ಅಪ್ಪ ಕ್ಯಾಬ್‌ ಡ್ರೈವರ್‌, ಆಡಿಷನ್‌ಗೆ ಸ್ನೇಹಿತರು ಕೊಡಿಸಿದ ಬಟ್ಟೆಯೇ ಆಸರೆ! ಇದೀಗ ಈತ ಕನ್ನಡ ಕಿರುತೆರೆಯ ನಂಬರ್‌ 1 ಸೀರಿಯಲ್‌ನ ಹೀರೋ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಪ್ಪ ಕ್ಯಾಬ್‌ ಡ್ರೈವರ್‌, ಆಡಿಷನ್‌ಗೆ ಸ್ನೇಹಿತರು ಕೊಡಿಸಿದ ಬಟ್ಟೆಯೇ ಆಸರೆ! ಇದೀಗ ಈತ ಕನ್ನಡ ಕಿರುತೆರೆಯ ನಂಬರ್‌ 1 ಸೀರಿಯಲ್‌ನ ಹೀರೋ

ಅಪ್ಪ ಕ್ಯಾಬ್‌ ಡ್ರೈವರ್‌, ಆಡಿಷನ್‌ಗೆ ಸ್ನೇಹಿತರು ಕೊಡಿಸಿದ ಬಟ್ಟೆಯೇ ಆಸರೆ! ಇದೀಗ ಈತ ಕನ್ನಡ ಕಿರುತೆರೆಯ ನಂಬರ್‌ 1 ಸೀರಿಯಲ್‌ನ ಹೀರೋ

ಗಾಡ್‌ಫಾದರ್‌ ಹಂಗಿಲ್ಲದೆ, ತಮ್ಮ ಸ್ವಂತ ಪ್ರತಿಭೆ ಮೂಲಕವೇ ಕನ್ನಡ ಕಿರುತೆರೆಯಲ್ಲಿ ಮಿನುಗುತ್ತಿದ್ದಾರೆ ಈ ನಟ. ತಮ್ಮ ನಟನೆಯ ಮೂಲಕವೇ ಛಾಪು ಮೂಡಿಸಿದ ಈ ಯುವ ನಟನೀಗ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಇವರ ತಂದೆ ಇಂದಿಗೂ ಕ್ಯಾಬ್‌ ಡ್ರೈವರ್ ಎಂದರೆ ನೀವು ನಂಬಲೇಬೇಕು. ಯಾರವರು? ಇಲ್ಲಿದೆ ನೋಡಿ ವಿವರ.

ಹೌದು, ನಾವಿಲ್ಲಿ ಹೇಳುತ್ತಿರುವುದು ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಸುಬ್ಬು ಬಗ್ಗೆ. ಅಂದರೆ ಸುಬ್ಬು ಪಾತ್ರಧಾರಿ ಅಮೋಘ್‌ ಆದಿತ್ಯ ಬಗ್ಗೆ. ಇಂದು (ಏಪ್ರಿಲ್‌ 24) ಇದೇ ಅಮೋಘ್‌ ತಮ್ಮ ಬರ್ತ್‌ಡೇ ಖುಷಿಯಲ್ಲಿದ್ದಾರೆ.
icon

(1 / 10)

ಹೌದು, ನಾವಿಲ್ಲಿ ಹೇಳುತ್ತಿರುವುದು ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಸುಬ್ಬು ಬಗ್ಗೆ. ಅಂದರೆ ಸುಬ್ಬು ಪಾತ್ರಧಾರಿ ಅಮೋಘ್‌ ಆದಿತ್ಯ ಬಗ್ಗೆ. ಇಂದು (ಏಪ್ರಿಲ್‌ 24) ಇದೇ ಅಮೋಘ್‌ ತಮ್ಮ ಬರ್ತ್‌ಡೇ ಖುಷಿಯಲ್ಲಿದ್ದಾರೆ.
(instagram\therealamogh)

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ನಟ ಅಮೋಘ್‌ ಆದಿತ್ಯ. ಟಿಪಿಕಲ್‌ ಮಿಡಲ್‌ ಕ್ಲಾಸ್‌ನಿಂದ ಬಂದ ಈ ಹುಡುಗ ಈಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.
icon

(2 / 10)

ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂಲಕ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ ನಟ ಅಮೋಘ್‌ ಆದಿತ್ಯ. ಟಿಪಿಕಲ್‌ ಮಿಡಲ್‌ ಕ್ಲಾಸ್‌ನಿಂದ ಬಂದ ಈ ಹುಡುಗ ಈಗ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ.

ತಮ್ಮ ನಟನೆ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು.
icon

(3 / 10)

ತಮ್ಮ ನಟನೆ ಮೂಲಕವೇ ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟ. ಅದರಲ್ಲೂ ಮಹಿಳಾ ಅಭಿಮಾನಿಗಳೇ ಹೆಚ್ಚು.

ಸದ್ಯ ಕನ್ನಡ ಕಿರುತೆರೆಯ ಸೆನ್ಸೆಷನ್‌ ಆಗಿರುವ ಅಮೋಘ್‌ ಆದಿತ್ಯ, ಈ ಹಂತಕ್ಕೆ ಬರುವುದಕ್ಕೂ ಮುನ್ನ, ಸಾಕಷ್ಟು ಏಳುಬೀಳುಗಳ ಜತೆಗೆ ಅವಮಾನಗಳನ್ನೂ ಎದುರಿಸಿದ್ದಾರೆ.
icon

(4 / 10)

ಸದ್ಯ ಕನ್ನಡ ಕಿರುತೆರೆಯ ಸೆನ್ಸೆಷನ್‌ ಆಗಿರುವ ಅಮೋಘ್‌ ಆದಿತ್ಯ, ಈ ಹಂತಕ್ಕೆ ಬರುವುದಕ್ಕೂ ಮುನ್ನ, ಸಾಕಷ್ಟು ಏಳುಬೀಳುಗಳ ಜತೆಗೆ ಅವಮಾನಗಳನ್ನೂ ಎದುರಿಸಿದ್ದಾರೆ.

ನಟನೆಗೆ ಬರುವುದಕ್ಕೂ ಮುನ್ನ ಸಿನಿಮಾಗಳ ಡೈರೆಕ್ಷನ್‌ ಟೀಮ್‌ನಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ ಅಮೋಘ. ರಂಗಭೂಮಿಯಲ್ಲಿಯೂ ಅಮೋಘ್‌ ಗುರುತಿಸಿಕೊಂಡಿದ್ದಾರೆ.
icon

(5 / 10)

ನಟನೆಗೆ ಬರುವುದಕ್ಕೂ ಮುನ್ನ ಸಿನಿಮಾಗಳ ಡೈರೆಕ್ಷನ್‌ ಟೀಮ್‌ನಲ್ಲಿ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದಾರೆ ಅಮೋಘ. ರಂಗಭೂಮಿಯಲ್ಲಿಯೂ ಅಮೋಘ್‌ ಗುರುತಿಸಿಕೊಂಡಿದ್ದಾರೆ.

ಮೂಲತಃ ಕುಂದಾಪುರದವರಾದ ಅಮೋಘ್‌, ಬೆಳೆದಿದ್ದು ಬೆಂಗಳೂರಲ್ಲಿ. ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ.
icon

(6 / 10)

ಮೂಲತಃ ಕುಂದಾಪುರದವರಾದ ಅಮೋಘ್‌, ಬೆಳೆದಿದ್ದು ಬೆಂಗಳೂರಲ್ಲಿ. ಬೆಂಗಳೂರಿನ ಜಯನಗರದ ವಿಜಯ ಕಾಲೇಜಿನಲ್ಲಿ ಬಿಕಾಂ ಮುಗಿಸಿದ್ದಾರೆ.

ಅಮೋಘ್‌ ಅವರ ತಂದೆ ಓರ್ವ ಸಾಮಾನ್ಯ ಕ್ಯಾಬ್‌ ಡ್ರೈವರ್.‌ ನಟನೆ ಆಸಕ್ತಿ ಬೆಳೆಸಿಕೊಂಡ ಅಮೋಘ್‌, ಸ್ನೇಹಿತರ ನೆರವಿನಿಂದ ಆಡಿಷನ್‌ಗೆ ಹೋಗ್ತಿದ್ರು. ಸ್ನೇಹಿತರೇ ಬೇಕಾದ ಬಟ್ಟೆಗಳನ್ನು ಅಮೋಘ್‌ಗೆ ಕೊಡಿಸಿದ್ದರು. ಇದನ್ನು ಈ ಹಿಂದೆ ಎಚ್‌ಟಿ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.
icon

(7 / 10)

ಅಮೋಘ್‌ ಅವರ ತಂದೆ ಓರ್ವ ಸಾಮಾನ್ಯ ಕ್ಯಾಬ್‌ ಡ್ರೈವರ್.‌ ನಟನೆ ಆಸಕ್ತಿ ಬೆಳೆಸಿಕೊಂಡ ಅಮೋಘ್‌, ಸ್ನೇಹಿತರ ನೆರವಿನಿಂದ ಆಡಿಷನ್‌ಗೆ ಹೋಗ್ತಿದ್ರು. ಸ್ನೇಹಿತರೇ ಬೇಕಾದ ಬಟ್ಟೆಗಳನ್ನು ಅಮೋಘ್‌ಗೆ ಕೊಡಿಸಿದ್ದರು. ಇದನ್ನು ಈ ಹಿಂದೆ ಎಚ್‌ಟಿ ಕನ್ನಡಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದರು.

ಹೀಗಿರುವಾಗಲೇ ʻಹೂಮಳೆʼ ಸೀರಿಯಲ್‌ನಲ್ಲಿ ನಟಿಸಲು ಚಾನ್ಸ್‌ ಸಿಕ್ಕಿತು. ʻದೊರೆಸಾನಿʼ, ʻಸತ್ಯʼ, ʻಗೀತಾʼ ಸೀರಿಯಲ್‌ನಲ್ಲಿ ಸೈಕೋಪಾತ್‌ ವಿಲನ್ ಆಗಿ, ʻಅಂತರಪಟʼ ಸೀರಿಯಲ್‌ನಲ್ಲಿ ವಿಲನ್‌ ಆಗಿ ನಟಿಸಿದರು, ʻಲಕ್ಷ್ಮೀ ಟಿಫನ್‌ ರೂಂʼ ಸೀರಿಯಲ್‌ನಲ್ಲೂ ನಟಿಸಿದ್ದಾರೆ.
icon

(8 / 10)

ಹೀಗಿರುವಾಗಲೇ ʻಹೂಮಳೆʼ ಸೀರಿಯಲ್‌ನಲ್ಲಿ ನಟಿಸಲು ಚಾನ್ಸ್‌ ಸಿಕ್ಕಿತು. ʻದೊರೆಸಾನಿʼ, ʻಸತ್ಯʼ, ʻಗೀತಾʼ ಸೀರಿಯಲ್‌ನಲ್ಲಿ ಸೈಕೋಪಾತ್‌ ವಿಲನ್ ಆಗಿ, ʻಅಂತರಪಟʼ ಸೀರಿಯಲ್‌ನಲ್ಲಿ ವಿಲನ್‌ ಆಗಿ ನಟಿಸಿದರು, ʻಲಕ್ಷ್ಮೀ ಟಿಫನ್‌ ರೂಂʼ ಸೀರಿಯಲ್‌ನಲ್ಲೂ ನಟಿಸಿದ್ದಾರೆ.

ಇದೀಗ ಇದೇ ನಟ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂಲಕ ನಾಡಿನ ಮನೆ ಮನಗಳನ್ನು ತಲುಪಿದ್ದಾರೆ. ನಟನೆಯ ಮೂಲಕವೇ ಮೆಚ್ಚುಗೆ ಪಡೆದಿದ್ದಾರೆ.
icon

(9 / 10)

ಇದೀಗ ಇದೇ ನಟ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಮೂಲಕ ನಾಡಿನ ಮನೆ ಮನಗಳನ್ನು ತಲುಪಿದ್ದಾರೆ. ನಟನೆಯ ಮೂಲಕವೇ ಮೆಚ್ಚುಗೆ ಪಡೆದಿದ್ದಾರೆ.

ಟಿಆರ್‌ಪಿ ವಿಚಾರದಲ್ಲಿ ಶ್ರಾವಣಿ ಸುಬ್ರಮಣ್ಯ ಟಾಪ್‌ ಸ್ಥಾನದಲ್ಲಿದೆ. ಏನೂ ಇಲ್ಲದೆ, ನಟನೆ ಕನಸು ಕಂಡು ಬಣ್ಣದ ಲೋಕಕ್ಕೆ ಬಂದ ಅಮೋಘ್‌ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ಹೀರೋ ಆಗಿದ್ದಾರೆ.
icon

(10 / 10)

ಟಿಆರ್‌ಪಿ ವಿಚಾರದಲ್ಲಿ ಶ್ರಾವಣಿ ಸುಬ್ರಮಣ್ಯ ಟಾಪ್‌ ಸ್ಥಾನದಲ್ಲಿದೆ. ಏನೂ ಇಲ್ಲದೆ, ನಟನೆ ಕನಸು ಕಂಡು ಬಣ್ಣದ ಲೋಕಕ್ಕೆ ಬಂದ ಅಮೋಘ್‌ ಈಗ ಕನ್ನಡ ಕಿರುತೆರೆಯ ನಂಬರ್‌ 1 ಧಾರಾವಾಹಿಯ ಹೀರೋ ಆಗಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು