Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು

Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು

  • ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿ ಬದಿಯಲ್ಲೇ ಇರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿ ನಡೆಯಿತು.
  • ಚಿತ್ರ ಮಾಹಿತಿ: ಹರೀಶ ಮಾಂಬಾಡಿ.ಮಂಗಳೂರು

ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು
icon

(1 / 10)

ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು

ಪೂರ್ವಾಹ್ನ ರಥಪೂಜೆ, ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಲಿಹೊರಟು, ರಥ ಪ್ರದಕ್ಷಿಣೆ, ಬಳಿಕ ರಥಾರೋಹಣ ನಡೆಯಿತು.
icon

(2 / 10)

ಪೂರ್ವಾಹ್ನ ರಥಪೂಜೆ, ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಲಿಹೊರಟು, ರಥ ಪ್ರದಕ್ಷಿಣೆ, ಬಳಿಕ ರಥಾರೋಹಣ ನಡೆಯಿತು.

ಈ ಸಂಭ್ರಮಕ್ಕೆ ಸಾಕ್ಷಿಯಾಗಿ ಬಾನೆತ್ತರದಲ್ಲಿ ಗರುಡಗಳೆರಡು ಪ್ರತ್ಯಕ್ಷಗೊಂಡು ರಥ, ಮತ್ತು ದೇವಳದ ಸುತ್ತ ಪ್ರದಕ್ಷಿಣೆಗೈದವು. ಬಳಿಕ ರಥದಲ್ಲಿ ಶ್ರೀದೇವರಿಗೆ ಪೂಜೆ, ಆರತಿ ನಡೆಯುತ್ತಿರುವ ಹೊತ್ತಿನಲ್ಲಿ ಭಕ್ತರು ಗೋವಿಂದನಾಮ ಸ್ಮರಣೆ ಜೊತೆ ರಥವೆಳೆದು ಪುನೀತರಾದರು. 
icon

(3 / 10)

ಈ ಸಂಭ್ರಮಕ್ಕೆ ಸಾಕ್ಷಿಯಾಗಿ ಬಾನೆತ್ತರದಲ್ಲಿ ಗರುಡಗಳೆರಡು ಪ್ರತ್ಯಕ್ಷಗೊಂಡು ರಥ, ಮತ್ತು ದೇವಳದ ಸುತ್ತ ಪ್ರದಕ್ಷಿಣೆಗೈದವು. ಬಳಿಕ ರಥದಲ್ಲಿ ಶ್ರೀದೇವರಿಗೆ ಪೂಜೆ, ಆರತಿ ನಡೆಯುತ್ತಿರುವ ಹೊತ್ತಿನಲ್ಲಿ ಭಕ್ತರು ಗೋವಿಂದನಾಮ ಸ್ಮರಣೆ ಜೊತೆ ರಥವೆಳೆದು ಪುನೀತರಾದರು. 

ಬಳಿಕ ರಥದ ಬಳಿ ಬಟ್ಟಲು ಕಾಣಿಕೆ ಉತ್ಸವ ನಡೆಯಿತು. ದೇವರು ರಥದಿಂದಿಳಿದು ದೇವಳ ಸುತ್ತ ಪ್ರದಕ್ಷಿಣೆ ಬಂದ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸುಮಾರು 5 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
icon

(4 / 10)

ಬಳಿಕ ರಥದ ಬಳಿ ಬಟ್ಟಲು ಕಾಣಿಕೆ ಉತ್ಸವ ನಡೆಯಿತು. ದೇವರು ರಥದಿಂದಿಳಿದು ದೇವಳ ಸುತ್ತ ಪ್ರದಕ್ಷಿಣೆ ಬಂದ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸುಮಾರು 5 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

ಬಳಿಕ ದೇವರ ಬಲಿ, ಗೋವಿಂದ ನಾಮಸ್ಮರಣೆ ಜೊತೆ ರಥ ಪ್ರದಕ್ಷಿಣೆ ಮಾಡಿ ರಥಾರೋಹಣ ನಡೆದು ಸುಡುಮದ್ದು ಪ್ರದರ್ಶನ ಬಾನೆತ್ತರದಲ್ಲೂ ನಡೆಯಿತು. ರಥಗದ್ದೆಯಲ್ಲಿ ರಥವೆಳೆದ ನಂತರ ಸಂಪಿಗೆ ಕಟ್ಟೆಪೂಜೆ, ದೇವರ ಬಲಿ, ವಸಂತಕಟ್ಟೆಪೂಜೆ, ಅಷ್ಟಾವಧಾನ ಸೇವೆ, ಬಟ್ಟಲು ಕಾಣಿಕೆ ನಡೆಯಿತು.
icon

(5 / 10)

ಬಳಿಕ ದೇವರ ಬಲಿ, ಗೋವಿಂದ ನಾಮಸ್ಮರಣೆ ಜೊತೆ ರಥ ಪ್ರದಕ್ಷಿಣೆ ಮಾಡಿ ರಥಾರೋಹಣ ನಡೆದು ಸುಡುಮದ್ದು ಪ್ರದರ್ಶನ ಬಾನೆತ್ತರದಲ್ಲೂ ನಡೆಯಿತು. ರಥಗದ್ದೆಯಲ್ಲಿ ರಥವೆಳೆದ ನಂತರ ಸಂಪಿಗೆ ಕಟ್ಟೆಪೂಜೆ, ದೇವರ ಬಲಿ, ವಸಂತಕಟ್ಟೆಪೂಜೆ, ಅಷ್ಟಾವಧಾನ ಸೇವೆ, ಬಟ್ಟಲು ಕಾಣಿಕೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರಣ್ ಮಾಣಿ ಮತ್ತು ಬಳಗದ ಭಕ್ತಿಸಂಗೀತ, ಉಂಡೆಮನೆ ಕೃಷ್ಣಭಟ್ ಮತ್ತು ತಂಡದ ದಕ್ಷಾಧ್ವರ, ಗಿರಿಜಾಕಲ್ಯಾಣ ಯಕ್ಷಗಾನ ನಡೆದವು.
icon

(6 / 10)

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರಣ್ ಮಾಣಿ ಮತ್ತು ಬಳಗದ ಭಕ್ತಿಸಂಗೀತ, ಉಂಡೆಮನೆ ಕೃಷ್ಣಭಟ್ ಮತ್ತು ತಂಡದ ದಕ್ಷಾಧ್ವರ, ಗಿರಿಜಾಕಲ್ಯಾಣ ಯಕ್ಷಗಾನ ನಡೆದವು.

ಪೋಳ್ಯದಲ್ಲಿ ಗರುಡ ರಥೋತ್ಸವ ಸೇವೆ ಪ್ರಸಿದ್ಧ. ತಿರುಪತಿ ತಿರುಮಲದಲ್ಲಿ ನಡೆಯುವ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ಗರುಡ ರಥೋತ್ಸವ ಸೇವೆ ಪೋಳ್ಯ ಮಠದಲ್ಲಿ ಮಾತ್ರ ಕಾಣಸಿಗುವುದು ಎಂಬ ಪ್ರತೀತಿ ಇರುವ ಕಾರಣ, ಈ ಬಾರಿ 110 ಮಂದಿ ಗರುಡ ರಥೋತ್ಸವದಲ್ಲಿ ಸೇವಾ ಹರಕೆ ಹೊತ್ತಿದ್ದರು. ಫೆಬ್ರವರಿ 02 ಮತ್ತು 03 ರಂದು ತಮ್ಮವರೊಂದಿಗೆ ಸೇರಿ ಶ್ರೀದೇವರ ಸಹಿತವಾಗಿ ಗರುಡರಥವನ್ನೆಳೆದು ಎಳೆದು ಧನ್ಯರಾದರು.
icon

(7 / 10)

ಪೋಳ್ಯದಲ್ಲಿ ಗರುಡ ರಥೋತ್ಸವ ಸೇವೆ ಪ್ರಸಿದ್ಧ. ತಿರುಪತಿ ತಿರುಮಲದಲ್ಲಿ ನಡೆಯುವ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ಗರುಡ ರಥೋತ್ಸವ ಸೇವೆ ಪೋಳ್ಯ ಮಠದಲ್ಲಿ ಮಾತ್ರ ಕಾಣಸಿಗುವುದು ಎಂಬ ಪ್ರತೀತಿ ಇರುವ ಕಾರಣ, ಈ ಬಾರಿ 110 ಮಂದಿ ಗರುಡ ರಥೋತ್ಸವದಲ್ಲಿ ಸೇವಾ ಹರಕೆ ಹೊತ್ತಿದ್ದರು. ಫೆಬ್ರವರಿ 02 ಮತ್ತು 03 ರಂದು ತಮ್ಮವರೊಂದಿಗೆ ಸೇರಿ ಶ್ರೀದೇವರ ಸಹಿತವಾಗಿ ಗರುಡರಥವನ್ನೆಳೆದು ಎಳೆದು ಧನ್ಯರಾದರು.

ಕೊನೆಯ ದಿನವಾದ ಫೆ. 5ರಂದು ಕ್ಷೇತ್ರ ಪಾಲ ದೈವಗಳಾದ ದೂಮಾವತಿ ಮತ್ತು ಗುಳಿಗ ದೈವದ ಹಾಗೂ ಎರಡು ಪರಿವಾರ ದೈವಗಳಿಗೆ ನೆಮೋತ್ಸವ ನಡೆಯಿತು. 
icon

(8 / 10)

ಕೊನೆಯ ದಿನವಾದ ಫೆ. 5ರಂದು ಕ್ಷೇತ್ರ ಪಾಲ ದೈವಗಳಾದ ದೂಮಾವತಿ ಮತ್ತು ಗುಳಿಗ ದೈವದ ಹಾಗೂ ಎರಡು ಪರಿವಾರ ದೈವಗಳಿಗೆ ನೆಮೋತ್ಸವ ನಡೆಯಿತು. 

 ನಾಲ್ಕು ದಿನಗಳಿಂದ ನಿತ್ಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಕಾಫಿ, ರಾತ್ರಿಯ ಭೋಜನ ಸೇರಿ 12 ಸಾವೀರಕ್ಕಿಂತ ಮಿಕ್ಕಿ ಭಕ್ತರಿಗೆ ಸಂತರ್ಪಣೆ ನಡೆಯಿತು
icon

(9 / 10)

 ನಾಲ್ಕು ದಿನಗಳಿಂದ ನಿತ್ಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಕಾಫಿ, ರಾತ್ರಿಯ ಭೋಜನ ಸೇರಿ 12 ಸಾವೀರಕ್ಕಿಂತ ಮಿಕ್ಕಿ ಭಕ್ತರಿಗೆ ಸಂತರ್ಪಣೆ ನಡೆಯಿತು

ಮಹಾಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಈ ವರ್ಷ 27,777  ರೂಪಾಯಿಗೆ ಪೋಳ್ಯ ಅಣ್ಣಪ್ಪ ಭಟ್ ಪಡೆದುಕೊಂಡು ಅಂದಾಜು 10 ಕಿಲೋ ಗಾತ್ರದ ಮಹಾಲಡ್ಡನ್ನು ನೆರೆದ ಭಕ್ತರಿಗೆ  ಹಂಚಿದರು.
icon

(10 / 10)

ಮಹಾಲಡ್ಡು ಹರಾಜು ಪ್ರಕ್ರಿಯೆಯಲ್ಲಿ ಈ ವರ್ಷ 27,777  ರೂಪಾಯಿಗೆ ಪೋಳ್ಯ ಅಣ್ಣಪ್ಪ ಭಟ್ ಪಡೆದುಕೊಂಡು ಅಂದಾಜು 10 ಕಿಲೋ ಗಾತ್ರದ ಮಹಾಲಡ್ಡನ್ನು ನೆರೆದ ಭಕ್ತರಿಗೆ  ಹಂಚಿದರು.


ಇತರ ಗ್ಯಾಲರಿಗಳು