ಡಾ. ಕಸ್ತೂರಿರಂಗನ್‌ ಕೇರಳದಲ್ಲಿ ಜನಿಸಿದರೂ ಕರ್ನಾಟಕದ ಮೇಲೆ ಇನ್ನಿಲ್ಲದ ಅಭಿಮಾನ, ಬೆಂಗಳೂರು ನಿವಾಸಿಯೇ ಆಗಿಬಿಟ್ಟಿದ್ದರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಾ. ಕಸ್ತೂರಿರಂಗನ್‌ ಕೇರಳದಲ್ಲಿ ಜನಿಸಿದರೂ ಕರ್ನಾಟಕದ ಮೇಲೆ ಇನ್ನಿಲ್ಲದ ಅಭಿಮಾನ, ಬೆಂಗಳೂರು ನಿವಾಸಿಯೇ ಆಗಿಬಿಟ್ಟಿದ್ದರು

ಡಾ. ಕಸ್ತೂರಿರಂಗನ್‌ ಕೇರಳದಲ್ಲಿ ಜನಿಸಿದರೂ ಕರ್ನಾಟಕದ ಮೇಲೆ ಇನ್ನಿಲ್ಲದ ಅಭಿಮಾನ, ಬೆಂಗಳೂರು ನಿವಾಸಿಯೇ ಆಗಿಬಿಟ್ಟಿದ್ದರು

ಅಪ್ರತಿಮ ವಿಜ್ಞಾನಿ ಡಾ.ಕಸ್ತೂರಿ ರಂಗನ್‌ ಅವರದ್ದು ವೈವಿಧ್ಯಮಯ ಜೀವನ. ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಲೇ ವಿಭಿನ್ನ ಸ್ಥಳಗಳ ಭೇಟಿ, ಜ್ಞಾನದ ಪ್ರಸರಣದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು.

ಕಸ್ತೂರಿ ರಂಗನ್‌ ಅವರು ಜನಿಸಿದ್ದು 1940 ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ.
icon

(1 / 9)

ಕಸ್ತೂರಿ ರಂಗನ್‌ ಅವರು ಜನಿಸಿದ್ದು 1940 ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ.

ಅಪ್ರತಿಮ ವಿಜ್ಞಾನಿ ಕಸ್ತೂರಿ ರಂಗನ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಭಾಸ್ಕರಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಬಂದಾಗ ಡಾ.ಕಸ್ತೂರಿರಂಗನ್‌ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದ ಅರುಣ್‌ ಶಹಾಪುರ ಅವರೊಂದಿಗೆ ಕಳೆದ ಕ್ಷಣ.
icon

(2 / 9)

ಅಪ್ರತಿಮ ವಿಜ್ಞಾನಿ ಕಸ್ತೂರಿ ರಂಗನ್‌ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಭಾಸ್ಕರಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಬಂದಾಗ ಡಾ.ಕಸ್ತೂರಿರಂಗನ್‌ ಅವರು ವಿಧಾನಪರಿಷತ್‌ ಸದಸ್ಯರಾಗಿದ್ದ ಅರುಣ್‌ ಶಹಾಪುರ ಅವರೊಂದಿಗೆ ಕಳೆದ ಕ್ಷಣ.

1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿರುವುದು ಅವರ ಹಿರಿಮೆ
icon

(3 / 9)

1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್‌ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿರುವುದು ಅವರ ಹಿರಿಮೆ

ವಿಜ್ಞಾನ ವಿಷಯ ಮಾತ್ರವಲ್ಲದೇ ಶಿಕ್ಷಣ, ಪರಿಸರ, ಸಮುದಾಯದ ಬೆಳವಣಿಗೆ ವಿಚಾರದಲ್ಲಿ ಅವರ ಆಸಕ್ತ ಅಪಾರವಾದದ್ದು. ವಯಸ್ಸು ಎಂಬತ್ತು ದಾಟಿದರೂ ಈಗಲೂ ಸಕ್ರಿಯರಾಗಿ ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಿದ್ದರು.
icon

(4 / 9)

ವಿಜ್ಞಾನ ವಿಷಯ ಮಾತ್ರವಲ್ಲದೇ ಶಿಕ್ಷಣ, ಪರಿಸರ, ಸಮುದಾಯದ ಬೆಳವಣಿಗೆ ವಿಚಾರದಲ್ಲಿ ಅವರ ಆಸಕ್ತ ಅಪಾರವಾದದ್ದು. ವಯಸ್ಸು ಎಂಬತ್ತು ದಾಟಿದರೂ ಈಗಲೂ ಸಕ್ರಿಯರಾಗಿ ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಿದ್ದರು.

