ಮೈಸೂರಿನಲ್ಲಿ ಒಂದು ಗಂಟೆಯಿಂದ ಗುಡುಗು, ಸಿಡಿಲು ಸಹಿತ ಭಾರೀ ಮಳೆ, ರಾತ್ರಿಯಿಡೀ ಮಳೆ ಬರುವ ಮುನ್ಸೂಚನೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರಿನಲ್ಲಿ ಒಂದು ಗಂಟೆಯಿಂದ ಗುಡುಗು, ಸಿಡಿಲು ಸಹಿತ ಭಾರೀ ಮಳೆ, ರಾತ್ರಿಯಿಡೀ ಮಳೆ ಬರುವ ಮುನ್ಸೂಚನೆ

ಮೈಸೂರಿನಲ್ಲಿ ಒಂದು ಗಂಟೆಯಿಂದ ಗುಡುಗು, ಸಿಡಿಲು ಸಹಿತ ಭಾರೀ ಮಳೆ, ರಾತ್ರಿಯಿಡೀ ಮಳೆ ಬರುವ ಮುನ್ಸೂಚನೆ

ಮೈಸೂರು ನಗರದಲ್ಲಿ ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿಯಾಗುತ್ತಲೇ ಭಾರೀ ಗುಡುಗು ಹಾಗೂ ಸಿಡಿಲಿನೊಂದಿಗೆ ಮಳೆ ಶುರುವಾಗಿದೆ. ರಾತ್ರಿಯೂ ಮಳೆ ಮುಂದುವರಿಯುವ ಮುನ್ಸೂಚನೆಯಿದೆ. ಕೆಲವು ಕಡೆ ಮಳೆಯಿಂದ ಮರಗಳೂ ಉರುಳಿ ಬಿದ್ದಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಬಿದ್ದುಒಂಟಿಕೊಪ್ಪಲ್ ಪೊಲೀಸ್ ಠಾಣೆ ಸರ್ಕಲ್. ಬಳಿ ಒಂದು ಸಿಟಿ ಬಸ್ ಮತ್ತು ಒಂದು ಕಾರಿನ ಮೇಲೆ ಮರ ಬಿದ್ದಿದೆ.
icon

(1 / 9)

ಮೈಸೂರಿನಲ್ಲಿ ಮಂಗಳವಾರ ಸಂಜೆ ಭಾರೀ ಮಳೆ ಬಿದ್ದುಒಂಟಿಕೊಪ್ಪಲ್ ಪೊಲೀಸ್ ಠಾಣೆ ಸರ್ಕಲ್. ಬಳಿ ಒಂದು ಸಿಟಿ ಬಸ್ ಮತ್ತು ಒಂದು ಕಾರಿನ ಮೇಲೆ ಮರ ಬಿದ್ದಿದೆ.
(ಚಿತ್ರ: ಕೆ. ಶಶಿಕುಮಾರ್‌)

ಮೈಸೂರಿನ ಯಾದವಗಿರಿಯ ರಾಮಕೃಷ್ಣ ಆಶ್ರಮದ ಬಳಿಯೂ ರಾತ್ರಿ ಭಾರೀ ಮಳೆಯೇ ಸುರಿಯಿತು.
icon

(2 / 9)

ಮೈಸೂರಿನ ಯಾದವಗಿರಿಯ ರಾಮಕೃಷ್ಣ ಆಶ್ರಮದ ಬಳಿಯೂ ರಾತ್ರಿ ಭಾರೀ ಮಳೆಯೇ ಸುರಿಯಿತು.

ಮೈಸೂರು ನಗರದ ಟಿಕೆ ಬಡಾವಣೆಯಲ್ಲಿ ಮಂಗಳವಾರ ಸಂಜೆ ಎಡಬಿಡದೇ ಮಳೆ ಸುರಿಯಿತು.
icon

(3 / 9)

ಮೈಸೂರು ನಗರದ ಟಿಕೆ ಬಡಾವಣೆಯಲ್ಲಿ ಮಂಗಳವಾರ ಸಂಜೆ ಎಡಬಿಡದೇ ಮಳೆ ಸುರಿಯಿತು.

ಸಂಜೆಯಿಂದಲೇ ಮೋಡ ಕವಿದ ವಾತಾರವಣವಿದ್ದು ರಾತ್ರಿ ಹೊತ್ತಿಗೆ ಭಾರೀ ಮಳೆ ಸುರಿಯುವ ಮುನ್ಸೂಚನೆಯಿತ್ತು.,
icon

(4 / 9)

ಸಂಜೆಯಿಂದಲೇ ಮೋಡ ಕವಿದ ವಾತಾರವಣವಿದ್ದು ರಾತ್ರಿ ಹೊತ್ತಿಗೆ ಭಾರೀ ಮಳೆ ಸುರಿಯುವ ಮುನ್ಸೂಚನೆಯಿತ್ತು.,

ಕೆಲ ಹೊತ್ತಿನಲ್ಲಿ ಮಳೆಯೂ ಶುರುವಾಗಿ ಜೋರಾಗಿ ಸುರಿಯತೊಡಗಿತು. ಭಾರೀ ಪ್ರಮಾಣದ ಗುಡುಗಿನ ಸದ್ದು. ಸಿಡಿಲಿನ ನಡುವೆ ಮಳೆಯಾಗುತ್ತಲೇ ಇದೆ.
icon

(5 / 9)

ಕೆಲ ಹೊತ್ತಿನಲ್ಲಿ ಮಳೆಯೂ ಶುರುವಾಗಿ ಜೋರಾಗಿ ಸುರಿಯತೊಡಗಿತು. ಭಾರೀ ಪ್ರಮಾಣದ ಗುಡುಗಿನ ಸದ್ದು. ಸಿಡಿಲಿನ ನಡುವೆ ಮಳೆಯಾಗುತ್ತಲೇ ಇದೆ.

ಮೈಸೂರಿನ ಹಲವು ಬಡಾವಣೆಗಳಲ್ಲಿ ಮಳೆ ಸುರಿದಿದ್ದರಿಂದ ಜನ ಹೊರ ಬರಲು ಆಗಲಿಲ್ಲ.
icon

(6 / 9)

ಮೈಸೂರಿನ ಹಲವು ಬಡಾವಣೆಗಳಲ್ಲಿ ಮಳೆ ಸುರಿದಿದ್ದರಿಂದ ಜನ ಹೊರ ಬರಲು ಆಗಲಿಲ್ಲ.

ಮೈಸೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ಹರಿದು ಜನ ಸಂಚಾರಕ್ಕೂ ತೊಂದರೆಯಾಯಿತು.
icon

(7 / 9)

ಮೈಸೂರಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿಯೇ ನೀರು ಹರಿದು ಜನ ಸಂಚಾರಕ್ಕೂ ತೊಂದರೆಯಾಯಿತು.

ಮೈಸೂರಿನ ಚಾಮುಂಡಿಬೆಟ್ಟ ಭಾಗದಲ್ಲೂ ಮೋಡದ ವಾತಾವರಣ, ಭಾರೀ ಮಳೆ ಸನ್ನಿವೇಶವೇ ಕಂಡು ಬಂದಿತು.
icon

(8 / 9)

ಮೈಸೂರಿನ ಚಾಮುಂಡಿಬೆಟ್ಟ ಭಾಗದಲ್ಲೂ ಮೋಡದ ವಾತಾವರಣ, ಭಾರೀ ಮಳೆ ಸನ್ನಿವೇಶವೇ ಕಂಡು ಬಂದಿತು.

ಮೈಸೂರಿನಲ್ಲಿ ಮಂಗಳವಾರದಂದು ಹಲವು ಕಡೆಗಳಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಾರೀ ಮಳೆಯಿಂದ ಅಲ್ಲಲ್ಲಿ ಅಡಚಣೆಯೂ ಉಂಟಾಯಿತು.
icon

(9 / 9)

ಮೈಸೂರಿನಲ್ಲಿ ಮಂಗಳವಾರದಂದು ಹಲವು ಕಡೆಗಳಲ್ಲಿ ಮದುವೆಯ ಆರತಕ್ಷತೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಾರೀ ಮಳೆಯಿಂದ ಅಲ್ಲಲ್ಲಿ ಅಡಚಣೆಯೂ ಉಂಟಾಯಿತು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು