IPL Motivation: 2024ರ ಐಪಿಎಲ್ ಕಲಿಸಿದ ಜೀವನದ ಅತ್ಯುತ್ತಮ ಪಾಠಗಳು; ಒಂದೊಂದು ಪಾಠವೂ ಭವಿಷ್ಯಕ್ಕೆ ಮುನ್ನುಡಿ!
- IPL Motivation: ಎರಡು ತಿಂಗಳ ಕಾಲ ನಿರಂತರ ಮನರಂಜನೆಯ ರಸದೌತಣ ಉಣಬಡಿಸಿದ 17ನೇ ಆವೃತ್ತಿಯ ಐಪಿಎಲ್, ಆನಂದದ ಜೊತೆಗೆ ಜೀವನದ ಅತ್ಯುತ್ತಮ ಪಾಠಗಳನ್ನೂ ಕಲಿಸಿಕೊಟ್ಟು ಹೋಗಿದೆ.
- IPL Motivation: ಎರಡು ತಿಂಗಳ ಕಾಲ ನಿರಂತರ ಮನರಂಜನೆಯ ರಸದೌತಣ ಉಣಬಡಿಸಿದ 17ನೇ ಆವೃತ್ತಿಯ ಐಪಿಎಲ್, ಆನಂದದ ಜೊತೆಗೆ ಜೀವನದ ಅತ್ಯುತ್ತಮ ಪಾಠಗಳನ್ನೂ ಕಲಿಸಿಕೊಟ್ಟು ಹೋಗಿದೆ.
(1 / 7)
2024ರ ಐಪಿಎಲ್ ಮೇ 26ಕ್ಕೆ ಮುಕ್ತಾಯಗೊಂಡಿತು. ಫೈನಲ್ನಲ್ಲಿ ಎಸ್ಆರ್ಹೆಚ್ ವಿರುದ್ಧ ಗೆದ್ದ ಕೆಕೆಆರ್ 3ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಆದರೆ, 2 ತಿಂಗಳು ನಿರಂತರ ಮನರಂಜನೆಯ ರಸದೌತಣ ಒದಗಿಸಿದ ಶ್ರೀಮಂತ ಲೀಗ್, ಹಲವು ಪಾಠಗಳನ್ನೂ ಕಲಿಸಿದೆ.
(AFP)(2 / 7)
ಹೌದು, ಕೇವಲ ಬೌಂಡರಿ-ಸಿಕ್ಸರ್ ಹೊಡೆದಾಗ ಮತ್ತು ವಿಕೆಟ್ ಬಿದ್ದಾಗ ತುಂಬಾ ಆನಂದಿಸಿದ್ದೇವೆ. ಆದರೆ, ಆನಂದದ ಜೊತೆಗೆ ನಮಗೆ ಜೀವನದ ಅನೇಕ ಅತ್ಯುತ್ತಮ ಪಾಠಗಳನ್ನೂ ಕಲಿಸಿಕೊಟ್ಟಿದೆ ಎಂಬುದನ್ನು ಮರೆಯುವಂತಿಲ್ಲ. ಒಂದೊಂದು ಪಾಠವೂ ಬೆಟ್ಟದಷ್ಟು ಅರ್ಥವನ್ನು ನೀಡುತ್ತದೆ. ಅವುಗಳ ಪಟ್ಟಿ ಇಲ್ಲಿದೆ ನೋಡಿ.
(3 / 7)
1. ನಿನ್ನ ಕೆಟ್ಟ ಸಮಯದಲ್ಲಿ ಎಲ್ಲರೂ ನಿನ್ನ ವಿರುದ್ಧ ತಿರುಗಿ ಬೀಳ್ತಾರೆ ಎಂಬುದಕ್ಕೆ ಹಾರ್ದಿಕ್ ಪಾಂಡ್ಯ ಉತ್ತಮ ಉದಾಹರಣೆ. ಗುಜರಾತ್ ಟೈಟಾನ್ಸ್ನಲ್ಲಿ ಯಶಸ್ಸು ಪಡೆದಿದ್ದ ಹಾರ್ದಿಕ್, ಮುಂಬೈ ಇಂಡಿಯನ್ಸ್ ನಾಯಕನಾಗಿ ವಿಫಲರಾದರು. ಹೀಗಾಗಿ ಅವರು ಸಾಕಷ್ಟು ಟೀಕೆ ಎದುರಿಸಬೇಕಾಯಿತು. ಮುಂಬೈ 14 ಪಂದ್ಯಗಳಲ್ಲಿ 4 ಗೆಲುವು, 10 ಸೋಲಿನೊಂದಿಗೆ 10ನೇ ಸ್ಥಾನ ಪಡೆಯಿತು.
(4 / 7)
2. ಒಬ್ಬ ವ್ಯಕ್ತಿ ಕೆಲವು ಪಂದ್ಯ ಗೆಲ್ಲಿಸಬಹುದು, ಕಪ್ ಅಲ್ಲ ಎಂಬುದಕ್ಕೆ ವಿರಾಟ್ ಕೊಹ್ಲಿ ಬೆಸ್ಟ್ ಎಕ್ಸಾಂಪಲ್ ಆಗಿದ್ದಾರೆ. ಆರ್ಸಿಬಿ ತಂಡದ ಪರ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಉಳಿದ ಆಟಗಾರರು ಅವರಂತೆ ಉತ್ತಮ ಪ್ರದರ್ಶನ ನೀಡಲು ವಿಫಲರಾದರು. ಏಕಾಂಗಿ ಹೋರಾಟ ನಡೆಸಿದ ಕೊಹ್ಲಿ ಒಬ್ಬರಿಂದ ಆರ್ಸಿಬಿ ಟ್ರೋಫಿ ಗೆಲ್ಲಿಸಿಕೊಡಲು ಸಾಧ್ಯವಾಗಿಲ್ಲ. ಅವರು 15 ಪಂದ್ಯಗಳಲ್ಲಿ 741 ರನ್ ಸಿಡಿಸಿದರು.
(5 / 7)
3. ವಯಸ್ಸು ಎಂಬುದು ಕೇವಲ ಅಂಕಿ ಅಷ್ಟೆ ಎಂದು ಎಂಎಸ್ ಧೋನಿ ಅವರು ತೋರಿಸಿಕೊಟ್ಟಿದ್ದಾರೆ. ಅವರ ವಯಸ್ಸು 42ರ ಸಮೀಪದಲ್ಲಿ ಇದ್ದರೂ ಯುವ ಆಟಗಾರರನ್ನೇ ನಾಚಿಸುವಂತೆ ಬ್ಯಾಟಿಂಗ್ ಮಾಡಿದ್ದರು. ಕಾಲು ಗಾಯಗೊಂಡಿದ್ದರೂ ಸ್ಲಾಗ್ ಓವರ್ಗಳಲ್ಲಿ ಬೌಲರ್ಗಳಿಗೆ ಬೆಂಡೆತ್ತುತ್ತಿದ್ದರು. ಅವರು 110 ಮೀಟರ್ನಲ್ಲಿ ಸಿಕ್ಸರ್ ಕೂಡ ಬಾರಿಸಿದ್ದಾರೆ. ಈ ವಯಸ್ಸಲ್ಲೂ ತನ್ನ ಫಿಟ್ನೆಸ್ ಕಾಪಾಡಿಕೊಂಡು ಕ್ರಿಕೆಟ್ ಆಡಿದ ಮಾಹಿ ಎಲ್ಲರಿಗೂ ಸ್ಫೂರ್ತಿ.
(6 / 7)
4. ಶೇ.1ರಷ್ಟು ಅವಕಾಶ ಸಿಕ್ಕರೆ ಸಾಕು, ಶೇ.100 ರಷ್ಟಾಗಿ ಪರಿವರ್ತನೆ ಮಾಡಬಹುದು ಎಂಬ ಅತ್ಯುತ್ತಮ ಪಾಠವನ್ನು ಆರ್ಸಿಬಿ ಕಲಿಸಿಕೊಟ್ಟಿದೆ. ಹೌದು, ಸತತ ಸೋಲುಂಡು ಪ್ಲೇಆಫ್ ಪ್ರವೇಶಿಸುವುದೇ ಅನುಮಾನ ಎನ್ನುತ್ತಿದ್ದ ತಂಡ, ಅಗ್ರ4ರಲ್ಲಿ ಸ್ಥಾನ ಪಡೆದಿತ್ತು. ಆರಂಭಿಕ 8 ಪಂದ್ಯಗಳಲ್ಲಿ 1 ಗೆದ್ದಿದ್ದ ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಇದ್ದಿದ್ದೇ 1 ಪರ್ಸೆಂಟ್. ಆದರೆ, ಉಳಿದ 6 ಪಂದ್ಯಗಳಲ್ಲೂ ಜಯಿಸಿ ಅಸಾಧ್ಯವನ್ನೂ ಸಾಧಿಸಿ ಪ್ಲೇಆಫ್ ಪ್ರವೇಶಿಸಿ, ಜಗತ್ತನ್ನೇ ಅಚ್ಚರಿಗೊಳಿಸಿತ್ತು.
(7 / 7)
5. ಇಡೀ ತಂಡ ಶ್ರಮಪಟ್ಟರೆ ಕನಸುಗಳು ನನಸಾಗುತ್ತವೆ ಎಂಬ ಜೀವನದ ಪಾಠವನ್ನು ಕೆಕೆಆರ್ ಕಲಿಸಿದೆ. ತಂಡದಲ್ಲಿ ಬ್ಯಾಟಿಂಗ್-ಬೌಲಿಂಗ್ ಎಲ್ಲಾ ವಿಭಾಗಗಳಿಂದ ಅತ್ಯದ್ಬುತ ಪ್ರದರ್ಶನ ಹೊರಬಂದ ಹಿನ್ನೆಲೆ ಟ್ರೋಫಿ ಕನಸು ನನಸಾಯಿತು. ಫೈನಲ್ನಲ್ಲಿ ಎಸ್ಆರ್ಹೆಚ್ ತಂಡವನ್ನು ಮಣಿಸಿದ ಕೆಕೆಆರ್ ಮೂರನೇ ಟ್ರೋಫಿ ಗೆದ್ದುಕೊಂಡಿತು. ತಂಡದ ಒಗ್ಗಟ್ಟಿನಲ್ಲಿ ಒಬ್ಬರು ಎಡವಟ್ಟು ಮಾಡಿದರೂ ಫಲಿತಾಂಶವೇ ಬೇರೆಡೆ ತಿರುಗಿಸುತ್ತದೆ. ಆದರೆ, ಇಡೀ ತಂಡ ಶ್ರಮ ಹಾಕಿದ್ದಕ್ಕೆ ಕೆಕೆಆರ್ ಚಾಂಪಿಯನ್ ಆಯಿತು.
ಇತರ ಗ್ಯಾಲರಿಗಳು