ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸುಲಭವಾಗಿ ಸೋಲಿಸ್ತಿದ್ವಿ; ಶ್ರೀಲಂಕಾ ದಿಗ್ಗಜ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸುಲಭವಾಗಿ ಸೋಲಿಸ್ತಿದ್ವಿ; ಶ್ರೀಲಂಕಾ ದಿಗ್ಗಜ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ

ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸುಲಭವಾಗಿ ಸೋಲಿಸ್ತಿದ್ವಿ; ಶ್ರೀಲಂಕಾ ದಿಗ್ಗಜ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ

  • Arjuna Ranatunga: ನನ್ನ 1996ರ ತಂಡ ಈಗಿನ ಭಾರತ ತಂಡವನ್ನು 3 ದಿನಗಳಲ್ಲೇ ಸೋಲಿಸ್ತಿತ್ತು ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್​ ತಂಡವು ನೀಡುತ್ತಿರುವ ಇತ್ತೀಚಿನ ಪ್ರದರ್ಶನಕ್ಕೆ ಮತ್ತು ಪ್ರಸ್ತುತ ತಂಡಕ್ಕೆ ಸಂಬಂಧಿಸಿ ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಮೂರೇ ದಿನಗಳಲ್ಲಿ ಟೆಸ್ಟ್ ಗೆಲ್ತಿದ್ವಿ ಎಂದು ಹೇಳಿದ್ದಾರೆ.
icon

(1 / 10)

ಭಾರತೀಯ ಕ್ರಿಕೆಟ್​ ತಂಡವು ನೀಡುತ್ತಿರುವ ಇತ್ತೀಚಿನ ಪ್ರದರ್ಶನಕ್ಕೆ ಮತ್ತು ಪ್ರಸ್ತುತ ತಂಡಕ್ಕೆ ಸಂಬಂಧಿಸಿ ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಮೂರೇ ದಿನಗಳಲ್ಲಿ ಟೆಸ್ಟ್ ಗೆಲ್ತಿದ್ವಿ ಎಂದು ಹೇಳಿದ್ದಾರೆ.
(HT_PRINT)

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟಿ20ಐ, ಏಕದಿನ ಸರಣಿ ಗೆದ್ದಿದ್ದರೂ ಅದಕ್ಕೂ ಮುನ್ನ ಸಾಲು ಸಾಲು ಸೋಲು ಕಂಡಿತ್ತು. ಬಾರ್ಡರ್ ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ, ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.
icon

(2 / 10)

ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಟಿ20ಐ, ಏಕದಿನ ಸರಣಿ ಗೆದ್ದಿದ್ದರೂ ಅದಕ್ಕೂ ಮುನ್ನ ಸಾಲು ಸಾಲು ಸೋಲು ಕಂಡಿತ್ತು. ಬಾರ್ಡರ್ ಗವಾಸ್ಕರ್ ಟ್ರೋಫಿ, ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ, ಶ್ರೀಲಂಕಾ ವಿರುದ್ಧ ಏಕದಿನ ಸರಣಿಯನ್ನು ಕಳೆದುಕೊಂಡಿತ್ತು.

ಅಣಕಿಸುವಂತೆ ಮಾತನಾಡಿರುವ ಅರ್ಜುನ ರಣತುಂಗ, ಭಾರತ ತಂಡದ ವಿರುದ್ಧ ಆಡಿ ಗೆಲ್ಲುವುದು ಸುಲಭ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ರಿಕೆಟ್ ವಲಯದಲ್ಲಿ ಅವರು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುವ ಪರಿಸ್ಥಿತಿಗೆ ಬಂದಿದ್ದಾರೆ.
icon

(3 / 10)

ಅಣಕಿಸುವಂತೆ ಮಾತನಾಡಿರುವ ಅರ್ಜುನ ರಣತುಂಗ, ಭಾರತ ತಂಡದ ವಿರುದ್ಧ ಆಡಿ ಗೆಲ್ಲುವುದು ಸುಲಭ ಎನ್ನುವಂತೆ ಹೇಳಿಕೆ ನೀಡಿದ್ದಾರೆ. ಇದರಿಂದ ಕ್ರಿಕೆಟ್ ವಲಯದಲ್ಲಿ ಅವರು ಸಿಕ್ಕಾಪಟ್ಟೆ ಟೀಕೆಯನ್ನು ಎದುರಿಸುವ ಪರಿಸ್ಥಿತಿಗೆ ಬಂದಿದ್ದಾರೆ.

1996ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದವು. ಫೈನಲ್​ನಲ್ಲಿ ರಣತುಂಗ ನೇತೃತ್ವದ ಶ್ರೀಲಂಕಾವು ಮಾರ್ಕ್ ಟೇಲರ್ ನೇತೃತ್ವದ ಆಸ್ಟ್ರೇಲಿಯಾವನ್ನು 7 ವಿಕೆಟ್​ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು. 
icon

(4 / 10)

1996ರಲ್ಲಿ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ಜಂಟಿಯಾಗಿ ವಿಶ್ವಕಪ್ ಆಯೋಜಿಸಿದ್ದವು. ಫೈನಲ್​ನಲ್ಲಿ ರಣತುಂಗ ನೇತೃತ್ವದ ಶ್ರೀಲಂಕಾವು ಮಾರ್ಕ್ ಟೇಲರ್ ನೇತೃತ್ವದ ಆಸ್ಟ್ರೇಲಿಯಾವನ್ನು 7 ವಿಕೆಟ್​ಗಳಿಂದ ಮಣಿಸಿ ಚಾಂಪಿಯನ್ ಆಗಿತ್ತು. 
(AP)

ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅರ್ಜುನ ರಣತುಂಗ, ಆಧುನಿಕ ಆಟಗಾರರಲ್ಲಿ ಅಗತ್ಯ ಕೌಶಲ್ಯಗಳ ಕೊರತೆಯನ್ನು ಉಲ್ಲೇಖಿಸಿ ಮತ್ತು ಈ ಕುಸಿತಕ್ಕೆ ಫ್ರಾಂಚೈಸಿಗಳ ಪ್ರಭಾವ ಕಾರಣ ಎಂದು ಹೇಳಿದ್ದಾರೆ.
icon

(5 / 10)

ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ನಿರಾಶೆ ವ್ಯಕ್ತಪಡಿಸಿರುವ ಅರ್ಜುನ ರಣತುಂಗ, ಆಧುನಿಕ ಆಟಗಾರರಲ್ಲಿ ಅಗತ್ಯ ಕೌಶಲ್ಯಗಳ ಕೊರತೆಯನ್ನು ಉಲ್ಲೇಖಿಸಿ ಮತ್ತು ಈ ಕುಸಿತಕ್ಕೆ ಫ್ರಾಂಚೈಸಿಗಳ ಪ್ರಭಾವ ಕಾರಣ ಎಂದು ಹೇಳಿದ್ದಾರೆ.
(ICC- X)

ತಮ್ಮ ಮಾತನ್ನು ಸಾಬೀತುಪಡಿಸಲು ರಣತುಂಗ ದಿಟ್ಟ ಹೇಳಿಕೆ ನೀಡಿದ್ದಾರೆ. 1996ರ ವಿಶ್ವಕಪ್ ಗೆದ್ದ ತಮ್ಮ ಶ್ರೀಲಂಕಾ ತಂಡವು ಪ್ರಸ್ತುತ ಭಾರತ ತಂಡವನ್ನು ಅವರ ತವರು ನೆಲದಲ್ಲೇ ಸುಲಭವಾಗಿ ಸೋಲಿಸುತ್ತದೆ ಎಂದು ಹೇಳಿದ್ದಾರೆ.
icon

(6 / 10)

ತಮ್ಮ ಮಾತನ್ನು ಸಾಬೀತುಪಡಿಸಲು ರಣತುಂಗ ದಿಟ್ಟ ಹೇಳಿಕೆ ನೀಡಿದ್ದಾರೆ. 1996ರ ವಿಶ್ವಕಪ್ ಗೆದ್ದ ತಮ್ಮ ಶ್ರೀಲಂಕಾ ತಂಡವು ಪ್ರಸ್ತುತ ಭಾರತ ತಂಡವನ್ನು ಅವರ ತವರು ನೆಲದಲ್ಲೇ ಸುಲಭವಾಗಿ ಸೋಲಿಸುತ್ತದೆ ಎಂದು ಹೇಳಿದ್ದಾರೆ.
(HT_PRINT)

90ರ ದಶಕದ ಆರಂಭದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನೊಮ್ಮೆ ಗಮನಿಸಿ. ಗವಾಸ್ಕರ್, ವೆಂಗ್‌ಸರ್ಕಾರ್, ಅಮರ್‌ನಾಥ್, ಅಜರುದ್ದೀನ್, ತೆಂಡೂಲ್ಕರ್, ವಿನೋದ್ ಕಾಂಬ್ಳಿ, ದ್ರಾವಿಡ್ ಇದ್ದರು. ಎಂಥಹ ದಿಗ್ಗಜರು ಅವರು. ಆದರೀಗ ಅಂತಹ ಆಟಗಾರರು ಇದ್ದಾರೆಯೇ? ನನಗೆ ಹಾಗೆ ಅನಿಸುವುದಿಲ್ಲ ಎಂದಿದ್ದಾರೆ.
icon

(7 / 10)

90ರ ದಶಕದ ಆರಂಭದಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನೊಮ್ಮೆ ಗಮನಿಸಿ. ಗವಾಸ್ಕರ್, ವೆಂಗ್‌ಸರ್ಕಾರ್, ಅಮರ್‌ನಾಥ್, ಅಜರುದ್ದೀನ್, ತೆಂಡೂಲ್ಕರ್, ವಿನೋದ್ ಕಾಂಬ್ಳಿ, ದ್ರಾವಿಡ್ ಇದ್ದರು. ಎಂಥಹ ದಿಗ್ಗಜರು ಅವರು. ಆದರೀಗ ಅಂತಹ ಆಟಗಾರರು ಇದ್ದಾರೆಯೇ? ನನಗೆ ಹಾಗೆ ಅನಿಸುವುದಿಲ್ಲ ಎಂದಿದ್ದಾರೆ.
(AFP)

ನಾನು ನಿಮಗೆ ನೇರವಾಗಿ ಹೇಳುತ್ತೇನೆ. ಪ್ರಸ್ತುತ ಭಾರತೀಯ ತಂಡವು 96ರ ದಶಕದ ನನ್ನ ತಂಡದ ವಿರುದ್ಧ ಆಡಿದ್ದರೆ, ಸುಲಭವಾಗಿ ಸೋಲಿಸುತ್ತಿದ್ದೆವು. ಟೆಸ್ಟ್ ಪಂದ್ಯವನ್ನು ಆಡಿದ್ದರೆ, ನಾವು ಮೂರು ದಿನಗಳಲ್ಲಿ ಗೆಲ್ಲುತ್ತಿದ್ದೆವು ಎಂದು ರಣತುಂಗ ಟೆಲಿಗ್ರಾಫ್‌ಗೆ ಹೇಳಿದ್ದಾರೆ. 
icon

(8 / 10)

ನಾನು ನಿಮಗೆ ನೇರವಾಗಿ ಹೇಳುತ್ತೇನೆ. ಪ್ರಸ್ತುತ ಭಾರತೀಯ ತಂಡವು 96ರ ದಶಕದ ನನ್ನ ತಂಡದ ವಿರುದ್ಧ ಆಡಿದ್ದರೆ, ಸುಲಭವಾಗಿ ಸೋಲಿಸುತ್ತಿದ್ದೆವು. ಟೆಸ್ಟ್ ಪಂದ್ಯವನ್ನು ಆಡಿದ್ದರೆ, ನಾವು ಮೂರು ದಿನಗಳಲ್ಲಿ ಗೆಲ್ಲುತ್ತಿದ್ದೆವು ಎಂದು ರಣತುಂಗ ಟೆಲಿಗ್ರಾಫ್‌ಗೆ ಹೇಳಿದ್ದಾರೆ. 
(AFP)

ನಮ್ಮ ಕಿರಿಯರಿಗೆ ಸರಿಯಾದ ಕ್ರಿಕೆಟ್ ಕಲಿಸುತ್ತಿದ್ದೇವೆಯೇ ಎಂಬ ಅನುಮಾನ ಇದೆ. ಭಾರತಕ್ಕೆ ಮಾತ್ರವಲ್ಲ, ನಮ್ಮ ಶ್ರೀಲಂಕಾದವರಿಗೂ ಅದೇ ಸಮಸ್ಯೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈಗಿನ ಆಟಗಾರರು ಉತ್ತಮ ಹಣ ಪಡೆಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದಿದ್ದಾರೆ.
icon

(9 / 10)

ನಮ್ಮ ಕಿರಿಯರಿಗೆ ಸರಿಯಾದ ಕ್ರಿಕೆಟ್ ಕಲಿಸುತ್ತಿದ್ದೇವೆಯೇ ಎಂಬ ಅನುಮಾನ ಇದೆ. ಭಾರತಕ್ಕೆ ಮಾತ್ರವಲ್ಲ, ನಮ್ಮ ಶ್ರೀಲಂಕಾದವರಿಗೂ ಅದೇ ಸಮಸ್ಯೆ ಇದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈಗಿನ ಆಟಗಾರರು ಉತ್ತಮ ಹಣ ಪಡೆಯುತ್ತಿದ್ದಾರೆ ಎಂದು ನನಗೆ ಸಂತೋಷವಾಗಿದೆ ಎಂದಿದ್ದಾರೆ.

ನಿಜ, ನೀವು ಫ್ರಾಂಚೈಸ್ ಕ್ರಿಕೆಟ್ ಆಡುತ್ತಿದ್ದೀರಿ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇನ್ನೊಂದು ಐದು ವರ್ಷಗಳಲ್ಲಿ ಆಟಗಾರರು ಕೇವಲ ಫ್ರಾಂಚೈಸ್ ಕ್ರಿಕೆಟ್​ನಲ್ಲಷ್ಟೇ ನಿರತರಾಗುತ್ತಾರೆ. ನಿಮ್ಮ ದೇಶಕ್ಕಾಗಿ ಆಡುವ ಮೌಲ್ಯವು ಕಣ್ಮರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
icon

(10 / 10)

ನಿಜ, ನೀವು ಫ್ರಾಂಚೈಸ್ ಕ್ರಿಕೆಟ್ ಆಡುತ್ತಿದ್ದೀರಿ. ಇದು ಅಂತಾರಾಷ್ಟ್ರೀಯ ಕ್ರಿಕೆಟ್​ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇನ್ನೊಂದು ಐದು ವರ್ಷಗಳಲ್ಲಿ ಆಟಗಾರರು ಕೇವಲ ಫ್ರಾಂಚೈಸ್ ಕ್ರಿಕೆಟ್​ನಲ್ಲಷ್ಟೇ ನಿರತರಾಗುತ್ತಾರೆ. ನಿಮ್ಮ ದೇಶಕ್ಕಾಗಿ ಆಡುವ ಮೌಲ್ಯವು ಕಣ್ಮರೆಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು