ಒಬ್ಬರಿಗೆ ಕುತ್ತಿಗೆ ನೋವು, ಇನ್ನೊಬ್ಬರಿಗೆ ಮೊಣಕೈ ನೋವು; ರಣಜಿ ಟ್ರೋಫಿ ಆಡೋಕೆ ಆಗಲ್ಲ ಎಂದ ವಿರಾಟ್ ಕೊಹ್ಲಿ-ಕೆಎಲ್‌ ರಾಹುಲ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಬ್ಬರಿಗೆ ಕುತ್ತಿಗೆ ನೋವು, ಇನ್ನೊಬ್ಬರಿಗೆ ಮೊಣಕೈ ನೋವು; ರಣಜಿ ಟ್ರೋಫಿ ಆಡೋಕೆ ಆಗಲ್ಲ ಎಂದ ವಿರಾಟ್ ಕೊಹ್ಲಿ-ಕೆಎಲ್‌ ರಾಹುಲ್

ಒಬ್ಬರಿಗೆ ಕುತ್ತಿಗೆ ನೋವು, ಇನ್ನೊಬ್ಬರಿಗೆ ಮೊಣಕೈ ನೋವು; ರಣಜಿ ಟ್ರೋಫಿ ಆಡೋಕೆ ಆಗಲ್ಲ ಎಂದ ವಿರಾಟ್ ಕೊಹ್ಲಿ-ಕೆಎಲ್‌ ರಾಹುಲ್

  • ಟೀಮ್‌ ಇಂಡಿಯಾದ ಪ್ರತಿಯೊಬ್ಬ ಆಟಗಾರರು ದೇಶೀಯ ಕ್ರಿಕೆಟ್‌ ಆಡಲು ಸಜ್ಜಾಗಿರಬೇಕು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಪ್ರಮುಖ ಆಟಗಾರರು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇತ್ತು. ಈ ನಡುವೆ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿಗೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿನಿಂದ ಹೊರಗುಳಿಯುವುದು ಖಚಿತವಾಗಿದೆ. ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಗಾಯದ ಕುರಿತಾಗಿ ಬಿಸಿಸಿಐನ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ.
icon

(1 / 9)

ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ರಣಜಿ ಟ್ರೋಫಿಯ ಮುಂದಿನ ಸುತ್ತಿನಿಂದ ಹೊರಗುಳಿಯುವುದು ಖಚಿತವಾಗಿದೆ. ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಗಾಯದ ಕುರಿತಾಗಿ ಬಿಸಿಸಿಐನ ವೈದ್ಯಕೀಯ ತಂಡಕ್ಕೆ ಮಾಹಿತಿ ನೀಡಿದ್ದಾರೆ.

(AFP)

ಜನವರಿ 23ರಿಂದ ಪ್ರಾರಂಭವಾಗಲಿರುವ ರಣಜಿ ಟ್ರೋಫಿಯ ಮುಂದಿನ ಸುತ್ತಿನಲ್ಲಿ ಆಯಾ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ಕೊಹ್ಲಿ ಮತ್ತು ರಾಹುಲ್‌ ತಿಳಿಸಿದ್ದಾರೆ.
icon

(2 / 9)

ಜನವರಿ 23ರಿಂದ ಪ್ರಾರಂಭವಾಗಲಿರುವ ರಣಜಿ ಟ್ರೋಫಿಯ ಮುಂದಿನ ಸುತ್ತಿನಲ್ಲಿ ಆಯಾ ರಾಜ್ಯ ತಂಡಗಳನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ಕೊಹ್ಲಿ ಮತ್ತು ರಾಹುಲ್‌ ತಿಳಿಸಿದ್ದಾರೆ.

(AFP)

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಡೆದ ಪ್ರತಿಯೊಬ್ಬ ಆಟಗಾರ ಕೂಡಾ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವುದನ್ನು ಬಿಸಿಸಿಐ ಇತ್ತೀಚೆಗಷ್ಟೇ ಕಡ್ಡಾಯಗೊಳಿಸಿದೆ. ಒಂದು ವೇಳೆ ಈ ನಿಯಮ ಅನುಸರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬಹುದು ಎಂದು ಮಂಡಳಿ ಹೇಳಿದೆ.
icon

(3 / 9)

ಬಿಸಿಸಿಐ ಕೇಂದ್ರೀಯ ಗುತ್ತಿಗೆ ಪಡೆದ ಪ್ರತಿಯೊಬ್ಬ ಆಟಗಾರ ಕೂಡಾ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸುವುದನ್ನು ಬಿಸಿಸಿಐ ಇತ್ತೀಚೆಗಷ್ಟೇ ಕಡ್ಡಾಯಗೊಳಿಸಿದೆ. ಒಂದು ವೇಳೆ ಈ ನಿಯಮ ಅನುಸರಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬಹುದು ಎಂದು ಮಂಡಳಿ ಹೇಳಿದೆ.

(AFP)

ಒಂದು ವೇಳೆ ಗಾಯ ಅಥವಾ ಇನ್ಯಾವುದೇ ಕಾರಣದಿಂದ ಯಾವುದೇ ಆಟಗಾರ ಅಲಭ್ಯರಾದರೆ, ಅವರು ಆಯ್ಕೆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಮತಿ ಪಡೆಯಬೇಕು ಎಂದು ಮಂಡಳಿ ಹೇಳಿದೆ.
icon

(4 / 9)

ಒಂದು ವೇಳೆ ಗಾಯ ಅಥವಾ ಇನ್ಯಾವುದೇ ಕಾರಣದಿಂದ ಯಾವುದೇ ಆಟಗಾರ ಅಲಭ್ಯರಾದರೆ, ಅವರು ಆಯ್ಕೆ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅನುಮತಿ ಪಡೆಯಬೇಕು ಎಂದು ಮಂಡಳಿ ಹೇಳಿದೆ.

(AFP)

ವರದಿ ಪ್ರಕಾರ, ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಸರಣಿ ಮುಗಿದ ಮೂರು ದಿನಗಳ ನಂತರ ಅವರು ಇಂಜೆಕ್ಷನ್‌ ತೆಗೆದುಕೊಂಡಿದ್ದರು.
icon

(5 / 9)

ವರದಿ ಪ್ರಕಾರ, ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ವೇಳೆ ಕೊಹ್ಲಿಗೆ ಕುತ್ತಿಗೆ ನೋವು ಕಾಣಿಸಿಕೊಂಡಿತ್ತು. ಸರಣಿ ಮುಗಿದ ಮೂರು ದಿನಗಳ ನಂತರ ಅವರು ಇಂಜೆಕ್ಷನ್‌ ತೆಗೆದುಕೊಂಡಿದ್ದರು.

(AFP)

ತಮಗೆ ಇನ್ನೂ ಕುತ್ತಿಗೆ ನೋವು ಇದೆ ಎಂದು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗೆ ಕೊಹ್ಲಿ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ದೆಹಲಿಯ ರಣಜಿ ಪಂದ್ಯದಿಂದ ಕೊಹ್ಲಿ ಹೊರಗುಳಿದಿದ್ದಾರೆ.
icon

(6 / 9)

ತಮಗೆ ಇನ್ನೂ ಕುತ್ತಿಗೆ ನೋವು ಇದೆ ಎಂದು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗೆ ಕೊಹ್ಲಿ ಮಾಹಿತಿ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಸೌರಾಷ್ಟ್ರ ವಿರುದ್ಧದ ದೆಹಲಿಯ ರಣಜಿ ಪಂದ್ಯದಿಂದ ಕೊಹ್ಲಿ ಹೊರಗುಳಿದಿದ್ದಾರೆ.

(AP)

ಅತ್ತ ಕನ್ನಡಿಗ ಕೆಎಲ್ ರಾಹುಲ್ ಮೊಣಕೈ ನೋವು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ಪರ ಆಡಲು ಅವರು ಲಭ್ಯವಿರುವುದಿಲ್ಲ.
icon

(7 / 9)

ಅತ್ತ ಕನ್ನಡಿಗ ಕೆಎಲ್ ರಾಹುಲ್ ಮೊಣಕೈ ನೋವು ಅನುಭವಿಸುತ್ತಿರುವುದಾಗಿ ಹೇಳಿದ್ದಾರೆ. ಹೀಗಾಗಿ ಪಂಜಾಬ್ ವಿರುದ್ಧದ ರಣಜಿ ಟ್ರೋಫಿ ಪಂದ್ಯಕ್ಕೆ ಕರ್ನಾಟಕ ಪರ ಆಡಲು ಅವರು ಲಭ್ಯವಿರುವುದಿಲ್ಲ.

(AP)

ರಣಜಿ ಟ್ರೋಫಿಯ ಅಂತಿಮ ಸುತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭದ ವೇಳೆಗೆ ಕೊನೆಗೊಳ್ಳಲಿದೆ. ರಿಷಭ್ ಪಂತ್ (ದೆಹಲಿ), ಯಶಸ್ವಿ ಜೈಸ್ವಾಲ್ (ಮುಂಬೈ) ಮತ್ತು ಶುಭ್ಮನ್ ಗಿಲ್ (ಪಂಜಾಬ್) ಜನವರಿ 23ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿ ಪಂದ್ಯಗಳಿಗೆ ಲಭ್ಯರಿದ್ದಾರೆ.
icon

(8 / 9)

ರಣಜಿ ಟ್ರೋಫಿಯ ಅಂತಿಮ ಸುತ್ತು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಆರಂಭದ ವೇಳೆಗೆ ಕೊನೆಗೊಳ್ಳಲಿದೆ. ರಿಷಭ್ ಪಂತ್ (ದೆಹಲಿ), ಯಶಸ್ವಿ ಜೈಸ್ವಾಲ್ (ಮುಂಬೈ) ಮತ್ತು ಶುಭ್ಮನ್ ಗಿಲ್ (ಪಂಜಾಬ್) ಜನವರಿ 23ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿ ಪಂದ್ಯಗಳಿಗೆ ಲಭ್ಯರಿದ್ದಾರೆ.

(BCCI- X)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ.
icon

(9 / 9)

ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಎಚ್‌ಟಿ ಕನ್ನಡ ಸುದ್ದಿತಾಣಕ್ಕೆ ಭೇಟಿ ನೀಡಿ.


ಇತರ ಗ್ಯಾಲರಿಗಳು