ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ vs ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ; ಮಳೆ ನಿಂತರೆ ಪಂದ್ಯ ಆರಂಭ ಆಗುತ್ತಾ; ನಿಯಮ ಹೇಳೋದೇನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ Vs ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ; ಮಳೆ ನಿಂತರೆ ಪಂದ್ಯ ಆರಂಭ ಆಗುತ್ತಾ; ನಿಯಮ ಹೇಳೋದೇನು?

ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ vs ಪಂಜಾಬ್ ಪಂದ್ಯಕ್ಕೆ ಮಳೆ ಅಡ್ಡಿ; ಮಳೆ ನಿಂತರೆ ಪಂದ್ಯ ಆರಂಭ ಆಗುತ್ತಾ; ನಿಯಮ ಹೇಳೋದೇನು?

  • ಆರ್‌ಸಿಬಿ ತಂಡವು ಐಪಿಎಲ್‌ 18ರ ಆವೃತ್ತಿಯಲ್ಲಿ ಇದುವರೆಗೆ ತವರಿನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋತಿದೆ. ಇಂದು (ಏ.18, ಶುಕ್ರವಾರ) ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ನಿಗದಿತ ಸಮಯಕ್ಕೆ ಆರಂಭವಾಗಿಲ್ಲ. ಮಳೆಯಿಂದಾಗಿ ಟಾಸ್ ಕೂಡಾ ಮಾಡಲು ಸಾಧ್ಯವಾಗಿಲ್ಲ.

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆ ಸಂಪೂರ್ಣ ನಿಂತ ನಂತರ ಪಂದ್ಯ ಆರಂಭಿಸಲಾಗುತ್ತದೆ. ಬೆಂಗಳೂರಿನಲ್ಲಿ ಸಬ್‌ಏರ್‌ ಡ್ರೈನೇಜ್‌ ವ್ಯವಸ್ಥೆ ಇದ್ದು, ಮಳೆ ಸಂಪೂರ್ಣವಾಗಿ ನಿಂತ 20 ನಿಮಿಷದಲ್ಲಿ ಪಂದ್ಯ ಆರಂಭಿಸುವ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ.
icon

(1 / 6)

ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಮಳೆ ಸಂಪೂರ್ಣ ನಿಂತ ನಂತರ ಪಂದ್ಯ ಆರಂಭಿಸಲಾಗುತ್ತದೆ. ಬೆಂಗಳೂರಿನಲ್ಲಿ ಸಬ್‌ಏರ್‌ ಡ್ರೈನೇಜ್‌ ವ್ಯವಸ್ಥೆ ಇದ್ದು, ಮಳೆ ಸಂಪೂರ್ಣವಾಗಿ ನಿಂತ 20 ನಿಮಿಷದಲ್ಲಿ ಪಂದ್ಯ ಆರಂಭಿಸುವ ಅತ್ಯಾಧುನಿಕ ವ್ಯವಸ್ಥೆ ಮಾಡಲಾಗಿದೆ.

ಪಂದ್ಯದ ಟಾಸ್ ಪ್ರಕ್ರಿಯೆ ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಆದರೆ ಅದು ನಡೆದಿಲ್ಲ. ತುಂತುರು ಮಳೆ ಬರುತ್ತಿದ್ದು, ಸಂಪೂರ್ಣ ನಿಲ್ಲದ ಹೊರತ ಪಂದ್ಯ ಆರಂಭ ಅಡಲಾಗುವುದಿಲ್ಲ.
icon

(2 / 6)

ಪಂದ್ಯದ ಟಾಸ್ ಪ್ರಕ್ರಿಯೆ ಸಂಜೆ 7 ಗಂಟೆಗೆ ನಡೆಯಬೇಕಿತ್ತು. ಆದರೆ ಅದು ನಡೆದಿಲ್ಲ. ತುಂತುರು ಮಳೆ ಬರುತ್ತಿದ್ದು, ಸಂಪೂರ್ಣ ನಿಲ್ಲದ ಹೊರತ ಪಂದ್ಯ ಆರಂಭ ಅಡಲಾಗುವುದಿಲ್ಲ.
(PTI)

ಮಳೆಯಿಂದಾಗಿ ಬೆಂಗಳೂರು ಪಂದ್ಯ ರದ್ದಾಗುತ್ತಾ? ಪಂದ್ಯ ನಡೆಸಲು ಸಾಧ್ಯವೇ? ಐಪಿಎಲ್ ನಿಯಮಗಳು ಏನು ಹೇಳುತ್ತವೆ ನೋಡೋಣ.
icon

(3 / 6)

ಮಳೆಯಿಂದಾಗಿ ಬೆಂಗಳೂರು ಪಂದ್ಯ ರದ್ದಾಗುತ್ತಾ? ಪಂದ್ಯ ನಡೆಸಲು ಸಾಧ್ಯವೇ? ಐಪಿಎಲ್ ನಿಯಮಗಳು ಏನು ಹೇಳುತ್ತವೆ ನೋಡೋಣ.
(REUTERS)

ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ ಪಕ್ಷ ಉಭಯ ತಂಡಗಳಿಗೆ ಕನಿಷ್ಠ 5 ಓವರ್‌ಗಳನ್ನು ಆಡಿಸಬೇಕಾಗುತ್ತದೆ. ಐದು ಓವರ್‌ಗಳ ಪಂದ್ಯವನ್ನು ಆರಂಭಿಸಲು ರಾತ್ರಿ 10:54ರವರೆಗೆ ಅವಕಾಶವಿದೆ. ಏಕೆಂದರೆ ಪಂದ್ಯವನ್ನು ರಾತ್ರಿ 12:06ರೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಹೀಗಾಗಿ, ಬೆಂಗಳೂರು ಸ್ಟೇಡಿಯಂನಲ್ಲಿ ಕನಿಷ್ಠ 10:30ರ ಒಳಗೆ ಮಳೆ ಸಂಪೂರ್ಣ ನಿಲ್ಲಬೇಕಾಗುತ್ತದೆ.
icon

(4 / 6)

ಪಂದ್ಯದ ಫಲಿತಾಂಶ ಪಡೆಯಲು ಕನಿಷ್ಠ ಪಕ್ಷ ಉಭಯ ತಂಡಗಳಿಗೆ ಕನಿಷ್ಠ 5 ಓವರ್‌ಗಳನ್ನು ಆಡಿಸಬೇಕಾಗುತ್ತದೆ. ಐದು ಓವರ್‌ಗಳ ಪಂದ್ಯವನ್ನು ಆರಂಭಿಸಲು ರಾತ್ರಿ 10:54ರವರೆಗೆ ಅವಕಾಶವಿದೆ. ಏಕೆಂದರೆ ಪಂದ್ಯವನ್ನು ರಾತ್ರಿ 12:06ರೊಳಗೆ ಪೂರ್ಣಗೊಳಿಸಬೇಕಾಗುತ್ತದೆ. ಹೀಗಾಗಿ, ಬೆಂಗಳೂರು ಸ್ಟೇಡಿಯಂನಲ್ಲಿ ಕನಿಷ್ಠ 10:30ರ ಒಳಗೆ ಮಳೆ ಸಂಪೂರ್ಣ ನಿಲ್ಲಬೇಕಾಗುತ್ತದೆ.
(REUTERS)

ಒಂದು ವೇಳೆ 10:54ರ ಒಳಗೆ ಪಂದ್ಯ ಆರಂಭಿಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗುತ್ತದೆ.
icon

(5 / 6)

ಒಂದು ವೇಳೆ 10:54ರ ಒಳಗೆ ಪಂದ್ಯ ಆರಂಭಿಸಲು ಸಾಧ್ಯವಾಗದಿದ್ದರೆ, ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದು ಪಾಯಿಂಟ್ ನೀಡಲಾಗುತ್ತದೆ.
(REUTERS)

ಸದ್ಯ ಎರಡೂ ತಂಡಗಳು ಪಂದ್ಯ ನಡೆಯುವಂತೆ ಕಾಯುತ್ತಿವೆ. ಈ ಗೆಲುವು ಎರಡೂ ತಂಡಗಳಿಗೆ ಮುಖ್ಯವಾಗಿವೆ. ಉಭಯ ತಂಡಗಳು ಈ ಬಾರಿ ಈವರೆಗೆ ತಲಾ 6 ಪಂದ್ಯಗಳಲ್ಲಿ ಆಡಿವೆ. ತಲಾ 4 ಪಂದ್ಯಗಳನ್ನು ಗೆದ್ದಿವೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ.
icon

(6 / 6)

ಸದ್ಯ ಎರಡೂ ತಂಡಗಳು ಪಂದ್ಯ ನಡೆಯುವಂತೆ ಕಾಯುತ್ತಿವೆ. ಈ ಗೆಲುವು ಎರಡೂ ತಂಡಗಳಿಗೆ ಮುಖ್ಯವಾಗಿವೆ. ಉಭಯ ತಂಡಗಳು ಈ ಬಾರಿ ಈವರೆಗೆ ತಲಾ 6 ಪಂದ್ಯಗಳಲ್ಲಿ ಆಡಿವೆ. ತಲಾ 4 ಪಂದ್ಯಗಳನ್ನು ಗೆದ್ದಿವೆ. ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೂರನೇ ಸ್ಥಾನದಲ್ಲಿದ್ದರೆ, ಪಂಜಾಬ್ ನಾಲ್ಕನೇ ಸ್ಥಾನದಲ್ಲಿದೆ.
(AP)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು