಡೆಸಿದ್ದಾರೆ. ಇದರ ಹೊರತಾಗಿಯೂ ಅವರಿಗೆ ಟೆಸ್ಟ್​ ಪಟ್ಟ ಸಿಗುವುದು ಅಸಾಧ್ಯ.
icon

(5 / 13)

ನಿಜ, ರೋಹಿತ್​ ಶರ್ಮಾ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್​​ ತಂಡವನ್ನು ಮುನ್ನಡೆಸಿದ್ದಾರೆ. ಬಾರ್ಡರ್​​-ಗವಾಸ್ಕರ್ ಟ್ರೋಫಿಯಲ್ಲಿ ಎರಡು ಪಂದ್ಯ, 2022ರಲ್ಲಿ ಇಂಗ್ಲೆಂಡ್ ವಿರುದ್ಧ 1 ಪಂದ್ಯ ಭಾರತ ತಂಡವನ್ನು ಬುಮ್ರಾ ಮುನ್ನಡೆಸಿದ್ದಾರೆ. ಇದರ ಹೊರತಾಗಿಯೂ ಅವರಿಗೆ ಟೆಸ್ಟ್​ ಪಟ್ಟ ಸಿಗುವುದು ಅಸಾಧ್ಯ.

ಇದು ಅವರ ಅಭಿಮಾನಿಗಳಿಗೆ ಅಸಮಾಧಾನ ಮೂಡಿಸಬಹುದು. ಆದರೆ ಇದೇ ನಿಜ. ಏಕೆಂದರೆ ಬುಮ್ರಾ ಒಮ್ಮೆ ಇಂಜುರಿಯಾದರೆ, ಕನಿಷ್ಠ  ಐದಾರು ತಿಂಗಳು ತಂಡದಿಂದ ದೂರ ಉಳಿಯುತ್ತಾರೆ. ಇದು ತಂಡಕ್ಕೆ ತುಂಬಾ ನಷ್ಟವಾಗಲಿದೆ.
icon

(6 / 13)

ಇದು ಅವರ ಅಭಿಮಾನಿಗಳಿಗೆ ಅಸಮಾಧಾನ ಮೂಡಿಸಬಹುದು. ಆದರೆ ಇದೇ ನಿಜ. ಏಕೆಂದರೆ ಬುಮ್ರಾ ಒಮ್ಮೆ ಇಂಜುರಿಯಾದರೆ, ಕನಿಷ್ಠ ಐದಾರು ತಿಂಗಳು ತಂಡದಿಂದ ದೂರ ಉಳಿಯುತ್ತಾರೆ. ಇದು ತಂಡಕ್ಕೆ ತುಂಬಾ ನಷ್ಟವಾಗಲಿದೆ.

ರೋಹಿತ್ ಬದಲಿಗೆ ಟೆಸ್ಟ್ ನಾಯಕತ್ವದ ಸ್ಥಾನಕ್ಕೆ 25 ವರ್ಷದ ಶುಭ್ಮನ್ ಗಿಲ್ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆಯ್ಕೆ ಸಮಿತಿಯು ಶುಭ್ಮನ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದೆ. ಅಧಿಕೃತ ಘೋಷಣೆ ಮಾಡುವ ಮೊದಲು ಸೆಲೆಕ್ಷನ್ ಕಮಿಟಿಯು ಬಿಸಿಸಿಐ ಜತೆ ಚರ್ಚಿಸಲಿದೆ ಎಂದು ವರದಿಯಾಗಿದೆ.
icon

(7 / 13)

ರೋಹಿತ್ ಬದಲಿಗೆ ಟೆಸ್ಟ್ ನಾಯಕತ್ವದ ಸ್ಥಾನಕ್ಕೆ 25 ವರ್ಷದ ಶುಭ್ಮನ್ ಗಿಲ್ ಅವರು ಮುಂಚೂಣಿಯಲ್ಲಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಆಯ್ಕೆ ಸಮಿತಿಯು ಶುಭ್ಮನ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಿದೆ. ಅಧಿಕೃತ ಘೋಷಣೆ ಮಾಡುವ ಮೊದಲು ಸೆಲೆಕ್ಷನ್ ಕಮಿಟಿಯು ಬಿಸಿಸಿಐ ಜತೆ ಚರ್ಚಿಸಲಿದೆ ಎಂದು ವರದಿಯಾಗಿದೆ.

ಶುಭ್ಮನ್ ಗಿಲ್ ಈಗಾಗಲೇ ಮೂರು ಫಾರ್ಮೆಟ್​​ಗಳಲ್ಲೂ ಆಟಗಾರನಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಈತ ಭಾರತ ತಂಡದಲ್ಲಿ ದೀರ್ಘಕಾಲ ಉಳಿಯಲಿರುವ ಕಾರಣ ರೋಹಿತ್​ ಬದಲಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ.
icon

(8 / 13)

ಶುಭ್ಮನ್ ಗಿಲ್ ಈಗಾಗಲೇ ಮೂರು ಫಾರ್ಮೆಟ್​​ಗಳಲ್ಲೂ ಆಟಗಾರನಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಈತ ಭಾರತ ತಂಡದಲ್ಲಿ ದೀರ್ಘಕಾಲ ಉಳಿಯಲಿರುವ ಕಾರಣ ರೋಹಿತ್​ ಬದಲಿಗೆ ಅವಕಾಶ ನೀಡಲು ಚಿಂತನೆ ನಡೆದಿದೆ.

ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಗಳೇ ಆತನಿಗೆ ದೊಡ್ಡ ಮುಳುವಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸ್ಟ್ರೇಲಿಯಾದ ಚೇಸಿಂಗ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಬುಮ್ರಾ ಮೈದಾನದಿಂದ ಹೊರಗುಳಿದಾಗ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು.
icon

(9 / 13)

ಬುಮ್ರಾ ಅವರ ಫಿಟ್ನೆಸ್ ಸಮಸ್ಯೆಗಳೇ ಆತನಿಗೆ ದೊಡ್ಡ ಮುಳುವಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ 5ನೇ ಟೆಸ್ಟ್ ಪಂದ್ಯದ ಸಮಯದಲ್ಲಿ ಗಾಯಗೊಂಡಿದ್ದ ಬುಮ್ರಾ, ಆಸ್ಟ್ರೇಲಿಯಾದ ಚೇಸಿಂಗ್‌ನಲ್ಲಿ ಬೌಲಿಂಗ್ ಮಾಡಲಿಲ್ಲ. ಬುಮ್ರಾ ಮೈದಾನದಿಂದ ಹೊರಗುಳಿದಾಗ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿದ್ದರು.

ಬಳಿಕ ಚಾಂಪಿಯನ್ಸ್ ಟ್ರೋಫಿಗೂ ಬುಮ್ರಾ ಅಲಭ್ಯರಾಗಿದ್ದರು. ಈ ಹಿಂದೆ 2022ರಲ್ಲಿ ಟಿ20 ವಿಶ್ವಕಪ್ ಕಳೆದುಕೊಂಡಿದ್ದರು. ಇದೀಗ ಬುಮ್ರಾ ಫಿಟ್ನೆಸ್ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳಲ್ಲಿಯೂ ಆಡಲು ಖಚಿತವಾಗಿಲ್ಲ ಎಂದು ವರದಿ ಹೇಳುತ್ತಿದೆ.
icon

(10 / 13)

ಬಳಿಕ ಚಾಂಪಿಯನ್ಸ್ ಟ್ರೋಫಿಗೂ ಬುಮ್ರಾ ಅಲಭ್ಯರಾಗಿದ್ದರು. ಈ ಹಿಂದೆ 2022ರಲ್ಲಿ ಟಿ20 ವಿಶ್ವಕಪ್ ಕಳೆದುಕೊಂಡಿದ್ದರು. ಇದೀಗ ಬುಮ್ರಾ ಫಿಟ್ನೆಸ್ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳಲ್ಲಿಯೂ ಆಡಲು ಖಚಿತವಾಗಿಲ್ಲ ಎಂದು ವರದಿ ಹೇಳುತ್ತಿದೆ.

ಶುಭ್ಮನ್ ಈಗಾಗಲೇ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ. ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್​​ನಲ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ಕ್ರಿಕೆಟ್​​​ನಲ್ಲಿ ವೈಸ್ ಕ್ಯಾಪ್ಟನ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
icon

(11 / 13)

ಶುಭ್ಮನ್ ಈಗಾಗಲೇ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕತ್ವದ ಗುಂಪಿನ ಭಾಗವಾಗಿದ್ದಾರೆ. ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್​​ನಲ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಟಿ20 ಕ್ರಿಕೆಟ್​​​ನಲ್ಲಿ ವೈಸ್ ಕ್ಯಾಪ್ಟನ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗಿಲ್ ಐಪಿಎಲ್​ನಲ್ಲೂ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2025ರ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು 11 ಪಂದ್ಯಗಳಲ್ಲಿ ಮುನ್ನಡೆಸಿದ್ದು, 8 ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಜಿಟಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
icon

(12 / 13)

ಗಿಲ್ ಐಪಿಎಲ್​ನಲ್ಲೂ ನಾಯಕನಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2025ರ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ (GT) ತಂಡವನ್ನು 11 ಪಂದ್ಯಗಳಲ್ಲಿ ಮುನ್ನಡೆಸಿದ್ದು, 8 ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಜಿಟಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಶುಭ್ಮನ್ ಅವರನ್ನು ನಾಯಕನನ್ನಾಗಿ ನೇಮಿಸಿದರೆ, ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ನೇಮಿಸಿಬಹುದು. ರಿಷಭ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಪಂತ್ ಭಾರತದ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ.
icon

(13 / 13)

ಶುಭ್ಮನ್ ಅವರನ್ನು ನಾಯಕನನ್ನಾಗಿ ನೇಮಿಸಿದರೆ, ರಿಷಭ್ ಪಂತ್ ಅವರನ್ನು ಉಪನಾಯಕನನ್ನಾಗಿ ನೇಮಿಸಿಬಹುದು. ರಿಷಭ್ ಟೆಸ್ಟ್ ತಂಡದ ಖಾಯಂ ಸದಸ್ಯರಾಗಿದ್ದಾರೆ. ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಆಗಿ ಪಂತ್ ಭಾರತದ ಪರ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು