Forest Summer: ಬಿಸಿಲ ಬೇಗೆಗೆ ಬಸವಳಿಯುತಿವೆ ವನ್ಯಜೀವಿಗಳು, ಹಸಿರು, ನೀರಿಗೆ ಕಾಡಲ್ಲೂ ಈಗಲೇ ಹಾಹಾಕಾರ Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest Summer: ಬಿಸಿಲ ಬೇಗೆಗೆ ಬಸವಳಿಯುತಿವೆ ವನ್ಯಜೀವಿಗಳು, ಹಸಿರು, ನೀರಿಗೆ ಕಾಡಲ್ಲೂ ಈಗಲೇ ಹಾಹಾಕಾರ Photos

Forest Summer: ಬಿಸಿಲ ಬೇಗೆಗೆ ಬಸವಳಿಯುತಿವೆ ವನ್ಯಜೀವಿಗಳು, ಹಸಿರು, ನೀರಿಗೆ ಕಾಡಲ್ಲೂ ಈಗಲೇ ಹಾಹಾಕಾರ Photos

  • ನಾಡಿನಲ್ಲಿ ಮಾತ್ರವಲ್ಲ. ಕಾಡಿನಲ್ಲೂ ಬಿಸಲೇ ಬೇಗೆ ಶುರುವಾಗಿವೆ. ಬಂಡೀಪುರ. ನಾಗರಹೊಳೆ ವನ್ಯಧಾಮಗಳಲ್ಲಿ ಆನೆ, ಹುಲಿ ಸೇರಿದಂತೆ ಪ್ರಮುಖ ಪ್ರಾಣಿಗಳೂ ನೀರು, ಹಸಿರನರಸಿ ಹೋಗುತ್ತಿವೆ. ಈ ಬಾರಿ ಬೇಸಿಗೆ ಆರಂಭದಲ್ಲೇ ನೀರಿನ ಸಮಸ್ಯೆ ಇರುವುದರಿಂದ ಅರಣ್ಯ ಇಲಾಖೆ ಕೆರೆಗಳಿಗೆ ಟ್ಯಾಂಕರ್‌ ಮೂಲಕ ಒದಗಿಸುವ ಸಿದ್ದತೆ ಮಾಡಿಕೊಳ್ಳುತ್ತಿದೆ. ಹೀಗಿದೆ ಬೇಸಿಗೆ ಕಾಡಿನ ಚಿತ್ರಣ

ಬೆಂಗಳೂರು ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆಯಿಂದ ಬಂಡೀಪುರ ಕಡೆ ಹೊರಟರೆ ಆಗಲೇ ಬಿಸಿಲ ಝಳ ಎದುರಾಗುತ್ತದೆ, ಅರಣ್ಯದಂಚಿನ ಭಾಗದಲ್ಲಿ ಈಗ ಬಿಸಿಲ ವಾತಾವರಣ ಜೋರಾಗಿಯೇ ಇದೆ.
icon

(1 / 9)

ಬೆಂಗಳೂರು ಮೈಸೂರಿನಿಂದ ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆಯಿಂದ ಬಂಡೀಪುರ ಕಡೆ ಹೊರಟರೆ ಆಗಲೇ ಬಿಸಿಲ ಝಳ ಎದುರಾಗುತ್ತದೆ, ಅರಣ್ಯದಂಚಿನ ಭಾಗದಲ್ಲಿ ಈಗ ಬಿಸಿಲ ವಾತಾವರಣ ಜೋರಾಗಿಯೇ ಇದೆ.

ಬಂಡೀಪುರ ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಹಸಿರು ಕಂಡು ಬರುತ್ತದೆ. ಆದರೆ ಬಹುತೇಕ ಮರಗಳು ಎಲೆಯುದುರಿಸುತ್ತಿದೆ. 
icon

(2 / 9)

ಬಂಡೀಪುರ ಪ್ರವೇಶಿಸುತ್ತಿದ್ದಂತೆ ಅಲ್ಲಲ್ಲಿ ಹಸಿರು ಕಂಡು ಬರುತ್ತದೆ. ಆದರೆ ಬಹುತೇಕ ಮರಗಳು ಎಲೆಯುದುರಿಸುತ್ತಿದೆ. 

ಬಂಡೀಪುರ ಅರಣ್ಯದೊಳಗೆ ಅಲ್ಲಲ್ಲಿ ಹಸಿರು. ಬಹಳಷ್ಟು ಬಿಸಿಲಿನಿಂದ ಪ್ರಾಣಿಗಳು ನೆರಳಿಗೆ ನಡೆದುಕೊಂಡು ಹೋಗಬೇಕು. ನೀರಿನ ಕೊರತೆಯೂ ಇದೆ. ಈ ಕಾರಣದಿಂದ ಬೇಸಿಗೆ ಮುಗಿಯುವರೆಗೂ ಅಲ್ಲಲ್ಲಿ ನೀರು ಸಿಗುವಂತೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡುತ್ತಿದೆ.
icon

(3 / 9)

ಬಂಡೀಪುರ ಅರಣ್ಯದೊಳಗೆ ಅಲ್ಲಲ್ಲಿ ಹಸಿರು. ಬಹಳಷ್ಟು ಬಿಸಿಲಿನಿಂದ ಪ್ರಾಣಿಗಳು ನೆರಳಿಗೆ ನಡೆದುಕೊಂಡು ಹೋಗಬೇಕು. ನೀರಿನ ಕೊರತೆಯೂ ಇದೆ. ಈ ಕಾರಣದಿಂದ ಬೇಸಿಗೆ ಮುಗಿಯುವರೆಗೂ ಅಲ್ಲಲ್ಲಿ ನೀರು ಸಿಗುವಂತೆ ಅರಣ್ಯ ಇಲಾಖೆ ವ್ಯವಸ್ಥೆ ಮಾಡುತ್ತಿದೆ.

ಬಂಡೀಪುರ ಅರಣ್ಯದ ಕೆರೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ನೀರಿಗಾಗಿ ಬಂದ ಕಡವೆ, 
icon

(4 / 9)

ಬಂಡೀಪುರ ಅರಣ್ಯದ ಕೆರೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ನೀರಿಗಾಗಿ ಬಂದ ಕಡವೆ, 

ಕಾಡೆಮ್ಮೆಗಳಿಗೂ ಕೆರೆಯ ಅಕ್ಕಪಕ್ಕದ ಹಸಿರು ಪ್ರದೇಶದಲ್ಲಿಯೇ ಸಿಗುವ ಹುಲ್ಲೇ ಈಗ ನಿತ್ಯದ ಆಹಾರ. ಮಳೆ ಬಂದರೆ ಸಾಕು ಎನ್ನುವ ಸನ್ನಿವೇಶ.
icon

(5 / 9)

ಕಾಡೆಮ್ಮೆಗಳಿಗೂ ಕೆರೆಯ ಅಕ್ಕಪಕ್ಕದ ಹಸಿರು ಪ್ರದೇಶದಲ್ಲಿಯೇ ಸಿಗುವ ಹುಲ್ಲೇ ಈಗ ನಿತ್ಯದ ಆಹಾರ. ಮಳೆ ಬಂದರೆ ಸಾಕು ಎನ್ನುವ ಸನ್ನಿವೇಶ.

ಕಾಡಾನೆಗಳೆಂದರೆ ದಿನದ ಹದಿನೆಂಟು ಗಂಟೆ ತಿನ್ನುವ, ನೀರೆಂದರೆ ಪಂಚಪ್ರಾಣದ ಜೀವ. ಅವುಗಳಿಗೂ ಹುಲ್ಲು, ಬಿದಿರು ಮೆದೆ ಸಿಕ್ಕರೆ ಅದೇ ಖುಷಿ. ಬಂಡೀಪುರದಲ್ಲಿ ಅಮ್ಮನ ಮಡಿನಲ್ಲಿ ಹಾಲುನ್ನುಳುವ ಸಂತಸದಲ್ಲಿ ಮರಿ.
icon

(6 / 9)

ಕಾಡಾನೆಗಳೆಂದರೆ ದಿನದ ಹದಿನೆಂಟು ಗಂಟೆ ತಿನ್ನುವ, ನೀರೆಂದರೆ ಪಂಚಪ್ರಾಣದ ಜೀವ. ಅವುಗಳಿಗೂ ಹುಲ್ಲು, ಬಿದಿರು ಮೆದೆ ಸಿಕ್ಕರೆ ಅದೇ ಖುಷಿ. ಬಂಡೀಪುರದಲ್ಲಿ ಅಮ್ಮನ ಮಡಿನಲ್ಲಿ ಹಾಲುನ್ನುಳುವ ಸಂತಸದಲ್ಲಿ ಮರಿ.
(Exploretheworld )

ಆನೆಗಳಿಗೆ ನೀರು ಸಿಕ್ಕರೆ ಸಾಕು. ಅದಕ್ಕಿಂತ ಬೇರೆಯ ಜಗತ್ತೇ ಇಲ್ಲ. ನಾಗರಹೊಳೆಯ ಕಬಿನಿ ಹಿನ್ನೀರೇ ಬಹುತೇಕ ಆನೆಗಳಿಗೆ ಈಗ ಜೀವಾಳ. ನೀರು ಸಿಕ್ಕ ಆನೆಯ ಖುಷಿಯನ್ನು ನೋಡಿ.
icon

(7 / 9)

ಆನೆಗಳಿಗೆ ನೀರು ಸಿಕ್ಕರೆ ಸಾಕು. ಅದಕ್ಕಿಂತ ಬೇರೆಯ ಜಗತ್ತೇ ಇಲ್ಲ. ನಾಗರಹೊಳೆಯ ಕಬಿನಿ ಹಿನ್ನೀರೇ ಬಹುತೇಕ ಆನೆಗಳಿಗೆ ಈಗ ಜೀವಾಳ. ನೀರು ಸಿಕ್ಕ ಆನೆಯ ಖುಷಿಯನ್ನು ನೋಡಿ.
(sharatkumar)

ಬಂಡೀಪುರದಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲೂ ಮರವೇರಿ ಕುಳಿತ ಚಿರತೆ.
icon

(8 / 9)

ಬಂಡೀಪುರದಲ್ಲಿ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲೂ ಮರವೇರಿ ಕುಳಿತ ಚಿರತೆ.

ಬಂಡೀಪುರ ಅರಣ್ಯದಲ್ಲಿ ಮರವೇರಿದ ಚಿರತೆ ಅಲ್ಲಿಯೇ ಕುಳಿತು ನಿದ್ರೆಗೆ ಜಾರಿಯೇ ಬಿಟ್ಟಿತು. 
icon

(9 / 9)

ಬಂಡೀಪುರ ಅರಣ್ಯದಲ್ಲಿ ಮರವೇರಿದ ಚಿರತೆ ಅಲ್ಲಿಯೇ ಕುಳಿತು ನಿದ್ರೆಗೆ ಜಾರಿಯೇ ಬಿಟ್ಟಿತು. 
(Arvind Ramamurthy )


ಇತರ ಗ್ಯಾಲರಿಗಳು