Sharana Basaveshwara Rathotsav2025: ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರರ ರಥೋತ್ಸವ ವೈಭವ, ಲಕ್ಷಾಂತರ ಭಕ್ತರ ಸಡಗರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sharana Basaveshwara Rathotsav2025: ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರರ ರಥೋತ್ಸವ ವೈಭವ, ಲಕ್ಷಾಂತರ ಭಕ್ತರ ಸಡಗರ

Sharana Basaveshwara Rathotsav2025: ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರರ ರಥೋತ್ಸವ ವೈಭವ, ಲಕ್ಷಾಂತರ ಭಕ್ತರ ಸಡಗರ

  • Sharana Basaveshwara Rathotsav2025: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರರ 203ನೇ ಮಹಾರಥೋತ್ಸವವು ಸಡಗರ, ಸಂಭ್ರಮದಿಂದ ನೆರವೇರಿತು. ಆ ಕ್ಷಣಗಳು ಹೀಗಿದ್ದವು.

ಎರಡು ವಾರಗಳ ಕಾಲ ನಡೆಯುವ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆ ಎಂದು ಪ್ರಸಿದ್ದಿಯಾಗಿರುವ ಕಲಬುರಗಿ ಶರಣಬಸವೇಶ್ವರರ 203ನೇ ಮಹಾರಥೋತ್ಸವ ಬುಧವಾರ  ಸಂಜೆ  ನೆರವೇರಿತು
icon

(1 / 8)

ಎರಡು ವಾರಗಳ ಕಾಲ ನಡೆಯುವ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆ ಎಂದು ಪ್ರಸಿದ್ದಿಯಾಗಿರುವ ಕಲಬುರಗಿ ಶರಣಬಸವೇಶ್ವರರ 203ನೇ ಮಹಾರಥೋತ್ಸವ ಬುಧವಾರ  ಸಂಜೆ  ನೆರವೇರಿತು
(prajavai)

ಮೂರು ದಿನದ ಹಿಂದೆ ಆರಂಭಗೊಂಡಿರುವ ಕಲಬುರಗಿ ಶರಣಬಸವೇಶ್ವರ ಜಾತ್ರೆಯು  11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ದಿನದವರೆಗೂ ಜರುಗಲಿದೆ. 
icon

(2 / 8)

ಮೂರು ದಿನದ ಹಿಂದೆ ಆರಂಭಗೊಂಡಿರುವ ಕಲಬುರಗಿ ಶರಣಬಸವೇಶ್ವರ ಜಾತ್ರೆಯು  11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ದಿನದವರೆಗೂ ಜರುಗಲಿದೆ. 

ರಥೋತ್ಸವ ಅಂಗವಾಗಿ ಕಲಬುರಗಿ ಶರಣ ಬಸವೇಶ್ವರ ದೇಗುಲದಲ್ಲಿ ಗುರು ಮರುಳಾರಾಧ್ಯರು ಹಾಗೂ ಶಿಷ್ಯ ಶರಣ ಬಸವೇಶ್ವರ ಗದ್ದುಗೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
icon

(3 / 8)

ರಥೋತ್ಸವ ಅಂಗವಾಗಿ ಕಲಬುರಗಿ ಶರಣ ಬಸವೇಶ್ವರ ದೇಗುಲದಲ್ಲಿ ಗುರು ಮರುಳಾರಾಧ್ಯರು ಹಾಗೂ ಶಿಷ್ಯ ಶರಣ ಬಸವೇಶ್ವರ ಗದ್ದುಗೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

 ರಥೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರದ ರಸ್ತೆಗಳೆಲ್ಲ ಶರಣಬಸವೇಶ್ವರ ದೇವಾಲಯಕ್ಕೆ ಸೇರುವಂತೆ ಭಕ್ತರು ಬಂದು ಸೇರುತ್ತಿದ್ದುದು ಕಂಡು ಬಂದಿತು.
icon

(4 / 8)

 ರಥೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರದ ರಸ್ತೆಗಳೆಲ್ಲ ಶರಣಬಸವೇಶ್ವರ ದೇವಾಲಯಕ್ಕೆ ಸೇರುವಂತೆ ಭಕ್ತರು ಬಂದು ಸೇರುತ್ತಿದ್ದುದು ಕಂಡು ಬಂದಿತು.

ಈ ಬಾರಿಯೂ ಶರಣಬಸವೇಶ್ವರರ ಜಾತ್ರೆ ಅಂಗವಾಗಿ ರಥೋತ್ಸವವನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.
icon

(5 / 8)

ಈ ಬಾರಿಯೂ ಶರಣಬಸವೇಶ್ವರರ ಜಾತ್ರೆ ಅಂಗವಾಗಿ ರಥೋತ್ಸವವನ್ನು ವಿಶೇಷವಾಗಿ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.

ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯ ರಸ್ತೆಗಳುದ್ದಕ್ಕೂ ವ್ಯಾಪಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇಗುಲವೂ ಕೂಡ ಬಗೆಬಗೆಯ ದೀಪಾಲಂಕಾರದಿಂದ ಗಮನ ಸೆಳೆಯಿತು.
icon

(6 / 8)

ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯ ರಸ್ತೆಗಳುದ್ದಕ್ಕೂ ವ್ಯಾಪಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇಗುಲವೂ ಕೂಡ ಬಗೆಬಗೆಯ ದೀಪಾಲಂಕಾರದಿಂದ ಗಮನ ಸೆಳೆಯಿತು.

ಕಲಬುರಗಿ ಜಿಲ್ಲೆ ಮಾತ್ರವಲ್ಲದೇ ಕರ್ನಾಟಕ, ಮಹಾರಾಷ್ಟ್ರ ಅಂಧ್ರ, ತೆಲಂಗಾಣದಿಂದ ಲಕ್ಷಾಂತರ ಭಕ್ತರು ರಥೋತ್ಸವ ದಲ್ಲಿ ಭಾಗವಹಿಸಿ ಶ್ರೀ ಶರಣ ಬಸವೇಶ್ವರ ದರ್ಶನ ಆಶೀರ್ವಾದ ಪಡೆದುಕೊಂಡರು. 
icon

(7 / 8)

ಕಲಬುರಗಿ ಜಿಲ್ಲೆ ಮಾತ್ರವಲ್ಲದೇ ಕರ್ನಾಟಕ, ಮಹಾರಾಷ್ಟ್ರ ಅಂಧ್ರ, ತೆಲಂಗಾಣದಿಂದ ಲಕ್ಷಾಂತರ ಭಕ್ತರು ರಥೋತ್ಸವ ದಲ್ಲಿ ಭಾಗವಹಿಸಿ ಶ್ರೀ ಶರಣ ಬಸವೇಶ್ವರ ದರ್ಶನ ಆಶೀರ್ವಾದ ಪಡೆದುಕೊಂಡರು. 

ಹಿಂದೆಂದಿಗಿಂತಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು. ಆದರೂ ಭಕ್ತರು ಖುಷಿಯಿಂದಲೇ ಭಾಗಿ ರಥೋತ್ಸವಕ್ಕೆ ಮೆರಗು ತಂದರು.
icon

(8 / 8)

ಹಿಂದೆಂದಿಗಿಂತಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು. ಆದರೂ ಭಕ್ತರು ಖುಷಿಯಿಂದಲೇ ಭಾಗಿ ರಥೋತ್ಸವಕ್ಕೆ ಮೆರಗು ತಂದರು.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು