ಕನ್ಯಾಕುಮಾರಿಗೆ ಪ್ರವಾಸ ಹೋದರೆ ಸಮುದ್ರದಲ್ಲಿನ ಗಾಜಿನ ಸೇತುವೆ ಮೇಲೆ ನಡೆದು ಬರುವುದನ್ನು ಮರೆಯಬೇಡಿ; ಹೀಗಿದೆ ಭಾರತದ ಮೊದಲ ವಿಭಿನ್ನ ಸೇತುವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ಯಾಕುಮಾರಿಗೆ ಪ್ರವಾಸ ಹೋದರೆ ಸಮುದ್ರದಲ್ಲಿನ ಗಾಜಿನ ಸೇತುವೆ ಮೇಲೆ ನಡೆದು ಬರುವುದನ್ನು ಮರೆಯಬೇಡಿ; ಹೀಗಿದೆ ಭಾರತದ ಮೊದಲ ವಿಭಿನ್ನ ಸೇತುವೆ

ಕನ್ಯಾಕುಮಾರಿಗೆ ಪ್ರವಾಸ ಹೋದರೆ ಸಮುದ್ರದಲ್ಲಿನ ಗಾಜಿನ ಸೇತುವೆ ಮೇಲೆ ನಡೆದು ಬರುವುದನ್ನು ಮರೆಯಬೇಡಿ; ಹೀಗಿದೆ ಭಾರತದ ಮೊದಲ ವಿಭಿನ್ನ ಸೇತುವೆ

  • ಭಾರತದಲ್ಲಿ ಹಲವು ನಗರಗಳಲ್ಲಿ ಸಮುದ್ರ ನಂಟು ಇದ್ದರೂ ಅದನ್ನು ವೀಕ್ಷಿಸಲು ಗಾಜಿನ ಸೇತುವೆ ಇರಲಿಲ್ಲ. ಅಂತಹ ಸೇತುವೆ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕ ಹಾಗೂ ತಿರುವಳ್ಳವರ್‌ ಪ್ರತಿಮೆ ನಡುವೆ ನಿರ್ಮಾಣಗೊಂಡಿದೆ. ಅದರ ಚಿತ್ರನೋಟ ಇಲ್ಲಿದೆ.

ಕನ್ಯಾಕುಮಾರಿ ಭಾರತದ ದಕ್ಷಿಣ ತುತ್ತ ತುದಿ. ಅಲ್ಲಿನ ತಿರುವಳ್ಳವರ್‌ ಪ್ರತಿಮೆ, ವಿವೇಕಾನಂದರ ಸ್ಮಾರಕದ ನಡುವೆ ವಿಭಿನ್ನ ಸೇತುವೆಯೊಂದು ನಿರ್ಮಾಣಗೊಂಡಿದೆ.
icon

(1 / 6)

ಕನ್ಯಾಕುಮಾರಿ ಭಾರತದ ದಕ್ಷಿಣ ತುತ್ತ ತುದಿ. ಅಲ್ಲಿನ ತಿರುವಳ್ಳವರ್‌ ಪ್ರತಿಮೆ, ವಿವೇಕಾನಂದರ ಸ್ಮಾರಕದ ನಡುವೆ ವಿಭಿನ್ನ ಸೇತುವೆಯೊಂದು ನಿರ್ಮಾಣಗೊಂಡಿದೆ.

ವಿವೇಕಾನಂದ ರಾಕ್ ಮತ್ತು ತಿರುವಳ್ಳವರ್ ಪ್ರತಿಮೆ ಮಧ್ಯೆ ಹೊಸ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. 77 ಮೀಟರ್ ಉದ್ದ , 10 ಮೀಟರ್ ಅಗಲದ   37ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಬ್ರಿಡ್ಜ್ ಕನ್ಯಾಕುಮಾರಿಯ ವಿಶೇಷ ಆಕರ್ಷಣೆ ಎನ್ನಿಸಿದೆ. 
icon

(2 / 6)

ವಿವೇಕಾನಂದ ರಾಕ್ ಮತ್ತು ತಿರುವಳ್ಳವರ್ ಪ್ರತಿಮೆ ಮಧ್ಯೆ ಹೊಸ ಗಾಜಿನ ಸೇತುವೆ ನಿರ್ಮಾಣ ಮಾಡಲಾಗಿದೆ. 77 ಮೀಟರ್ ಉದ್ದ , 10 ಮೀಟರ್ ಅಗಲದ   37ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಬ್ರಿಡ್ಜ್ ಕನ್ಯಾಕುಮಾರಿಯ ವಿಶೇಷ ಆಕರ್ಷಣೆ ಎನ್ನಿಸಿದೆ.
 

ಹಿಂದೆ, ಪ್ರವಾಸಿಗರು ವಿವೇಕಾನಂದ ಬಂಡೆ ಮತ್ತು ತಿರುವಳ್ಳುವರ್ ಪ್ರತಿಮೆ ಎರಡಕ್ಕೂ ಭೇಟಿ ನೀಡಲು ದೋಣಿ ಸೇವೆಗಳನ್ನು ಅವಲಂಬಿಸಬೇಕಾಗಿತ್ತು. ಈಗ ಸೇತುವೆ ಸಂಪರ್ಕ ಕೊಂಡಿಯಾಗಿದೆ.
icon

(3 / 6)

ಹಿಂದೆ, ಪ್ರವಾಸಿಗರು ವಿವೇಕಾನಂದ ಬಂಡೆ ಮತ್ತು ತಿರುವಳ್ಳುವರ್ ಪ್ರತಿಮೆ ಎರಡಕ್ಕೂ ಭೇಟಿ ನೀಡಲು ದೋಣಿ ಸೇವೆಗಳನ್ನು ಅವಲಂಬಿಸಬೇಕಾಗಿತ್ತು. ಈಗ ಸೇತುವೆ ಸಂಪರ್ಕ ಕೊಂಡಿಯಾಗಿದೆ.

ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ.ಅದರ ಬಾಳಿಕೆ ಮಾತ್ರವಲ್ಲದೆ ಅದನ್ನು ಹಾದುಹೋಗುವವರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ
icon

(4 / 6)

ಸುಧಾರಿತ ನಿರ್ಮಾಣ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಈ ಗಾಜಿನ ಸೇತುವೆಯನ್ನು ನಿರ್ಮಿಸಲಾಗಿದೆ.ಅದರ ಬಾಳಿಕೆ ಮಾತ್ರವಲ್ಲದೆ ಅದನ್ನು ಹಾದುಹೋಗುವವರ ಸುರಕ್ಷತೆಯನ್ನು ಖಾತ್ರಿಗೊಳಿಸುತ್ತದೆ

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಗಾಜಿನ ಸೇತುವೆಯು ತುಕ್ಕು ಮತ್ತು ಬಲವಾದ ಸಮುದ್ರದ ಗಾಳಿ ಸೇರಿದಂತೆ ಕಠಿಣ ಸಮುದ್ರ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಗಲು ಹಾಗೂ ರಾತ್ರಿ ಕೂಡ ಇದರ ಮೇಲೆ ಸಂಚರಿಸಲು ಅವಕಾಶವಿದೆ.
icon

(5 / 6)

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾದ ಗಾಜಿನ ಸೇತುವೆಯು ತುಕ್ಕು ಮತ್ತು ಬಲವಾದ ಸಮುದ್ರದ ಗಾಳಿ ಸೇರಿದಂತೆ ಕಠಿಣ ಸಮುದ್ರ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಹಗಲು ಹಾಗೂ ರಾತ್ರಿ ಕೂಡ ಇದರ ಮೇಲೆ ಸಂಚರಿಸಲು ಅವಕಾಶವಿದೆ.

ಈ ಯೋಜನೆ ಜಾರಿಗೆ ಖುದ್ದು ಆಸಕ್ತಿ ವಹಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಖುದ್ದು ಗಾಜಿನ ಸೇತುವೆ ಮೇಲೆ ನಡೆದು ಉದ್ಘಾಟನೆ ಮಾಡಿದರು.
icon

(6 / 6)

ಈ ಯೋಜನೆ ಜಾರಿಗೆ ಖುದ್ದು ಆಸಕ್ತಿ ವಹಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಖುದ್ದು ಗಾಜಿನ ಸೇತುವೆ ಮೇಲೆ ನಡೆದು ಉದ್ಘಾಟನೆ ಮಾಡಿದರು.


ಇತರ ಗ್ಯಾಲರಿಗಳು