Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ

Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ

  • ಕರ್ನಾಟಕದ ಪ್ರಮುಖ ನಾಗ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಹಾಗೂ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಆ ಕ್ಷಣಗಳು ಹೀಗಿದ್ದವು.

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್‌ ಬಂದರೆ ಹದಿನೈದು ದಿನಗಳ ಕಾಲ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. 
icon

(1 / 8)

ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್‌ ಬಂದರೆ ಹದಿನೈದು ದಿನಗಳ ಕಾಲ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. 

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವವಂತೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.
icon

(2 / 8)

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವವಂತೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.

ಷಷ್ಠಿ ದಿನಕ್ಕೂ ಮುನ್ನ ಸತತವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಶೇಷವಾಹನೋತ್ಸವ,  ಅಶ್ವವಾಹನೋತ್ಸವ,  ಮಯೂರ ವಾಹನೋತ್ಸವ ಪ್ರಮುಖವಾದವು.
icon

(3 / 8)

ಷಷ್ಠಿ ದಿನಕ್ಕೂ ಮುನ್ನ ಸತತವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಶೇಷವಾಹನೋತ್ಸವ,  ಅಶ್ವವಾಹನೋತ್ಸವ,  ಮಯೂರ ವಾಹನೋತ್ಸವ ಪ್ರಮುಖವಾದವು.

ಷಷ್ಠಿ ದಿನ ನಡೆಯುವ ಮಹಾರಥೋತ್ಸವಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ತರಲಾಗುತ್ತದೆ.
icon

(4 / 8)

ಷಷ್ಠಿ ದಿನ ನಡೆಯುವ ಮಹಾರಥೋತ್ಸವಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ತರಲಾಗುತ್ತದೆ.

ದೇವರ ಉತ್ಸವ ಮೂರ್ತಿಯನ್ನು ದೇಗುಲದಿಂದ ರಥೋತ್ಸವಕ್ಕೆ ತರುವ ಹೊತ್ತಿಗೆ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಾರೆ.
icon

(5 / 8)

ದೇವರ ಉತ್ಸವ ಮೂರ್ತಿಯನ್ನು ದೇಗುಲದಿಂದ ರಥೋತ್ಸವಕ್ಕೆ ತರುವ ಹೊತ್ತಿಗೆ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಾರೆ.

ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ತೆಗೆದುಕೊಂಡು ಹೋಗುವಾಗಲೂ ಭಕ್ತರು ದರ್ಶನ ಪಡೆದು ಪುನೀತರಾಗುತ್ತಾರೆ.
icon

(6 / 8)

ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ತೆಗೆದುಕೊಂಡು ಹೋಗುವಾಗಲೂ ಭಕ್ತರು ದರ್ಶನ ಪಡೆದು ಪುನೀತರಾಗುತ್ತಾರೆ.

ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ರಥೋತ್ಸವವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸ್ಥಳೀಯರು ಹಗ್ಗವನ್ನು ಸಿದ್ದಪಡಿಸುತ್ತಾರೆ. ಅಲಂಕೃತಗೊಂಡ ರಥ ನೋಡುವುದೇ ಚಂದ.
icon

(7 / 8)

ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ರಥೋತ್ಸವವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸ್ಥಳೀಯರು ಹಗ್ಗವನ್ನು ಸಿದ್ದಪಡಿಸುತ್ತಾರೆ. ಅಲಂಕೃತಗೊಂಡ ರಥ ನೋಡುವುದೇ ಚಂದ.

ಅಲ್ಲಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಷಷ್ಠಿಯ ದಿನದಂದು ಎಳೆಯಲಾಗುತ್ತದೆ. ಇದಕ್ಕಾಗಿಯೇ ನಾಡಿನ ನಾನಾ ಭಾಗಗಳಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಥೋತ್ಸವದಲ್ಲಿ ಭಾಗಿಯಾಗುವರು.
icon

(8 / 8)

ಅಲ್ಲಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥವನ್ನು ಷಷ್ಠಿಯ ದಿನದಂದು ಎಳೆಯಲಾಗುತ್ತದೆ. ಇದಕ್ಕಾಗಿಯೇ ನಾಡಿನ ನಾನಾ ಭಾಗಗಳಿಂದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸುವ ಭಕ್ತರು ರಥೋತ್ಸವದಲ್ಲಿ ಭಾಗಿಯಾಗುವರು.

(Pic: Praveen Subramanya)


ಇತರ ಗ್ಯಾಲರಿಗಳು