Makar Sankranti 2025: ಮಕರ ಸಂಕ್ರಾಂತಿಯಂದು ಮಾಡುವ ದಾನದ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Makar Sankranti 2025: ಮಕರ ಸಂಕ್ರಾಂತಿಯಂದು ಮಾಡುವ ದಾನದ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು

Makar Sankranti 2025: ಮಕರ ಸಂಕ್ರಾಂತಿಯಂದು ಮಾಡುವ ದಾನದ ಮಹತ್ವವೇನು, ಯಾವ ವಸ್ತುಗಳನ್ನು ದಾನ ಮಾಡಿದರೆ ಒಳ್ಳೆಯದು

  • Makar Sankranti 2025: ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ದಿನ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ಬಾರಿ ಜನವರಿ 14 ರಂದು ದೇಶಾದ್ಯಂತ ಮಕರ ಸಂಕ್ರಾಂತಿ ಆಚರಿಸಲಾಗುತ್ತಿದೆ. ಸಂಕ್ರಾಂತಿಯನ್ನು ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ.

ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಸಂಬಂಧಿಸಿದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಸೂರ್ಯನು ಸಂಕ್ರಾಂತಿಯಂದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 
icon

(1 / 7)


ಹಿಂದೂ ಧರ್ಮದಲ್ಲಿ ಸೂರ್ಯನಿಗೆ ಸಂಬಂಧಿಸಿದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಸೂರ್ಯನು ಸಂಕ್ರಾಂತಿಯಂದು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 

 ಮಕರ ಸಂಕ್ರಾಂತಿಯಂದು ಸ್ನಾನ, ಧ್ಯಾನ ಮತ್ತು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪುರಾಣಗಳು ಮಕರ ಸಂಕ್ರಾಂತಿಯನ್ನು ದೇವತೆಗಳ ದಿನವೆಂದು ವರ್ಣಿಸುತ್ತವೆ. ಈ ದಿನದಂದು ಮಾಡಿದ ದಾನಗಳು ನೂರು ಪಟ್ಟು ನಮಗೆ ಹಿಂತಿರುಗುತ್ತವೆ ಎಂದು ನಂಬಲಾಗಿದೆ.
icon

(2 / 7)

 ಮಕರ ಸಂಕ್ರಾಂತಿಯಂದು ಸ್ನಾನ, ಧ್ಯಾನ ಮತ್ತು ದಾನಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಪುರಾಣಗಳು ಮಕರ ಸಂಕ್ರಾಂತಿಯನ್ನು ದೇವತೆಗಳ ದಿನವೆಂದು ವರ್ಣಿಸುತ್ತವೆ. ಈ ದಿನದಂದು ಮಾಡಿದ ದಾನಗಳು ನೂರು ಪಟ್ಟು ನಮಗೆ ಹಿಂತಿರುಗುತ್ತವೆ ಎಂದು ನಂಬಲಾಗಿದೆ.

ಮಕರ ಸಂಕ್ರಾಂತಿಯಂದು ಶುದ್ಧ ತುಪ್ಪ, ಆಹಾರ ಮತ್ತು ಹೊದಿಕೆಗಳನ್ನು ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈದು ಉತ್ತರಾಯಣದ ಆರಂಭವಾಗಿದ್ದು ಭೀಷ್ಮನು ದಕ್ಷಿಣಾಯನದಲ್ಲಿ ದೇಹತ್ಯಜಿಸಲು ಬಯಸದೆ ಉತ್ತರಾಯಣದ ಅಷ್ಟಮಿ ದಿನ ಪ್ರಾಣತ್ಯಾಗ ಮಾಡುತ್ತಾನೆ. 
icon

(3 / 7)

ಮಕರ ಸಂಕ್ರಾಂತಿಯಂದು ಶುದ್ಧ ತುಪ್ಪ, ಆಹಾರ ಮತ್ತು ಹೊದಿಕೆಗಳನ್ನು ದಾನ ಮಾಡುವುದರಿಂದ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಈದು ಉತ್ತರಾಯಣದ ಆರಂಭವಾಗಿದ್ದು ಭೀಷ್ಮನು ದಕ್ಷಿಣಾಯನದಲ್ಲಿ ದೇಹತ್ಯಜಿಸಲು ಬಯಸದೆ ಉತ್ತರಾಯಣದ ಅಷ್ಟಮಿ ದಿನ ಪ್ರಾಣತ್ಯಾಗ ಮಾಡುತ್ತಾನೆ. 

ಸಂಕ್ರಾಂತಿ ಹಬ್ಬದಂದು ನೆರೆಹೊರೆಯವರಿಗೆ, ಸಂಬಂಧಕರಿಗೆ ಎಳ್ಳು ದಾನ ಮಾಡಿದರೆ ಶುಭ ಎಂದು ನಂಬಲಾಗಿದೆ. ಅದರೆ ಕೇವಲ ಎಳ್ಳು ತೆಗೆದುಕೊಳ್ಳುವುದರಿಂದ ದೋಷ ಎಂಬ ಕಾರಣಕ್ಕೆ ಎಳ್ಳಿನ ಜೊತೆ ಬೆಲ್ಲ, ಶೇಂಗಾ, ಕೊಬ್ಬರಿ, ಕಡಲೆಯನ್ನು ಸೇರಿಸಿ ಕೊಡಲಾಗುತ್ತದೆ. 
icon

(4 / 7)

ಸಂಕ್ರಾಂತಿ ಹಬ್ಬದಂದು ನೆರೆಹೊರೆಯವರಿಗೆ, ಸಂಬಂಧಕರಿಗೆ ಎಳ್ಳು ದಾನ ಮಾಡಿದರೆ ಶುಭ ಎಂದು ನಂಬಲಾಗಿದೆ. ಅದರೆ ಕೇವಲ ಎಳ್ಳು ತೆಗೆದುಕೊಳ್ಳುವುದರಿಂದ ದೋಷ ಎಂಬ ಕಾರಣಕ್ಕೆ ಎಳ್ಳಿನ ಜೊತೆ ಬೆಲ್ಲ, ಶೇಂಗಾ, ಕೊಬ್ಬರಿ, ಕಡಲೆಯನ್ನು ಸೇರಿಸಿ ಕೊಡಲಾಗುತ್ತದೆ. 

ಹಬ್ಬದಂದು ಎಳ್ಳು, ಬೆಲ್ಲ ದಾನ ಮಾಡಿದರೆ ಶನಿ ಹಾಗೂ ಸೂರ್ಯದೇವರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ದಾನ ಧರ್ಮ ಮಾಡುವುದರಿಂದ ಪೂರ್ವಜರು ಕೂಡಾ ಸಂತುಷ್ಟರಾಗಿ ನಿಮ್ಮ ಜೀವನದ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. 
icon

(5 / 7)

ಹಬ್ಬದಂದು ಎಳ್ಳು, ಬೆಲ್ಲ ದಾನ ಮಾಡಿದರೆ ಶನಿ ಹಾಗೂ ಸೂರ್ಯದೇವರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆ ಇದೆ. ಈ ದಿನ ದಾನ ಧರ್ಮ ಮಾಡುವುದರಿಂದ ಪೂರ್ವಜರು ಕೂಡಾ ಸಂತುಷ್ಟರಾಗಿ ನಿಮ್ಮ ಜೀವನದ ಸಮಸ್ಯೆಗಳು ಪರಿಹಾರವಾಗುತ್ತದೆ ಎಂದು ನಂಬಲಾಗಿದೆ. 

ಎಳ್ಳುದಾನ ಮಾಡುಡುವುದು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಹಾರಿಸಲಾಗುತ್ತದೆ. ರಾಸುಗಳಿಗೆ ಅಲಂಕಾರ ಮಾಡಿ ಸಂಜೆ ಸಮಯದಲ್ಲಿ ಕಿಚ್ಚು ಹಾಯಿಸಲಾಗುತ್ತದೆ. 
icon

(6 / 7)

ಎಳ್ಳುದಾನ ಮಾಡುಡುವುದು ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿ ಸಮಯದಲ್ಲಿ ಗಾಳಿಪಟ ಹಾರಿಸಲಾಗುತ್ತದೆ. ರಾಸುಗಳಿಗೆ ಅಲಂಕಾರ ಮಾಡಿ ಸಂಜೆ ಸಮಯದಲ್ಲಿ ಕಿಚ್ಚು ಹಾಯಿಸಲಾಗುತ್ತದೆ. 

(Freepik )

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.


ಇತರ ಗ್ಯಾಲರಿಗಳು