ರೋಬೋ ಟು ಜೈಲರ್, ಈಗ ಕೂಲಿ; ಕಾವ್ಯಾ ಮಾರನ್ ತಂದೆ ನಿರ್ಮಿಸಿದ ಬ್ಲಾಕ್​ ಬಸ್ಟರ್ ಚಿತ್ರಗಳ ಪಟ್ಟಿ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರೋಬೋ ಟು ಜೈಲರ್, ಈಗ ಕೂಲಿ; ಕಾವ್ಯಾ ಮಾರನ್ ತಂದೆ ನಿರ್ಮಿಸಿದ ಬ್ಲಾಕ್​ ಬಸ್ಟರ್ ಚಿತ್ರಗಳ ಪಟ್ಟಿ ಇದು

ರೋಬೋ ಟು ಜೈಲರ್, ಈಗ ಕೂಲಿ; ಕಾವ್ಯಾ ಮಾರನ್ ತಂದೆ ನಿರ್ಮಿಸಿದ ಬ್ಲಾಕ್​ ಬಸ್ಟರ್ ಚಿತ್ರಗಳ ಪಟ್ಟಿ ಇದು

  • ಸನ್​ರೈಸರ್ಸ್ ಹೈದಾಬಾದ್ ಫ್ರಾಂಚೈಸಿ ಮಾಲಕಿ ಕಾವ್ಯಾ ಮಾರನ್ ಅವರ ತಂದೆ ಕಲಾನಿಧಿ ಮಾರನ್ ನಿರ್ಮಿಸಿರುವ ಬ್ಲಾಕ್ ಬಸ್ಟರ್ ಚಿತ್ರಗಳ ಪಟ್ಟಿ ಇಲ್ಲಿದೆ.

ಐಪಿಎಲ್​ನಲ್ಲಿ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರು ಪಂದ್ಯಗಳ ಅವಧಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. 400 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಕಾವ್ಯಾ ಅವರ ತಂದೆ 25 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿದ್ದಾರೆ.
icon

(1 / 10)

ಐಪಿಎಲ್​ನಲ್ಲಿ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ಸನ್​ರೈಸರ್ಸ್​ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರು ಪಂದ್ಯಗಳ ಅವಧಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಾರೆ. 400 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿರುವ ಕಾವ್ಯಾ ಅವರ ತಂದೆ 25 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಮೌಲ್ಯ ಹೊಂದಿದ್ದಾರೆ.

ಕಾವ್ಯಾ ಮಾರನ್ ಅವರ ತಂದೆ ಹೆಸರು ಕಲಾನಿಧಿ ಮಾರನ್. ಉದ್ಯಮ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಸಿನಿಮಾ ಕ್ಷೇತ್ರದಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಸನ್​ ಪಿಕ್ಚರ್ಸ್ ಬ್ಯಾನರ್​ನಡಿ ಅನೇಕ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಕಾವ್ಯಾ ಅವರ ತಂದೆ ನಿರ್ಮಿಸಿದ ಚಿತ್ರಗಳಾವುವು? ಇಲ್ಲಿದೆ ವಿವರ.
icon

(2 / 10)

ಕಾವ್ಯಾ ಮಾರನ್ ಅವರ ತಂದೆ ಹೆಸರು ಕಲಾನಿಧಿ ಮಾರನ್. ಉದ್ಯಮ ರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಅವರು ಸಿನಿಮಾ ಕ್ಷೇತ್ರದಲ್ಲೂ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಸನ್​ ಪಿಕ್ಚರ್ಸ್ ಬ್ಯಾನರ್​ನಡಿ ಅನೇಕ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಕಾವ್ಯಾ ಅವರ ತಂದೆ ನಿರ್ಮಿಸಿದ ಚಿತ್ರಗಳಾವುವು? ಇಲ್ಲಿದೆ ವಿವರ.

ಎಂದಿರನ್ (2010): ಸೂಪರ್​ಸ್ಟಾರ್ ರಜನಿಕಾಂತ್ ಮತ್ತು ಐಶ್ವರ್ಯ ರೈ ನಟನೆಯ ಈ ರೋಬೋ ಚಿತ್ರವು ದೊಡ್ಡ ಬ್ಲಾಕ್​ ಬಸ್ಟರ್​ ಆಗಿತ್ತು. ಆಗಲೇ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲಾಗಿತ್ತು. ಅದರ ದುಪ್ಪಟ್ಟು ಗಳಿಕೆ ಮಾಡಿತ್ತು.
icon

(3 / 10)

ಎಂದಿರನ್ (2010): ಸೂಪರ್​ಸ್ಟಾರ್ ರಜನಿಕಾಂತ್ ಮತ್ತು ಐಶ್ವರ್ಯ ರೈ ನಟನೆಯ ಈ ರೋಬೋ ಚಿತ್ರವು ದೊಡ್ಡ ಬ್ಲಾಕ್​ ಬಸ್ಟರ್​ ಆಗಿತ್ತು. ಆಗಲೇ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡಲಾಗಿತ್ತು. ಅದರ ದುಪ್ಪಟ್ಟು ಗಳಿಕೆ ಮಾಡಿತ್ತು.

ಸರ್ಕಾರ್ (2018): ಎಆರ್​ ಮುರುಗದಾಸ್ ನಿರ್ದೇಶನದ ಮತ್ತು ವಿಜಯ್ ನಟಿಸಿದ ಸರ್ಕಾರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ಪೊಲಿಟಿಕಲ್ ಡ್ರಾಮಾ ಸಿನಿಮಾವಾಗಿತ್ತು.
icon

(4 / 10)

ಸರ್ಕಾರ್ (2018): ಎಆರ್​ ಮುರುಗದಾಸ್ ನಿರ್ದೇಶನದ ಮತ್ತು ವಿಜಯ್ ನಟಿಸಿದ ಸರ್ಕಾರ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದು ಪೊಲಿಟಿಕಲ್ ಡ್ರಾಮಾ ಸಿನಿಮಾವಾಗಿತ್ತು.

ಪೆಟ್ಟಾ (2019): ರಜನಿಕಾಂತ್, ವಿಜಯ್ ಸೇತುಪತಿ, ತ್ರಿಷಾ ಸೇರಿದಂತೆ ಬಹುತಾರಾಗಣದ ಈ ಸಿನಿಮಾ ಹಿಟ್​ ಆಗಿತ್ತು. ಕಾರ್ತಿಕ್ ಸುಬ್ಬರಾಜ್ ಅವರು ನಿರ್ದೇಶಿಸಿದ್ದಾರೆ.
icon

(5 / 10)

ಪೆಟ್ಟಾ (2019): ರಜನಿಕಾಂತ್, ವಿಜಯ್ ಸೇತುಪತಿ, ತ್ರಿಷಾ ಸೇರಿದಂತೆ ಬಹುತಾರಾಗಣದ ಈ ಸಿನಿಮಾ ಹಿಟ್​ ಆಗಿತ್ತು. ಕಾರ್ತಿಕ್ ಸುಬ್ಬರಾಜ್ ಅವರು ನಿರ್ದೇಶಿಸಿದ್ದಾರೆ.

ಅಣ್ಣಾತೆ (2021): ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ನಯನತಾರಾ, ಕೀರ್ತಿ ಸುರೇಶ್ ಸೇರಿದಂತೆ ಪ್ರಮುಖರೇ ನಟಿಸಿದ್ದರು. ಇದು ಹಿಟ್ ಆಗಿತ್ತು.
icon

(6 / 10)

ಅಣ್ಣಾತೆ (2021): ಶಿವ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್, ನಯನತಾರಾ, ಕೀರ್ತಿ ಸುರೇಶ್ ಸೇರಿದಂತೆ ಪ್ರಮುಖರೇ ನಟಿಸಿದ್ದರು. ಇದು ಹಿಟ್ ಆಗಿತ್ತು.

ತಿರುಚಿತ್ರಂಬಲಂ, ಬೀಸ್ಟ್​, ಎಥರ್ಕುಂ ತುಣಿಂದವನ್ (2022): ತಿರು ಚಿತ್ರವು ದೊಡ್ಡ ಹಿಟ್ ಆಗಿತ್ತು. ಧನುಷ್ ನಾಯಕ ನಟನಾಗಿದ್ದಾರೆ. ವಿಜಯ್ ನಟನೆಯ ಬೀಸ್ಟ್ ಅಟ್ಟರ್​ಫ್ಲಾಪ್ ಆಗಿತ್ತು. ಆದರೆ ಸೂರ್ಯ ನಟನೆಯ ತುಣಿಂದವನ್ ಚಿತ್ರವೂ ಫ್ಲಾಫ್ ಆಗಿತ್ತು.
icon

(7 / 10)

ತಿರುಚಿತ್ರಂಬಲಂ, ಬೀಸ್ಟ್​, ಎಥರ್ಕುಂ ತುಣಿಂದವನ್ (2022): ತಿರು ಚಿತ್ರವು ದೊಡ್ಡ ಹಿಟ್ ಆಗಿತ್ತು. ಧನುಷ್ ನಾಯಕ ನಟನಾಗಿದ್ದಾರೆ. ವಿಜಯ್ ನಟನೆಯ ಬೀಸ್ಟ್ ಅಟ್ಟರ್​ಫ್ಲಾಪ್ ಆಗಿತ್ತು. ಆದರೆ ಸೂರ್ಯ ನಟನೆಯ ತುಣಿಂದವನ್ ಚಿತ್ರವೂ ಫ್ಲಾಫ್ ಆಗಿತ್ತು.

ಜೈಲರ್​ (2023): ಸೂಪರ್​ ಸ್ಟಾರ್ ರಜನಿಕಾಂತ್ ಅವರ ಜೈಲರ್ ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್​ ನಿರ್ದೇಶನ ಇದೆ. ಇದೀಗ ಜೈಲರ್​ಗೆ ಸಿಕ್ವೇಲ್ ಬರ್ತಿದೆ.
icon

(8 / 10)

ಜೈಲರ್​ (2023): ಸೂಪರ್​ ಸ್ಟಾರ್ ರಜನಿಕಾಂತ್ ಅವರ ಜೈಲರ್ ಬ್ಲಾಕ್ ಬಸ್ಟರ್ ಆಗಿತ್ತು. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್​ ನಿರ್ದೇಶನ ಇದೆ. ಇದೀಗ ಜೈಲರ್​ಗೆ ಸಿಕ್ವೇಲ್ ಬರ್ತಿದೆ.

ಕಲಾನಿಧಿ ಮಾರನ್ ಪ್ರಸ್ತುತ ರಜನಿಕಾಂತ್ ಅವರೊಂದಿಗೆ 'ಜೈಲರ್ 2' ಮತ್ತು 'ಕೂಲಿ' ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.
icon

(9 / 10)

ಕಲಾನಿಧಿ ಮಾರನ್ ಪ್ರಸ್ತುತ ರಜನಿಕಾಂತ್ ಅವರೊಂದಿಗೆ 'ಜೈಲರ್ 2' ಮತ್ತು 'ಕೂಲಿ' ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರ ಚಿತ್ರದ ಮೂಲಕ ಕಲಾನಿಧಿ ಮಾರನ್ ಅವರು ನಿರ್ಮಾಪಕರಾಗಿ ಟಾಲಿವುಡ್​​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಜನ್ಮದಿನದಂದು ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಯಿತು.
icon

(10 / 10)

ಅಲ್ಲು ಅರ್ಜುನ್ ಮತ್ತು ಅಟ್ಲೀ ಅವರ ಚಿತ್ರದ ಮೂಲಕ ಕಲಾನಿಧಿ ಮಾರನ್ ಅವರು ನಿರ್ಮಾಪಕರಾಗಿ ಟಾಲಿವುಡ್​​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಜನ್ಮದಿನದಂದು ಈ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಯಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು