ಬಿರು ಬಿಸಿಲಿನ ತಾಪವು ಹೃದಯಾಘಾತವನ್ನು ಹೆಚ್ಚಿಸಬಹುದು; ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಿರು ಬಿಸಿಲಿನ ತಾಪವು ಹೃದಯಾಘಾತವನ್ನು ಹೆಚ್ಚಿಸಬಹುದು; ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಬಿರು ಬಿಸಿಲಿನ ತಾಪವು ಹೃದಯಾಘಾತವನ್ನು ಹೆಚ್ಚಿಸಬಹುದು; ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಇಲ್ಲಿದೆ ಟಿಪ್ಸ್

ಈ ವರ್ಷ ಬಿಸಿಲಿನ ತಾಪ ಜೋರಾಗಿದೆ. ಕೆಲವೆಡೆ ವಾತಾವರಣ 40 ಡಿಗ್ರಿ ಸೆಲ್ಸಿಯಸ್ ಮೀರಿದೆ. ಇದರೊಂದಿಗೆ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಅತಿಯಾದ ಶಾಖವು ಹೃದಯಾಘಾತಕ್ಕೂ ಕಾರಣವಾಗಬಹುದು.

ಹದಗೆಡುತ್ತಿರುವ ಜೀವನಶೈಲಿಯಿಂದಾಗಿ, ಯುವಜನರು ಸಹ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವರು ಹೃದಯಾಘಾತಕ್ಕೆ  ಬಲಿಯಾಗುತ್ತಿದ್ದಾರೆ. ಬೇಸಿಗೆಯಲ್ಲಿ ಹೃದಯಾಘಾತವಾದ ಪ್ರಮಾಣ ಏರಿಕೆಯಾಗುತ್ತಾ, ಇದಕ್ಕೆ ಕಾರಣವೇನು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ನೋಡಿ.
icon

(1 / 7)

ಹದಗೆಡುತ್ತಿರುವ ಜೀವನಶೈಲಿಯಿಂದಾಗಿ, ಯುವಜನರು ಸಹ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಬೇಸಿಗೆಯಲ್ಲಿ ಹೃದಯಾಘಾತವಾದ ಪ್ರಮಾಣ ಏರಿಕೆಯಾಗುತ್ತಾ, ಇದಕ್ಕೆ ಕಾರಣವೇನು, ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು ನೋಡಿ.

ಬೇಸಿಗೆಯ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವ ಜನರು ಯಾವಾಗಲೂ ಹೆಚ್ಚು ಜಾಗೃತೆ ವಹಿಸಬೇಕು. ಅತಿಯಾದ ಶಾಖವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಗಳು ಹೇಳುತ್ತವೆ.
icon

(2 / 7)

ಬೇಸಿಗೆಯ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆ ಇರುವ ಜನರು ಯಾವಾಗಲೂ ಹೆಚ್ಚು ಜಾಗೃತೆ ವಹಿಸಬೇಕು. ಅತಿಯಾದ ಶಾಖವು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವರದಿಗಳು ಹೇಳುತ್ತವೆ.

ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಟ್ಟುಕೊಂಡಿಲ್ಲ ಎಂದರೆ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದ ಹರಿವನ್ನು ಹೆಚ್ಚಿಸಬಹುದು, ಇದು ಹಾರ್ಟ್‌ಆಟ್ಯಾಕ್‌ಗೆ ಮೂಲವಾಗಬಹುದು.
icon

(3 / 7)

ಬಿಸಿ ವಾತಾವರಣದಲ್ಲಿ ದೇಹವನ್ನು ತಂಪಾಗಿಟ್ಟುಕೊಂಡಿಲ್ಲ ಎಂದರೆ ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಇದು ಹೃದಯ ಬಡಿತ ಮತ್ತು ರಕ್ತದ ಹರಿವನ್ನು ಹೆಚ್ಚಿಸಬಹುದು, ಇದು ಹಾರ್ಟ್‌ಆಟ್ಯಾಕ್‌ಗೆ ಮೂಲವಾಗಬಹುದು.

ಬೇಸಿಗೆಯಲ್ಲಿ ಹೆಚ್ಚು ಬೆವರುತ್ತದೆ, ಇದು ರಕ್ತವನ್ನು ದಪ್ಪವಾಗಿಸುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಕಷ್ಟವಾಗುತ್ತದೆ. ಇದರಿಂದ ಕೂಡ ಹೃದಯಾಘಾತ ಹೆಚ್ಚಬಹುದು.
icon

(4 / 7)

ಬೇಸಿಗೆಯಲ್ಲಿ ಹೆಚ್ಚು ಬೆವರುತ್ತದೆ, ಇದು ರಕ್ತವನ್ನು ದಪ್ಪವಾಗಿಸುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಕಷ್ಟವಾಗುತ್ತದೆ. ಇದರಿಂದ ಕೂಡ ಹೃದಯಾಘಾತ ಹೆಚ್ಚಬಹುದು.

ಹೃದಯಾಘಾತವನ್ನು ತಡೆಗಟ್ಟಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ. ನಿರ್ಜಲೀಕರಣವು ಹೃದಯದ ಮೇಲೆ ಒತ್ತಡ ಹೇರಬಹುದು, ಆದ್ದರಿಂದ ಬಾಯಾರಿಕೆಯಾಗುವ ಮೊದಲು ನೀರು ಕುಡಿಯುವುದು ಮುಖ್ಯ. ಇದಲ್ಲದೆ, ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ, ಅಂದರೆ ಮಧ್ಯಾಹ್ನ 12-3 ಗಂಟೆಯ ಸಮಯದಲ್ಲಿ ಸಾಧ್ಯವಾದಷ್ಟು ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಿ. ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೂ ಸಹ ಸಾಧ್ಯವಾದಷ್ಟೂ ನೆರಳಿನಲ್ಲೇ ಇರಿ.
icon

(5 / 7)

ಹೃದಯಾಘಾತವನ್ನು ತಡೆಗಟ್ಟಲು ದಿನವಿಡೀ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗುತ್ತದೆ. ನಿರ್ಜಲೀಕರಣವು ಹೃದಯದ ಮೇಲೆ ಒತ್ತಡ ಹೇರಬಹುದು, ಆದ್ದರಿಂದ ಬಾಯಾರಿಕೆಯಾಗುವ ಮೊದಲು ನೀರು ಕುಡಿಯುವುದು ಮುಖ್ಯ. ಇದಲ್ಲದೆ, ದಿನದ ಅತ್ಯಂತ ಬಿಸಿಲಿನ ಸಮಯದಲ್ಲಿ, ಅಂದರೆ ಮಧ್ಯಾಹ್ನ 12-3 ಗಂಟೆಯ ಸಮಯದಲ್ಲಿ ಸಾಧ್ಯವಾದಷ್ಟು ಹೊರಗಡೆ ಓಡಾಡುವುದನ್ನು ಕಡಿಮೆ ಮಾಡಿ. ನೀವು ಯಾವುದಾದರೂ ಪ್ರಮುಖ ಕೆಲಸಕ್ಕಾಗಿ ಹೊರಗೆ ಹೋಗುತ್ತಿದ್ದರೂ ಸಹ ಸಾಧ್ಯವಾದಷ್ಟೂ ನೆರಳಿನಲ್ಲೇ ಇರಿ.

ಬೇಸಿಗೆಯಲ್ಲಿ ರಕ್ತದೊತ್ತಡದಂತಹ ಸಮಸ್ಯೆ ನಿವಾರಿಸಲು ತಣ್ಣೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಲ್ಲದೆ, ಶೀತದಿಂದ ಪರಿಹಾರ ಪಡೆಯಲು ನಿಮ್ಮ ಮಣಿಕಟ್ಟುಗಳು, ಕುತ್ತಿಗೆ ಮತ್ತು ಕಂಕುಳಿ ನಾಡಿ ಬಿಂದುಗಳಿಗೆ ತಣ್ಣಿರಿನ ಬಟ್ಟೆಯ ಪಟ್ಟಿ ಹಾಕಬಹುದು.
icon

(6 / 7)

ಬೇಸಿಗೆಯಲ್ಲಿ ರಕ್ತದೊತ್ತಡದಂತಹ ಸಮಸ್ಯೆ ನಿವಾರಿಸಲು ತಣ್ಣೀರಿನಿಂದ ಸ್ನಾನ ಮಾಡುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಲ್ಲದೆ, ಶೀತದಿಂದ ಪರಿಹಾರ ಪಡೆಯಲು ನಿಮ್ಮ ಮಣಿಕಟ್ಟುಗಳು, ಕುತ್ತಿಗೆ ಮತ್ತು ಕಂಕುಳಿ ನಾಡಿ ಬಿಂದುಗಳಿಗೆ ತಣ್ಣಿರಿನ ಬಟ್ಟೆಯ ಪಟ್ಟಿ ಹಾಕಬಹುದು.

ಆಲ್ಕೋಹಾಲ್ ಮತ್ತು ಕೆಫೀನ್ ಅಂಶ ಇರುವ ಪಾನೀಯಗಳನ್ನು ಕುಡಿಯುವುದರಿಂದ ಡಿಹೈಡ್ರೇಷನ್ ಆಗಬಹುದು ಮತ್ತು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಬಹುದು. ಆ ಕಾರಣಕ್ಕೆ ಬೇಸಿಗೆಯಲ್ಲಿ ಇವುಗಳಿಂದ ದೂರ ಇರುವುದು ಉತ್ತಮ.
icon

(7 / 7)

ಆಲ್ಕೋಹಾಲ್ ಮತ್ತು ಕೆಫೀನ್ ಅಂಶ ಇರುವ ಪಾನೀಯಗಳನ್ನು ಕುಡಿಯುವುದರಿಂದ ಡಿಹೈಡ್ರೇಷನ್ ಆಗಬಹುದು ಮತ್ತು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸಬಹುದು. ಆ ಕಾರಣಕ್ಕೆ ಬೇಸಿಗೆಯಲ್ಲಿ ಇವುಗಳಿಂದ ದೂರ ಇರುವುದು ಉತ್ತಮ.

ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು