ಕನ್ನಡ ಕಿರುತೆರೆಗೂ ಬರ್ತಿದೆ ಬ್ಲಾಕ್​ಬಸ್ಟರ್ ‘ಸಂಕ್ರಾಂತಿಕಿ ವಸ್ತುನ್ನಾಂ’; ವೆಂಕಟೇಶ್ ನಟನೆಯ ಈ ಚಿತ್ರ ಎಲ್ಲಿ, ಎಷ್ಟೊತ್ತಿಗೆ ಪ್ರಸಾರ?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡ ಕಿರುತೆರೆಗೂ ಬರ್ತಿದೆ ಬ್ಲಾಕ್​ಬಸ್ಟರ್ ‘ಸಂಕ್ರಾಂತಿಕಿ ವಸ್ತುನ್ನಾಂ’; ವೆಂಕಟೇಶ್ ನಟನೆಯ ಈ ಚಿತ್ರ ಎಲ್ಲಿ, ಎಷ್ಟೊತ್ತಿಗೆ ಪ್ರಸಾರ?

ಕನ್ನಡ ಕಿರುತೆರೆಗೂ ಬರ್ತಿದೆ ಬ್ಲಾಕ್​ಬಸ್ಟರ್ ‘ಸಂಕ್ರಾಂತಿಕಿ ವಸ್ತುನ್ನಾಂ’; ವೆಂಕಟೇಶ್ ನಟನೆಯ ಈ ಚಿತ್ರ ಎಲ್ಲಿ, ಎಷ್ಟೊತ್ತಿಗೆ ಪ್ರಸಾರ?

ವೆಂಕಟೇಶ್ ದಗ್ಗುಬಾಟಿ ನಟನೆಯ ಸಂಕ್ರಾಂತಿಕಿ ವಸ್ತುನ್ನಾಂ ಚಿತ್ರಚಿತ್ರಮಂದಿರಗಳಲ್ಲಿ ಬ್ಲಾಕ್‌ ಬಸ್ಟರ್ ಹಿಟ್ ಆಗಿದೆ. ಈ ಚಿತ್ರ ಒಟಿಟಿಯಲ್ಲಿಯೂ ಬಿಡುಗಡೆಯಾಗಿದೆ. ಇದೀಗ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗೆ ಪ್ರಸಾರವಾಗಲಿದೆ.

ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ವಿಭಿನ್ನ ಶೀರ್ಷಿಕೆಯೊಂದಿಗೆ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ.
icon

(1 / 7)

ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿದೆ. ಇದು ವಿಭಿನ್ನ ಶೀರ್ಷಿಕೆಯೊಂದಿಗೆ ಟಿವಿಯಲ್ಲಿ ಪ್ರೀಮಿಯರ್ ಆಗಲಿದೆ.

ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಇದೀಗ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗ ಬಿಡುಗಡೆಯಾಗಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
icon

(2 / 7)

ತೆಲುಗಿನಲ್ಲಿ ಬಿಡುಗಡೆಯಾದ ದಗ್ಗುಬಾಟಿ ವೆಂಕಟೇಶ್ ಅವರ ಸೂಪರ್ ಹಿಟ್ ಚಿತ್ರ ಸಂಕ್ರಾಂತಿಕಿ ವಸ್ತುನ್ನಾಂ ಇದೀಗ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇದೀಗ ಈ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಹೊಸ ಹೆಸರಿನೊಂದಿಗ ಬಿಡುಗಡೆಯಾಗಲಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ವೆಂಕಟೇಶ್ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಜೀ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಏಪ್ರಿಲ್ 27 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
icon

(3 / 7)

ವೆಂಕಟೇಶ್ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಜೀ ಕನ್ನಡ ಟಿವಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ಏಪ್ರಿಲ್ 27 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ತೆಲುಗು ಚಿತ್ರವು ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ. ಈ ಸಿನಿಮಾದ ಕಥೆ- ದೊಡ್ಡ ಕಂಪನಿಯ ಸಿಇಒ ಮತ್ತು ಅಮೆರಿಕದ ಶ್ರೀಮಂತ ಉದ್ಯಮಿ ಸತ್ಯ ಹೈದರಾಬಾದ್ ಗೆ ಬರುತ್ತಾರೆ ಮತ್ತು ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವುದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆ.
icon

(4 / 7)

ತೆಲುಗು ಚಿತ್ರವು ಕನ್ನಡ ಟಿವಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ. ಈ ಸಿನಿಮಾದ ಕಥೆ- ದೊಡ್ಡ ಕಂಪನಿಯ ಸಿಇಒ ಮತ್ತು ಅಮೆರಿಕದ ಶ್ರೀಮಂತ ಉದ್ಯಮಿ ಸತ್ಯ ಹೈದರಾಬಾದ್ ಗೆ ಬರುತ್ತಾರೆ ಮತ್ತು ಅವರನ್ನು ಸುರಕ್ಷಿತವಾಗಿ ವಾಪಸ್ ಕಳುಹಿಸುವುದು ಮುಖ್ಯಮಂತ್ರಿಯ ಜವಾಬ್ದಾರಿಯಾಗಿದೆ.

ಮೀನಾಕ್ಷಿ ಸಸ್ಪೆಂಡ್‌ ಆಗಿರುವ ತನ್ನ ಮಾಜಿ ಗೆಳೆಯ ಡಿಸಿಪಿ ರಾಜು ಅವರ ಸಹಾಯವನ್ನು ಕೋರುತ್ತಾಳೆ. ರಾಜು ಹಿಂದಿನದನ್ನು ಮರೆತು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ವಾಸಿಸುತ್ತ ಇರುತ್ತಾನೆ. ಮೀನಾಕ್ಷಿ ರಾಜುವನ್ನು ಹೇಗೆ ಮನವೊಲಿಸುತ್ತಾಳೆ? ರಾಜು ಸತ್ಯನನ್ನು ಉಳಿಸುತ್ತಾನೋ ಇಲ್ಲವೋ ಎಂಬುದು ಚಿತ್ರದ ಕಥೆ.
icon

(5 / 7)

ಮೀನಾಕ್ಷಿ ಸಸ್ಪೆಂಡ್‌ ಆಗಿರುವ ತನ್ನ ಮಾಜಿ ಗೆಳೆಯ ಡಿಸಿಪಿ ರಾಜು ಅವರ ಸಹಾಯವನ್ನು ಕೋರುತ್ತಾಳೆ. ರಾಜು ಹಿಂದಿನದನ್ನು ಮರೆತು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಸಂತೋಷದಿಂದ ವಾಸಿಸುತ್ತ ಇರುತ್ತಾನೆ. ಮೀನಾಕ್ಷಿ ರಾಜುವನ್ನು ಹೇಗೆ ಮನವೊಲಿಸುತ್ತಾಳೆ? ರಾಜು ಸತ್ಯನನ್ನು ಉಳಿಸುತ್ತಾನೋ ಇಲ್ಲವೋ ಎಂಬುದು ಚಿತ್ರದ ಕಥೆ.

ಆದರೆ, ರಾಜು ಅವರ ಪತ್ನಿ ಭಾಗ್ಯಳಿಗೆ ಡೌಟ್‌ ಬರುತ್ತದೆ. ತನ್ನ ಗಂಡನಿಗೂ ಮೀನಾಕ್ಷಿಗೂ ಲವ್‌ ಇರಬಹುದು. ನನ್ನನ್ನು ಬಿಟ್ಟು ವೈ.ಡಿ. ರಾಜು ಅವರನ್ನು ವಿವಾಹವಾಗಬಹುದು ಎಂದುಕೊಳ್ಳುತ್ತಾಳೆ. ಈಕೆಯ ಎಂಟ್ರಿ ಬಳಿಕ ಪರಿಸ್ಥಿತಿ ಜಟಿಲವಾಗುತ್ತದೆ.
icon

(6 / 7)

ಆದರೆ, ರಾಜು ಅವರ ಪತ್ನಿ ಭಾಗ್ಯಳಿಗೆ ಡೌಟ್‌ ಬರುತ್ತದೆ. ತನ್ನ ಗಂಡನಿಗೂ ಮೀನಾಕ್ಷಿಗೂ ಲವ್‌ ಇರಬಹುದು. ನನ್ನನ್ನು ಬಿಟ್ಟು ವೈ.ಡಿ. ರಾಜು ಅವರನ್ನು ವಿವಾಹವಾಗಬಹುದು ಎಂದುಕೊಳ್ಳುತ್ತಾಳೆ. ಈಕೆಯ ಎಂಟ್ರಿ ಬಳಿಕ ಪರಿಸ್ಥಿತಿ ಜಟಿಲವಾಗುತ್ತದೆ.

ಹೀಗಾಗಿ ಈ ಸಿನಿಮಾದ ಕಥೆಯಲ್ಲಿ ಸಾಹಸ ದೃಶ್ಯಗಳೊಂದಿಗೆ ಕಾಮಿಡಿ ಸನ್ನಿವೇಶಗಳು ಜತೆಯಾಗುತ್ತವೆ. ಸಂಕ್ರಾಂತಿಕಿ ವಸ್ತುನಾಂ ಸಿನಿಮಾವು ಜಾಗತಿಕ ಬಾಕ್ಸ್‌ಆಫೀಸ್‌ನಲ್ಲಿ 240 ಕೋಟಿ ರೂ. ಗಳಿಸಿದೆ. ಅನಿಲ್ ರಾವಿಪುಡಿ ನಿರ್ದೇಶನದ ಮತ್ತು ದಗ್ಗುಬಾಟಿ ವೆಂಕಟೇಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಸಂಕ್ರಾಂತಿ' ಕನ್ನಡದಲ್ಲಿ ಪ್ರಸಾರವಾಗಲಿದೆ. ಐಶ್ವರ್ಯಾ ರಾಜೇಶ್ ಮತ್ತು ಮೀನಾಕ್ಷಿ ಚೌಧರಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ನರೇಶ್ ಮತ್ತು ಸಾಯಿಕುಮಾರ್ ಮುಖ್ಯ ಪಾತ್ರಗಳಲ್ಲಿದ್ದಾರೆ.  ಏಪ್ರಿಲ್ 27 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ಪ್ರೇಮ ಸಂಕ್ರಾಂತಿ' ಎಂಬ ಹೆಸರಿನಲ್ಲಿ ಪ್ರಸಾರವಾಗಲಿದೆ.
icon

(7 / 7)

ಹೀಗಾಗಿ ಈ ಸಿನಿಮಾದ ಕಥೆಯಲ್ಲಿ ಸಾಹಸ ದೃಶ್ಯಗಳೊಂದಿಗೆ ಕಾಮಿಡಿ ಸನ್ನಿವೇಶಗಳು ಜತೆಯಾಗುತ್ತವೆ. ಸಂಕ್ರಾಂತಿಕಿ ವಸ್ತುನಾಂ ಸಿನಿಮಾವು ಜಾಗತಿಕ ಬಾಕ್ಸ್‌ಆಫೀಸ್‌ನಲ್ಲಿ 240 ಕೋಟಿ ರೂ. ಗಳಿಸಿದೆ. ಅನಿಲ್ ರಾವಿಪುಡಿ ನಿರ್ದೇಶನದ ಮತ್ತು ದಗ್ಗುಬಾಟಿ ವೆಂಕಟೇಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಸಂಕ್ರಾಂತಿ' ಕನ್ನಡದಲ್ಲಿ ಪ್ರಸಾರವಾಗಲಿದೆ. ಐಶ್ವರ್ಯಾ ರಾಜೇಶ್ ಮತ್ತು ಮೀನಾಕ್ಷಿ ಚೌಧರಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ನರೇಶ್ ಮತ್ತು ಸಾಯಿಕುಮಾರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಏಪ್ರಿಲ್ 27 ರಂದು ಸಂಜೆ 4.30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ಪ್ರೇಮ ಸಂಕ್ರಾಂತಿ' ಎಂಬ ಹೆಸರಿನಲ್ಲಿ ಪ್ರಸಾರವಾಗಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು