ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು: ಇಲ್ಲಿದೆ ಕಾರಣ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು: ಇಲ್ಲಿದೆ ಕಾರಣ

ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ಅಪ್ಪಿತಪ್ಪಿಯೂ ತಿನ್ನಬಾರದು: ಇಲ್ಲಿದೆ ಕಾರಣ

ಅಗಸೆ ಬೀಜ ತಿನ್ನುವುದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನವಿದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಆದರೆ, ಈ 5 ಸಮಸ್ಯೆ ಇರುವವರು ಅಗಸೆ ಬೀಜಗಳನ್ನು ತಿನ್ನದೇ ಇರುವುದು ಒಳಿತು. ಯಾಕೆ ತಿನ್ನಬಾರದು, ಯಾರೆಲ್ಲಾ ತಿನ್ನಬಾರದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಅಗಸೆ ಬೀಜಗಳ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಇದನ್ನು ನಿಯತವಾಗಿ ಸೇವಿಸುವುದರಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದಲ್ಲದೆ, ಅಗಸೆ ಬೀಜಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. 
icon

(1 / 8)

ಅಗಸೆ ಬೀಜಗಳ ಪ್ರಯೋಜನಗಳ ಬಗ್ಗೆ ನೀವು ತಿಳಿದಿರಬಹುದು. ಇದನ್ನು ನಿಯತವಾಗಿ ಸೇವಿಸುವುದರಿಂದ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದಲ್ಲದೆ, ಅಗಸೆ ಬೀಜಗಳು ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿದ್ದು, ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. 

(Canva)

ಅಗಸೆ ಬೀಜ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಎಲ್ಲರೂ ಅಗಸೆ ಬೀಜಗಳನ್ನು ತಿನ್ನುವುದು ಉತ್ತಮವಲ್ಲ. ಈ 5 ಸಮಸ್ಯೆ ಇರುವವರು ಇದನ್ನು ತಿನ್ನಲೇಬಾರದು. ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.
icon

(2 / 8)

ಅಗಸೆ ಬೀಜ ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಆದರೆ ಎಲ್ಲರೂ ಅಗಸೆ ಬೀಜಗಳನ್ನು ತಿನ್ನುವುದು ಉತ್ತಮವಲ್ಲ. ಈ 5 ಸಮಸ್ಯೆ ಇರುವವರು ಇದನ್ನು ತಿನ್ನಲೇಬಾರದು. ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ.

(Freepik)

ಮಧುಮೇಹಿಗಳು ಸೇವಿಸುವುದು ಉತ್ತಮವಲ್ಲ: ಅಗಸೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ನಿಮಗೆ ಮಧುಮೇಹವಿದ್ದು, ಸಕ್ಕರೆ ಮಟ್ಟ ಕಡಿಮೆ ಮಾಡುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅಗಸೆ ಬೀಜಗಳನ್ನು ತಿನ್ನುವುದು ಅಷ್ಟು ಉತ್ತಮವಲ್ಲ. ಏಕೆಂದರೆ ಅದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
icon

(3 / 8)

ಮಧುಮೇಹಿಗಳು ಸೇವಿಸುವುದು ಉತ್ತಮವಲ್ಲ: ಅಗಸೆ ಬೀಜಗಳನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ನಿಮಗೆ ಮಧುಮೇಹವಿದ್ದು, ಸಕ್ಕರೆ ಮಟ್ಟ ಕಡಿಮೆ ಮಾಡುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ, ಅಗಸೆ ಬೀಜಗಳನ್ನು ತಿನ್ನುವುದು ಅಷ್ಟು ಉತ್ತಮವಲ್ಲ. ಏಕೆಂದರೆ ಅದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

(Freepik)

ಕರುಳಿನ ಅಡಚಣೆಗೆ ಕಾರಣವಾಗಬಹುದು: ಅಗಸೆ ಬೀಜದ ಅತಿಯಾದ ಸೇವನೆಯು ಕರುಳಿನ ಅಡಚಣೆಗೆ ಕಾರಣವಾಗಬಹುದು. ಮುಖ್ಯವಾಗಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ.
icon

(4 / 8)

ಕರುಳಿನ ಅಡಚಣೆಗೆ ಕಾರಣವಾಗಬಹುದು: ಅಗಸೆ ಬೀಜದ ಅತಿಯಾದ ಸೇವನೆಯು ಕರುಳಿನ ಅಡಚಣೆಗೆ ಕಾರಣವಾಗಬಹುದು. ಮುಖ್ಯವಾಗಿ ನೀವು ಸಾಕಷ್ಟು ನೀರು ಕುಡಿಯದಿದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ.

(Freepik)

ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು: ಅಲರ್ಜಿ ಸಮಸ್ಯೆ ಇರುವವರು ಅಗಸೆ ಬೀಜ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಮುಖ್ಯವಾಗಿ ಇದು ಊತ, ತುರಿಕೆ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ. 
icon

(5 / 8)

ಅಲರ್ಜಿ ಸಮಸ್ಯೆಗಳು ಹೆಚ್ಚಾಗಬಹುದು: ಅಲರ್ಜಿ ಸಮಸ್ಯೆ ಇರುವವರು ಅಗಸೆ ಬೀಜ ತಿನ್ನುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ಮುಖ್ಯವಾಗಿ ಇದು ಊತ, ತುರಿಕೆ, ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು. ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಅಗಸೆ ಬೀಜ ಸೇವನೆಯನ್ನು ಆದಷ್ಟು ಮಿತಿಗೊಳಿಸಿ.

 

(Freepik)

ಅಧಿಕ ರಕ್ತದೊತ್ತಡ ರೋಗಿಗಳು: ಅಧಿಕ ರಕ್ತದೊತ್ತಡ ಸಮಸ್ಯೆಗೆ ಔಷಧಿ ತೆಗೆದೊಳ್ಳುತ್ತಿದ್ದರೆ ಅಗಸೆ ಬೀಜಗಳನ್ನು ಸೇವಿಸದಿರುವುದು ಒಳಿತು. ಯಾಕೆಂದರೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಆದಷ್ಟು ಸೀಮಿತಗೊಳಿಸುವುದು ಉತ್ತಮ.
icon

(6 / 8)

ಅಧಿಕ ರಕ್ತದೊತ್ತಡ ರೋಗಿಗಳು: ಅಧಿಕ ರಕ್ತದೊತ್ತಡ ಸಮಸ್ಯೆಗೆ ಔಷಧಿ ತೆಗೆದೊಳ್ಳುತ್ತಿದ್ದರೆ ಅಗಸೆ ಬೀಜಗಳನ್ನು ಸೇವಿಸದಿರುವುದು ಒಳಿತು. ಯಾಕೆಂದರೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಆದಷ್ಟು ಸೀಮಿತಗೊಳಿಸುವುದು ಉತ್ತಮ.

(Canva)

ಅಗಸೆ ಬೀಜ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರೆ ಎರಡು ವಾರಗಳ ಮೊದಲು ಅದನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ. ಈಗಾಗಲೇ ಯಾವುದೇ ರಕ್ತ ಹೆಪ್ಪುಗಟ್ಟುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.
icon

(7 / 8)

ಅಗಸೆ ಬೀಜ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ. ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದರೆ ಎರಡು ವಾರಗಳ ಮೊದಲು ಅದನ್ನು ತೆಗೆದುಕೊಳ್ಳುವುದನ್ನು ಬಿಟ್ಟುಬಿಡಿ. ಈಗಾಗಲೇ ಯಾವುದೇ ರಕ್ತ ಹೆಪ್ಪುಗಟ್ಟುವ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.

(Canva)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ
icon

(8 / 8)

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

(Canva)


ಇತರ ಗ್ಯಾಲರಿಗಳು