ಅಪ್ಪ ಕ್ಯಾಬ್ ಡ್ರೈವರ್, ಆಡಿಷನ್ಗೆ ಸ್ನೇಹಿತರು ಕೊಡಿಸಿದ ಬಟ್ಟೆಯೇ ಆಸರೆ! ಇದೀಗ ಈತ ಕನ್ನಡ ಕಿರುತೆರೆಯ ನಂಬರ್ 1 ಸೀರಿಯಲ್ನ ಹೀರೋ
ಗಾಡ್ಫಾದರ್ ಹಂಗಿಲ್ಲದೆ, ತಮ್ಮ ಸ್ವಂತ ಪ್ರತಿಭೆ ಮೂಲಕವೇ ಕನ್ನಡ ಕಿರುತೆರೆಯಲ್ಲಿ ಮಿನುಗುತ್ತಿದ್ದಾರೆ ಈ ನಟ. ತಮ್ಮ ನಟನೆಯ ಮೂಲಕವೇ ಛಾಪು ಮೂಡಿಸಿದ ಈ ಯುವ ನಟನೀಗ ಬರ್ತ್ಡೇ ಖುಷಿಯಲ್ಲಿದ್ದಾರೆ. ಇವರ ತಂದೆ ಇಂದಿಗೂ ಕ್ಯಾಬ್ ಡ್ರೈವರ್ ಎಂದರೆ ನೀವು ನಂಬಲೇಬೇಕು. ಯಾರವರು? ಇಲ್ಲಿದೆ ನೋಡಿ ವಿವರ.
(1 / 10)
ಹೌದು, ನಾವಿಲ್ಲಿ ಹೇಳುತ್ತಿರುವುದು ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್ನ ಸುಬ್ಬು ಬಗ್ಗೆ. ಅಂದರೆ ಸುಬ್ಬು ಪಾತ್ರಧಾರಿ ಅಮೋಘ್ ಆದಿತ್ಯ ಬಗ್ಗೆ. ಇಂದು (ಏಪ್ರಿಲ್ 24) ಇದೇ ಅಮೋಘ್ ತಮ್ಮ ಬರ್ತ್ಡೇ ಖುಷಿಯಲ್ಲಿದ್ದಾರೆ.
(instagram\therealamogh)(2 / 10)
ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ನಟ ಅಮೋಘ್ ಆದಿತ್ಯ. ಟಿಪಿಕಲ್ ಮಿಡಲ್ ಕ್ಲಾಸ್ನಿಂದ ಬಂದ ಈ ಹುಡುಗ ಈಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
(3 / 10)
ತಮ್ಮ ನಟನೆ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು.
(4 / 10)
ಸದ್ಯ ಕನ್ನಡ ಕಿರುತೆರೆಯ ಸೆನ್ಸೆಷನ್ ಆಗಿರುವ ಅಮೋಘ್ ಆದಿತ್ಯ, ಈ ಹಂತಕ್ಕೆ ಬರುವುದಕ್ಕೂ ಮುನ್ನ, ಸಾಕಷ್ಟು ಏಳುಬೀಳುಗಳ ಜತೆಗೆ ಅವಮಾನಗಳನ್ನೂ ಎದುರಿಸಿದ್ದಾರೆ.
(5 / 10)
ನಟನೆಗೆ ಬರುವುದಕ್ಕೂ ಮುನ್ನ ಸಿನಿಮಾಗಳ ಡೈರೆಕ್ಷನ್ ಟೀಮ್ನಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ ಅಮೋಘ. ರಂಗಭೂಮಿಯಲ್ಲಿಯೂ ಅಮೋಘ್ ಗುರುತಿಸಿಕೊಂಡಿದ್ದಾರೆ.
(6 / 10)
ಮೂಲತಃ ಕುಂದಾಪುರದವರಾದ ಅಮೋಘ್, ಬೆಳೆದಿದ್ದು ಬೆಂಗಳೂರಲ್ಲಿ. ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ.
(7 / 10)
ಅಮೋಘ್ ಅವರ ತಂದೆ ಓರ್ವ ಸಾಮಾನ್ಯ ಕ್ಯಾಬ್ ಡ್ರೈವರ್. ನಟನೆ ಆಸಕ್ತಿ ಬೆಳೆಸಿಕೊಂಡ ಅಮೋಘ್, ಸ್ನೇಹಿತರ ನೆರವಿನಿಂದ ಆಡಿಷನ್ಗೆ ಹೋಗ್ತಿದ್ರು. ಸ್ನೇಹಿತರೇ ಬೇಕಾದ ಬಟ್ಟೆಗಳನ್ನು ಅಮೋಘ್ಗೆ ಕೊಡಿಸಿದ್ದರು. ಇದನ್ನು ಈ ಹಿಂದೆ ಎಚ್ಟಿ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.
(8 / 10)
ಹೀಗಿರುವಾಗಲೇ ʻಹೂಮಳೆʼ ಸೀರಿಯಲ್ನಲ್ಲಿ ನಟಿಸಲು ಚಾನ್ಸ್ ಸಿಕ್ಕಿತು. ʻದೊರೆಸಾನಿʼ, ʻಸತ್ಯʼ, ʻಗೀತಾʼ ಸೀರಿಯಲ್ನಲ್ಲಿ ಸೈಕೋಪಾತ್ ವಿಲನ್ ಆಗಿ, ʻಅಂತರಪಟʼ ಸೀರಿಯಲ್ನಲ್ಲಿ ವಿಲನ್ ಆಗಿ ನಟಿಸಿದರು, ʻಲಕ್ಷ್ಮೀ ಟಿಫನ್ ರೂಂʼ ಸೀರಿಯಲ್ನಲ್ಲೂ ನಟಿಸಿದ್ದಾರೆ.
(9 / 10)
ಇದೀಗ ಇದೇ ನಟ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಮೂಲಕ ನಾಡಿನ ಮನೆ ಮನಗಳನ್ನು ತಲುಪಿದ್ದಾರೆ. ನಟನೆಯ ಮೂಲಕವೇ ಮೆಚ್ಚುಗೆ ಪಡೆದಿದ್ದಾರೆ.
ಇತರ ಗ್ಯಾಲರಿಗಳು