ಮೇ ತಿಂಗಳಲ್ಲಿ ಒಟಿಟಿಗೆ ಬರಬಹುದಾದ ಕನ್ನಡದ ಆರು ಸಿನಿಮಾಗಳಿವು; ಆರರಲ್ಲಿ ಬಹುಪಾಲು ಕ್ರೈಂ ಥ್ರಿಲ್ಲರ್‌ಗಳೇ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇ ತಿಂಗಳಲ್ಲಿ ಒಟಿಟಿಗೆ ಬರಬಹುದಾದ ಕನ್ನಡದ ಆರು ಸಿನಿಮಾಗಳಿವು; ಆರರಲ್ಲಿ ಬಹುಪಾಲು ಕ್ರೈಂ ಥ್ರಿಲ್ಲರ್‌ಗಳೇ

ಮೇ ತಿಂಗಳಲ್ಲಿ ಒಟಿಟಿಗೆ ಬರಬಹುದಾದ ಕನ್ನಡದ ಆರು ಸಿನಿಮಾಗಳಿವು; ಆರರಲ್ಲಿ ಬಹುಪಾಲು ಕ್ರೈಂ ಥ್ರಿಲ್ಲರ್‌ಗಳೇ

ಒಟಿಟಿಯಲ್ಲಿ ಕನ್ನಡದ ಸಿನಿಮಾಗಳ ಆಗಮನ ವಿರಳ. ಬಿಡುಗಡೆಯಾದ ಸಾಕಷ್ಟು ಸಿನಿಮಾಗಳಲ್ಲಿ ಬೆರಳೆಣಿಕೆ ಚಿತ್ರಗಳಷ್ಟೇ ಒಟಿಟಿಗೆ ಎಂಟ್ರಿ ಪಡೆಯುತ್ತವೆ. ಇದೀಗ ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.
icon

(1 / 7)

ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಕನ್ನಡದ ಹಲವು ಸಿನಿಮಾಗಳು, ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ. ಆ ಸಿನಿಮಾಗಳ ಕುರಿತ ಮಾಹಿತಿ ಇಲ್ಲಿದೆ.

ಅಜ್ಞಾತವಾಸಿ: ಏಪ್ರಿಲ್‌ 11ರಂದು ತೆರೆಗೆ ಬಂದ ಸಿನಿಮಾ ಅಜ್ಞಾತವಾಸಿ. ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಮಂತ್ ಎಂ ರಾವ್ ಈ ಸಿನಿಮಾ ನಿರ್ಮಿಸಿದ, ಮಲೆನಾಡಿನಲ್ಲಿ ನಡೆದ ಕೊಲೆಯ ಸುತ್ತ ಸುತ್ತುತ್ತದೆ. ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೀ 5 ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.
icon

(2 / 7)

ಅಜ್ಞಾತವಾಸಿ: ಏಪ್ರಿಲ್‌ 11ರಂದು ತೆರೆಗೆ ಬಂದ ಸಿನಿಮಾ ಅಜ್ಞಾತವಾಸಿ. ಗುಲ್ಟು ಸಿನಿಮಾ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಹೇಮಂತ್ ಎಂ ರಾವ್ ಈ ಸಿನಿಮಾ ನಿರ್ಮಿಸಿದ, ಮಲೆನಾಡಿನಲ್ಲಿ ನಡೆದ ಕೊಲೆಯ ಸುತ್ತ ಸುತ್ತುತ್ತದೆ. ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೀ 5 ಒಟಿಟಿಯಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಮನದ ಕಡಲು: ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ ಕಳೆದ ತಿಂಗಳ ಮಾರ್ಚ್‌ 25ರಂದು ತೆರೆಗೆ ಬಂದಿತ್ತು. ಯುವ ಕಲಾವಿದರಾದ ಸುಮುಖ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಸೇರಿದಂತೆ ಇತರರು ನಟಿಸಿದ್ದಾರೆ. ಇದೀಗ ಇದೇ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.
icon

(3 / 7)

ಮನದ ಕಡಲು: ಯೋಗರಾಜ್‌ ಭಟ್‌ ನಿರ್ದೇಶನದ ಮನದ ಕಡಲು ಸಿನಿಮಾ ಕಳೆದ ತಿಂಗಳ ಮಾರ್ಚ್‌ 25ರಂದು ತೆರೆಗೆ ಬಂದಿತ್ತು. ಯುವ ಕಲಾವಿದರಾದ ಸುಮುಖ, ರಾಶಿಕಾ ಶೆಟ್ಟಿ ಮತ್ತು ಅಂಜಲಿ ಅನೀಶ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದರು. ರಂಗಾಯಣ ರಘು, ದತ್ತಣ್ಣ, ಶಿವಧ್ವಜ್ ಸೇರಿದಂತೆ ಇತರರು ನಟಿಸಿದ್ದಾರೆ. ಇದೀಗ ಇದೇ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಬರುವ ಸಾಧ್ಯತೆ ಇದೆ.