ವಿಜಯಪುರಕ್ಕೆ ಆರು ವರ್ಷದ ಹಿಂದೆ ಬಂದಿದ್ದಾಗ ಅಲ್ಲಿನ ಗೋಳಗುಮ್ಮಟವನ್ನು ವೀಕ್ಷಿಸುವ ಆಸಕ್ತಿ ತೋರಿದ್ದರು ಡಾ.ಕಸ್ತೂರಿ ರಂಗನ್‌. ಕೆಲ ಕ್ಷಣ ಅಲ್ಲಿಯೇ ಕಳೆದು ಗೊಳಗುಮ್ಮಟದ ಸೌಂದರ್ಯಕ್ಕೆ ಮನ ಸೋತಿದ್ದರು.
icon

(5 / 9)

ವಿಜಯಪುರಕ್ಕೆ ಆರು ವರ್ಷದ ಹಿಂದೆ ಬಂದಿದ್ದಾಗ ಅಲ್ಲಿನ ಗೋಳಗುಮ್ಮಟವನ್ನು ವೀಕ್ಷಿಸುವ ಆಸಕ್ತಿ ತೋರಿದ್ದರು ಡಾ.ಕಸ್ತೂರಿ ರಂಗನ್‌. ಕೆಲ ಕ್ಷಣ ಅಲ್ಲಿಯೇ ಕಳೆದು ಗೊಳಗುಮ್ಮಟದ ಸೌಂದರ್ಯಕ್ಕೆ ಮನ ಸೋತಿದ್ದರು.

ಈಗಲೂ ವಿಜ್ಞಾನ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಸಂಕಿರಣ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಜ್ಞಾನವನ್ನು ಡಾ.ಕಸ್ತೂರಿ ರಂಗನ್‌ ಹಂಚಿಕೊಳ್ಳುತ್ತಲೇ ಇದ್ದರು.
icon

(6 / 9)

ಈಗಲೂ ವಿಜ್ಞಾನ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಸಂಕಿರಣ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಜ್ಞಾನವನ್ನು ಡಾ.ಕಸ್ತೂರಿ ರಂಗನ್‌ ಹಂಚಿಕೊಳ್ಳುತ್ತಲೇ ಇದ್ದರು.

ವಿಜ್ಞಾನ, ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಭೇಟಿ ಮಾಡೋದು. ವಿವಿಧ ವಯೋಮಾನ, ಕ್ಷೇತ್ರದ ಯುವ ತಲೆಮಾರಿನೊಂದಿಗೆ ಸಂವಾದ ನಡೆಸುವುದು ಡಾ.ಕಸ್ತೂರಿ ರಂಗನ್‌ ಅವರ ಆಸಕ್ತಿಯೇ ಆಗಿ ಹೋಗಿತ್ತು.
icon

(7 / 9)

ವಿಜ್ಞಾನ, ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಭೇಟಿ ಮಾಡೋದು. ವಿವಿಧ ವಯೋಮಾನ, ಕ್ಷೇತ್ರದ ಯುವ ತಲೆಮಾರಿನೊಂದಿಗೆ ಸಂವಾದ ನಡೆಸುವುದು ಡಾ.ಕಸ್ತೂರಿ ರಂಗನ್‌ ಅವರ ಆಸಕ್ತಿಯೇ ಆಗಿ ಹೋಗಿತ್ತು.

ಆತ್ಮೀಯರು, ಹಿತೈಷಿಗಳೊಂದಿಗೆ ಸಮಯವನ್ನು ಕಳೆದು ಹೊಸ ವಿಚಾರವನ್ನು ಅವರಿಂದಲೂ ಡಾ.ಕಸ್ತೂರಿರಂಗನ್‌ ಪಡೆದುಕೊಳ್ಳುತ್ತಿದ್ದರು.
icon

(8 / 9)

ಆತ್ಮೀಯರು, ಹಿತೈಷಿಗಳೊಂದಿಗೆ ಸಮಯವನ್ನು ಕಳೆದು ಹೊಸ ವಿಚಾರವನ್ನು ಅವರಿಂದಲೂ ಡಾ.ಕಸ್ತೂರಿರಂಗನ್‌ ಪಡೆದುಕೊಳ್ಳುತ್ತಿದ್ದರು.

ಮಕ್ಕಳೊಂದಿಗೆ ಕಳೆಯುವುದು ಅವರ ಪ್ರೀತಿಯ ಕ್ಷಣವೇ ಆಗಿತ್ತು. ಮಕ್ಕಳೊಂದಿಗೆ ಸೇರಿ ಡಾ.ಕಸ್ತೂರಿರಂಗನ್‌ ಅವರು ಮಗುವಾಗಿ ಹೋಗುತ್ತಿದ್ದರು.
icon

(9 / 9)

ಮಕ್ಕಳೊಂದಿಗೆ ಕಳೆಯುವುದು ಅವರ ಪ್ರೀತಿಯ ಕ್ಷಣವೇ ಆಗಿತ್ತು. ಮಕ್ಕಳೊಂದಿಗೆ ಸೇರಿ ಡಾ.ಕಸ್ತೂರಿರಂಗನ್‌ ಅವರು ಮಗುವಾಗಿ ಹೋಗುತ್ತಿದ್ದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು