ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಂಡುಬಂದ 10 ಜೀವನ ಪಾಠಗಳು
ದರ್ಶನ್ ತೂಗುದೀಪ ಕೇಸ್; ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಬಹಳ ಸಂಚಲನ ಮೂಡಿಸಿದ ಹೈಪ್ರೊಫೈಲ್ ಕೇಸ್. ಇದರಲ್ಲಿ ನಟ ದರ್ಶನ್ ತೂಗುದೀಪ ಸೇರಿ 17 ಆರೋಪಿಗಳು ಜೈಲು ಸೇರಿದರು. ಈ ಪ್ರಕರಣದಲ್ಲಿ ಕಂಡುಬಂದ 10 ಜೀವನ ಪಾಠಗಳ ಕಡೆಗೊಂದು ನೋಟ.
(1 / 11)
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಆರೋಪಿಗಳಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಸಂಗಡಿಗರು ಈಗ ವಿಚಾರಣಾಧೀನ ಕೈದಿಗಳಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆದು ಕೋರ್ಟ್ ತೀರ್ಪು ನೀಡಿದ ಮೇಲಷ್ಟೆ ಅಪರಾಧಿಗಳು ಯಾರೆಂಬುದು ಘೋಷಣೆ ಆಗಲಿದೆ. ಆದರೆ, ಈ ಪ್ರಕರಣದಲ್ಲಿ ಮೇಲ್ನೋಟಕ್ಕೆ ಸಿಗುವ 10 ಜೀವನ ಪಾಠಗಳಿವು. (ಸಾಂಕೇತಿಕ ಚಿತ್ರ)
(2 / 11)
1) ಮೂರನೆಯವರ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡಬಾರದು. ಸೊಂಟದ ಕೆಳಗಿನ ಮಾತುಗಳನ್ನಾಡಿದರೆ, ಕೃತ್ಯವೆಸಗಿದರೆ ಅದು ಪ್ರಾಣಕ್ಕೇ ಸಂಚಕಾರ ಉಂಟುಮಾಡಬಹುದು.
(3 / 11)
2) ವಿವಾಹಿತರಾದ ಬಳಿಕ ಪುರುಷನೇ ಆಗಲಿ, ಸ್ತ್ರೀಯೇ ಆಗಲಿ ದಾಂಪತ್ಯದ ಚೌಕಟ್ಟು ಮೀರಿ ಹೋಗಬಾರದು. ಮೀರಿ ಹೋದರೆ ಸಂಕಟ ಅನುಭವಿಸುವವರು ಮಗ/ಮಗಳು, ಅಪ್ಪ, ಅಮ್ಮ ಮತ್ತು ಪರಿವಾರದವರು. ದಾಂಪತ್ಯ ಸುಖಕ್ಕೆ ಸುಖ ಸಂಸಾರದ ಸೂತ್ರ ಅನುಸರಿಸಬೇಕು.
(canva)(4 / 11)
3) ಮನೆ ಊಟ ಹೇಗೆಯೇ ಇರಲಿ, ಮನೆ ಊಟ ಮನೆ ಊಟವೇ. ಅದುವೇ ಸುರಕ್ಷಿತ. ಅನಿವಾರ್ಯಕ್ಕಷ್ಟೇ ಹೋಟೆಲ್ ಊಟ. ಅದು ಸುರಕ್ಷಿತವಲ್ಲ. ಆರೋಗ್ಯಕ್ಕೂ ಒಳ್ಳೆಯದಲ್ಲ.
(canva)(5 / 11)
4) ಸೆಲೆಬ್ರಿಟಿ ಬದುಕಿಗೆ ಆಸೆಪಟ್ಟು ಅಡ್ಡದಾರಿ ಹಿಡಿದರೆ ಯಶಸ್ಸು ಸಿಗದು. ಪರಿಶ್ರಮ ಪಡಬೇಕು. ನಿಯತ್ತಾಗಿ ದುಡಿಯಬೇಕು. ದುಡಿಮೆಯಲ್ಲಿ ಸ್ಥಿರತೆ ಇರಬೇಕು. ತಡವಾದರೂ ಯಶಸ್ಸು ಸಿಕ್ಕೇ ಸಿಗುತ್ತದೆ.
(canva)(6 / 11)
5) ಸೆಲೆಬ್ರಿಟಿ ಅಥವಾ ತಾರಾಪಟ್ಟ ಅಥವಾ ಸ್ಟಾರ್ ಆಗಿಬಿಟ್ಟರೆ ಅದೊಂದು ರೀತಿ ಉತ್ತುಂಗ. ಅದನ್ನು ಉಳಿಸಿಕೊಳ್ಳುವುದೇ ಸಾಹಸ. ಅಹಂಕಾರದಿಂದ ಮೆರೆದರೆ, ಅಥವಾ ಸುತ್ತಮುತ್ತ ಜೊತೆಗೇ ಇರುವವರ ಪ್ರಭಾವಕ್ಕೆ ಒಳಗಾಗಿ ಮೈಮರೆತರೆ, ವಿವೇಚನೆ ಇಲ್ಲದೆ ವರ್ತಿಸಿದರೆ ಆಗ ಬೀದಿಗೆ ತಂದು ನಿಲ್ಲಿಸುತ್ತೆ ಬದುಕು.
(canva)(7 / 11)
6) ಸೆಲೆಬ್ರಿಟಿ ಸ್ಟೇಟಸ್ ಬಂದ ಕೂಡಲೇ ಜೊತೆಯಾಗುವವರ ಮೇಲೆ ನಿಗಾ ಇರಬೇಕು. ವೈಯಕ್ತಿಕ ಬದುಕು, ಹಳೆಯ ಸ್ನೇಹಿತರು, ಬಂಧು ಮಿತ್ರರು ದೂರಾಗದಂತೆ ನೋಡಿಕೊಳ್ಳಬೇಕು.
(canva)(8 / 11)
7) ಮದ್ಯಪಾನ ಮಾಡಿ ಅಮಲೇರಿದಾಗ ಮಾತ್ರ ಬರುವ ಎಲ್ಲಿಲ್ಲದ ಧೈರ್ಯ, ಅಮಲು ಇಳಿದಾಗ ಇರಲ್ಲ. ಇಲಿ ಹುಲಿಯಾಗಲು ಸಾಧ್ಯವಿಲ್ಲ. ಅಂತೆಯೇ ಮನುಷ್ಯ ಮನುಷ್ಯನಾಗಿಯೇ ಇರಬೇಕು. ಎಲ್ಲವೂ ಇತಿಮಿತಿಯಲ್ಲಿದ್ದರೆ ಚೆನ್ನ.
(canva)(9 / 11)
8) ಸ್ವಾರ್ಥ ಸಾಧಕರು ಮತ್ತು ಹೊಗಳುಭಟರ ನಡುವೆ ಮೈಮರೆತರೆ ಅಪಾಯಕಟ್ಟಿಟ್ಟ ಬುತ್ತಿ. ಸುತ್ತಮುತ್ತ ಪ್ರಚೋದಕರು ಇರುತ್ತಾರೆ. ಪ್ರಚೋದನೆಗೆ ಒಳಗಾಗದೇ ಇದ್ದರೆ ಬದುಕು ಸುಂದರ.
(canva)(10 / 11)
9) ಗುರುತು ಪರಿಚಯ ಇಲ್ಲದವರು ಹಣದ ಆಮಿಷ ಒಡ್ಡಿ ಕೆಲಸ ಮಾಡುವಂತೆ ಪುಸಲಾಯಿಸಿದಾಗ ಹಿಂದೆ ಮುಂದೆ ನೋಡದೆ ಒಪ್ಪಿಕೊಳ್ಳಬಾರದು. ಒಪ್ಪಿಕೊಂಡರೆ ಸಂಕಷ್ಟಕ್ಕೀಡಾಗುವುದು ಒಪ್ಪಿಕೊಂಡವರಷ್ಟೇ ಅಲ್ಲ, ಅವರ ಮನೆಯವರು ಕೂಡ.
ಇತರ ಗ್ಯಾಲರಿಗಳು