Green Bandipura: ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ; ಹೀಗಿದೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಛಾಯಾಗ್ರಾಹಕ ರಘು ಕ್ಲಿಕ್ಕಿಸಿದ ಕ್ಷಣಗಳು
- Bandipur Photography ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಛಾಯಾಗ್ರಾಹಕರಾಗಿರುವ ದಿಡ್ಡಹಳ್ಳಿ ರಘು ಅವರು ಬಂಡೀಪುರ ಹುಲಿಧಾಮ( Bandipur Tiger Reserve)ಕ್ಕೆ ಭೇಟಿ ನೀಡಿದಾಗ ಸೆರೆ ಹಿಡಿದ ವನ್ಯಲೋಕ ಹಾಗೂ ಹಸಿರು ಕ್ಷಣಗಳು ಹೀಗಿವೆ.
- Bandipur Photography ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರಿಕಾ ಛಾಯಾಗ್ರಾಹಕರಾಗಿರುವ ದಿಡ್ಡಹಳ್ಳಿ ರಘು ಅವರು ಬಂಡೀಪುರ ಹುಲಿಧಾಮ( Bandipur Tiger Reserve)ಕ್ಕೆ ಭೇಟಿ ನೀಡಿದಾಗ ಸೆರೆ ಹಿಡಿದ ವನ್ಯಲೋಕ ಹಾಗೂ ಹಸಿರು ಕ್ಷಣಗಳು ಹೀಗಿವೆ.
(1 / 8)
ಮೈಸೂರಿನಿಂದ ಊಟಿಗೆ ಹೋಗುವ ಮಾರ್ಗದಲ್ಲಿ ಸಿಗುವ ಬಂಡೀಪುರ ದೇಶದ ಪ್ರಮುಖ ಹುಲಿಧಾಮ. ಇಲ್ಲಿ ಯಥೇಚ್ಛ ವನ್ಯಜೀವಿಗಳಿವೆ. ನಾಲ್ಕೈದು ತಿಂಗಳಿನಿಂದ ಮಳೆಯಿಲ್ಲದೇ ಬಳಲಿದ್ದ ವನ್ಯಜೀವಿಗಳೂ ಈಗ ನಿರಾಳ. ಜಿಂಕೆಗಳ ಹಿಂಡು ಕಂಡಿದ್ದು ಹೀಗೆ.
(2 / 8)
ಕಾಡೆಮ್ಮೆಯೊಂದು ತನ್ನ ಮರಿಯೊಂದಿಗೆ ಕಾಡಿನೊಳಗೆ ಕಳೆಯುತ್ತಿದೆ. ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವಂತೆ.
(3 / 8)
ಚಿರತೆಗಳು ಕಾಡಿನಲ್ಲಿ ಕಾಣುವುದೇ ಅಪರೂಪ. ಅದರ ಮರದ ಮೇಲೇರಿದ್ದರೆ ಭರ್ಜರಿ ಬೇಟೆಯೇ ಆಗಿದೆ ಎಂದರ್ಥ. ಚಿರತೆಯೊಂದು ಬಂಡಿಪುರದ ಮರದ ಮೇಲೆ ನಿದ್ರೆಗೆ ಜಾರಲು ಅಣಿಯಾಗುತ್ತಿತ್ತು.
(4 / 8)
ಬೇಟೆಗಾರ ಕೆನ್ನಾಯಿ ಸದಾ ಎಚ್ಚರ. ಹೊಂಚು ಹಾಕಿ ಕುಳಿತು ಬೇಟೆಯಾಡುವ ಸೀಳು ನಾಯಿಗಳು ಬಂಡೀಪುರದಲ್ಲಿ ಯಥೇಚ್ಛವಾಗಿಯೇ ಇವೆ.
(5 / 8)
ಆನೆಗಳಿಗೂ ಕಾಡಿನಲ್ಲಿ ನೀರಿಲ್ಲದೇ ತೊಂದರೆಯಾಗಿತ್ತು. ಈಗ ಮಳೆ ಶುರುವಾಗಿರುವುದರಿಂದ ಕೊಂಚ ಸಮಾಧಾನ ತಂದಿದೆ. ಆಹಾರ ಸೇವನೆ ನಿರತ ಕಾಡಾನೆಗೆ ಹಕ್ಕಿಗಳು ಕೂತು ಖುಷಿ ಅನುಭವಿಸುತ್ತಿವೆ.
(7 / 8)
ಬಿಸಿಲ ಬೇಗೆಯಿಂದ ಬಳಲಿದ್ದ ಜಂಬೂಕನಿಗೂ ಈಗ ಎಳೆಬಿಸಿಲು, ಹನಿ ಮಳೆಯ ಸಂತಸ, ದಟ್ಟ ಕಾಡಿನಿಂದ ಹೊರ ಬಂದು ದರ್ಶನ ನೀಡುತ್ತಿವೆ.
ಇತರ ಗ್ಯಾಲರಿಗಳು