ಕನ್ನಡ ಸುದ್ದಿ  /  Photo Gallery  /  Kannada Film Industry Where Is Ravichandran S Yaare Ninu Cheluve Heroin Mollywood Actress Sangita Madhavan Nair Mnk

Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

  • Sangita Madhavan Nair: ಸಂಗೀತಾ ಮಾಧವನ್‌ ನಾಯರ್.‌ ಈ ಹೆಸರು ಎಷ್ಟು ಜನಕ್ಕೆ ನೆನಪಿದೆಯೋ ಗೊತ್ತಿಲ್ಲ. ಆದರೆ, ರವಿಚಂದ್ರನ್‌ ಅವರ ಶಾಂತಿ ಕ್ರಾಂತಿ ಸಿನಿಮಾದಲ್ಲಿನ ಬಾಲನಟಿ, ಯಾರೇ ನೀನು ಚೆಲುವೆ ಚಿತ್ರದ ನಾಯಕಿ ನೆನಪಿರಬಹುದು. ಮಲಯಾಳಿ ಮೂಲದ ಸಂಗೀತಾ, ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕೇವಲ 3 ಸಿನಿಮಾಗಳಲ್ಲಿ. ಹಾಗಾದ್ರೆ ಸದ್ಯ ಈ ನಟಿ ಏನ್‌ ಮಾಡುತ್ತಿದ್ದಾರೆ.

ಕೇರಳದ ಮಲ್ಲಾಪುರಂನ ಕೊಟ್ಟಕಾಳದಲ್ಲಿ ಹುಟ್ಟಿದ ಸಂಗೀತಾ ಮಾಧವನ್‌ ನಾಯರ್‌, ನಾಲ್ಕು ಮಂದಿ ಮಕ್ಕಳಲ್ಲಿ ಸಂಗೀತಾ ಚಿಕ್ಕವರು. ಮನೆಯಲ್ಲಿ ಅಪ್ಪನದ್ದು ಹಣ್ಣಿನ ಬಿಜಿನೆಸ್‌. ಮುಂದಿನ ದಿನಗಳಲ್ಲಿ ಈ ಇಡೀ ಕುಟುಂಬ ಚೆನ್ನೈನಲ್ಲಿಯೇ ನೆಲೆಯೂರಿತು.
icon

(1 / 8)

ಕೇರಳದ ಮಲ್ಲಾಪುರಂನ ಕೊಟ್ಟಕಾಳದಲ್ಲಿ ಹುಟ್ಟಿದ ಸಂಗೀತಾ ಮಾಧವನ್‌ ನಾಯರ್‌, ನಾಲ್ಕು ಮಂದಿ ಮಕ್ಕಳಲ್ಲಿ ಸಂಗೀತಾ ಚಿಕ್ಕವರು. ಮನೆಯಲ್ಲಿ ಅಪ್ಪನದ್ದು ಹಣ್ಣಿನ ಬಿಜಿನೆಸ್‌. ಮುಂದಿನ ದಿನಗಳಲ್ಲಿ ಈ ಇಡೀ ಕುಟುಂಬ ಚೆನ್ನೈನಲ್ಲಿಯೇ ನೆಲೆಯೂರಿತು.

ಚಿಕ್ಕಂದಿನಿಂದಲೂ ನಟನೆ ಬಗ್ಗೆ ಸಂಗೀತಾಗೆ ಆಸಕ್ತಿ. ಆ ಕಾರಣಕ್ಕೆ ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು. ಆರಂಭದಲ್ಲಿ ಮಲಯಾಳಂನಲ್ಲಿಯೇ 5 ಸಿನಿಮಾಗಳಲ್ಲಿ ಚೈಲ್ಡ್‌ ಆಕ್ಟರ್‌ ಆದರು. 
icon

(2 / 8)

ಚಿಕ್ಕಂದಿನಿಂದಲೂ ನಟನೆ ಬಗ್ಗೆ ಸಂಗೀತಾಗೆ ಆಸಕ್ತಿ. ಆ ಕಾರಣಕ್ಕೆ ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು. ಆರಂಭದಲ್ಲಿ ಮಲಯಾಳಂನಲ್ಲಿಯೇ 5 ಸಿನಿಮಾಗಳಲ್ಲಿ ಚೈಲ್ಡ್‌ ಆಕ್ಟರ್‌ ಆದರು. 

1991ರಲ್ಲಿ ತೆರೆಗೆ ಬಂದ ಶಾಂತಿ ಕ್ರಾಂತಿ ಚಿತ್ರದ ಮೂಲಕ ಕನ್ನಡಕ್ಕೂ ಬಾಲ ನಟಿಯಾಗಿ ಬಂದ ಸಂಗೀತಾ, ರವಿಚಂದ್ರನ್‌ ಜತೆಗೆ ನಟಿಸಿದರು. ಅದೇ ಸಿನಿಮಾ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ಆ ಸಿನಿಮಾಗಳಲ್ಲಿಯೂ ಸಂಗೀತಾ ಬಾಲನಟಿಯಾಗಿ ಗಮನ ಸೆಳೆದರು. 
icon

(3 / 8)

1991ರಲ್ಲಿ ತೆರೆಗೆ ಬಂದ ಶಾಂತಿ ಕ್ರಾಂತಿ ಚಿತ್ರದ ಮೂಲಕ ಕನ್ನಡಕ್ಕೂ ಬಾಲ ನಟಿಯಾಗಿ ಬಂದ ಸಂಗೀತಾ, ರವಿಚಂದ್ರನ್‌ ಜತೆಗೆ ನಟಿಸಿದರು. ಅದೇ ಸಿನಿಮಾ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ಆ ಸಿನಿಮಾಗಳಲ್ಲಿಯೂ ಸಂಗೀತಾ ಬಾಲನಟಿಯಾಗಿ ಗಮನ ಸೆಳೆದರು. 

ಹೀಗಿರುವಾಗ ಅದೇ ವರ್ಷ ತಮಿಳಿನಲ್ಲಿ ಚಂದ್ರಕಾಂತ್‌ ನಿರ್ದೇಶನದಲ್ಲಿ ಮೂಡಿ ಬಂದ ಇಧಯ ವಾಸಲ್‌ ಚಿತ್ರದಲ್ಲಿಯೂ ಸಂಗೀತಾ ನಟಿಸಿದರು. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ನಾಯಕರಾಗಿ ನಟಿಸಿದರೆ, ಮೀನಾ ನಾಯಕಿಯಾಗಿದ್ದರು.(Youtube/ Photo/ Kairali TV)
icon

(4 / 8)

ಹೀಗಿರುವಾಗ ಅದೇ ವರ್ಷ ತಮಿಳಿನಲ್ಲಿ ಚಂದ್ರಕಾಂತ್‌ ನಿರ್ದೇಶನದಲ್ಲಿ ಮೂಡಿ ಬಂದ ಇಧಯ ವಾಸಲ್‌ ಚಿತ್ರದಲ್ಲಿಯೂ ಸಂಗೀತಾ ನಟಿಸಿದರು. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ನಾಯಕರಾಗಿ ನಟಿಸಿದರೆ, ಮೀನಾ ನಾಯಕಿಯಾಗಿದ್ದರು.(Youtube/ Photo/ Kairali TV)

ಹೀಗೆ ಬಾಲನಟಿಯಾಗಿ ಗುರುತಿಸಿಕೊಂಡ ಸಂಗೀತಾ, ನಾಯಕಿಯಾಗುವುದಕ್ಕೆ ಹೆಚ್ಚು ದಿನ ಹಿಡಿಯಲಿಲ್ಲ. 1995ಲ್ಲಿ ಪಾರ್ಥಿಬನ್‌ ನಿರ್ದೇಶನದಲ್ಲಿ ಪುಲ್ಲಕುಟ್ಟಿಕಾರನ್‌ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದರು. (Photo/ Youtube/ Cinema Vikatan)
icon

(5 / 8)

ಹೀಗೆ ಬಾಲನಟಿಯಾಗಿ ಗುರುತಿಸಿಕೊಂಡ ಸಂಗೀತಾ, ನಾಯಕಿಯಾಗುವುದಕ್ಕೆ ಹೆಚ್ಚು ದಿನ ಹಿಡಿಯಲಿಲ್ಲ. 1995ಲ್ಲಿ ಪಾರ್ಥಿಬನ್‌ ನಿರ್ದೇಶನದಲ್ಲಿ ಪುಲ್ಲಕುಟ್ಟಿಕಾರನ್‌ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದರು. (Photo/ Youtube/ Cinema Vikatan)

ಹೀಗೆ ಮುಂದುವರಿದು 1998ರಲ್ಲಿ ರವಿಚಂದ್ರನ್‌ ನಟನೆಯ ಯಾರೇ ನೀನು ಚೆಲುವೆ ಸಿನಿಮಾಕ್ಕೆ ನಾಯಕಿಯಾಗಿ ಮತ್ತೆ ಕನ್ನಡಕ್ಕೆ ಮರಳಿದರು. 1991ರಲ್ಲಿ ಶಾಂತಿ ಕ್ರಾಂತಿಯ ಬಾಲನಟಿ ರವಿಮಾಮನಿಗೆ ಜೋಡಿಯಾಗಿದ್ದರು. ಕಮಲಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. 
icon

(6 / 8)

ಹೀಗೆ ಮುಂದುವರಿದು 1998ರಲ್ಲಿ ರವಿಚಂದ್ರನ್‌ ನಟನೆಯ ಯಾರೇ ನೀನು ಚೆಲುವೆ ಸಿನಿಮಾಕ್ಕೆ ನಾಯಕಿಯಾಗಿ ಮತ್ತೆ ಕನ್ನಡಕ್ಕೆ ಮರಳಿದರು. 1991ರಲ್ಲಿ ಶಾಂತಿ ಕ್ರಾಂತಿಯ ಬಾಲನಟಿ ರವಿಮಾಮನಿಗೆ ಜೋಡಿಯಾಗಿದ್ದರು. ಕಮಲಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. 

ಅದಾದ ಮೇಲೆ ಅಂದರೆ 2000ರಲ್ಲಿ ಶಿವರಾಜ್‌ಕುಮಾರ್‌ ಜತೆಗೆ ಯಾರೇ ನೀನು ಅಭಿಮಾನಿ ಸಿನಿಮಾದಲ್ಲಿ ನಟಿಸಿದರು. ಕನ್ನಡದಲ್ಲಿ ನಟಿಸಿದ ಅದೇ ಅವರ ಕೊನೆಯ ಸಿನಿಮಾ. ಅದೇ ವರ್ಷದಲ್ಲಿ ಕ್ಯಾಮರಾಮನ್‌ ಎಸ್‌ ಸರವಣನ್‌ ಅವರನ್ನು ವಿವಾಹವಾದರು. (Photo/ Youtube/ Cinema Vikatan)
icon

(7 / 8)

ಅದಾದ ಮೇಲೆ ಅಂದರೆ 2000ರಲ್ಲಿ ಶಿವರಾಜ್‌ಕುಮಾರ್‌ ಜತೆಗೆ ಯಾರೇ ನೀನು ಅಭಿಮಾನಿ ಸಿನಿಮಾದಲ್ಲಿ ನಟಿಸಿದರು. ಕನ್ನಡದಲ್ಲಿ ನಟಿಸಿದ ಅದೇ ಅವರ ಕೊನೆಯ ಸಿನಿಮಾ. ಅದೇ ವರ್ಷದಲ್ಲಿ ಕ್ಯಾಮರಾಮನ್‌ ಎಸ್‌ ಸರವಣನ್‌ ಅವರನ್ನು ವಿವಾಹವಾದರು. (Photo/ Youtube/ Cinema Vikatan)

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)
icon

(8 / 8)

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)


ಇತರ ಗ್ಯಾಲರಿಗಳು