ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌, ಕಾರು ಮುಖಾಮುಖಿ ಡಿಕ್ಕಿಯ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌, ಕಾರು ಮುಖಾಮುಖಿ ಡಿಕ್ಕಿಯ ಚಿತ್ರನೋಟ

ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌, ಕಾರು ಮುಖಾಮುಖಿ ಡಿಕ್ಕಿಯ ಚಿತ್ರನೋಟ

ಮೈಸೂರು: ಕೆಆರ್‌ನಗರ ತಾಲೂಕು ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಭೀಕರ ರಸ್ತೆ ದುರಂತದ ಚಿತ್ರನೋಟ ಇಲ್ಲಿದೆ.

ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.
icon

(1 / 9)

ಮಂಚನಹಳ್ಳಿ ಸಮೀಪ ಇಂದು (ಮೇ 14) ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾ ಮುಖಿ ಡಿಕ್ಕಿಯಾಗಿ ಭೀಕರ ರಸ್ತೆ ದುರಂತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಹೃದಯ ವಿದ್ರಾವಕ ಘಟನೆ ನಡೆದಿದೆ.

ರಸ್ತೆ ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
icon

(2 / 9)

ರಸ್ತೆ ಅಪಘಾತದಲ್ಲಿ ಮತ್ತೊಬ್ಬ ವ್ಯಕ್ತಿ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಪಘಾತದ ತೀವ್ರತೆ ಯಾವ ಪ್ರಮಾಣದಲ್ಲಿತ್ತು ಎಂದರೆ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯಿಂದಾಚೆಗೆ ಬಲಬದಿಗೆ ಹಾರಿ ಬಿದ್ದಿದ್ದು, ಅದರ ಮುಂಭಾಗದ ಚಕ್ರದಡಿಗೆ ಕಾರು ಸಿಲುಕಿಕೊಂಡಿತ್ತು.
icon

(3 / 9)

ಅಪಘಾತದ ತೀವ್ರತೆ ಯಾವ ಪ್ರಮಾಣದಲ್ಲಿತ್ತು ಎಂದರೆ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯಿಂದಾಚೆಗೆ ಬಲಬದಿಗೆ ಹಾರಿ ಬಿದ್ದಿದ್ದು, ಅದರ ಮುಂಭಾಗದ ಚಕ್ರದಡಿಗೆ ಕಾರು ಸಿಲುಕಿಕೊಂಡಿತ್ತು.

ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಚಾಲಕನ ಬದಿ ಮಣ್ಣಿನೊಳಗೆ ಹೂತು ಹೋದ ರೀತಿ ಆಗಿತ್ತು. ಅದರ ಎಡಬದಿಗೆ ಕಾರು ಸಿಲುಕಿ ನಜ್ಜುಗುಜ್ಜಾಗಿತ್ತು.
icon

(4 / 9)

ಕೆಎಸ್‌ಆರ್‌ಟಿಸಿ ಬಸ್‌ನ ಮುಂಭಾಗ ಚಾಲಕನ ಬದಿ ಮಣ್ಣಿನೊಳಗೆ ಹೂತು ಹೋದ ರೀತಿ ಆಗಿತ್ತು. ಅದರ ಎಡಬದಿಗೆ ಕಾರು ಸಿಲುಕಿ ನಜ್ಜುಗುಜ್ಜಾಗಿತ್ತು.

ಮೃತ ಕಾರು ಚಾಲಕನನ್ನು  ಮೈಸೂರಿನ ಕನಕದಾಸನಗರದ ನಿವಾಸಿ ಸುನೀಲ್ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ರಮೇಶ್.
icon

(5 / 9)

ಮೃತ ಕಾರು ಚಾಲಕನನ್ನು ಮೈಸೂರಿನ ಕನಕದಾಸನಗರದ ನಿವಾಸಿ ಸುನೀಲ್ (34) ಎಂದು ಗುರುತಿಸಲಾಗಿದೆ. ಗಾಯಗೊಂಡ ವ್ಯಕ್ತಿ ರಮೇಶ್.

ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ನಿವಾಸಿ ಸುನೀಲ್. ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಬಸ್‌ ಏಕಾಕಿಯಾಗಿ ಕಾರಿನ ಮೇಲೇರಿ ಈ ಭೀಕರ ದುರಂತ ಸಂಭವಿಸಿದೆ.
icon

(6 / 9)

ಮೂಲತಃ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ನಿವಾಸಿ ಸುನೀಲ್. ಮೈಸೂರಿನಿಂದ ಹಾಸನದ ಕಡೆಗೆ ತೆರಳುತ್ತಿದ್ದ ವೇಳೆ ಚಿಕ್ಕಮಗಳೂರು ಕಡೆಯಿಂದ ಮೈಸೂರಿಗೆ ಹೋಗುತ್ತಿದ್ದ ಬಸ್‌ ಏಕಾಕಿಯಾಗಿ ಕಾರಿನ ಮೇಲೇರಿ ಈ ಭೀಕರ ದುರಂತ ಸಂಭವಿಸಿದೆ.

ಭೀಕರ ರಸ್ತೆ ದುರಂತ ನಡೆದಾಗ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
icon

(7 / 9)

ಭೀಕರ ರಸ್ತೆ ದುರಂತ ನಡೆದಾಗ ಬಸ್‌ನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರಿನೊಳಗಿದ್ದ ಕಾರು ಚಾಲಕ ಮತ್ತು ಇನ್ನೊಬ್ಬ ಪ್ರಯಾಣಿಕನನ್ನುಕಾರಿನಿಂದ ಹೊರ ತೆಗೆಯಲು ಜನ ಹರಸಾಹಸ ಪಟ್ಟರು.
icon

(8 / 9)

ಕಾರಿನೊಳಗಿದ್ದ ಕಾರು ಚಾಲಕ ಮತ್ತು ಇನ್ನೊಬ್ಬ ಪ್ರಯಾಣಿಕನನ್ನುಕಾರಿನಿಂದ ಹೊರ ತೆಗೆಯಲು ಜನ ಹರಸಾಹಸ ಪಟ್ಟರು.

 ಈ‌ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
icon

(9 / 9)

ಈ‌ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು