ಪಂಚಾಕ್ಷರಿ ಗವಾಯಿಗಳ ಊರು, ಮುದ್ರಣ ಕಾಶಿ ಖ್ಯಾತಿಯ ಗದಗದ ರೈಲ್ವೆ ನಿಲ್ದಾಣವೀಗ ಹೈಟೆಕ್‌; ಹೇಗಿದೆ ಹೊಸ ರೂಪ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂಚಾಕ್ಷರಿ ಗವಾಯಿಗಳ ಊರು, ಮುದ್ರಣ ಕಾಶಿ ಖ್ಯಾತಿಯ ಗದಗದ ರೈಲ್ವೆ ನಿಲ್ದಾಣವೀಗ ಹೈಟೆಕ್‌; ಹೇಗಿದೆ ಹೊಸ ರೂಪ

ಪಂಚಾಕ್ಷರಿ ಗವಾಯಿಗಳ ಊರು, ಮುದ್ರಣ ಕಾಶಿ ಖ್ಯಾತಿಯ ಗದಗದ ರೈಲ್ವೆ ನಿಲ್ದಾಣವೀಗ ಹೈಟೆಕ್‌; ಹೇಗಿದೆ ಹೊಸ ರೂಪ

ಉತ್ತರ ಕರ್ನಾಟಕದ ಮುದ್ರಣೋದ್ಯಮದ ನಗರಿ ಗದಗ ರೈಲ್ವೆ ನಿಲ್ದಾಣಕ್ಕೆ ಅಮೃತ್‌ ಭಾರತ್‌ ಯೋಜನೆಯಡಿ ಆಧುನಿಕ ರೂಪ ನೀಡಲಾಗಿದೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯಗಳನ್ನು ನೂತನ ನಿಲ್ದಾಣದಲ್ಲಿ ಒದಗಿಸಲಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್‌ ಆಗಿರುವ ಗದಗ ನಗರದಲ್ಲಿ ಮೂರು ವರ್ಷದಿಂದ ನಡೆದಿದ್ದ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿ ಮುಗಿದು ಈಗ ಉದ್ಘಾಟನೆಗೊಂಡಿದೆ.
icon

(1 / 7)

ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಜಂಕ್ಷನ್‌ ಆಗಿರುವ ಗದಗ ನಗರದಲ್ಲಿ ಮೂರು ವರ್ಷದಿಂದ ನಡೆದಿದ್ದ ರೈಲ್ವೆ ನಿಲ್ದಾಣದ ಆಧುನೀಕರಣ ಕಾಮಗಾರಿ ಮುಗಿದು ಈಗ ಉದ್ಘಾಟನೆಗೊಂಡಿದೆ.

ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಕೊಪ್ಪಳ ಕಡೆಗೆ ಹೋಗುವ ವಿವಿಧ ರೈಲುಗಳ ಜಂಕ್ಷನ್‌ ಎನ್ನಿಸಿರುವ ಗದಗ ನಿಲ್ದಾಣ ಚಿಕ್ಕದಾಗಿತ್ತು. ಅದನ್ನು ಈಗ ವಿಶಾಲವಾಗಿ ರೂಪಿಸಲಾಗಿದೆ.
icon

(2 / 7)

ಹುಬ್ಬಳ್ಳಿ, ಬಾಗಲಕೋಟೆ ಹಾಗೂ ಕೊಪ್ಪಳ ಕಡೆಗೆ ಹೋಗುವ ವಿವಿಧ ರೈಲುಗಳ ಜಂಕ್ಷನ್‌ ಎನ್ನಿಸಿರುವ ಗದಗ ನಿಲ್ದಾಣ ಚಿಕ್ಕದಾಗಿತ್ತು. ಅದನ್ನು ಈಗ ವಿಶಾಲವಾಗಿ ರೂಪಿಸಲಾಗಿದೆ.

ಗದಗ ರೈಲ್ವೆ ನಿಲ್ದಾಣ ಒಳಕ್ಕೆ ಬರುವ ಮಾರ್ಗವೇ ಮೊದಲು ಕಿರಿದಾಗಿತ್ತು. ಈಗ ಅದೆಲ್ಲವನ್ನೂ ತೆರವುಗೊಳಿಸಿ ಹೊಸದಾಗಿ ವಿಶಾಲ ದ್ವಾರದೊಂದಿಗೆ ನಿಲ್ದಾಣವನ್ನು ಮರು ನಿರ್ಮಿಸಲಾಗಿದೆ
icon

(3 / 7)

ಗದಗ ರೈಲ್ವೆ ನಿಲ್ದಾಣ ಒಳಕ್ಕೆ ಬರುವ ಮಾರ್ಗವೇ ಮೊದಲು ಕಿರಿದಾಗಿತ್ತು. ಈಗ ಅದೆಲ್ಲವನ್ನೂ ತೆರವುಗೊಳಿಸಿ ಹೊಸದಾಗಿ ವಿಶಾಲ ದ್ವಾರದೊಂದಿಗೆ ನಿಲ್ದಾಣವನ್ನು ಮರು ನಿರ್ಮಿಸಲಾಗಿದೆ

ಪ್ರಯಾಣಿಕರಿಗೆ ಇಲ್ಲಿ ಸೌಲಭ್ಯವೇ ಚೆನ್ನಾಗಿ ಇರಲಿಲ್ಲ. ಜನ ಕುಳಿತುಕೊಳ್ಳಲು ಪರದಾಡುವ ಸ್ಥಿತಿಯಿತ್ತು. ಈಗ ಪ್ರಯಾಣಿಕರಿಗೆ ಅತ್ಯಾಧುನಿಕ ಕುಳಿತುಕೊಳ್ಳುವ ಕೊಠಡಿಯನ್ನು ಒದಗಿಸಲಾಗಿದೆ.
icon

(4 / 7)

ಪ್ರಯಾಣಿಕರಿಗೆ ಇಲ್ಲಿ ಸೌಲಭ್ಯವೇ ಚೆನ್ನಾಗಿ ಇರಲಿಲ್ಲ. ಜನ ಕುಳಿತುಕೊಳ್ಳಲು ಪರದಾಡುವ ಸ್ಥಿತಿಯಿತ್ತು. ಈಗ ಪ್ರಯಾಣಿಕರಿಗೆ ಅತ್ಯಾಧುನಿಕ ಕುಳಿತುಕೊಳ್ಳುವ ಕೊಠಡಿಯನ್ನು ಒದಗಿಸಲಾಗಿದೆ.

ಗದಗ ನಿಲ್ದಾಣದಲ್ಲಿ ಮೊದಲು ಲಿಫ್ಟ್‌ ಕೂಡ ಇರಲಿಲ್ಲ. ಈಗ ಮೊದಲ ಮಹಡಿಯನ್ನು ನಿರ್ಮಿಸಿ ಅಲ್ಲಿಗೆ ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಇದರಿಂದ ಜನ ಫ್ಲಾಟ್‌ಫಾರಂ ಅನ್ನು ಬದಲಿಸಲು ಸುಲಭವಾಗಲಿದೆ.
icon

(5 / 7)

ಗದಗ ನಿಲ್ದಾಣದಲ್ಲಿ ಮೊದಲು ಲಿಫ್ಟ್‌ ಕೂಡ ಇರಲಿಲ್ಲ. ಈಗ ಮೊದಲ ಮಹಡಿಯನ್ನು ನಿರ್ಮಿಸಿ ಅಲ್ಲಿಗೆ ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಇದರಿಂದ ಜನ ಫ್ಲಾಟ್‌ಫಾರಂ ಅನ್ನು ಬದಲಿಸಲು ಸುಲಭವಾಗಲಿದೆ.

ಇದಲ್ಲದೇ ಗದಗ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ಎಸ್ಕಲೇಟರ್‌ಗಳನ್ನು ಕೂಡ ನಿರ್ಮಿಸಲಾಗಿದೆ. ಇದು ಕೂಡ ಪ್ರಯಾಣಿಕರು ಫ್ಲಾಟ್‌ಫಾರಂ ಅನ್ನು ಬಹು ಬೇಗನೇ ತಲುಪಲು,ತಮ್ಮ ಲಗೇಜ್‌ಗಳನ್ನು ತೆಗೆದುಕೊಂಡು ಬರಲು ಸಹಕಾರಿಯಾಗಲಿದೆ.
icon

(6 / 7)

ಇದಲ್ಲದೇ ಗದಗ ನಿಲ್ದಾಣದಲ್ಲಿ ಪ್ರಯಾಣಿಕ ಸ್ನೇಹಿ ಎಸ್ಕಲೇಟರ್‌ಗಳನ್ನು ಕೂಡ ನಿರ್ಮಿಸಲಾಗಿದೆ. ಇದು ಕೂಡ ಪ್ರಯಾಣಿಕರು ಫ್ಲಾಟ್‌ಫಾರಂ ಅನ್ನು ಬಹು ಬೇಗನೇ ತಲುಪಲು,ತಮ್ಮ ಲಗೇಜ್‌ಗಳನ್ನು ತೆಗೆದುಕೊಂಡು ಬರಲು ಸಹಕಾರಿಯಾಗಲಿದೆ.

ಹಳೆಯದಾಗಿದ್ದ ಗದಗ ರೈಲ್ವೆ ನಿಲ್ದಾಣವನ್ನು ಸುಮಾರು 23.24 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಮರು ನಿರ್ಮಾಣ ಮಾಡಲಾಗಿದೆ.
icon

(7 / 7)

ಹಳೆಯದಾಗಿದ್ದ ಗದಗ ರೈಲ್ವೆ ನಿಲ್ದಾಣವನ್ನು ಸುಮಾರು 23.24 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಮರು ನಿರ್ಮಾಣ ಮಾಡಲಾಗಿದೆ.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು