ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ

ಕೇರಳ ಶಾಲೆಗಳಲ್ಲಿ ವಾಟರ್ ಬ್ರೇಕ್ ಮರುಜಾರಿ; ಏನಿದು ಯೋಜನೆ, ಬೇಸಿಗೆಯಲ್ಲಿ ವಿದ್ಯಾರ್ಥಿಗಳಿಗೆ ಹೈಡ್ರೇಷನ್ ವಿರಾಮದ ಅಗತ್ಯವನ್ನ ತಿಳಿಯಿರಿ

  • Water Bell in Kerala Schools: ಕೇರಳದ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗಿದೆ. ಏನಿದು ವಾಟರ್ ಬೆಲ್, ಇದರಿಂದ ವಿದ್ಯಾರ್ಥಿಗಳಿಗೆ ಏನು ಪ್ರಯೋಜನ ಅನ್ನೋದರ ಮಾಹಿತಿ ಇಲ್ಲಿದೆ.

 ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 
icon

(1 / 6)

 ದಕ್ಷಿಣ ಭಾರತದಲ್ಲಿ ಸುಡು ಬಿಸಿಲಿಗೆ ಜನರು ನಲುಗಿ ಹೋಗುತ್ತಿದ್ದು, ಮನೆಯಿಂದ ಹೊರ ಬರೋದಿಕ್ಕೂ ಹಿಂದೆ ಮುಂದೆ ನೋಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ತಾಪಮಾನ ಏರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾಗದಂತೆ ಕೇರಳ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. 

ಕೇರಳ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗಿದೆ. ತರಗತಿಗಳ ಸಮಯದಲ್ಲಿ ವಿದ್ಯಾರ್ಥಿಗಳು ಸಮರ್ಪಕವಾದ ಹೈಡ್ರೀಕರಣವನ್ನು ಹೊಂದುವಂತೆ ಮಾಡುವುದೇ ಇದರ ಉದ್ದೇಶವಾಗಿದೆ.
icon

(2 / 6)

ಕೇರಳ ಶಾಲೆಗಳಲ್ಲಿ ವಾಟರ್ ಬೆಲ್ ವ್ಯವಸ್ಥೆಯನ್ನು ಮರು ಜಾರಿ ಮಾಡಲಾಗಿದೆ. ತರಗತಿಗಳ ಸಮಯದಲ್ಲಿ ವಿದ್ಯಾರ್ಥಿಗಳು ಸಮರ್ಪಕವಾದ ಹೈಡ್ರೀಕರಣವನ್ನು ಹೊಂದುವಂತೆ ಮಾಡುವುದೇ ಇದರ ಉದ್ದೇಶವಾಗಿದೆ.

ತಾಪಮಾನ ಹೆಚ್ಚಾದ ಪರಿಣಾಮ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕೇರಳ ಪಡೆದುಕೊಂಡಿತ್ತು. ಇದೀಗ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವಾಟರ್ ಬೆಲ್ ವ್ಯವಸ್ಥೆಯನ್ನ ಮರುಜಾರಿ ಮಾಡಿದೆ.
icon

(3 / 6)

ತಾಪಮಾನ ಹೆಚ್ಚಾದ ಪರಿಣಾಮ 2019ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕೇರಳ ಪಡೆದುಕೊಂಡಿತ್ತು. ಇದೀಗ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ವಾಟರ್ ಬೆಲ್ ವ್ಯವಸ್ಥೆಯನ್ನ ಮರುಜಾರಿ ಮಾಡಿದೆ.

ಬಿಸಿಲಿನಿಂದಾಗಿ ವಿದ್ಯಾರ್ಥಿಗಳು ಡಿಹೈಡ್ರೇಷನ್ ಆಗದಂತೆ ತಡೆಯುವುದು, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ
icon

(4 / 6)

ಬಿಸಿಲಿನಿಂದಾಗಿ ವಿದ್ಯಾರ್ಥಿಗಳು ಡಿಹೈಡ್ರೇಷನ್ ಆಗದಂತೆ ತಡೆಯುವುದು, ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ

ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅಗತ್ಯ ನೀರು ಕುಡಿಯಲು ಪ್ರೇರಿಸುವ ವ್ಯವಸ್ಥೆ ಇದಾಗಿದೆ. ಶಾಲಾ ಅವಧಿಯಲ್ಲಿ ದಿನಕ್ಕೆ 2 ಬಾರಿ ಅಂದರೆ ಬೆಳಗ್ಗೆ 10.30 ಮತ್ತು ಮಧ್ಯಾಹ್ನ 2.30ಕ್ಕೆ ಬೆಲ್ ಹೊಡೆದಾಗ 5 ನಿಮಿಷಗಳ ಕಾಲ ವಿದ್ಯಾರ್ಥಿಗಳು ನೀರು ಕುಡಿಯಬಹುದು.
icon

(5 / 6)

ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಅಗತ್ಯ ನೀರು ಕುಡಿಯಲು ಪ್ರೇರಿಸುವ ವ್ಯವಸ್ಥೆ ಇದಾಗಿದೆ. ಶಾಲಾ ಅವಧಿಯಲ್ಲಿ ದಿನಕ್ಕೆ 2 ಬಾರಿ ಅಂದರೆ ಬೆಳಗ್ಗೆ 10.30 ಮತ್ತು ಮಧ್ಯಾಹ್ನ 2.30ಕ್ಕೆ ಬೆಲ್ ಹೊಡೆದಾಗ 5 ನಿಮಿಷಗಳ ಕಾಲ ವಿದ್ಯಾರ್ಥಿಗಳು ನೀರು ಕುಡಿಯಬಹುದು.

ಕೇರಳದ ಕಣ್ಣೂರು, ಕೊಟ್ಟಾಯಂ, ಕೋಝಿಕೋಡ್ ಹಾಗೂ ಅಲಪ್ಪುಳದಲ್ಲಿ ನಾಳೆಯವರೆಗೆ (ಫೆಬ್ರವರಿ 24) ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ ಎಂದು ಅಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಎಚ್ಚರಿಕೆ ನೀಡಿದೆ. ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ.
icon

(6 / 6)

ಕೇರಳದ ಕಣ್ಣೂರು, ಕೊಟ್ಟಾಯಂ, ಕೋಝಿಕೋಡ್ ಹಾಗೂ ಅಲಪ್ಪುಳದಲ್ಲಿ ನಾಳೆಯವರೆಗೆ (ಫೆಬ್ರವರಿ 24) ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಇರಲಿದೆ ಎಂದು ಅಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಎಚ್ಚರಿಕೆ ನೀಡಿದೆ. ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಈ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ.


ಇತರ ಗ್ಯಾಲರಿಗಳು