ಅಧಿಪತ್ರ: ಬಿಗ್ ಬಾಸ್ ಕನ್ನಡ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ, ಕರಾವಳಿ ಭಾಗದಲ್ಲಿ ನಡೆಯುವ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಪೊಲೀಸ್ ಆಗಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋಕ್ಕೆ ಬರುವ ಸಾಧ್ಯತೆ ಇದೆ.
icon

(4 / 7)

ಅಧಿಪತ್ರ: ಬಿಗ್ ಬಾಸ್ ಕನ್ನಡ ಸೀಸನ್ 9 ವಿಜೇತ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ, ಕರಾವಳಿ ಭಾಗದಲ್ಲಿ ನಡೆಯುವ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಪೊಲೀಸ್ ಆಗಿ ರೂಪೇಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋಕ್ಕೆ ಬರುವ ಸಾಧ್ಯತೆ ಇದೆ.

ಭುವನಂ ಗಗನಂ: ಗಿರೀಶ್ ಮೂಲಿಮನಿ ನಿರ್ದೇಶನದ ಭುವನಂ ಗಗನಂ ಸಿನಿಮಾ ಫೆಬ್ರವರಿ 14ರಂದು ತೆರೆಗೆ ಬಂದಿತ್ತು. ಪ್ರಮೋದ್, ಪೃಥ್ವಿ ಅಂಬಾರ್, ರಚೆಲ್‌ ಡೇವಿಡ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಗೊತ್ತಾಗಬೇಕಿದೆ.
icon

(5 / 7)

ಭುವನಂ ಗಗನಂ: ಗಿರೀಶ್ ಮೂಲಿಮನಿ ನಿರ್ದೇಶನದ ಭುವನಂ ಗಗನಂ ಸಿನಿಮಾ ಫೆಬ್ರವರಿ 14ರಂದು ತೆರೆಗೆ ಬಂದಿತ್ತು. ಪ್ರಮೋದ್, ಪೃಥ್ವಿ ಅಂಬಾರ್, ರಚೆಲ್‌ ಡೇವಿಡ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಗೊತ್ತಾಗಬೇಕಿದೆ.

ವಿದ್ಯಾಪತಿ: ಡಾಲಿ ಧನಂಜಯ ನಿರ್ಮಾಣದ ವಿದ್ಯಾಪತಿ ಸಿನಿಮಾ ಏಪ್ರಿಲ್‌ 10ರಂದು ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ನಾಗಭೂಷಣ್‌ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಮಲೈಕಾ ವಸುಪಾಲ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಈ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.
icon

(6 / 7)

ವಿದ್ಯಾಪತಿ: ಡಾಲಿ ಧನಂಜಯ ನಿರ್ಮಾಣದ ವಿದ್ಯಾಪತಿ ಸಿನಿಮಾ ಏಪ್ರಿಲ್‌ 10ರಂದು ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ನಾಗಭೂಷಣ್‌ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಮಲೈಕಾ ವಸುಪಾಲ್‌ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಮೆಚ್ಚುಗೆ ಪಡೆದ ಈ ಸಿನಿಮಾ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.

ಅನಾಮಧೇಯ ಅಶೋಕ್ ಕುಮಾರ್: ಕೊಲೆ ಸುತ್ತ ತಿರುಗುವ ಸಿನಿಮಾ ಈ ಅನಾಮಧೇಯ ಅಶೋಕ್‌ ಕುಮಾರ್.‌ ಫೆಬ್ರವರಿ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಈ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ. ಸಾಗರ್‌ ಕುಮಾರ್‌ ನಿರ್ದೇಶನದ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್ ಚಿತ್ರದಲ್ಲಿ ಕಿಶೋರ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿದ್ದಾರೆ.
icon

(7 / 7)

ಅನಾಮಧೇಯ ಅಶೋಕ್ ಕುಮಾರ್: ಕೊಲೆ ಸುತ್ತ ತಿರುಗುವ ಸಿನಿಮಾ ಈ ಅನಾಮಧೇಯ ಅಶೋಕ್‌ ಕುಮಾರ್.‌ ಫೆಬ್ರವರಿ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಈ ಸಿನಿಮಾ ಮೇ ತಿಂಗಳಲ್ಲಿ ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ. ಸಾಗರ್‌ ಕುಮಾರ್‌ ನಿರ್ದೇಶನದ ಇನ್ವೆಸ್ಟಿಗೇಟಿವ್‌ ಥ್ರಿಲ್ಲರ್ ಚಿತ್ರದಲ್ಲಿ ಕಿಶೋರ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು