ಡಾ. ಕಸ್ತೂರಿರಂಗನ್ ಕೇರಳದಲ್ಲಿ ಜನಿಸಿದರೂ ಕರ್ನಾಟಕದ ಮೇಲೆ ಇನ್ನಿಲ್ಲದ ಅಭಿಮಾನ, ಬೆಂಗಳೂರು ನಿವಾಸಿಯೇ ಆಗಿಬಿಟ್ಟಿದ್ದರು
ಅಪ್ರತಿಮ ವಿಜ್ಞಾನಿ ಡಾ.ಕಸ್ತೂರಿ ರಂಗನ್ ಅವರದ್ದು ವೈವಿಧ್ಯಮಯ ಜೀವನ. ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಲೇ ವಿಭಿನ್ನ ಸ್ಥಳಗಳ ಭೇಟಿ, ಜ್ಞಾನದ ಪ್ರಸರಣದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು.
(1 / 9)
ಕಸ್ತೂರಿ ರಂಗನ್ ಅವರು ಜನಿಸಿದ್ದು 1940 ಅಕ್ಟೋಬರ್ 24ರಂದು ಕೇರಳದ ಎರ್ನಾಕುಳಂನಲ್ಲಿ. ಆದರೆ ಅವರು ಹೆಚ್ಚು ಕಾಲ ಕಳೆದಿದ್ದು ಕರ್ನಾಟಕದಲ್ಲಿಯೇ. ಇಸ್ರೋ ಅಧ್ಯಕ್ಷರಾಗಿ ಆನಂತರ ಬೆಂಗಳೂರು ನಿವಾಸಿಯೇ ಆಗಿದ್ದಾರೆ.
(2 / 9)
ಅಪ್ರತಿಮ ವಿಜ್ಞಾನಿ ಕಸ್ತೂರಿ ರಂಗನ್ ಅವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿ. ವಿಜಯಪುರ ಜಿಲ್ಲೆ ಸಿಂದಗಿಯಲ್ಲಿ ಭಾಸ್ಕರಾಚಾರ್ಯ ಪ್ರಶಸ್ತಿ ಸ್ವೀಕಾರಕ್ಕೆ ಬಂದಾಗ ಡಾ.ಕಸ್ತೂರಿರಂಗನ್ ಅವರು ವಿಧಾನಪರಿಷತ್ ಸದಸ್ಯರಾಗಿದ್ದ ಅರುಣ್ ಶಹಾಪುರ ಅವರೊಂದಿಗೆ ಕಳೆದ ಕ್ಷಣ.
(3 / 9)
1994ರಿಂದ 2003ರವರೆಗೆ ಇಸ್ರೋ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕಸ್ತೂರಿ ರಂಗನ್ ಅವರು, ಅನೇಕ ರಾಕೆಟ್ ಗಳ ಉಡಾವಣೆ, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಬೆಳವಣಿಗೆಯಲ್ಲಿ ಅಪಾರ ಕೊಡುಗೆ ನೀಡಿರುವುದು ಅವರ ಹಿರಿಮೆ
(4 / 9)
ವಿಜ್ಞಾನ ವಿಷಯ ಮಾತ್ರವಲ್ಲದೇ ಶಿಕ್ಷಣ, ಪರಿಸರ, ಸಮುದಾಯದ ಬೆಳವಣಿಗೆ ವಿಚಾರದಲ್ಲಿ ಅವರ ಆಸಕ್ತ ಅಪಾರವಾದದ್ದು. ವಯಸ್ಸು ಎಂಬತ್ತು ದಾಟಿದರೂ ಈಗಲೂ ಸಕ್ರಿಯರಾಗಿ ಎಲ್ಲೆಡೆ ಪ್ರವಾಸ ಕೈಗೊಳ್ಳುತ್ತಿದ್ದರು.
(5 / 9)
ವಿಜಯಪುರಕ್ಕೆ ಆರು ವರ್ಷದ ಹಿಂದೆ ಬಂದಿದ್ದಾಗ ಅಲ್ಲಿನ ಗೋಳಗುಮ್ಮಟವನ್ನು ವೀಕ್ಷಿಸುವ ಆಸಕ್ತಿ ತೋರಿದ್ದರು ಡಾ.ಕಸ್ತೂರಿ ರಂಗನ್. ಕೆಲ ಕ್ಷಣ ಅಲ್ಲಿಯೇ ಕಳೆದು ಗೊಳಗುಮ್ಮಟದ ಸೌಂದರ್ಯಕ್ಕೆ ಮನ ಸೋತಿದ್ದರು.
(6 / 9)
ಈಗಲೂ ವಿಜ್ಞಾನ, ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿದ ವಿಚಾರಸಂಕಿರಣ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ತಮ್ಮ ಜ್ಞಾನವನ್ನು ಡಾ.ಕಸ್ತೂರಿ ರಂಗನ್ ಹಂಚಿಕೊಳ್ಳುತ್ತಲೇ ಇದ್ದರು.
(7 / 9)
ವಿಜ್ಞಾನ, ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಿಗೆ ಭೇಟಿ ಮಾಡೋದು. ವಿವಿಧ ವಯೋಮಾನ, ಕ್ಷೇತ್ರದ ಯುವ ತಲೆಮಾರಿನೊಂದಿಗೆ ಸಂವಾದ ನಡೆಸುವುದು ಡಾ.ಕಸ್ತೂರಿ ರಂಗನ್ ಅವರ ಆಸಕ್ತಿಯೇ ಆಗಿ ಹೋಗಿತ್ತು.
(8 / 9)
ಆತ್ಮೀಯರು, ಹಿತೈಷಿಗಳೊಂದಿಗೆ ಸಮಯವನ್ನು ಕಳೆದು ಹೊಸ ವಿಚಾರವನ್ನು ಅವರಿಂದಲೂ ಡಾ.ಕಸ್ತೂರಿರಂಗನ್ ಪಡೆದುಕೊಳ್ಳುತ್ತಿದ್ದರು.
ಇತರ ಗ್ಯಾಲರಿಗಳು